<p><strong>ಡೆಹ್ರಾಡೂನ್ (ಪಿಟಿಐ):</strong> ವಿಧಾನ ಸಭಾ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಜನಲೋಕಪಾಲ ಮಸೂದೆಯ ಜಾಗೃತಿ ಅಭಿಯಾನ ಹಮ್ಮಿಕೊಂಡಿರುವ ಅಣ್ಣಾ ತಂಡದ ಸದಸ್ಯರತ್ತ ವ್ಯಕ್ತಿಯೊಬ್ಬ ಬೂಟು ಎಸೆಯಲು ಯತ್ನಿಸಿದ ಘಟನೆ ಶನಿವಾರ ಇಲ್ಲಿ ನಡೆಯಿತು.<br /> <br /> ಆದರೆ ಪೊಲೀಸರು ತಕ್ಷಣವೇ ಆತನನ್ನು ಬಂಧಿಸಿದರು. ಇಲ್ಲಿನ ಪ್ರೇಮ್ನಗರ್ ನಿವಾಸಿ ಕಿಶನ್ ಲಾಲ್ (35) ಬಂಧಿತ ವ್ಯಕ್ತಿಯಾಗಿದ್ದಾನೆ.<br /> <br /> ಅಣ್ಣಾ ತಂಡದ ಅರವಿಂದ ಕೇಜ್ರಿವಾಲ್, ಮನಿಶ್ ಸಿಸೋಡಿಯಾ ಮತ್ತು ಕಿರಣ್ ಬೇಡಿ ಲಾರ್ಡ್ ವೆಂಕಟೇಶ್ವರ ಹಾಲ್ನಲ್ಲಿ ಸಾರ್ವಜನಿಕ ಸಭೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಡೆಹ್ರಾಡೂನ್ ಪೊಲೀಸ್ ವರಿಷ್ಠಾಧಿಕಾರಿ ಜಿ.ಎನ್. ಗೋಸ್ವಾಮಿ ತಿಳಿಸಿದ್ದಾರೆ. ಕಿಶನ್ಲಾಲ್ ಅಣ್ಣಾ ತಂಡದತ್ತ ಬೂಟು ಎಸೆದಿದ್ದು, ಅದು ಯಾರ ಮೇಲೂ ಬೀಳಲಿಲ್ಲ ಎಂದು ಸಭೆಯಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. <br /> <br /> <strong>`ಹಲ್ಲಿಲ್ಲದ ಮಸೂದೆ~ (ಹರಿದ್ವಾರ ವರದಿ): </strong>ಸಂಸತ್ನಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ ಲೋಕಪಾಲ ಮಸೂದೆ ಹಲ್ಲಿಲ್ಲದ ಮತ್ತು ಅತ್ಯಂತ ದುರ್ಬಲ ಮಸೂದೆ ಎಂದು ಅಣ್ಣಾ ತಂಡದ ಸದಸ್ಯರು ಆರೋಪಿಸಿದರು.<br /> <br /> ಪ್ರಬಲ ಜನಲೋಕಪಾಲ ಮಸೂದೆಗೆ ಒತ್ತಾಯಿಸಿ, ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ಅಣ್ಣಾ ತಂಡದ ಸದಸ್ಯರು ತಮ್ಮ ಉದ್ದೇಶಿತ ಪ್ರಚಾರವನ್ನು ಇಲ್ಲಿಂದ ಶನಿವಾರ ಆರಂಭಿಸಿದರು.<br /> <br /> <strong>`ತಾತ್ವಿಕ ತಳಹದಿ ಇಲ್ಲ~ (ಜೈಪುರ ವರದಿ):</strong> ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ ಸೈದ್ಧಾಂತಿಕ ಕೊರತೆಯಿಂದ ಕೂಡಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಅರುಣಾ ರಾಯ್ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದ ಅವರು, `ಭ್ರಷ್ಟಾಚಾರದ ವಿರುದ್ಧದ ಸೆಣಸಾಟ ಉತ್ತಮ ಆಂದೋಲನವೇ ಸರಿ. ಆದರೆ ಇದು ರಾಜಕೀಯ ಚಳವಳಿ ಆಗುವುದು ಅಷ್ಟೊಂದು ಸುಲಭವಲ್ಲ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡೆಹ್ರಾಡೂನ್ (ಪಿಟಿಐ):</strong> ವಿಧಾನ ಸಭಾ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಜನಲೋಕಪಾಲ ಮಸೂದೆಯ ಜಾಗೃತಿ ಅಭಿಯಾನ ಹಮ್ಮಿಕೊಂಡಿರುವ ಅಣ್ಣಾ ತಂಡದ ಸದಸ್ಯರತ್ತ ವ್ಯಕ್ತಿಯೊಬ್ಬ ಬೂಟು ಎಸೆಯಲು ಯತ್ನಿಸಿದ ಘಟನೆ ಶನಿವಾರ ಇಲ್ಲಿ ನಡೆಯಿತು.<br /> <br /> ಆದರೆ ಪೊಲೀಸರು ತಕ್ಷಣವೇ ಆತನನ್ನು ಬಂಧಿಸಿದರು. ಇಲ್ಲಿನ ಪ್ರೇಮ್ನಗರ್ ನಿವಾಸಿ ಕಿಶನ್ ಲಾಲ್ (35) ಬಂಧಿತ ವ್ಯಕ್ತಿಯಾಗಿದ್ದಾನೆ.<br /> <br /> ಅಣ್ಣಾ ತಂಡದ ಅರವಿಂದ ಕೇಜ್ರಿವಾಲ್, ಮನಿಶ್ ಸಿಸೋಡಿಯಾ ಮತ್ತು ಕಿರಣ್ ಬೇಡಿ ಲಾರ್ಡ್ ವೆಂಕಟೇಶ್ವರ ಹಾಲ್ನಲ್ಲಿ ಸಾರ್ವಜನಿಕ ಸಭೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಡೆಹ್ರಾಡೂನ್ ಪೊಲೀಸ್ ವರಿಷ್ಠಾಧಿಕಾರಿ ಜಿ.ಎನ್. ಗೋಸ್ವಾಮಿ ತಿಳಿಸಿದ್ದಾರೆ. ಕಿಶನ್ಲಾಲ್ ಅಣ್ಣಾ ತಂಡದತ್ತ ಬೂಟು ಎಸೆದಿದ್ದು, ಅದು ಯಾರ ಮೇಲೂ ಬೀಳಲಿಲ್ಲ ಎಂದು ಸಭೆಯಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. <br /> <br /> <strong>`ಹಲ್ಲಿಲ್ಲದ ಮಸೂದೆ~ (ಹರಿದ್ವಾರ ವರದಿ): </strong>ಸಂಸತ್ನಲ್ಲಿ ಕೇಂದ್ರ ಸರ್ಕಾರ ಮಂಡಿಸಿರುವ ಲೋಕಪಾಲ ಮಸೂದೆ ಹಲ್ಲಿಲ್ಲದ ಮತ್ತು ಅತ್ಯಂತ ದುರ್ಬಲ ಮಸೂದೆ ಎಂದು ಅಣ್ಣಾ ತಂಡದ ಸದಸ್ಯರು ಆರೋಪಿಸಿದರು.<br /> <br /> ಪ್ರಬಲ ಜನಲೋಕಪಾಲ ಮಸೂದೆಗೆ ಒತ್ತಾಯಿಸಿ, ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ಅಣ್ಣಾ ತಂಡದ ಸದಸ್ಯರು ತಮ್ಮ ಉದ್ದೇಶಿತ ಪ್ರಚಾರವನ್ನು ಇಲ್ಲಿಂದ ಶನಿವಾರ ಆರಂಭಿಸಿದರು.<br /> <br /> <strong>`ತಾತ್ವಿಕ ತಳಹದಿ ಇಲ್ಲ~ (ಜೈಪುರ ವರದಿ):</strong> ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ ಸೈದ್ಧಾಂತಿಕ ಕೊರತೆಯಿಂದ ಕೂಡಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಅರುಣಾ ರಾಯ್ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದ ಅವರು, `ಭ್ರಷ್ಟಾಚಾರದ ವಿರುದ್ಧದ ಸೆಣಸಾಟ ಉತ್ತಮ ಆಂದೋಲನವೇ ಸರಿ. ಆದರೆ ಇದು ರಾಜಕೀಯ ಚಳವಳಿ ಆಗುವುದು ಅಷ್ಟೊಂದು ಸುಲಭವಲ್ಲ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>