<p><strong>ನವದೆಹಲಿ (ಪಿಟಿಐ): </strong>ಸಂಸತ್ನಲ್ಲಿ ಸಿಎಜಿ ವರದಿ ಎಬ್ಬಿಸಿರುವ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯ ಅವ್ಯವಹಾರದ ಗದ್ದಲ ಎರಡನೇಯ ದಿನವು ಮುಂದುವರಿದು ಉಭಯ ಸದನಗಳ ಕಲಾಪಗಳನ್ನು ಬಲಿ ತೆಗೆದುಕೊಂಡಿದ್ದು, ಬಿಜೆಪಿ ಕೂಡಲೇ ಸರ್ಕಾರ ವಜಾಗೊಂಡು, ದೇಶದಲ್ಲಿ ಹೊಸ ಚುನಾವಣೆ ನಡೆಯಲಿ ಎಂದು ಬುಧವಾರ ಆಗ್ರಹಿಸಿದೆ. <br /> <br /> ಸಂಸತ್ತಿನ ಹೊರಗೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಅವರು `ದೇಶದ ಸಂಪತ್ತನ್ನು ಲೂಟಿ ಹೊಡೆಯಲು ನಾವು ಅವಕಾಶ ನೀಡುವುದಿಲ್ಲ. ಈ ಸರ್ಕಾರ ಹೋಗಲೇ ಬೇಕು ಮತ್ತು ದೇಶದಲ್ಲಿ ಹೊಸ ಚುನಾವಣೆ ನಡೆಯಬೇಕು~ ಎಂದು ಹೇಳಿದರು.<br /> <br /> ಸಂಸತ್ತಿನಲ್ಲಿ ಬಿಜೆಪಿ ಯಾಕೆ ಸಿಎಜಿ ವರದಿ ಕುರಿತಂತೆ ಚರ್ಚೆ ನಡೆಸುತ್ತಿಲ್ಲ ಎಂಬ ಪ್ರಶ್ನೆಗೆ ಪ್ರಕಾಶ್ ಅವರು `ಇದು ಕಾಂಗ್ರೆಸ್ನ ಹಾದಿ ತಪ್ಪಿಸುವ ತಂತ್ರ. ಕಾಂಗ್ರೆಸ್ ಪಿಎಸಿ ಮತ್ತು ಯಾವುದೇ ಸಂವಿಧಾನಿಕ ವ್ಯವಸ್ಥೆ ಕುರಿತಂತೆ ಯಾವುದೇ ಗೌರವ ಹೊಂದಿಲ್ಲ. ಪಿಎಸಿ ವರದಿ ಎನ್ನುವುದು ಅವರಿಗೆ ಪಲಾಯನದ ಒಂದು ಮಾರ್ಗವಷ್ಟೇ. ಹೀಗಾಗಿ ನಾವು ಅವರ ವಾದವನ್ನು ಒಪ್ಪುವುದಿಲ್ಲ~ ಎಂದು ತಿಳಿಸಿದರು.<br /> <br /> `ಕಾಂಗ್ರೆಸ್ ಜನರ ನಂಬಿಕೆಯನ್ನು ಕಳೆದುಕೊಂಡಿದೆ ಹೀಗಾಗಿ ನಾವು ಅದಕ್ಕೆ ಲೂಟಿ ಮಾಡಲು ಬಿಡುವುದಿಲ್ಲ. ನಮ್ಮ ಹೋರಾಟ ಸಂಘಟಿತ ಲೂಟಿಯ ವಿರುದ್ದವಾಗಿದೆ~ ಎಂದರು.<br /> <br /> ಹಾಗಾದರೆ, ನಿರಂತರವಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿರಾ? ಎಂಬ ಪ್ರಶ್ನೆಗೆ `ನಾವು ಕಲಾಪಕ್ಕೆ ತೊಂದರೆ ಉಂಟುಮಾಡುವುದಿಲ್ಲ. ಅದಕ್ಕೆ ಕಾಂಗ್ರೆಸ್ ಅವಕಾಶ ಮಾಡಿಕೊಡುತ್ತಿದೆ ಅಷ್ಟೇ~ ಎಂದು ಪ್ರಕಾಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಸಂಸತ್ನಲ್ಲಿ ಸಿಎಜಿ ವರದಿ ಎಬ್ಬಿಸಿರುವ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯ ಅವ್ಯವಹಾರದ ಗದ್ದಲ ಎರಡನೇಯ ದಿನವು ಮುಂದುವರಿದು ಉಭಯ ಸದನಗಳ ಕಲಾಪಗಳನ್ನು ಬಲಿ ತೆಗೆದುಕೊಂಡಿದ್ದು, ಬಿಜೆಪಿ ಕೂಡಲೇ ಸರ್ಕಾರ ವಜಾಗೊಂಡು, ದೇಶದಲ್ಲಿ ಹೊಸ ಚುನಾವಣೆ ನಡೆಯಲಿ ಎಂದು ಬುಧವಾರ ಆಗ್ರಹಿಸಿದೆ. <br /> <br /> ಸಂಸತ್ತಿನ ಹೊರಗೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಅವರು `ದೇಶದ ಸಂಪತ್ತನ್ನು ಲೂಟಿ ಹೊಡೆಯಲು ನಾವು ಅವಕಾಶ ನೀಡುವುದಿಲ್ಲ. ಈ ಸರ್ಕಾರ ಹೋಗಲೇ ಬೇಕು ಮತ್ತು ದೇಶದಲ್ಲಿ ಹೊಸ ಚುನಾವಣೆ ನಡೆಯಬೇಕು~ ಎಂದು ಹೇಳಿದರು.<br /> <br /> ಸಂಸತ್ತಿನಲ್ಲಿ ಬಿಜೆಪಿ ಯಾಕೆ ಸಿಎಜಿ ವರದಿ ಕುರಿತಂತೆ ಚರ್ಚೆ ನಡೆಸುತ್ತಿಲ್ಲ ಎಂಬ ಪ್ರಶ್ನೆಗೆ ಪ್ರಕಾಶ್ ಅವರು `ಇದು ಕಾಂಗ್ರೆಸ್ನ ಹಾದಿ ತಪ್ಪಿಸುವ ತಂತ್ರ. ಕಾಂಗ್ರೆಸ್ ಪಿಎಸಿ ಮತ್ತು ಯಾವುದೇ ಸಂವಿಧಾನಿಕ ವ್ಯವಸ್ಥೆ ಕುರಿತಂತೆ ಯಾವುದೇ ಗೌರವ ಹೊಂದಿಲ್ಲ. ಪಿಎಸಿ ವರದಿ ಎನ್ನುವುದು ಅವರಿಗೆ ಪಲಾಯನದ ಒಂದು ಮಾರ್ಗವಷ್ಟೇ. ಹೀಗಾಗಿ ನಾವು ಅವರ ವಾದವನ್ನು ಒಪ್ಪುವುದಿಲ್ಲ~ ಎಂದು ತಿಳಿಸಿದರು.<br /> <br /> `ಕಾಂಗ್ರೆಸ್ ಜನರ ನಂಬಿಕೆಯನ್ನು ಕಳೆದುಕೊಂಡಿದೆ ಹೀಗಾಗಿ ನಾವು ಅದಕ್ಕೆ ಲೂಟಿ ಮಾಡಲು ಬಿಡುವುದಿಲ್ಲ. ನಮ್ಮ ಹೋರಾಟ ಸಂಘಟಿತ ಲೂಟಿಯ ವಿರುದ್ದವಾಗಿದೆ~ ಎಂದರು.<br /> <br /> ಹಾಗಾದರೆ, ನಿರಂತರವಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿರಾ? ಎಂಬ ಪ್ರಶ್ನೆಗೆ `ನಾವು ಕಲಾಪಕ್ಕೆ ತೊಂದರೆ ಉಂಟುಮಾಡುವುದಿಲ್ಲ. ಅದಕ್ಕೆ ಕಾಂಗ್ರೆಸ್ ಅವಕಾಶ ಮಾಡಿಕೊಡುತ್ತಿದೆ ಅಷ್ಟೇ~ ಎಂದು ಪ್ರಕಾಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>