<p><strong>ಉಪ್ಪಿನಂಗಡಿ:</strong> ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶಿರಾಡಿ ಗ್ರಾಮದ ಉದನೆ ಸಮೀಪದ ಪರವರಕೊಟ್ಯ ಎಂಬಲ್ಲಿ ಮಂಗಳವಾರ ಸಂಜೆ ಬುಲೆಟ್ ಟ್ಯಾಂಕರ್ ಸೇತುವೆಗೆ ಡಿಕ್ಕಿ ಹೊಡೆದು ಹೊಳೆಗೆ ಬಿದ್ದಿದ್ದು, ಭಾರೀ ಪ್ರಮಾಣದಲ್ಲಿ ಅನಿಲ ಸೋರಿಕೆ ಆಗತೊಡಗಿದೆ.</p>.<p><br /> ಸೋರಿಕೆ ಆಗುತ್ತಿರುವ ಅನಿಲ ಹೊಳೆ ನೀರಿನೊಂದಿಗೆ ಮಿಶ್ರಣಗೊಂಡು ಹರಿಯುತ್ತಿದೆ. ಹೀಗಾಗಿ ಸಂಭವನೀಯ ಭಾರಿ ಬೆಂಕಿ ದುರಂತ ತಪ್ಪಿದೆ.<br /> <br /> ಸೇತುವೆಗೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಟ್ಯಾಂಕರ್ನ ಕೊಂಡಿಯೊಂದು ಸೇತುವೆಗೆ ಸಿಲುಕಿಕೊಂಡು ಟ್ಯಾಂಕರ್ ಮತ್ತು ಎಂಜಿನ್ ಬೇರ್ಪಟ್ಟು, ಎಂಜಿನ್ ಸೇತುವೆ ಮಧ್ಯ ಭಾಗದಲ್ಲಿ ನಿಲುಗಡೆಗೊಂಡಿತು. ಬುಲೆಟ್ ಟ್ಯಾಂಕರ್ ಹೊಳೆಗೆ ಬಿತ್ತು. ಘಟನೆಯಲ್ಲಿ ಟ್ಯಾಂಕರ್ ಚಾಲಕ, ಕ್ಲೀನರ್ ಪಾರಾಗಿದ್ದಾರೆ.<br /> <br /> ಗ್ಯಾಸ್ ಸೋರಿಕೆಯಾಗಿ ವಾತಾವರಣ ಸೇರುತ್ತಿರುವುದರಿಂದ ಸುತ್ತಮುತ್ತ ದುರ್ವಾಸನೆ ನೆಲೆಸಿದೆ. ಮುಂಜಾಗ್ರತಾ ಸಲುವಾಗಿ ಮಂಗಳೂರು–ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.<br /> <br /> ಅಪಘಾತದ ವೇಳೆ ಸೇತುವೆಗೆ ಧಕ್ಕೆ ಆಗಿರುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬಂದು ಸೇತುವೆ ಪರಿಶೀಲಿಸದೆ ವಾಹನ ಸಂಚರಿಸುವಂತಿಲ್ಲ. ಹೀಗಾಗಿ ಬುಧವಾರ ಬೆಳಿಗ್ಗೆ ತನಕ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ.<br /> <br /> ವಾಹನಗಳಿಗೆ ಗುಂಡ್ಯ–ಸುಬ್ರಹ್ಮಣ್ಯ, ಉಪ್ಪಿನಂಗಡಿ ಮೂಲಕ ಹಾಗೂ ಮಾಣಿ–ಮೈಸೂರು ಮೂಲಕ ತೆರಳುವುದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಸೋರಿಕೆಯಾದ ಗ್ಯಾಸ್ ಪರಿಸರದ ಎಲ್ಲೆಡೆಯಲ್ಲಿ ಹರಡಿಕೊಂಡಿದ್ದು, ಘಟನೆ ನಡೆದ ಪರಿಸರ ನಿರ್ಜನ ಪ್ರದೇಶ. ಇಲ್ಲಿಗೆ 1 ಕಿ.ಮೀ. ದೂರದಲ್ಲಿ ಉದನೆ ಪೇಟೆ ಮತ್ತು ಶಾಲೆ ಇದೆ.<br /> <br /> <strong>ನೀರು ಪೂರೈಕೆ ಸ್ಥಗಿಶತ: </strong>ಟ್ಯಾಂಕರ್ನಿಂದ ಸೋರಿಕೆಯಾದ ಅನಿಲ ನೀರಿನೊಂದಿಗೆ ಸೇರಿ ಕುಮಾರಧಾರ ನದಿಯನ್ನು ಸೇರಿತ್ತು. ಹೀಗಾಗಿ ಪುತ್ತೂರು ಮತ್ತು ಮಂಗಳೂರು ನಗರಗಳಿಗೆ ನೀರು ಪೂರೈಕೆಯನ್ನು ಬುಧವಾರದವರೆಗೆ ಸ್ಥಗಿತಗೊಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಪ್ಪಿನಂಗಡಿ:</strong> ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶಿರಾಡಿ ಗ್ರಾಮದ ಉದನೆ ಸಮೀಪದ ಪರವರಕೊಟ್ಯ ಎಂಬಲ್ಲಿ ಮಂಗಳವಾರ ಸಂಜೆ ಬುಲೆಟ್ ಟ್ಯಾಂಕರ್ ಸೇತುವೆಗೆ ಡಿಕ್ಕಿ ಹೊಡೆದು ಹೊಳೆಗೆ ಬಿದ್ದಿದ್ದು, ಭಾರೀ ಪ್ರಮಾಣದಲ್ಲಿ ಅನಿಲ ಸೋರಿಕೆ ಆಗತೊಡಗಿದೆ.</p>.<p><br /> ಸೋರಿಕೆ ಆಗುತ್ತಿರುವ ಅನಿಲ ಹೊಳೆ ನೀರಿನೊಂದಿಗೆ ಮಿಶ್ರಣಗೊಂಡು ಹರಿಯುತ್ತಿದೆ. ಹೀಗಾಗಿ ಸಂಭವನೀಯ ಭಾರಿ ಬೆಂಕಿ ದುರಂತ ತಪ್ಪಿದೆ.<br /> <br /> ಸೇತುವೆಗೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಟ್ಯಾಂಕರ್ನ ಕೊಂಡಿಯೊಂದು ಸೇತುವೆಗೆ ಸಿಲುಕಿಕೊಂಡು ಟ್ಯಾಂಕರ್ ಮತ್ತು ಎಂಜಿನ್ ಬೇರ್ಪಟ್ಟು, ಎಂಜಿನ್ ಸೇತುವೆ ಮಧ್ಯ ಭಾಗದಲ್ಲಿ ನಿಲುಗಡೆಗೊಂಡಿತು. ಬುಲೆಟ್ ಟ್ಯಾಂಕರ್ ಹೊಳೆಗೆ ಬಿತ್ತು. ಘಟನೆಯಲ್ಲಿ ಟ್ಯಾಂಕರ್ ಚಾಲಕ, ಕ್ಲೀನರ್ ಪಾರಾಗಿದ್ದಾರೆ.<br /> <br /> ಗ್ಯಾಸ್ ಸೋರಿಕೆಯಾಗಿ ವಾತಾವರಣ ಸೇರುತ್ತಿರುವುದರಿಂದ ಸುತ್ತಮುತ್ತ ದುರ್ವಾಸನೆ ನೆಲೆಸಿದೆ. ಮುಂಜಾಗ್ರತಾ ಸಲುವಾಗಿ ಮಂಗಳೂರು–ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.<br /> <br /> ಅಪಘಾತದ ವೇಳೆ ಸೇತುವೆಗೆ ಧಕ್ಕೆ ಆಗಿರುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬಂದು ಸೇತುವೆ ಪರಿಶೀಲಿಸದೆ ವಾಹನ ಸಂಚರಿಸುವಂತಿಲ್ಲ. ಹೀಗಾಗಿ ಬುಧವಾರ ಬೆಳಿಗ್ಗೆ ತನಕ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ.<br /> <br /> ವಾಹನಗಳಿಗೆ ಗುಂಡ್ಯ–ಸುಬ್ರಹ್ಮಣ್ಯ, ಉಪ್ಪಿನಂಗಡಿ ಮೂಲಕ ಹಾಗೂ ಮಾಣಿ–ಮೈಸೂರು ಮೂಲಕ ತೆರಳುವುದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಸೋರಿಕೆಯಾದ ಗ್ಯಾಸ್ ಪರಿಸರದ ಎಲ್ಲೆಡೆಯಲ್ಲಿ ಹರಡಿಕೊಂಡಿದ್ದು, ಘಟನೆ ನಡೆದ ಪರಿಸರ ನಿರ್ಜನ ಪ್ರದೇಶ. ಇಲ್ಲಿಗೆ 1 ಕಿ.ಮೀ. ದೂರದಲ್ಲಿ ಉದನೆ ಪೇಟೆ ಮತ್ತು ಶಾಲೆ ಇದೆ.<br /> <br /> <strong>ನೀರು ಪೂರೈಕೆ ಸ್ಥಗಿಶತ: </strong>ಟ್ಯಾಂಕರ್ನಿಂದ ಸೋರಿಕೆಯಾದ ಅನಿಲ ನೀರಿನೊಂದಿಗೆ ಸೇರಿ ಕುಮಾರಧಾರ ನದಿಯನ್ನು ಸೇರಿತ್ತು. ಹೀಗಾಗಿ ಪುತ್ತೂರು ಮತ್ತು ಮಂಗಳೂರು ನಗರಗಳಿಗೆ ನೀರು ಪೂರೈಕೆಯನ್ನು ಬುಧವಾರದವರೆಗೆ ಸ್ಥಗಿತಗೊಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>