<p><strong>ದಾವಣಗೆರೆ: </strong>ಚಿನ್ನದ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣ ತೆಗೆದುಹಾಕಬೇಕು ಎಂದು ಒತ್ತಾಯಿಸಿ ನಗರದ ಜ್ಯೂಯೆಲ್ಲರ್ಸ್ ಅಸೋಸಿಯೇಷನ್, ಚಿನ್ನ ಬೆಳ್ಳಿ ಕಾರ್ಮಿಕರ, ವ್ಯಾಪಾರಿಗಳ ಸಂಘದ ವತಿಯಿಂದ ಮಂಗಳವಾರ ಬೃಹತ್ ಮೋಂಬತ್ತಿ ಮೆರವಣಿಗೆ ನಡೆಯಿತು.<br /> <br /> ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಶೇ. 2ರಷ್ಟು ಹೆಚ್ಚಿಸಿರುವುದರಿಂದ ಚಿನ್ನ-ಬೆಳ್ಳಿ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಬದುಕು ದುಸ್ತರವಾಗಿದೆ. ಗ್ರಾಹಕರಿಗೂ ಇದರಿಂದ ಹೊರೆಯಾಗಿದೆ. ಈ ಬಗ್ಗೆ 17 ದಿನದಿಂದಲೂ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. <br /> <br /> ಚಿನ್ನ ಬೆಳ್ಳಿ ಉತ್ಪನ್ನಗಳು ಅಬಕಾರಿ ಸುಂಕದ ವ್ಯಾಪ್ತಿಗೆ ಬರುತ್ತಿರಲಿಲ್ಲ. ಇದೀಗ ಅದನ್ನೂ ಸುಂಕದ ವ್ಯಾಪ್ತಿಗೆ ಒಳಪಡಿಸಲಾಗಿದೆ. ಅಲ್ಲದೇ, ಹೆಚ್ಚಳವಾಗಿರುವ ಸುಂಕ ಸೇರಿದರೆ ಶೇ. 4ರಷ್ಟಾಗುತ್ತದೆ. ಇದರಿಂದ ಸಣ್ಣ ವ್ಯಾಪಾರಿಗಳು ಏನು ಮಾಡಬೇಕು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. <br /> <br /> ಈ ಬಗ್ಗೆ ಇನ್ನೂ ಹೋರಾಟ ತೀವ್ರಗೊಳಿಸಲಾಗುವುದು. ಸರ್ಕಾರ ಅಬಕಾರಿ ಸುಂಕವನ್ನು ಕೂಡಲೇ ತೆಗೆದುಹಾಕಬೇಕು. ಇಲ್ಲವಾದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಆಭರಣ ವ್ಯಾಪಾರಿ ವಾಸುದೇವ ರಾಯ್ಕರ್ ತಿಳಿಸಿದರು.<br /> <br /> ನಗರದ ಗುರು ಬಕ್ಕೇಶ್ವರ ದೇವಸ್ಥಾನದಿಂದ ಹೊರಟ ಮೋಂಬತ್ತಿ ಮೆರವಣಿಗೆ ಪಾಲಿಕೆ ಆವರಣದಲ್ಲಿ ಅಂತ್ಯಗೊಂಡಿತು.ಪ್ರಭಾಕರ ವಿ. ಶೇಟ್, ಬದರಿನಾಥ್, ಪಾರಸ್ಮಲ್ ಜೈನ್, ರಾಜು ಜೈನ್, ಶಂಕರ ಇತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಚಿನ್ನದ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣ ತೆಗೆದುಹಾಕಬೇಕು ಎಂದು ಒತ್ತಾಯಿಸಿ ನಗರದ ಜ್ಯೂಯೆಲ್ಲರ್ಸ್ ಅಸೋಸಿಯೇಷನ್, ಚಿನ್ನ ಬೆಳ್ಳಿ ಕಾರ್ಮಿಕರ, ವ್ಯಾಪಾರಿಗಳ ಸಂಘದ ವತಿಯಿಂದ ಮಂಗಳವಾರ ಬೃಹತ್ ಮೋಂಬತ್ತಿ ಮೆರವಣಿಗೆ ನಡೆಯಿತು.<br /> <br /> ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಶೇ. 2ರಷ್ಟು ಹೆಚ್ಚಿಸಿರುವುದರಿಂದ ಚಿನ್ನ-ಬೆಳ್ಳಿ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಬದುಕು ದುಸ್ತರವಾಗಿದೆ. ಗ್ರಾಹಕರಿಗೂ ಇದರಿಂದ ಹೊರೆಯಾಗಿದೆ. ಈ ಬಗ್ಗೆ 17 ದಿನದಿಂದಲೂ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. <br /> <br /> ಚಿನ್ನ ಬೆಳ್ಳಿ ಉತ್ಪನ್ನಗಳು ಅಬಕಾರಿ ಸುಂಕದ ವ್ಯಾಪ್ತಿಗೆ ಬರುತ್ತಿರಲಿಲ್ಲ. ಇದೀಗ ಅದನ್ನೂ ಸುಂಕದ ವ್ಯಾಪ್ತಿಗೆ ಒಳಪಡಿಸಲಾಗಿದೆ. ಅಲ್ಲದೇ, ಹೆಚ್ಚಳವಾಗಿರುವ ಸುಂಕ ಸೇರಿದರೆ ಶೇ. 4ರಷ್ಟಾಗುತ್ತದೆ. ಇದರಿಂದ ಸಣ್ಣ ವ್ಯಾಪಾರಿಗಳು ಏನು ಮಾಡಬೇಕು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. <br /> <br /> ಈ ಬಗ್ಗೆ ಇನ್ನೂ ಹೋರಾಟ ತೀವ್ರಗೊಳಿಸಲಾಗುವುದು. ಸರ್ಕಾರ ಅಬಕಾರಿ ಸುಂಕವನ್ನು ಕೂಡಲೇ ತೆಗೆದುಹಾಕಬೇಕು. ಇಲ್ಲವಾದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಆಭರಣ ವ್ಯಾಪಾರಿ ವಾಸುದೇವ ರಾಯ್ಕರ್ ತಿಳಿಸಿದರು.<br /> <br /> ನಗರದ ಗುರು ಬಕ್ಕೇಶ್ವರ ದೇವಸ್ಥಾನದಿಂದ ಹೊರಟ ಮೋಂಬತ್ತಿ ಮೆರವಣಿಗೆ ಪಾಲಿಕೆ ಆವರಣದಲ್ಲಿ ಅಂತ್ಯಗೊಂಡಿತು.ಪ್ರಭಾಕರ ವಿ. ಶೇಟ್, ಬದರಿನಾಥ್, ಪಾರಸ್ಮಲ್ ಜೈನ್, ರಾಜು ಜೈನ್, ಶಂಕರ ಇತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>