<p><strong>ಎಚ್.ಡಿ.ಕೋಟೆ: </strong>ತೀವ್ರ ಭೇದಿಯಿಂದ ಅಸ್ವಸ್ಥಗೊಂಡು ಮೇಟಿಕುಪ್ಪೆ ಗ್ರಾಮದ ಜಮೀನಿನಲ್ಲಿ ಮಲಗಿದ್ದ ಕಾಡಾನೆ ಮರಿ ಶನಿವಾರ ಮೃತಪಟ್ಟಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಚಿಕಿತ್ಸೆ ನೀಡಿದರೂ ಆನೆ ಮರಿ ಚೇತರಿಸಿಕೊಳ್ಳಲಿಲ್ಲ.<br /> <br /> ಆಹಾರ ಅರಸಿ ಕಾಡಿನಿಂದ 4 ಆನೆಗಳು ಈಚೆಗೆ ಮೇಟಿಕುಪ್ಪೆ ಗ್ರಾಮದತ್ತ ಬಂದಿದ್ದವು. ಆ ಗುಂಪಿನಲ್ಲಿ 2 ವರ್ಷದ ಗಂಡಾನೆ ಮರಿ ತೀವ್ರವಾಗಿ ನಿತ್ರಾಣಗೊಂಡು ಮೇಟಿಕುಪ್ಪೆ ರೈತರ ಜಮೀನಿನಲ್ಲಿ ಮಲಗಿತ್ತು. <br /> ಮಾಹಿತಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಅದರ ರಕ್ಷಣೆಗೆ ಮುಂದಾದರು. ಪಶುವೈದ್ಯ ಡಾ.ವೆಂಕಟರಾಮು ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಿದರು.<br /> <br /> ಆ ಸಂದರ್ಭದಲ್ಲಿ ತುಸು ಚೇತರಿಸಿಕೊಂಡ ಮರಿ ಕಾಡಿನತ್ತ ಹೆಜ್ಜೆ ಹಾಕಲು ಹೊರಟಿತು. ಆದರೆ ಸಾಧ್ಯವಾಗಲಿಲ್ಲ. ಟ್ರ್ಯಾಕ್ಟರ್ ಸಹಾಯದಿಂದ ವಲಯ ಅರಣ್ಯ ಕಚೇರಿ ಸಮೀಪಕ್ಕೆ ತಂದು ಪುನಃ ಚಿಕಿತ್ಸೆ ಕೊಡಿಸಲಾಯಿತು. ಆದರೂ ಪ್ರಯೋಜನವಾಗಲಿಲ್ಲ ಎಂದು ವಲಯ ಅರಣ್ಯಾಧಿಕಾರಿ ಸಂತೋಷ ನಾಯಕ್ ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಚ್.ಡಿ.ಕೋಟೆ: </strong>ತೀವ್ರ ಭೇದಿಯಿಂದ ಅಸ್ವಸ್ಥಗೊಂಡು ಮೇಟಿಕುಪ್ಪೆ ಗ್ರಾಮದ ಜಮೀನಿನಲ್ಲಿ ಮಲಗಿದ್ದ ಕಾಡಾನೆ ಮರಿ ಶನಿವಾರ ಮೃತಪಟ್ಟಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಚಿಕಿತ್ಸೆ ನೀಡಿದರೂ ಆನೆ ಮರಿ ಚೇತರಿಸಿಕೊಳ್ಳಲಿಲ್ಲ.<br /> <br /> ಆಹಾರ ಅರಸಿ ಕಾಡಿನಿಂದ 4 ಆನೆಗಳು ಈಚೆಗೆ ಮೇಟಿಕುಪ್ಪೆ ಗ್ರಾಮದತ್ತ ಬಂದಿದ್ದವು. ಆ ಗುಂಪಿನಲ್ಲಿ 2 ವರ್ಷದ ಗಂಡಾನೆ ಮರಿ ತೀವ್ರವಾಗಿ ನಿತ್ರಾಣಗೊಂಡು ಮೇಟಿಕುಪ್ಪೆ ರೈತರ ಜಮೀನಿನಲ್ಲಿ ಮಲಗಿತ್ತು. <br /> ಮಾಹಿತಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಅದರ ರಕ್ಷಣೆಗೆ ಮುಂದಾದರು. ಪಶುವೈದ್ಯ ಡಾ.ವೆಂಕಟರಾಮು ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಿದರು.<br /> <br /> ಆ ಸಂದರ್ಭದಲ್ಲಿ ತುಸು ಚೇತರಿಸಿಕೊಂಡ ಮರಿ ಕಾಡಿನತ್ತ ಹೆಜ್ಜೆ ಹಾಕಲು ಹೊರಟಿತು. ಆದರೆ ಸಾಧ್ಯವಾಗಲಿಲ್ಲ. ಟ್ರ್ಯಾಕ್ಟರ್ ಸಹಾಯದಿಂದ ವಲಯ ಅರಣ್ಯ ಕಚೇರಿ ಸಮೀಪಕ್ಕೆ ತಂದು ಪುನಃ ಚಿಕಿತ್ಸೆ ಕೊಡಿಸಲಾಯಿತು. ಆದರೂ ಪ್ರಯೋಜನವಾಗಲಿಲ್ಲ ಎಂದು ವಲಯ ಅರಣ್ಯಾಧಿಕಾರಿ ಸಂತೋಷ ನಾಯಕ್ ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>