<p><strong>ಬೆಂಗಳೂರು</strong>: ನಾಗರಿಕರಿಗೆ ನೈತಿಕ ರಾಜಕಾರಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಆಮ್ ಆದ್ಮಿ ಪಕ್ಷ (ಎಎಪಿ) ಇದೇ ತಿಂಗಳ ಮೊದಲ ವಾರದಿಂದ ರಾಜ್ಯಾದ್ಯಂತ ‘ಮನೆ ಮನೆಯಲ್ಲಿ ಆಮ್ ಆದ್ಮಿ, ಮನೆ ಮನೆಗೂ ಆಮ್ ಆದ್ಮಿ’ ಎಂಬ ಜನ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಿದೆ.<br /> <br /> ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖಂಡ ಪೃಥ್ವಿರೆಡ್ಡಿ, ಈ ಅಭಿಯಾನದ ಮೂಲಕ ಪ್ರತಿ ಮನೆಯಲ್ಲೂ ಕಾರ್ಯಕರ್ತರನ್ನು ಗುರುತಿಸುವುದರ ಜತೆಗೆ ಸಾಮಾನ್ಯ ಜನರ ಕುಂದುಕೊರತೆಗಳನ್ನು ಆಲಿಸಲಾಗುವುದು ಎಂದರು.<br /> <br /> ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ಭ್ರಷ್ಟರ ಪಟ್ಟಿ ಬಿಡುಗಡೆ ಮಾಡಿದ್ದು, ಅಂತಹ ಭ್ರಷ್ಟರಿಗೆ ಈ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.<br /> <br /> <strong>ಪಕ್ಷಕ್ಕೆ ಸೇರ್ಪಡೆ: </strong>ನಿವೃತ್ತ ರಾಯಭಾರಿ ಪಿ.ಎ. ನಜರತ್, ಉದ್ಯಮಿ ರಮಣಿಕ್ ಬಕ್ಷಿ, ಇನ್ಫೊಸಿಸ್ನ ನಿವೃತ್ತ ಸಿಎಫ್ಓ ವಿ.ಬಾಲಕೃಷ್ಣನ್, ಲೋಕಸತ್ತಾ ಪಕ್ಷದಲ್ಲಿದ್ದ ರವಿ ಕೃಷ್ಣರೆಡ್ಡಿ ಮತ್ತು ಶಾಂತಲಾ ದಾಮ್ಲೆ ಅಧಿಕೃತವಾಗಿ ಎಎಪಿಗೆ ಸೇರ್ಪಡೆಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಾಗರಿಕರಿಗೆ ನೈತಿಕ ರಾಜಕಾರಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಆಮ್ ಆದ್ಮಿ ಪಕ್ಷ (ಎಎಪಿ) ಇದೇ ತಿಂಗಳ ಮೊದಲ ವಾರದಿಂದ ರಾಜ್ಯಾದ್ಯಂತ ‘ಮನೆ ಮನೆಯಲ್ಲಿ ಆಮ್ ಆದ್ಮಿ, ಮನೆ ಮನೆಗೂ ಆಮ್ ಆದ್ಮಿ’ ಎಂಬ ಜನ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಿದೆ.<br /> <br /> ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖಂಡ ಪೃಥ್ವಿರೆಡ್ಡಿ, ಈ ಅಭಿಯಾನದ ಮೂಲಕ ಪ್ರತಿ ಮನೆಯಲ್ಲೂ ಕಾರ್ಯಕರ್ತರನ್ನು ಗುರುತಿಸುವುದರ ಜತೆಗೆ ಸಾಮಾನ್ಯ ಜನರ ಕುಂದುಕೊರತೆಗಳನ್ನು ಆಲಿಸಲಾಗುವುದು ಎಂದರು.<br /> <br /> ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ಭ್ರಷ್ಟರ ಪಟ್ಟಿ ಬಿಡುಗಡೆ ಮಾಡಿದ್ದು, ಅಂತಹ ಭ್ರಷ್ಟರಿಗೆ ಈ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.<br /> <br /> <strong>ಪಕ್ಷಕ್ಕೆ ಸೇರ್ಪಡೆ: </strong>ನಿವೃತ್ತ ರಾಯಭಾರಿ ಪಿ.ಎ. ನಜರತ್, ಉದ್ಯಮಿ ರಮಣಿಕ್ ಬಕ್ಷಿ, ಇನ್ಫೊಸಿಸ್ನ ನಿವೃತ್ತ ಸಿಎಫ್ಓ ವಿ.ಬಾಲಕೃಷ್ಣನ್, ಲೋಕಸತ್ತಾ ಪಕ್ಷದಲ್ಲಿದ್ದ ರವಿ ಕೃಷ್ಣರೆಡ್ಡಿ ಮತ್ತು ಶಾಂತಲಾ ದಾಮ್ಲೆ ಅಧಿಕೃತವಾಗಿ ಎಎಪಿಗೆ ಸೇರ್ಪಡೆಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>