<p><strong>ರೋಣ: </strong>ದೇಶದಲ್ಲಿ ಅನೇಕ ವೈದ್ಯಕೀಯ ಪದ್ಧತಿಗಳು ಇವೆ. ಆಯಾ ಪದ್ಧತಿಯಲ್ಲಿ ಪರಣಿತಿ ಹೊಂದಿರುವವರು ಮಾತ್ರ ಆಯಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕು. ಬೇರೆ ಪದ್ಧತಿಯಲ್ಲಿ ಸೇವೆ ಸಲ್ಲಿಸಿದರೆ ಅವರನ್ನು ನಕಲಿ ವೈದ್ಯರು ಎಂದು ಪರಿಗಣಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘ ತಾಲ್ಲೂಕು ಘಟಕ ಆಗ್ರಹಿಸಿದೆ.<br /> <br /> ಅವರು ಇತ್ತೀಚೆಗೆ ಪಟ್ಟಣದ ತಹಶೀಲ್ದಾರ್ ಕಚೇರಿಯ ಕಾರ್ಯಾಲಯದಲ್ಲಿ ಆಯುಷ್ ವೈದ್ಯರ ಬೇಡಿಕೆ ಖಂಡಸಿ ತಹಶೀಲ್ದಾರ್ ಮುಖಂತಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಬೇರೆ ಪದ್ಧತಿಯಲ್ಲಿ ಸೇವೆ ಸಲ್ಲಿಸುವ ವೈದರು ಸಾಮಾನ್ಯ ಜನರ ಜೀವದ ಮೇಲೆ ಚಲ್ಲಾಟ ಆಡುತ್ತಿದ್ದಾರೆ.</p>.<p> ಇದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ತರಬೇತಿ ಪಡೆದ ಪದ್ಧತಿಯಲ್ಲೇ ವೈದ್ಯಕೀಯ ಸೇವೆ ನೀಡಬೇಕೆಂದು ಆದೇಶ ಮಾಡಿದೆ. ಆದರೂ ಆಯುಷ್ ವೈದ್ಯರು ತಮ್ಮ ಪದ್ಧತಿಯನ್ನು ಒಳಗೊಂಡಂತೆ ಅಲೋಪತಿ ಅಭ್ಯಾಸಕ್ಕೆ ಅವಕಾಶ ಕೋರಿ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಆರೋಪಿಸಿದರು.<br /> <br /> ಆಯುಷ್ ವೈದ್ಯರ ಬೇಡಿಕೆಗಳಿಗೆ ಸರ್ಕಾರ ಮನ್ನಣೆಯನ್ನು ಯಾವುದೇ ಕಾರಣಕ್ಕೂ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಾ. ಎಸ್.ಬಿ.ಲಕ್ಕೋಳ, ಡಾ.ಧನ್ನೂರ, ಡಾ. ಎಲ್.ಆರ್. ರಡ್ಡೇರ, ಡಾ.ಎಂ.ಐ. ಬಾಕಳೆ ಮತ್ತಿತರರು ಹಾಜರಿದ್ದರು.<br /> <br /> <strong>ಪದಾಧಿಕಾರಿಗಳ ಆಯ್ಕೆ<br /> ರೋಣ:</strong> ಭಾರತೀಯ ವೈದ್ಯಕೀಯ ಸಂಘ ರೋಣ ತಾಲ್ಲೂಕ ಘಟಕದ ನೂತನ ಅಧ್ಯಕ್ಷರಾಗಿ ನರೇಗಲ್ಲದ ವೈದ್ಯ ಡಾ. ಜಿ.ಕೆ.ಕಾಳೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗಜೇಂದ್ರಗಡದ ಡಾ. ಸಿ.ವಿ. ಮಾಳಗಿ, ಕಾರ್ಯದರ್ಶಿಯಾಗಿ ಡಾ.ಐ.ಡಿ.ಬಾಕಳೆ, ಖಜಾಂಚಿಯಾಗಿ ಡಾ. ಡ್ಯಾನಿಯಲ್ ಪೇಡ್ರಿಕ್ಸ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರೋಣ: </strong>ದೇಶದಲ್ಲಿ ಅನೇಕ ವೈದ್ಯಕೀಯ ಪದ್ಧತಿಗಳು ಇವೆ. ಆಯಾ ಪದ್ಧತಿಯಲ್ಲಿ ಪರಣಿತಿ ಹೊಂದಿರುವವರು ಮಾತ್ರ ಆಯಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕು. ಬೇರೆ ಪದ್ಧತಿಯಲ್ಲಿ ಸೇವೆ ಸಲ್ಲಿಸಿದರೆ ಅವರನ್ನು ನಕಲಿ ವೈದ್ಯರು ಎಂದು ಪರಿಗಣಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘ ತಾಲ್ಲೂಕು ಘಟಕ ಆಗ್ರಹಿಸಿದೆ.<br /> <br /> ಅವರು ಇತ್ತೀಚೆಗೆ ಪಟ್ಟಣದ ತಹಶೀಲ್ದಾರ್ ಕಚೇರಿಯ ಕಾರ್ಯಾಲಯದಲ್ಲಿ ಆಯುಷ್ ವೈದ್ಯರ ಬೇಡಿಕೆ ಖಂಡಸಿ ತಹಶೀಲ್ದಾರ್ ಮುಖಂತಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಬೇರೆ ಪದ್ಧತಿಯಲ್ಲಿ ಸೇವೆ ಸಲ್ಲಿಸುವ ವೈದರು ಸಾಮಾನ್ಯ ಜನರ ಜೀವದ ಮೇಲೆ ಚಲ್ಲಾಟ ಆಡುತ್ತಿದ್ದಾರೆ.</p>.<p> ಇದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ತರಬೇತಿ ಪಡೆದ ಪದ್ಧತಿಯಲ್ಲೇ ವೈದ್ಯಕೀಯ ಸೇವೆ ನೀಡಬೇಕೆಂದು ಆದೇಶ ಮಾಡಿದೆ. ಆದರೂ ಆಯುಷ್ ವೈದ್ಯರು ತಮ್ಮ ಪದ್ಧತಿಯನ್ನು ಒಳಗೊಂಡಂತೆ ಅಲೋಪತಿ ಅಭ್ಯಾಸಕ್ಕೆ ಅವಕಾಶ ಕೋರಿ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಆರೋಪಿಸಿದರು.<br /> <br /> ಆಯುಷ್ ವೈದ್ಯರ ಬೇಡಿಕೆಗಳಿಗೆ ಸರ್ಕಾರ ಮನ್ನಣೆಯನ್ನು ಯಾವುದೇ ಕಾರಣಕ್ಕೂ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಾ. ಎಸ್.ಬಿ.ಲಕ್ಕೋಳ, ಡಾ.ಧನ್ನೂರ, ಡಾ. ಎಲ್.ಆರ್. ರಡ್ಡೇರ, ಡಾ.ಎಂ.ಐ. ಬಾಕಳೆ ಮತ್ತಿತರರು ಹಾಜರಿದ್ದರು.<br /> <br /> <strong>ಪದಾಧಿಕಾರಿಗಳ ಆಯ್ಕೆ<br /> ರೋಣ:</strong> ಭಾರತೀಯ ವೈದ್ಯಕೀಯ ಸಂಘ ರೋಣ ತಾಲ್ಲೂಕ ಘಟಕದ ನೂತನ ಅಧ್ಯಕ್ಷರಾಗಿ ನರೇಗಲ್ಲದ ವೈದ್ಯ ಡಾ. ಜಿ.ಕೆ.ಕಾಳೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗಜೇಂದ್ರಗಡದ ಡಾ. ಸಿ.ವಿ. ಮಾಳಗಿ, ಕಾರ್ಯದರ್ಶಿಯಾಗಿ ಡಾ.ಐ.ಡಿ.ಬಾಕಳೆ, ಖಜಾಂಚಿಯಾಗಿ ಡಾ. ಡ್ಯಾನಿಯಲ್ ಪೇಡ್ರಿಕ್ಸ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>