<p><strong>ನಾಗಮಂಗಲ </strong>: ಚುನಾವಣೆಯ ಗೌಜು, ಗದ್ದಲ ಮುಗಿದಿದೆ. ಬರದಿಂದಾಗಿ ತೆಂಗಿನ ಗಿಡಗಳು ಒಣಗಿ ಹೋಗಿವೆ. ಈ ನಡುವೆಯೇ ತಾಲ್ಲೂಕಿನ ಜನತೆಗೆ ಒಂದಷ್ಟು ಉಲ್ಲಾಸ ನೀಡುವ, ಬೇಸರದ ಕ್ಷಣಗಳನ್ನು ಮರೆಸುವ ನಿಟ್ಟಿನಲ್ಲಿ ಪಟ್ಟಣದ ಕನ್ನಡ ಸಂಘ ಮುಂದಾಗಿದೆ.<br /> <br /> ಜುಲೈ 14 ರಿಂದ ಒಂದು ವಾರ ಕಾಲ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವ ಹಮ್ಮಿಕೊಳ್ಳುವ ಮೂಲಕ ಕಲಾಸಕ್ತರಿಗಾಗಿ ನಾಟಕಗಳ ರಂಗವಲ್ಲಿ ಹಾಕಿ ಆಷಾಢದ ಸಂಜೆಗಳನ್ನು ಸಿಂಗರಿಸಿದ್ದಾರೆ.<br /> <br /> ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ಹೆಸರು ಮಾಡಿದ್ದ ನಾಗಮಂಗಲ ತಾಲ್ಲೂಕು ಇತ್ತೀಚಿನ ದಿನಗಳಲ್ಲಿ ರಂಗ ಚಟುವಟಿಕೆಯಲ್ಲೂ ಸಹ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ.<br /> <br /> ಕನ್ನಡ ಸಂಘವು ಕಳೆದ 8 ವರ್ಷಗಳಿಂದ ರಾಜ್ಯಮಟ್ಟದ ನಾಟಕೋತ್ಸವವನ್ನು ಆಯೋ ಜಿಸುತ್ತಾ ಬಂದಿದೆ. ಆ ಮೂಲಕ ರಂಗ ರುಚಿಯನ್ನು ಇಲ್ಲಿನ ಜನತೆಗೆ ಉಣಬಡಿಸುತ್ತಿದೆ.<br /> <br /> <strong>ಸಂಘ ಬೆಳೆದು ಬಂದ ಹಾದಿ :</strong> 1972ರಲ್ಲಿ ನಾಗಮಂಗಲದ ಒಂದಷ್ಟು ಗೆಳೆಯರು ಸೇರಿಕೊಂಡು `ಕನ್ನಡ ಸಂಘ'ವನ್ನು ಅಸ್ತಿತ್ವಕ್ಕೆ ತಂದರು.<br /> <br /> ಆರಂಭದಲ್ಲಿ ಉಪನ್ಯಾಸ, ಕಲಾತ್ಮಕ ಚಲನಚಿತ್ರ ಪ್ರದರ್ಶನ, ಕವಿಗೋಷ್ಠಿ, ವಿಚಾರ ಸಂಕಿರಣ, ಛಾಯಾ ಚಿತ್ರಪ್ರದರ್ಶನ, ವ್ಯಂಗ್ಯಚಿತ್ರ ರಚನಾ ಶಿಬಿರಗಳನ್ನು ಏರ್ಪಡಿಸಲಾಗುತ್ತಿತ್ತು. ಜ್ಞಾನಪೀಠ ಪುರಸ್ಕೃತ ಶಿವರಾಮ ಕಾರಂತರು ಸಂಘದ ಬೆಳ್ಳಿ ಹಬ್ಬಕ್ಕೆ ಬಂದು ಹರಸಿದ್ದು ಸಂಘದ ಸಂಭ್ರಮಗಳಲ್ಲೊಂದಾಗಿದೆ.<br /> <br /> ಹೀಗೆ ತನ್ಮೂಲಕ ಸದಭಿರುಚಿಯ ಕಾರ್ಯಕ್ರಮಗಳನ್ನು ನಾಗಮಂಗಲದ ಸಾಂಸ್ಕೃತಿಕ ವಲಯಕ್ಕೆ ಉಣ ಬಡಿಸುವ ಮೂಲಕ ಸಂಘ ಮನೆ ಮಾತಾಗಿದೆ. ಸಂಘಕ್ಕೆ ಸಾರ್ವಜನಿಕರ ಪ್ರೋತ್ಸಾಹ ಬೆಂಬಲವೂ ಇದೆ.<br /> <br /> ನಾಡು, ನುಡಿಯ ಬಗ್ಗೆ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳ ಲಾಗುತ್ತದೆ. ನವೆಂಬರ್ ತಿಂಗಳಲ್ಲಿ ಕನ್ನಡ ಸಾರಸ್ವತ ಲೋಕದ ದಿಗ್ಗಜರನ್ನು ಆಹ್ವಾನಿಸಿ, ಗೌರವಿಸುವುದನ್ನು ರೂಢಿಸಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದ ಯಾವುದೇ ನೆರವಿಲ್ಲದೆ ಚಟುವಟಿಕೆಗಳನ್ನು ನಡೆಸುತ್ತಿರು ವುದು ಗಮನಾರ್ಹ.<br /> <br /> ಉಡುಪಿಯಲ್ಲಿ ನಡೆಯುವ ರಾಜ್ಯ ಮಟ್ಟದ ನಾಟಕೋತ್ಸವದಲ್ಲಿ ಸತತ 3 ವರ್ಷ ಪ್ರಥಮ ಬಹುಮಾನ ಗಳಿಸಿದ ಕೀರ್ತಿ ಸಂಘಕ್ಕಿದೆ.<br /> ಹೀಗೆ ಹತ್ತು ಹಲವು ಯಶಸ್ವಿ ಕಾರ್ಯಕ್ರಮಗಳ ಜೊತೆ ಈ ವರ್ಷವೂ ರಾಜ್ಯ ಮಟ್ಟದ ನಾಗರಂಗ ನಾಟಕೋತ್ಸವವು ಜುಲೈ14 ರಿಂದ 20ರ ವರೆಗೆ ನಡೆಯಲಿದೆ. ರಾಜ್ಯದ ವಿವಿಧ ಪ್ರಸಿದ್ಧ ಕಲಾತಂಡಗಳು ನಾಟಕ ಪ್ರದರ್ಶಿಸಲಿವೆ.<br /> <br /> ಸಾರ್ವಜನಿಕರ ಸಹಕಾರದಿಂದ ಹಲವಾರು ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗಿದೆ. ಈ ಬಾರಿಯೂ ಕಲಾಸಕ್ತರು ಹೆಚ್ಚಿನ ಪ್ರೋತ್ಸಾಹ ನೀಡುವರು ಎಂಬ ಭರವಸೆ ನಮಗಿದೆ ಎನ್ನುತ್ತಾರೆ ಸಂಘದ ಅಧ್ಯಕ್ಷ ಎಂ.ಎನ್. ಮಂಜುನಾಥ್.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಗಮಂಗಲ </strong>: ಚುನಾವಣೆಯ ಗೌಜು, ಗದ್ದಲ ಮುಗಿದಿದೆ. ಬರದಿಂದಾಗಿ ತೆಂಗಿನ ಗಿಡಗಳು ಒಣಗಿ ಹೋಗಿವೆ. ಈ ನಡುವೆಯೇ ತಾಲ್ಲೂಕಿನ ಜನತೆಗೆ ಒಂದಷ್ಟು ಉಲ್ಲಾಸ ನೀಡುವ, ಬೇಸರದ ಕ್ಷಣಗಳನ್ನು ಮರೆಸುವ ನಿಟ್ಟಿನಲ್ಲಿ ಪಟ್ಟಣದ ಕನ್ನಡ ಸಂಘ ಮುಂದಾಗಿದೆ.<br /> <br /> ಜುಲೈ 14 ರಿಂದ ಒಂದು ವಾರ ಕಾಲ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವ ಹಮ್ಮಿಕೊಳ್ಳುವ ಮೂಲಕ ಕಲಾಸಕ್ತರಿಗಾಗಿ ನಾಟಕಗಳ ರಂಗವಲ್ಲಿ ಹಾಕಿ ಆಷಾಢದ ಸಂಜೆಗಳನ್ನು ಸಿಂಗರಿಸಿದ್ದಾರೆ.<br /> <br /> ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ಹೆಸರು ಮಾಡಿದ್ದ ನಾಗಮಂಗಲ ತಾಲ್ಲೂಕು ಇತ್ತೀಚಿನ ದಿನಗಳಲ್ಲಿ ರಂಗ ಚಟುವಟಿಕೆಯಲ್ಲೂ ಸಹ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ.<br /> <br /> ಕನ್ನಡ ಸಂಘವು ಕಳೆದ 8 ವರ್ಷಗಳಿಂದ ರಾಜ್ಯಮಟ್ಟದ ನಾಟಕೋತ್ಸವವನ್ನು ಆಯೋ ಜಿಸುತ್ತಾ ಬಂದಿದೆ. ಆ ಮೂಲಕ ರಂಗ ರುಚಿಯನ್ನು ಇಲ್ಲಿನ ಜನತೆಗೆ ಉಣಬಡಿಸುತ್ತಿದೆ.<br /> <br /> <strong>ಸಂಘ ಬೆಳೆದು ಬಂದ ಹಾದಿ :</strong> 1972ರಲ್ಲಿ ನಾಗಮಂಗಲದ ಒಂದಷ್ಟು ಗೆಳೆಯರು ಸೇರಿಕೊಂಡು `ಕನ್ನಡ ಸಂಘ'ವನ್ನು ಅಸ್ತಿತ್ವಕ್ಕೆ ತಂದರು.<br /> <br /> ಆರಂಭದಲ್ಲಿ ಉಪನ್ಯಾಸ, ಕಲಾತ್ಮಕ ಚಲನಚಿತ್ರ ಪ್ರದರ್ಶನ, ಕವಿಗೋಷ್ಠಿ, ವಿಚಾರ ಸಂಕಿರಣ, ಛಾಯಾ ಚಿತ್ರಪ್ರದರ್ಶನ, ವ್ಯಂಗ್ಯಚಿತ್ರ ರಚನಾ ಶಿಬಿರಗಳನ್ನು ಏರ್ಪಡಿಸಲಾಗುತ್ತಿತ್ತು. ಜ್ಞಾನಪೀಠ ಪುರಸ್ಕೃತ ಶಿವರಾಮ ಕಾರಂತರು ಸಂಘದ ಬೆಳ್ಳಿ ಹಬ್ಬಕ್ಕೆ ಬಂದು ಹರಸಿದ್ದು ಸಂಘದ ಸಂಭ್ರಮಗಳಲ್ಲೊಂದಾಗಿದೆ.<br /> <br /> ಹೀಗೆ ತನ್ಮೂಲಕ ಸದಭಿರುಚಿಯ ಕಾರ್ಯಕ್ರಮಗಳನ್ನು ನಾಗಮಂಗಲದ ಸಾಂಸ್ಕೃತಿಕ ವಲಯಕ್ಕೆ ಉಣ ಬಡಿಸುವ ಮೂಲಕ ಸಂಘ ಮನೆ ಮಾತಾಗಿದೆ. ಸಂಘಕ್ಕೆ ಸಾರ್ವಜನಿಕರ ಪ್ರೋತ್ಸಾಹ ಬೆಂಬಲವೂ ಇದೆ.<br /> <br /> ನಾಡು, ನುಡಿಯ ಬಗ್ಗೆ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳ ಲಾಗುತ್ತದೆ. ನವೆಂಬರ್ ತಿಂಗಳಲ್ಲಿ ಕನ್ನಡ ಸಾರಸ್ವತ ಲೋಕದ ದಿಗ್ಗಜರನ್ನು ಆಹ್ವಾನಿಸಿ, ಗೌರವಿಸುವುದನ್ನು ರೂಢಿಸಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದ ಯಾವುದೇ ನೆರವಿಲ್ಲದೆ ಚಟುವಟಿಕೆಗಳನ್ನು ನಡೆಸುತ್ತಿರು ವುದು ಗಮನಾರ್ಹ.<br /> <br /> ಉಡುಪಿಯಲ್ಲಿ ನಡೆಯುವ ರಾಜ್ಯ ಮಟ್ಟದ ನಾಟಕೋತ್ಸವದಲ್ಲಿ ಸತತ 3 ವರ್ಷ ಪ್ರಥಮ ಬಹುಮಾನ ಗಳಿಸಿದ ಕೀರ್ತಿ ಸಂಘಕ್ಕಿದೆ.<br /> ಹೀಗೆ ಹತ್ತು ಹಲವು ಯಶಸ್ವಿ ಕಾರ್ಯಕ್ರಮಗಳ ಜೊತೆ ಈ ವರ್ಷವೂ ರಾಜ್ಯ ಮಟ್ಟದ ನಾಗರಂಗ ನಾಟಕೋತ್ಸವವು ಜುಲೈ14 ರಿಂದ 20ರ ವರೆಗೆ ನಡೆಯಲಿದೆ. ರಾಜ್ಯದ ವಿವಿಧ ಪ್ರಸಿದ್ಧ ಕಲಾತಂಡಗಳು ನಾಟಕ ಪ್ರದರ್ಶಿಸಲಿವೆ.<br /> <br /> ಸಾರ್ವಜನಿಕರ ಸಹಕಾರದಿಂದ ಹಲವಾರು ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗಿದೆ. ಈ ಬಾರಿಯೂ ಕಲಾಸಕ್ತರು ಹೆಚ್ಚಿನ ಪ್ರೋತ್ಸಾಹ ನೀಡುವರು ಎಂಬ ಭರವಸೆ ನಮಗಿದೆ ಎನ್ನುತ್ತಾರೆ ಸಂಘದ ಅಧ್ಯಕ್ಷ ಎಂ.ಎನ್. ಮಂಜುನಾಥ್.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>