<p><span style="font-size: 26px;"><strong>ಬಾಗಲಕೋಟೆ:</strong> ಜಿಲ್ಲೆಯಲ್ಲಿ ಕಾರ್ಯಾನಿರ್ವಹಿಸುತ್ತಿರುವ ಇಟ್ಟಿಗೆ ತಯಾರಿಕಾ ಘಟಕಗಳಲ್ಲಿ (ಭಟ್ಟಿಗಳಲ್ಲಿ) ಚಿಕ್ಕಾಸಿಗಾಗಿ ಬಾಲ ಕಾರ್ಮಿಕರು ಬೆವರು ಸುರಿಸುತ್ತಿದ್ದಾರೆ. ಇಟ್ಟಿಗೆ ಘಟಕಗಳ ಮಾಲೀಕರು ಕಾನೂನು ಬಾಹಿರವಾಗಿ ಬಾಲಕಾರ್ಮಿಕರ ಕೈಯಲ್ಲಿ ದುಡಿಮೆ ಮಾಡಿಸಿಕೊಳ್ಳುತ್ತಿದ್ದರೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಸ್ಥೆ ಮಾತ್ರ ಮೌನವಾಗಿದೆ.</span><br /> <br /> ಗುಣಮಟ್ಟದ ಇಟ್ಟಿಗೆ ತಯಾರಿಕೆಗೆ ಹೆಸರಾದ ಬಾಗಲಕೋಟೆ ಸಮೀಪದ ಗದ್ದನಕೇರಿ ಹಾಗೂ ಜಮಖಂಡಿ ತಾಲ್ಲೂಕಿನ ಆಲಗೂರು, ಚಿಕ್ಕಪಡಸಲಗಿ, ಜಕ್ಕನೂರು, ಕುಂಚನೂರು, ಮೈಗೂರು, ಹಿಪ್ಪರಗಿ ಮತ್ತಿತರ ಕಡೆಗಳಲ್ಲಿ ಮುಖ್ಯರಸ್ತೆಯ ಇಕ್ಕೆಲದ ಹೊಲದಲ್ಲೇ ಹೆಜ್ಜೆಹೆಜ್ಜೆಗೆ ಕಾರ್ಯಾಚರಿಸುತ್ತಿರುವ ಇಟ್ಟಿಗೆ ತಯಾರಿಕಾ ಘಟಕಗಳಲ್ಲಿ ಬಾಲ ಕಾರ್ಮಿಕರು ದುಡಿಯುತ್ತಿರುವುದು ಕಂಡುಬರುತ್ತದೆ.<br /> <br /> ಆಟ, ಪಾಠದಲ್ಲಿ ಪಾಲ್ಗೊಳ್ಳಬೇಕಿದ್ದ ಬಾಲಕ, ಬಾಲಕಿಯರು ಬಡತನದಲ್ಲಿರುವ ಕುಟುಂಬಕ್ಕೆ ಆಸರೆಯಾಗಲು ಅಂತಹ ಕಠಿಣವೇನಲ್ಲದ ಇಟ್ಟಿಗೆ ತಯಾರಿಕೆ ಕೆಲಸದಲ್ಲಿ ಕೂಲಿಯಾಳುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.<br /> <br /> ದೊಡ್ಡವರಿಗಿಂತ ಚಿಕ್ಕವರೇ ಹೆಚ್ಚಾಗಿ ಇಟ್ಟಿಗೆ ತಯಾರಿಕಾ ಘಟಕಗಳಲ್ಲಿ ಬೆಳಿಗ್ಗೆಯಿಂದ ಸಂಜೆ ವರೆಗೆ ಇಟ್ಟಿಗೆಗಳನ್ನು ಹೊತ್ತು ಲಾರಿ, ಟ್ರ್ಯಾಕ್ಟರ್ಗಳಿಗೆ ತುಂಬುವುದು (ಲೋಡ್), ಮಣ್ಣು ಕಲಿಸುವುದು, ಇಟ್ಟಿಗೆ ಬಿಡುವುದು, ಸುಡುವ ಕೆಲಸವನ್ನು ಮಾಡುತ್ತಿದ್ದಾರೆ.<br /> <br /> ಇಟ್ಟಿಗೆ ತಯಾರಿಕೆ ಘಟಕಗಳಲ್ಲಿ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಬಹು ವರ್ಷಗಳಿಂದ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದರೂ ಇದನ್ನು ತಡೆಯಬೇಕಿರುವ ಕಾರ್ಮಿಕ ಇಲಾಖೆ ಮಾತ್ರ ಕಣ್ಮುಚ್ಚಿಕುಳಿತಿದೆ.<br /> <br /> ನದಿ ತೀರದ ಹೊಲದ ಮಣ್ಣನ್ನು ಅಕ್ರಮವಾಗಿ ತಂದು ಇಟ್ಟಿಗೆಗಳನ್ನು ತಯಾರಿಸಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಖಾಸಗಿ ಹಾಗೂ ಸರ್ಕಾರಿ ಕಟ್ಟಡ ಕಾಮಗಾರಿಗೆ ಹೆಚ್ಚಾಗಿ ಜಿಲ್ಲೆಯ ಇಟ್ಟಿಗೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅಲ್ಲದೇ ವಿಜಾಪುರ, ಹುಬ್ಬಳ್ಳಿ, ಬೆಳಗಾವಿ ನಗರಗಳವರೆಗೂ ಜಿಲ್ಲೆಯಿಂದ ಇಟ್ಟಿಗೆಗಳನ್ನು ಪೂರೈಕೆ ಮಾಡಲಾಗುತ್ತಿದೆ.<br /> <br /> ಪತ್ತೆ ಹಚ್ಚಲು ಆಗ್ರಹ: `ಪ್ರಜಾವಾಣಿ'ಗೆ ಮಂಗಳವಾರ ಪ್ರತಿಕ್ರಿಯಿಸಿದ ಕಾರ್ಮಿಕ ಸಂಘಟನೆಯ ಮುಖಂಡ ಶ್ರೀನಿವಾಸ ಬಳ್ಳಾರಿ, `ಜಿಲ್ಲೆಯಲ್ಲಿ ಇಟ್ಟಿಗೆ ಭಟ್ಟಿಗಳಲ್ಲಿ ಮಾತ್ರವಲ್ಲದೇ ಹೋಟೆಲ್, ಖಾನಾವಳಿ, ಅಂಗಡಿ, ಗ್ಯಾರೇಜ್ಗಳಲ್ಲೂ ಬಾಲಕರಿಂದ ದುಡಿಮೆ ಮಾಡಿಸಿಕೊಳ್ಳಲಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಪತ್ತೆಹಚ್ಚಿ ರಕ್ಷಿಸುತ್ತಿಲ್ಲ' ಎಂದು ಆರೋಪಿಸಿದರು.<br /> <br /> `ಬಾಲಕಾರ್ಮಿಕರನ್ನು ರಕ್ಷಿಸುವಲ್ಲಿ ನಿರ್ಲಕ್ಷ್ಯ ತಾಳಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕಾರ್ಮಿಕ ಸಚಿವರ ಗಮನಕ್ಕೆ ತರಲಾಗುವುದು' ಎಂದರು.<br /> <br /> `ಸರ್ಕಾರ ಮಕ್ಕಳಿಗೆ ಉಚಿತ ಶಿಕ್ಷಣ, ಮಧ್ಯಾಹ್ನದ ಊಟ, ವಿದ್ಯಾರ್ಥಿನಿಲಯಗಳನ್ನು ತೆರೆದು ಕೋಟ್ಯಾಂತರ ರೂಪಾಯಿ ವ್ಯಯಿಸುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು, ಅಲ್ಪ ಹಣಕ್ಕಾಗಿ ದುಡಿಮೆಗೆ ಕಳುಹಿಸಬಾರದು' ಎಂದು ವಿನಂತಿಸಿದರು.<br /> <br /> ಸಿಗದ ಅಧಿಕಾರಿ: ಜಿಲ್ಲೆಯ ಇಟ್ಟಿಗೆ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಲಕಾರ್ಮಿಕರ ರಕ್ಷಣೆಗಾಗಿ ಇಲಾಖೆ ಕೈಗೊಂಡಿರುವ ಕ್ರಮದ ಕುರಿತು ಮಾಹಿತಿಗಾಗಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಸ್ಥೆಯ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ ಅವರ ಮೊಬೈಲ್ಗೆ `ಪತ್ರಿಕೆ'ಯಿಂದ ಕರೆ ಮಾಡಿದರೂ ಅವರು ಕರೆಯನ್ನು ಸ್ವೀಕರಿಸಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಬಾಗಲಕೋಟೆ:</strong> ಜಿಲ್ಲೆಯಲ್ಲಿ ಕಾರ್ಯಾನಿರ್ವಹಿಸುತ್ತಿರುವ ಇಟ್ಟಿಗೆ ತಯಾರಿಕಾ ಘಟಕಗಳಲ್ಲಿ (ಭಟ್ಟಿಗಳಲ್ಲಿ) ಚಿಕ್ಕಾಸಿಗಾಗಿ ಬಾಲ ಕಾರ್ಮಿಕರು ಬೆವರು ಸುರಿಸುತ್ತಿದ್ದಾರೆ. ಇಟ್ಟಿಗೆ ಘಟಕಗಳ ಮಾಲೀಕರು ಕಾನೂನು ಬಾಹಿರವಾಗಿ ಬಾಲಕಾರ್ಮಿಕರ ಕೈಯಲ್ಲಿ ದುಡಿಮೆ ಮಾಡಿಸಿಕೊಳ್ಳುತ್ತಿದ್ದರೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಸ್ಥೆ ಮಾತ್ರ ಮೌನವಾಗಿದೆ.</span><br /> <br /> ಗುಣಮಟ್ಟದ ಇಟ್ಟಿಗೆ ತಯಾರಿಕೆಗೆ ಹೆಸರಾದ ಬಾಗಲಕೋಟೆ ಸಮೀಪದ ಗದ್ದನಕೇರಿ ಹಾಗೂ ಜಮಖಂಡಿ ತಾಲ್ಲೂಕಿನ ಆಲಗೂರು, ಚಿಕ್ಕಪಡಸಲಗಿ, ಜಕ್ಕನೂರು, ಕುಂಚನೂರು, ಮೈಗೂರು, ಹಿಪ್ಪರಗಿ ಮತ್ತಿತರ ಕಡೆಗಳಲ್ಲಿ ಮುಖ್ಯರಸ್ತೆಯ ಇಕ್ಕೆಲದ ಹೊಲದಲ್ಲೇ ಹೆಜ್ಜೆಹೆಜ್ಜೆಗೆ ಕಾರ್ಯಾಚರಿಸುತ್ತಿರುವ ಇಟ್ಟಿಗೆ ತಯಾರಿಕಾ ಘಟಕಗಳಲ್ಲಿ ಬಾಲ ಕಾರ್ಮಿಕರು ದುಡಿಯುತ್ತಿರುವುದು ಕಂಡುಬರುತ್ತದೆ.<br /> <br /> ಆಟ, ಪಾಠದಲ್ಲಿ ಪಾಲ್ಗೊಳ್ಳಬೇಕಿದ್ದ ಬಾಲಕ, ಬಾಲಕಿಯರು ಬಡತನದಲ್ಲಿರುವ ಕುಟುಂಬಕ್ಕೆ ಆಸರೆಯಾಗಲು ಅಂತಹ ಕಠಿಣವೇನಲ್ಲದ ಇಟ್ಟಿಗೆ ತಯಾರಿಕೆ ಕೆಲಸದಲ್ಲಿ ಕೂಲಿಯಾಳುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.<br /> <br /> ದೊಡ್ಡವರಿಗಿಂತ ಚಿಕ್ಕವರೇ ಹೆಚ್ಚಾಗಿ ಇಟ್ಟಿಗೆ ತಯಾರಿಕಾ ಘಟಕಗಳಲ್ಲಿ ಬೆಳಿಗ್ಗೆಯಿಂದ ಸಂಜೆ ವರೆಗೆ ಇಟ್ಟಿಗೆಗಳನ್ನು ಹೊತ್ತು ಲಾರಿ, ಟ್ರ್ಯಾಕ್ಟರ್ಗಳಿಗೆ ತುಂಬುವುದು (ಲೋಡ್), ಮಣ್ಣು ಕಲಿಸುವುದು, ಇಟ್ಟಿಗೆ ಬಿಡುವುದು, ಸುಡುವ ಕೆಲಸವನ್ನು ಮಾಡುತ್ತಿದ್ದಾರೆ.<br /> <br /> ಇಟ್ಟಿಗೆ ತಯಾರಿಕೆ ಘಟಕಗಳಲ್ಲಿ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಬಹು ವರ್ಷಗಳಿಂದ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದರೂ ಇದನ್ನು ತಡೆಯಬೇಕಿರುವ ಕಾರ್ಮಿಕ ಇಲಾಖೆ ಮಾತ್ರ ಕಣ್ಮುಚ್ಚಿಕುಳಿತಿದೆ.<br /> <br /> ನದಿ ತೀರದ ಹೊಲದ ಮಣ್ಣನ್ನು ಅಕ್ರಮವಾಗಿ ತಂದು ಇಟ್ಟಿಗೆಗಳನ್ನು ತಯಾರಿಸಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಖಾಸಗಿ ಹಾಗೂ ಸರ್ಕಾರಿ ಕಟ್ಟಡ ಕಾಮಗಾರಿಗೆ ಹೆಚ್ಚಾಗಿ ಜಿಲ್ಲೆಯ ಇಟ್ಟಿಗೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅಲ್ಲದೇ ವಿಜಾಪುರ, ಹುಬ್ಬಳ್ಳಿ, ಬೆಳಗಾವಿ ನಗರಗಳವರೆಗೂ ಜಿಲ್ಲೆಯಿಂದ ಇಟ್ಟಿಗೆಗಳನ್ನು ಪೂರೈಕೆ ಮಾಡಲಾಗುತ್ತಿದೆ.<br /> <br /> ಪತ್ತೆ ಹಚ್ಚಲು ಆಗ್ರಹ: `ಪ್ರಜಾವಾಣಿ'ಗೆ ಮಂಗಳವಾರ ಪ್ರತಿಕ್ರಿಯಿಸಿದ ಕಾರ್ಮಿಕ ಸಂಘಟನೆಯ ಮುಖಂಡ ಶ್ರೀನಿವಾಸ ಬಳ್ಳಾರಿ, `ಜಿಲ್ಲೆಯಲ್ಲಿ ಇಟ್ಟಿಗೆ ಭಟ್ಟಿಗಳಲ್ಲಿ ಮಾತ್ರವಲ್ಲದೇ ಹೋಟೆಲ್, ಖಾನಾವಳಿ, ಅಂಗಡಿ, ಗ್ಯಾರೇಜ್ಗಳಲ್ಲೂ ಬಾಲಕರಿಂದ ದುಡಿಮೆ ಮಾಡಿಸಿಕೊಳ್ಳಲಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಪತ್ತೆಹಚ್ಚಿ ರಕ್ಷಿಸುತ್ತಿಲ್ಲ' ಎಂದು ಆರೋಪಿಸಿದರು.<br /> <br /> `ಬಾಲಕಾರ್ಮಿಕರನ್ನು ರಕ್ಷಿಸುವಲ್ಲಿ ನಿರ್ಲಕ್ಷ್ಯ ತಾಳಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕಾರ್ಮಿಕ ಸಚಿವರ ಗಮನಕ್ಕೆ ತರಲಾಗುವುದು' ಎಂದರು.<br /> <br /> `ಸರ್ಕಾರ ಮಕ್ಕಳಿಗೆ ಉಚಿತ ಶಿಕ್ಷಣ, ಮಧ್ಯಾಹ್ನದ ಊಟ, ವಿದ್ಯಾರ್ಥಿನಿಲಯಗಳನ್ನು ತೆರೆದು ಕೋಟ್ಯಾಂತರ ರೂಪಾಯಿ ವ್ಯಯಿಸುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು, ಅಲ್ಪ ಹಣಕ್ಕಾಗಿ ದುಡಿಮೆಗೆ ಕಳುಹಿಸಬಾರದು' ಎಂದು ವಿನಂತಿಸಿದರು.<br /> <br /> ಸಿಗದ ಅಧಿಕಾರಿ: ಜಿಲ್ಲೆಯ ಇಟ್ಟಿಗೆ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಲಕಾರ್ಮಿಕರ ರಕ್ಷಣೆಗಾಗಿ ಇಲಾಖೆ ಕೈಗೊಂಡಿರುವ ಕ್ರಮದ ಕುರಿತು ಮಾಹಿತಿಗಾಗಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಸ್ಥೆಯ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ ಅವರ ಮೊಬೈಲ್ಗೆ `ಪತ್ರಿಕೆ'ಯಿಂದ ಕರೆ ಮಾಡಿದರೂ ಅವರು ಕರೆಯನ್ನು ಸ್ವೀಕರಿಸಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>