<p><strong>ಬೀದರ್</strong>: ಈಚೆಗಷ್ಟೇ ಮುಗಿದ ಬೇಸಿಗೆಯಲ್ಲಿ ಬಿಸಿಲಿನ ಜೊತೆಗೆ ನಗರದ ಜನತೆಯನ್ನು ಕಾಡಿದ್ದು ಕುಡಿಯುವ ನೀರಿನ ಸಮಸ್ಯೆ. ಗಂಭೀರ ಸಮಸ್ಯೆ ಎಂಬಂತೆ ಕಾಡಲಿಲ್ಲವಾದರೂ ಕುಡಿಯುವ ನೀರಿನ ಕೊರತೆ ಕಾಡಿದ್ದು ನಿಜ. ನಗರಸಭೆ ಹೆಚ್ಚುವರಿಯಾಗಿ ಕಾರಂಜಾದಿಂದ ನೀರು ಪಡೆಯುವ ಮಟ್ಟಿಗೆ ಈ ಸಮಸ್ಯೆ ಬಾಧಿಸಿತ್ತು.<br /> <br /> ನಗರ ಕುಡಿಯುವ ನೀರು ಸರಬರಾಜು ಯೋಜನೆಯ ಜಾರಿಯೊಂದಿಗೆ ಮುಂದಿನ ಬೇಸಿಗೆಗೆ ಈ ಸಮಸ್ಯೆ ಇರುವುದಿಲ್ಲ ಎಂಬ ಭರವಸೆ ಅಧಿಕಾರಿ ವಲಯದಿಂದ ಕಾಡಿತ್ತಾದರೂ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದು ಮತ್ತೆ ಮುಂದಿನ ಬೇಸಿಗೆಯಲ್ಲಿಯೂ ನೀರು ಪೂರೈಕೆ ಸಮಸ್ಯೆ ಕಾಡಬಹುದಾ ಎಂಬ ಆತಂಕ ಮೂಡಿಸಿದೆ.<br /> <br /> ನಗರದಲ್ಲಿ 2026ರ ವೇಳೆಗೆ ಇರಬಹುದಾದ ಜನಸಂಖ್ಯೆ ಮತ್ತು ಬೇಡಿಕೆಗೆ ಅನುಸಾರವಾಗಿ ಕುಡಿಯುವ ನೀರು ಪೂರೈಕೆ ಯೋಜನೆ ಜಾರಿಗೊಳಿಸುತ್ತಿದ್ದು, ವಿಳಂಬವಾಗಿರುವ ಈ ಕಾಮಗಾರಿ ಈ ವರ್ಷದ ಅಕ್ಟೋಬರ್ ವೇಳೆಗೆ ಕಾರ್ಯಾರಂಭ ಮಾಡುವ ಭರವಸೆಯು ವ್ಯಕ್ತವಾಗಿತ್ತು.<br /> <br /> ಈಚೆಗೆ ಸ್ಥಳ ಪರಿಶೀಲನೆಗಾಗಿ ನೀಲಮ್ಮನಹಳ್ಳಿ ತಾಂಡಾ ಸ್ಥಳಕ್ಕೆ ತೆರಳಿದ್ದ ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರೇ, ಓವರ್ ಹೆಡ್ ಟ್ಯಾಂಕ್ಗಳ ನಿರ್ಮಾಣ, ಪೈಪ್ಗಳ ಅಳವಡಿಕೆ ಮತ್ತಿತರ ಕಾಮಗಾರಿ ಪ್ರಗತಿಯಲ್ಲಿದ್ದು, ವರ್ಷಾಂತ್ಯದ ವೇಳೆಗೆ ಮುಗಿಯಬಹುದು ಎಂಬ ಆಶಯ ವ್ಯಕ್ತಪಡಿಸಿದ್ದರು.<br /> <br /> ಯೋಜನೆಯ ಭಾಗವಾಗಿ ಕಾರಂಜಾ ನದಿಯಿಂದ ಎತ್ತುವಳಿಗಾಗಿ ಕಾರಂಜಾ ಜಲಾಶಯದ ಬಳಿ ಜಾಕ್ವೆಲ್ ನಿರ್ಮಾಣ, ಅಲ್ಲಿಂದ ನೀರು ಸಂಸ್ಕರಣೆಗಾಗಿ ನೀಲಮ್ಮನಹಳ್ಳಿ ತಾಂಡಾ ಬಳಿ ಫಿಲ್ಟರ್ ಬೆಡ್ ನಿರ್ಮಾಣ ಆಗುತ್ತಿದೆ. ತದನಂತರ ಶುದ್ಧೀಕರಿಸಿದ ನೀರನ್ನು ನೌಬಾದ್ ಬಳಿಯಿರುವ ನೆಲಹಂತದ ಸಂಪ್ಗೆ ಪೂರೈಸಲಾಗುತ್ತದೆ.<br /> <br /> ಮುಂದಿನ ಹಂತದಲ್ಲಿ ಹೀಗೇ ಸಂಗ್ರಹಿಸಿದ ನೀರನ್ನು ನಗರದ ವಿವಿಧೆಡೆ ನಿರ್ಮಾಣ ಆಗುತ್ತಿರುವ ಓವರ್ಹೆಡ್ ಟ್ಯಾಂಕ್ಗಳಿಗೆ ನೀರು ಸರಬರಾಜು ಮಾಡಿ, ಅಲ್ಲಿಂದ ಬಡಾವಣೆಗಳಿಗೆ ಪೂರೈಸುವುದು ಗುರಿಯಾಗಿದೆ.<br /> <br /> `ಕಾರಂಜಾ ಜಲಾಶಯದ ಬಳಿಕ ಜಾಕ್ವೆಲ್ ನಿರ್ಮಾಣ ಕಾರ್ಯವು ತಳ ನೆಲದಲ್ಲಿ ಕಲ್ಲು ಸಿಕ್ಕ ಕಾರಣ ವಿಳಂಬವಾಗಿದೆ. ಇದರ ಜೊತೆಗೆ, ಫಿಲ್ಟರ್ ಬೆಡ್ (ಶುದ್ಧೀಕರಣ ಘಟಕ) ಸ್ಥಾಪಿಸಲು ಉನ್ನತ ತಂತ್ರಗಾರಿಕೆ ಅಗತ್ಯವಿದೆ. ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿರುವ ಕಾರಣ ವಿಳಂಬವಾಗಿದೆ' ಎನ್ನುತ್ತಾರೆ ಅಧಿಕಾರಿಗಳು.<br /> <br /> ಜಿಲ್ಲಾಧಿಕಾರಿಗಳ ಪ್ರಕಾರ, ಈಗಾಗಲೇ ಕಾಮಗಾರಿ ಶೇ 70ರಷ್ಟು ಪೂರ್ಣವಾಗಿದೆ.<br /> <br /> ಒಮ್ಮೆ ಯೋಜನೆ ಕಾಮಗಾರಿ ಪೂರ್ಣಗೊಂಡಲ್ಲಿ ಶುದ್ಧೀಕರಿಸಲಾದ ಪ್ರಸ್ತುತ ಬೇಡಿಕೆಗೆ ಅನುಗುಣವಾಗಿ ಅಗತ್ಯ ಪ್ರಮಾಣದ ನೀರು ಸಂಗ್ರಹ ಸಾಧ್ಯವಾಗಲಿದೆ.<br /> <br /> ಉದಗೀರ್ ರಸ್ತೆಯಲ್ಲಿ ಬಸ್ ನಿಲ್ದಾಣ ಸಮೀಪ ಸೇರಿದಂತೆ ವಿವಿಧೆಡೆ ಇನ್ನೂ ಪೈಪ್ ಅಳವಡಿಕೆ ಕಾರ್ಯವು ಇನ್ನೂ ಪ್ರಗತಿಯಲ್ಲಿದೆ. ನಿತ್ಯ ಗಮನಿಸುತ್ತಿರುವವರಿಗೆ ವಿಳಂಬ ಆಗುತ್ತಿದೆ ಎನಿಸಿದಲ್ಲಿ ಆಶ್ಚರ್ಯವೂ ಇಲ್ಲ.<br /> <br /> ಅಧಿಕಾರಿಗಳ ಭರವಸೆ ಮತ್ತು ಆಶಯದಂತೆ ವರ್ಷಾಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಂಡು, ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆ ಸಮಸ್ಯೆಗೆ ಪರಿಹಾರ ಒದಗಿಸುವುದಾ ಕಾದುನೋಡಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಈಚೆಗಷ್ಟೇ ಮುಗಿದ ಬೇಸಿಗೆಯಲ್ಲಿ ಬಿಸಿಲಿನ ಜೊತೆಗೆ ನಗರದ ಜನತೆಯನ್ನು ಕಾಡಿದ್ದು ಕುಡಿಯುವ ನೀರಿನ ಸಮಸ್ಯೆ. ಗಂಭೀರ ಸಮಸ್ಯೆ ಎಂಬಂತೆ ಕಾಡಲಿಲ್ಲವಾದರೂ ಕುಡಿಯುವ ನೀರಿನ ಕೊರತೆ ಕಾಡಿದ್ದು ನಿಜ. ನಗರಸಭೆ ಹೆಚ್ಚುವರಿಯಾಗಿ ಕಾರಂಜಾದಿಂದ ನೀರು ಪಡೆಯುವ ಮಟ್ಟಿಗೆ ಈ ಸಮಸ್ಯೆ ಬಾಧಿಸಿತ್ತು.<br /> <br /> ನಗರ ಕುಡಿಯುವ ನೀರು ಸರಬರಾಜು ಯೋಜನೆಯ ಜಾರಿಯೊಂದಿಗೆ ಮುಂದಿನ ಬೇಸಿಗೆಗೆ ಈ ಸಮಸ್ಯೆ ಇರುವುದಿಲ್ಲ ಎಂಬ ಭರವಸೆ ಅಧಿಕಾರಿ ವಲಯದಿಂದ ಕಾಡಿತ್ತಾದರೂ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದು ಮತ್ತೆ ಮುಂದಿನ ಬೇಸಿಗೆಯಲ್ಲಿಯೂ ನೀರು ಪೂರೈಕೆ ಸಮಸ್ಯೆ ಕಾಡಬಹುದಾ ಎಂಬ ಆತಂಕ ಮೂಡಿಸಿದೆ.<br /> <br /> ನಗರದಲ್ಲಿ 2026ರ ವೇಳೆಗೆ ಇರಬಹುದಾದ ಜನಸಂಖ್ಯೆ ಮತ್ತು ಬೇಡಿಕೆಗೆ ಅನುಸಾರವಾಗಿ ಕುಡಿಯುವ ನೀರು ಪೂರೈಕೆ ಯೋಜನೆ ಜಾರಿಗೊಳಿಸುತ್ತಿದ್ದು, ವಿಳಂಬವಾಗಿರುವ ಈ ಕಾಮಗಾರಿ ಈ ವರ್ಷದ ಅಕ್ಟೋಬರ್ ವೇಳೆಗೆ ಕಾರ್ಯಾರಂಭ ಮಾಡುವ ಭರವಸೆಯು ವ್ಯಕ್ತವಾಗಿತ್ತು.<br /> <br /> ಈಚೆಗೆ ಸ್ಥಳ ಪರಿಶೀಲನೆಗಾಗಿ ನೀಲಮ್ಮನಹಳ್ಳಿ ತಾಂಡಾ ಸ್ಥಳಕ್ಕೆ ತೆರಳಿದ್ದ ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರೇ, ಓವರ್ ಹೆಡ್ ಟ್ಯಾಂಕ್ಗಳ ನಿರ್ಮಾಣ, ಪೈಪ್ಗಳ ಅಳವಡಿಕೆ ಮತ್ತಿತರ ಕಾಮಗಾರಿ ಪ್ರಗತಿಯಲ್ಲಿದ್ದು, ವರ್ಷಾಂತ್ಯದ ವೇಳೆಗೆ ಮುಗಿಯಬಹುದು ಎಂಬ ಆಶಯ ವ್ಯಕ್ತಪಡಿಸಿದ್ದರು.<br /> <br /> ಯೋಜನೆಯ ಭಾಗವಾಗಿ ಕಾರಂಜಾ ನದಿಯಿಂದ ಎತ್ತುವಳಿಗಾಗಿ ಕಾರಂಜಾ ಜಲಾಶಯದ ಬಳಿ ಜಾಕ್ವೆಲ್ ನಿರ್ಮಾಣ, ಅಲ್ಲಿಂದ ನೀರು ಸಂಸ್ಕರಣೆಗಾಗಿ ನೀಲಮ್ಮನಹಳ್ಳಿ ತಾಂಡಾ ಬಳಿ ಫಿಲ್ಟರ್ ಬೆಡ್ ನಿರ್ಮಾಣ ಆಗುತ್ತಿದೆ. ತದನಂತರ ಶುದ್ಧೀಕರಿಸಿದ ನೀರನ್ನು ನೌಬಾದ್ ಬಳಿಯಿರುವ ನೆಲಹಂತದ ಸಂಪ್ಗೆ ಪೂರೈಸಲಾಗುತ್ತದೆ.<br /> <br /> ಮುಂದಿನ ಹಂತದಲ್ಲಿ ಹೀಗೇ ಸಂಗ್ರಹಿಸಿದ ನೀರನ್ನು ನಗರದ ವಿವಿಧೆಡೆ ನಿರ್ಮಾಣ ಆಗುತ್ತಿರುವ ಓವರ್ಹೆಡ್ ಟ್ಯಾಂಕ್ಗಳಿಗೆ ನೀರು ಸರಬರಾಜು ಮಾಡಿ, ಅಲ್ಲಿಂದ ಬಡಾವಣೆಗಳಿಗೆ ಪೂರೈಸುವುದು ಗುರಿಯಾಗಿದೆ.<br /> <br /> `ಕಾರಂಜಾ ಜಲಾಶಯದ ಬಳಿಕ ಜಾಕ್ವೆಲ್ ನಿರ್ಮಾಣ ಕಾರ್ಯವು ತಳ ನೆಲದಲ್ಲಿ ಕಲ್ಲು ಸಿಕ್ಕ ಕಾರಣ ವಿಳಂಬವಾಗಿದೆ. ಇದರ ಜೊತೆಗೆ, ಫಿಲ್ಟರ್ ಬೆಡ್ (ಶುದ್ಧೀಕರಣ ಘಟಕ) ಸ್ಥಾಪಿಸಲು ಉನ್ನತ ತಂತ್ರಗಾರಿಕೆ ಅಗತ್ಯವಿದೆ. ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿರುವ ಕಾರಣ ವಿಳಂಬವಾಗಿದೆ' ಎನ್ನುತ್ತಾರೆ ಅಧಿಕಾರಿಗಳು.<br /> <br /> ಜಿಲ್ಲಾಧಿಕಾರಿಗಳ ಪ್ರಕಾರ, ಈಗಾಗಲೇ ಕಾಮಗಾರಿ ಶೇ 70ರಷ್ಟು ಪೂರ್ಣವಾಗಿದೆ.<br /> <br /> ಒಮ್ಮೆ ಯೋಜನೆ ಕಾಮಗಾರಿ ಪೂರ್ಣಗೊಂಡಲ್ಲಿ ಶುದ್ಧೀಕರಿಸಲಾದ ಪ್ರಸ್ತುತ ಬೇಡಿಕೆಗೆ ಅನುಗುಣವಾಗಿ ಅಗತ್ಯ ಪ್ರಮಾಣದ ನೀರು ಸಂಗ್ರಹ ಸಾಧ್ಯವಾಗಲಿದೆ.<br /> <br /> ಉದಗೀರ್ ರಸ್ತೆಯಲ್ಲಿ ಬಸ್ ನಿಲ್ದಾಣ ಸಮೀಪ ಸೇರಿದಂತೆ ವಿವಿಧೆಡೆ ಇನ್ನೂ ಪೈಪ್ ಅಳವಡಿಕೆ ಕಾರ್ಯವು ಇನ್ನೂ ಪ್ರಗತಿಯಲ್ಲಿದೆ. ನಿತ್ಯ ಗಮನಿಸುತ್ತಿರುವವರಿಗೆ ವಿಳಂಬ ಆಗುತ್ತಿದೆ ಎನಿಸಿದಲ್ಲಿ ಆಶ್ಚರ್ಯವೂ ಇಲ್ಲ.<br /> <br /> ಅಧಿಕಾರಿಗಳ ಭರವಸೆ ಮತ್ತು ಆಶಯದಂತೆ ವರ್ಷಾಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಂಡು, ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆ ಸಮಸ್ಯೆಗೆ ಪರಿಹಾರ ಒದಗಿಸುವುದಾ ಕಾದುನೋಡಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>