<p><strong>ಬೆಂಗಳೂರು: </strong>ವಾರಾಂತ್ಯದ ದಿನಗಳಲ್ಲಿ ಸದಾ ಜನಜಾತ್ರೆ ಕಂಡುಬರುವ ಮೆಟ್ರೊ ಉದ್ಯಾನದ ಸ್ನೇಹ ಹಂದರದಲ್ಲಿ ಪ್ರೀತಿ, ಸ್ನೇಹ ಹಾಗೂ ಮಾನವೀಯ ಸಂಬಂಧಗಳು ಕಾವ್ಯವಾಗಿ ಅರಳಿದ್ದವು. ಯುವ ಹೃದಯಗಳ ಬತ್ತಳಿಕೆಯಿಂದ ಕಾವ್ಯ ಪಲ್ಲವಿಸುತ್ತಿದ್ದರೆ, ಹೊರಗೆ ತುಂತುರು ಮಳೆಯ ರಾಗ!<br /> ರಂಗೋಲಿ- ಮೆಟ್ರೊ ಕಲಾಕೇಂದ್ರದ ಆಶ್ರಯದಲ್ಲಿ ಎಂ.ಜಿ.ರಸ್ತೆಯ ಮೆಟ್ರೊ ಉದ್ಯಾನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ `ಕಾವ್ಯ ಸಂಜೆ' ಕಾರ್ಯಕ್ರಮದ ನೋಟವಿದು.<br /> <br /> ಅಲ್ಲಿ ಉದಯೋನ್ಮುಖ ಕವಿಗಳು ಒಂದೆಡೆ ಕಲೆತಿದ್ದರು. ಕಾವ್ಯದಲ್ಲಿ ಪ್ರೀತಿ, ಪ್ರೇಮ, ಸ್ನೇಹ ಲೋಕ ಅನಾವರಣಗೊಂಡಿತು. ನಾಡಿನ ಹಿರಿಯ ಕವಿಗಳ ಕವನಗಳ ಮೆಲುಕು ಇತ್ತು. ಉದ್ಯಾನದಲ್ಲಿ ಅಡ್ಡಾಡುತ್ತಿದ್ದವರು ಹೊತ್ತೇರುತ್ತಿದ್ದಂತೆ `ಸ್ನೇಹ ಹಂದರ'ದೊಳಗೆ ಸೇರಿದರು. <br /> <br /> ಕವಯಿತ್ರಿ ಮಮತಾ ಸಾಗರ್ ಮಾತನಾಡಿ, `ಕನ್ನಡ ಕಾವ್ಯಗಳು ಕ್ಲಿಷ್ಟ ಎಂಬ ಭಾವನೆ ಇದೆ. ಕನ್ನಡ ಕವಿಗಳು ಜನಸಾಮಾನ್ಯರನ್ನು ಹತ್ತಿರ ಸೇರಿಸಿಕೊಳ್ಳುವುದಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಈ ಹಿನ್ನೆಲೆಯಲ್ಲಿ ಕಾವ್ಯವನ್ನೇ ಜನರ ಹತ್ತರ ತಲುಪಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಮೂಲಕ ಜನರು ಕನ್ನಡ ಕಾವ್ಯ ಪರಂಪರೆಯ ವಿಭಿನ್ನ ಆಯಾಮಗಳನ್ನು ಅರಿತುಕೊಳ್ಳಲು ಸುಲಭವಾಗುತ್ತದೆ' ಎಂದು ಅಭಿಪ್ರಾಯಪಟ್ಟರು.</p>.<p>ರಂಗೋಲಿ ಕಲಾಕೇಂದ್ರದ ಕ್ಯೂರೇಟರ್ ಸುರೇಖಾ ಮಾತನಾಡಿ, `ಇದು ಸ್ನೇಹ ಹಂದರ (ಫ್ರೆಂಡ್ಶಿಪ್ ಪಾಯಿಂಟ್)ನಲ್ಲಿ ಆಯೋಜಿಸುತ್ತಿರುವ ಮೊದಲ ಕಾರ್ಯಕ್ರಮ.ಉದ್ಯಾನನಗರಿ ಸ್ನೇಹ, ಪ್ರೀತಿಗೆ ಹೆಸರುವಾಸಿ. ನಗರದ ಜನರು ಸ್ನೇಹ ಅರಳಿಸುವ ಕಾರ್ಯಕ್ಕೆ ಸ್ನೇಹ ಹಂದರವನ್ನು ಬಳಸಿಕೊಳ್ಳಬಹುದು. ಇಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳಬಹುದು' ಎಂದರು. <br /> <br /> ಉದಯೋನ್ಮುಖ ಕವಿಗಳಾದ ರಶ್ಮಿ ಕೆ.ಎಂ., ಬಸವರಾಜು ಕೆ.ಆರ್, ದೀಪಾ ವೈ, ದೀಪು ರಾವ್, ಕುಮಾರ ಇಂದ್ರಬೆಟ್ಟ, ಎಚ್.ಲಕ್ಷ್ಮಿನಾರಾಯಣಸ್ವಾಮಿ, ಚನ್ನಬಸಪ್ಪ ಸೇರಿದಂತೆ 25 ಕವಿಗಳು ಕವನಗಳನ್ನು ವಾಚಿಸಿದರು. ನಾಡಿನ ಹಿರಿಯ ಕವಿಗಳ ಕವನಗಳನ್ನು ಓದಿದ ಬಳಿಕ ತಮ್ಮಕವನಗಳನ್ನು ವಾಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ವಾರಾಂತ್ಯದ ದಿನಗಳಲ್ಲಿ ಸದಾ ಜನಜಾತ್ರೆ ಕಂಡುಬರುವ ಮೆಟ್ರೊ ಉದ್ಯಾನದ ಸ್ನೇಹ ಹಂದರದಲ್ಲಿ ಪ್ರೀತಿ, ಸ್ನೇಹ ಹಾಗೂ ಮಾನವೀಯ ಸಂಬಂಧಗಳು ಕಾವ್ಯವಾಗಿ ಅರಳಿದ್ದವು. ಯುವ ಹೃದಯಗಳ ಬತ್ತಳಿಕೆಯಿಂದ ಕಾವ್ಯ ಪಲ್ಲವಿಸುತ್ತಿದ್ದರೆ, ಹೊರಗೆ ತುಂತುರು ಮಳೆಯ ರಾಗ!<br /> ರಂಗೋಲಿ- ಮೆಟ್ರೊ ಕಲಾಕೇಂದ್ರದ ಆಶ್ರಯದಲ್ಲಿ ಎಂ.ಜಿ.ರಸ್ತೆಯ ಮೆಟ್ರೊ ಉದ್ಯಾನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ `ಕಾವ್ಯ ಸಂಜೆ' ಕಾರ್ಯಕ್ರಮದ ನೋಟವಿದು.<br /> <br /> ಅಲ್ಲಿ ಉದಯೋನ್ಮುಖ ಕವಿಗಳು ಒಂದೆಡೆ ಕಲೆತಿದ್ದರು. ಕಾವ್ಯದಲ್ಲಿ ಪ್ರೀತಿ, ಪ್ರೇಮ, ಸ್ನೇಹ ಲೋಕ ಅನಾವರಣಗೊಂಡಿತು. ನಾಡಿನ ಹಿರಿಯ ಕವಿಗಳ ಕವನಗಳ ಮೆಲುಕು ಇತ್ತು. ಉದ್ಯಾನದಲ್ಲಿ ಅಡ್ಡಾಡುತ್ತಿದ್ದವರು ಹೊತ್ತೇರುತ್ತಿದ್ದಂತೆ `ಸ್ನೇಹ ಹಂದರ'ದೊಳಗೆ ಸೇರಿದರು. <br /> <br /> ಕವಯಿತ್ರಿ ಮಮತಾ ಸಾಗರ್ ಮಾತನಾಡಿ, `ಕನ್ನಡ ಕಾವ್ಯಗಳು ಕ್ಲಿಷ್ಟ ಎಂಬ ಭಾವನೆ ಇದೆ. ಕನ್ನಡ ಕವಿಗಳು ಜನಸಾಮಾನ್ಯರನ್ನು ಹತ್ತಿರ ಸೇರಿಸಿಕೊಳ್ಳುವುದಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಈ ಹಿನ್ನೆಲೆಯಲ್ಲಿ ಕಾವ್ಯವನ್ನೇ ಜನರ ಹತ್ತರ ತಲುಪಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಮೂಲಕ ಜನರು ಕನ್ನಡ ಕಾವ್ಯ ಪರಂಪರೆಯ ವಿಭಿನ್ನ ಆಯಾಮಗಳನ್ನು ಅರಿತುಕೊಳ್ಳಲು ಸುಲಭವಾಗುತ್ತದೆ' ಎಂದು ಅಭಿಪ್ರಾಯಪಟ್ಟರು.</p>.<p>ರಂಗೋಲಿ ಕಲಾಕೇಂದ್ರದ ಕ್ಯೂರೇಟರ್ ಸುರೇಖಾ ಮಾತನಾಡಿ, `ಇದು ಸ್ನೇಹ ಹಂದರ (ಫ್ರೆಂಡ್ಶಿಪ್ ಪಾಯಿಂಟ್)ನಲ್ಲಿ ಆಯೋಜಿಸುತ್ತಿರುವ ಮೊದಲ ಕಾರ್ಯಕ್ರಮ.ಉದ್ಯಾನನಗರಿ ಸ್ನೇಹ, ಪ್ರೀತಿಗೆ ಹೆಸರುವಾಸಿ. ನಗರದ ಜನರು ಸ್ನೇಹ ಅರಳಿಸುವ ಕಾರ್ಯಕ್ಕೆ ಸ್ನೇಹ ಹಂದರವನ್ನು ಬಳಸಿಕೊಳ್ಳಬಹುದು. ಇಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳಬಹುದು' ಎಂದರು. <br /> <br /> ಉದಯೋನ್ಮುಖ ಕವಿಗಳಾದ ರಶ್ಮಿ ಕೆ.ಎಂ., ಬಸವರಾಜು ಕೆ.ಆರ್, ದೀಪಾ ವೈ, ದೀಪು ರಾವ್, ಕುಮಾರ ಇಂದ್ರಬೆಟ್ಟ, ಎಚ್.ಲಕ್ಷ್ಮಿನಾರಾಯಣಸ್ವಾಮಿ, ಚನ್ನಬಸಪ್ಪ ಸೇರಿದಂತೆ 25 ಕವಿಗಳು ಕವನಗಳನ್ನು ವಾಚಿಸಿದರು. ನಾಡಿನ ಹಿರಿಯ ಕವಿಗಳ ಕವನಗಳನ್ನು ಓದಿದ ಬಳಿಕ ತಮ್ಮಕವನಗಳನ್ನು ವಾಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>