<p>ಕಾಂಗ್ರೆಸ್, ಜೆಡಿಎಸ್, ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರೆ, ಆ ರಾಜೀನಾಮೆಯ ಹಿಂದಿನ ಕಾರಣಗಳು ಇನ್ನಷ್ಟು ಸ್ಪಷ್ಟೀಕರಣ ಅಗತ್ಯವಿಲ್ಲ ಎನ್ನುವಷ್ಟು ಸಮಾಧಾನಕರವಾಗಿ ಕಂಡುಬಂದು, ನಮ್ಮ ವಿಧಾನಸಭಾಧ್ಯಕ್ಷರು ಅದನ್ನು ತಕ್ಷಣ ಅಂಗೀಕರಿಸಿಬಿಡುತ್ತಾರೆ.<br /> <br /> ಅದೇ, ಬಿಜೆಪಿ ಶಾಸಕ ಶ್ರೀರಾಮುಲು ವಿಧಾನಸಭಾಧ್ಯಕ್ಷರ ಮಡಿಕೇರಿಯ ಮನೆಗೇ ಹೋಗಿ, ಅವರಿಗಾಗಿ ಕಾಯ್ದು ಕುಳಿತು, ರಾಜೀನಾಮೆ ಸಲ್ಲಿಸಿ, ಸೂಕ್ತ ಕಾರಣವನ್ನು ನೀಡಿ, ಅದನ್ನು ಅಂಗೀಕರಿಸುವಂತೆ ವಿನಂತಿಸಿಕೊಂಡರೂ ಅವರಿಗೆ ಅದು `ಸಮಾಧಾನ~ ತರುವುದಿಲ್ಲ. ಇನ್ನಷ್ಟು `ಸ್ಪಷ್ಟೀಕರಣ~ ಕೋರಿ ವಾರಗಟ್ಟಲೆ ರಾಜೀನಾಮೆ ಅಂಗೀಕರಿಸದೆ (ರಾಜೀನಾಮೆ ವಾಪಸ್ ಪಡೆಯುವವರೆಗೂ) ಕಾಯ್ದು ಕೂರುತ್ತಾರೆ. ಎಂತಹ ನಿಷ್ಪಕ್ಷಪಾತ ಧೋರಣೆ! <br /> <br /> ಇನ್ನು ಸಚಿವ ಜಗದೀಶ ಶೆಟ್ಟರ್, `ತೆಲಂಗಾಣ ಹೋರಾಟ ಸಂಬಂಧ ಅಷ್ಟೊಂದು ಶಾಸಕರು ಸಲ್ಲಿಸಿದ ರಾಜೀನಾಮೆಯನ್ನು ಅಲ್ಲಿ ಅಂಗೀಕರಿಸಲಾಗಿದೆಯೇ?~ ಎಂದು ಪ್ರಶ್ನಿಸುತ್ತಾರೆ. <br /> <br /> ನಮ್ಮ ಮುಖ್ಯಮಂತ್ರಿಗಳಾದರೋ, `ರಾಜೀನಾಮೆ ವಿಚಾರ ಶ್ರೀರಾಮುಲು ಮತ್ತು ವಿಧಾನಸಭಾಧ್ಯಕ್ಷರ ನಡುವಿನ ವಿಚಾರ~ ಎಂದು ಒಮ್ಮೆ ಹೇಳಿದರೆ, `ರಾಜೀನಾಮೆ ಅಂಗೀಕರಿಸುವುದು ಅಥವಾ ಅಂಗೀಕರಿಸದಿರುವುದು ವಿಧಾನಸಭಾಧ್ಯಕ್ಷರಿಗೆ ಬಿಟ್ಟ ವಿಚಾರ~ ಎಂದು ಇನ್ನೊಮ್ಮೆ ಹೇಳುತ್ತಾರೆ.<br /> <br /> ಮತ್ತೊಮ್ಮೆ `ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸಲಾಗುತ್ತಿದೆ~ ಎಂದು ಹೇಳಿದರೆ, ಮಗದೊಮ್ಮೆ `ಇನ್ನೆರಡು ದಿನಗಳಲ್ಲಿ ಶ್ರೀರಾಮುಲು ರಾಜೀನಾಮೆ ಹಿಂಪಡೆಯಲಿದ್ದಾರೆ~ ಎಂದು ಘೋಷಿಸುತ್ತಾರೆ!<br /> <br /> ತಾವು ಏನು ಮಾಡಿದರೂ ನಡೆಯುತ್ತದೆ ಎಂದು ಇವರೆಲ್ಲ ಅಂದುಕೊಂಡಿದ್ದಾರೋ, ಅಥವಾ ಜನರು ಇವರ ಕಪಟನಾಟಕದ ಹಿಂದಿನ ಮರ್ಮವನ್ನು ಅರಿಯದಷ್ಟು ಮೂರ್ಖರೆಂದುಕೊಂಡಿದ್ದಾರೋ.. ತಿಳಿಯದು !.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾಂಗ್ರೆಸ್, ಜೆಡಿಎಸ್, ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರೆ, ಆ ರಾಜೀನಾಮೆಯ ಹಿಂದಿನ ಕಾರಣಗಳು ಇನ್ನಷ್ಟು ಸ್ಪಷ್ಟೀಕರಣ ಅಗತ್ಯವಿಲ್ಲ ಎನ್ನುವಷ್ಟು ಸಮಾಧಾನಕರವಾಗಿ ಕಂಡುಬಂದು, ನಮ್ಮ ವಿಧಾನಸಭಾಧ್ಯಕ್ಷರು ಅದನ್ನು ತಕ್ಷಣ ಅಂಗೀಕರಿಸಿಬಿಡುತ್ತಾರೆ.<br /> <br /> ಅದೇ, ಬಿಜೆಪಿ ಶಾಸಕ ಶ್ರೀರಾಮುಲು ವಿಧಾನಸಭಾಧ್ಯಕ್ಷರ ಮಡಿಕೇರಿಯ ಮನೆಗೇ ಹೋಗಿ, ಅವರಿಗಾಗಿ ಕಾಯ್ದು ಕುಳಿತು, ರಾಜೀನಾಮೆ ಸಲ್ಲಿಸಿ, ಸೂಕ್ತ ಕಾರಣವನ್ನು ನೀಡಿ, ಅದನ್ನು ಅಂಗೀಕರಿಸುವಂತೆ ವಿನಂತಿಸಿಕೊಂಡರೂ ಅವರಿಗೆ ಅದು `ಸಮಾಧಾನ~ ತರುವುದಿಲ್ಲ. ಇನ್ನಷ್ಟು `ಸ್ಪಷ್ಟೀಕರಣ~ ಕೋರಿ ವಾರಗಟ್ಟಲೆ ರಾಜೀನಾಮೆ ಅಂಗೀಕರಿಸದೆ (ರಾಜೀನಾಮೆ ವಾಪಸ್ ಪಡೆಯುವವರೆಗೂ) ಕಾಯ್ದು ಕೂರುತ್ತಾರೆ. ಎಂತಹ ನಿಷ್ಪಕ್ಷಪಾತ ಧೋರಣೆ! <br /> <br /> ಇನ್ನು ಸಚಿವ ಜಗದೀಶ ಶೆಟ್ಟರ್, `ತೆಲಂಗಾಣ ಹೋರಾಟ ಸಂಬಂಧ ಅಷ್ಟೊಂದು ಶಾಸಕರು ಸಲ್ಲಿಸಿದ ರಾಜೀನಾಮೆಯನ್ನು ಅಲ್ಲಿ ಅಂಗೀಕರಿಸಲಾಗಿದೆಯೇ?~ ಎಂದು ಪ್ರಶ್ನಿಸುತ್ತಾರೆ. <br /> <br /> ನಮ್ಮ ಮುಖ್ಯಮಂತ್ರಿಗಳಾದರೋ, `ರಾಜೀನಾಮೆ ವಿಚಾರ ಶ್ರೀರಾಮುಲು ಮತ್ತು ವಿಧಾನಸಭಾಧ್ಯಕ್ಷರ ನಡುವಿನ ವಿಚಾರ~ ಎಂದು ಒಮ್ಮೆ ಹೇಳಿದರೆ, `ರಾಜೀನಾಮೆ ಅಂಗೀಕರಿಸುವುದು ಅಥವಾ ಅಂಗೀಕರಿಸದಿರುವುದು ವಿಧಾನಸಭಾಧ್ಯಕ್ಷರಿಗೆ ಬಿಟ್ಟ ವಿಚಾರ~ ಎಂದು ಇನ್ನೊಮ್ಮೆ ಹೇಳುತ್ತಾರೆ.<br /> <br /> ಮತ್ತೊಮ್ಮೆ `ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸಲಾಗುತ್ತಿದೆ~ ಎಂದು ಹೇಳಿದರೆ, ಮಗದೊಮ್ಮೆ `ಇನ್ನೆರಡು ದಿನಗಳಲ್ಲಿ ಶ್ರೀರಾಮುಲು ರಾಜೀನಾಮೆ ಹಿಂಪಡೆಯಲಿದ್ದಾರೆ~ ಎಂದು ಘೋಷಿಸುತ್ತಾರೆ!<br /> <br /> ತಾವು ಏನು ಮಾಡಿದರೂ ನಡೆಯುತ್ತದೆ ಎಂದು ಇವರೆಲ್ಲ ಅಂದುಕೊಂಡಿದ್ದಾರೋ, ಅಥವಾ ಜನರು ಇವರ ಕಪಟನಾಟಕದ ಹಿಂದಿನ ಮರ್ಮವನ್ನು ಅರಿಯದಷ್ಟು ಮೂರ್ಖರೆಂದುಕೊಂಡಿದ್ದಾರೋ.. ತಿಳಿಯದು !.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>