<p><strong>ನವದೆಹಲಿ:</strong> ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿ ಮೂಲಕ ಹಾಯ್ದುಹೋಗುವ ದೇಶದ ಮೊದಲ ರಸ್ತೆ ಮತ್ತು ರೈಲು ಮಾರ್ಗ ಒಳಗೊಂಡ ‘ಟ್ವಿನ್ ಟ್ಯೂಬ್ ಸುರಂಗ’ ನಿರ್ಮಾಣಕ್ಕೆ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಶನಿವಾರ ಅನುಮೋದನೆ ನೀಡಿದೆ.</p>.<p>ಉದ್ದೇಶಿತ ಈ ಸುರಂಗ ಮಾರ್ಗವು ಗೋಹಪುರ ಹಾಗೂ ನುಮಾಲಿಗಢ ನಡುವೆ ಸಂಪರ್ಕ ಕಲ್ಪಿಸಲಿದೆ. 34 ಕಿ.ಮೀ. ಉದ್ದದ ಈ ಮಾರ್ಗವನ್ನು ₹18,662 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯು ಒಪ್ಪಿಗೆ ನೀಡಿದೆ. </p>.<p>ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್,‘ಹೂಗ್ಲಿ ನದಿ ಮೂಲಕ ಹಾಯ್ದು ಹೋಗುವ ದೇಶದ ಮೊದಲ ಸುರಂಗ ಮಾರ್ಗವನ್ನು ಕೋಲ್ಕತ್ತದಲ್ಲಿ ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿ ಮೆಟ್ರೊ ರೈಲು ಸಂಚರಿಸುತ್ತವೆ’ ಎಂದು ಹೇಳಿದರು.</p>.<p>‘ಅಹಮದಾಬಾದ್–ಮುಂಬೈ ನಡುವಿನ ಬುಲೆಟ್ ರೈಲು ಮಾರ್ಗವು ಸಮುದ್ರದ ಮೂಲಕ ಹಾಯ್ದು ಹೋಗಲಿದ್ದು, ಈ ಸುರಂಗಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಇದು ಸಮುದ್ರಗೊಳಗೆ ನಿರ್ಮಿಸಲಾಗುತ್ತಿರುವ ದೇಶದ ಮೊದಲ ಸುರಂಗವಾಗಿದೆ’ ಎಂದು ಹೇಳಿದರು.</p>.<p>‘ರಸ್ತೆ, ರೈಲು ಮಾರ್ಗ ಅಕ್ಕಪಕ್ಕ’: ಉದ್ದೇಶಿತ ಗೋಹಪುರ–ನುಮಾಲಿಗಢ ನಡುವಿನ ಟ್ವಿನ್ ಟ್ಯೂಬ್ ಸುರಂಗದಲ್ಲಿ ರಸ್ತೆ ಹಾಗೂ ರೈಲು ಮಾರ್ಗ ಅಕ್ಕಪಕ್ಕವೇ ಇರಲಿವೆ. ಇಂತಹ ಸೌಕರ್ಯವುಳ್ಳ ದೇಶದ ಮೊದಲ ಸುರಂಗ ಮಾರ್ಗ ಇದಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ರಾ.ಹೆ–715ರಲ್ಲಿರುವ ನುಮಾಲಿಗಢ ಹಾಗೂ ರಾ.ಹೆ–15ರ ಮೇಲಿರುವ ಗೋಹಪುರ ನಡುವಿನ ಅಂತರ 240 ಕಿ.ಮೀ. ಇದ್ದು, ಪ್ರಯಾಣಕ್ಕೆ 6 ಗಂಟೆ ಬೇಕಾಗುತ್ತದೆ. ಬ್ರಹ್ಮಪುತ್ರ ನದಿಯೊಳಗಿನಿಂದ 34 ಕಿ.ಮೀ. ಉದ್ದದ ಟ್ವಿನ್ ಟ್ಯೂಬ್ ಸುರಂಗ ಮಾರ್ಗ ನಿರ್ಮಿಸಿದಲ್ಲಿ ಪ್ರಯಾಣಕ್ಕೆ ತಗಲುವ ಅವಧಿ 30 ನಿಮಿಷಕ್ಕೆ ಇಳಿಯಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಈ ಸುರಂಗ ಮಾರ್ಗದಿಂದ ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಹಾಗೂ ಈಶಾನ್ಯ ರಾಜ್ಯಗಳ ಇತರ ಪ್ರದೇಶಗಳಿಗೆ ಹೆಚ್ಚು ಪ್ರಯೋಜನವಾಗಲಿದೆ’ ಎಂದೂ ಹೇಳಿದ್ದಾರೆ.</p>.<h2>ಪ್ರಮುಖ ಅಂಶಗಳು </h2><ul><li><p>ಇದು ರಸ್ತೆ ಹಾಗೂ ರೈಲು ಮಾರ್ಗ ಒಳಗೊಂಡ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ‘ಟ್ವಿನ್ ಟ್ಯೂಬ್ ಸುರಂಗ’ </p></li><li><p>ಸರಕು ಸಾಗಣೆ ಸುಲಲಿತವಾಗಲಿದ್ದು ವೆಚ್ಚವೂ ಕಡಿಮೆಯಾಗಲಿದೆ </p></li><li><p>ಎರಡು ರಾಷ್ಟ್ರೀಯ ಹೆದ್ದಾರಿಗಳು(ರಾ.ಹೆ–15 ಹಾಗೂ ರಾ.ಹೆ–75) ಹಾಗೂ ಎರಡು ರೈಲು ಮಾರ್ಗಗಳನ್ನು ಜೋಡಿಸಲಿದೆ. ನಾರ್ತ್ ಫ್ರಂಟಿಯರ್ ರೈಲ್ವೆಯ ರಂಗಿಯಾ ವಿಭಾಗದ ರಂಗಿಯಾ–ಮುಕೊಂಗ್ಸೆಲೆಕ್ ರೈಲ್ವೆ ಸೆಕ್ಷನ್ (ಗೋಹಪುರ ಕಡೆ) ಹಾಗೂ ತೀನ್ಸುಕಿಯಾ ವಿಭಾಗದ ಫುರ್ಕಟಿಂಗ್–ಮರಿಯಾನಿ ಸೆಕ್ಷನ್(ನುಮಾಲಿಗಢ ಕಡೆ) ನಡುವೆ ಸಂಪರ್ಕ ಕಲ್ಪಿಸುತ್ತದೆ </p></li><li><p>ನಾಲ್ಕು ಪ್ರಮುಖ ರೈಲು ನಿಲ್ದಾಣಗಳು ಎರಡು ವಿಮಾನ ನಿಲ್ದಾಣಗಳು ಹಾಗೂ ಎರಡು ಒಳನಾಡು ಜಲಮಾರ್ಗಗಳಿಗೆ ಸಂಪರ್ಕ ಕಲ್ಪಿಸಿ ಪ್ರಯಾಣಿಕರ ಸಂಚಾರ ಸರಕುಗಳ ಸಾಗಣೆಗೆ ಹಾಗೂ ಪ್ರವಾಸೋದ್ಯಮಕ್ಕೆ ನೆರವಾಗಲಿದೆ </p></li><li><p>ಈ ಯೋಜನೆಯಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 80 ಲಕ್ಷ ಮಾನವ ದಿನಗಳಷ್ಟು ಉದ್ಯೋಗ ಸೃಷ್ಟಿಯಾಗಲಿದೆ</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿ ಮೂಲಕ ಹಾಯ್ದುಹೋಗುವ ದೇಶದ ಮೊದಲ ರಸ್ತೆ ಮತ್ತು ರೈಲು ಮಾರ್ಗ ಒಳಗೊಂಡ ‘ಟ್ವಿನ್ ಟ್ಯೂಬ್ ಸುರಂಗ’ ನಿರ್ಮಾಣಕ್ಕೆ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಶನಿವಾರ ಅನುಮೋದನೆ ನೀಡಿದೆ.</p>.<p>ಉದ್ದೇಶಿತ ಈ ಸುರಂಗ ಮಾರ್ಗವು ಗೋಹಪುರ ಹಾಗೂ ನುಮಾಲಿಗಢ ನಡುವೆ ಸಂಪರ್ಕ ಕಲ್ಪಿಸಲಿದೆ. 34 ಕಿ.ಮೀ. ಉದ್ದದ ಈ ಮಾರ್ಗವನ್ನು ₹18,662 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯು ಒಪ್ಪಿಗೆ ನೀಡಿದೆ. </p>.<p>ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್,‘ಹೂಗ್ಲಿ ನದಿ ಮೂಲಕ ಹಾಯ್ದು ಹೋಗುವ ದೇಶದ ಮೊದಲ ಸುರಂಗ ಮಾರ್ಗವನ್ನು ಕೋಲ್ಕತ್ತದಲ್ಲಿ ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿ ಮೆಟ್ರೊ ರೈಲು ಸಂಚರಿಸುತ್ತವೆ’ ಎಂದು ಹೇಳಿದರು.</p>.<p>‘ಅಹಮದಾಬಾದ್–ಮುಂಬೈ ನಡುವಿನ ಬುಲೆಟ್ ರೈಲು ಮಾರ್ಗವು ಸಮುದ್ರದ ಮೂಲಕ ಹಾಯ್ದು ಹೋಗಲಿದ್ದು, ಈ ಸುರಂಗಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಇದು ಸಮುದ್ರಗೊಳಗೆ ನಿರ್ಮಿಸಲಾಗುತ್ತಿರುವ ದೇಶದ ಮೊದಲ ಸುರಂಗವಾಗಿದೆ’ ಎಂದು ಹೇಳಿದರು.</p>.<p>‘ರಸ್ತೆ, ರೈಲು ಮಾರ್ಗ ಅಕ್ಕಪಕ್ಕ’: ಉದ್ದೇಶಿತ ಗೋಹಪುರ–ನುಮಾಲಿಗಢ ನಡುವಿನ ಟ್ವಿನ್ ಟ್ಯೂಬ್ ಸುರಂಗದಲ್ಲಿ ರಸ್ತೆ ಹಾಗೂ ರೈಲು ಮಾರ್ಗ ಅಕ್ಕಪಕ್ಕವೇ ಇರಲಿವೆ. ಇಂತಹ ಸೌಕರ್ಯವುಳ್ಳ ದೇಶದ ಮೊದಲ ಸುರಂಗ ಮಾರ್ಗ ಇದಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ರಾ.ಹೆ–715ರಲ್ಲಿರುವ ನುಮಾಲಿಗಢ ಹಾಗೂ ರಾ.ಹೆ–15ರ ಮೇಲಿರುವ ಗೋಹಪುರ ನಡುವಿನ ಅಂತರ 240 ಕಿ.ಮೀ. ಇದ್ದು, ಪ್ರಯಾಣಕ್ಕೆ 6 ಗಂಟೆ ಬೇಕಾಗುತ್ತದೆ. ಬ್ರಹ್ಮಪುತ್ರ ನದಿಯೊಳಗಿನಿಂದ 34 ಕಿ.ಮೀ. ಉದ್ದದ ಟ್ವಿನ್ ಟ್ಯೂಬ್ ಸುರಂಗ ಮಾರ್ಗ ನಿರ್ಮಿಸಿದಲ್ಲಿ ಪ್ರಯಾಣಕ್ಕೆ ತಗಲುವ ಅವಧಿ 30 ನಿಮಿಷಕ್ಕೆ ಇಳಿಯಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಈ ಸುರಂಗ ಮಾರ್ಗದಿಂದ ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಹಾಗೂ ಈಶಾನ್ಯ ರಾಜ್ಯಗಳ ಇತರ ಪ್ರದೇಶಗಳಿಗೆ ಹೆಚ್ಚು ಪ್ರಯೋಜನವಾಗಲಿದೆ’ ಎಂದೂ ಹೇಳಿದ್ದಾರೆ.</p>.<h2>ಪ್ರಮುಖ ಅಂಶಗಳು </h2><ul><li><p>ಇದು ರಸ್ತೆ ಹಾಗೂ ರೈಲು ಮಾರ್ಗ ಒಳಗೊಂಡ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ‘ಟ್ವಿನ್ ಟ್ಯೂಬ್ ಸುರಂಗ’ </p></li><li><p>ಸರಕು ಸಾಗಣೆ ಸುಲಲಿತವಾಗಲಿದ್ದು ವೆಚ್ಚವೂ ಕಡಿಮೆಯಾಗಲಿದೆ </p></li><li><p>ಎರಡು ರಾಷ್ಟ್ರೀಯ ಹೆದ್ದಾರಿಗಳು(ರಾ.ಹೆ–15 ಹಾಗೂ ರಾ.ಹೆ–75) ಹಾಗೂ ಎರಡು ರೈಲು ಮಾರ್ಗಗಳನ್ನು ಜೋಡಿಸಲಿದೆ. ನಾರ್ತ್ ಫ್ರಂಟಿಯರ್ ರೈಲ್ವೆಯ ರಂಗಿಯಾ ವಿಭಾಗದ ರಂಗಿಯಾ–ಮುಕೊಂಗ್ಸೆಲೆಕ್ ರೈಲ್ವೆ ಸೆಕ್ಷನ್ (ಗೋಹಪುರ ಕಡೆ) ಹಾಗೂ ತೀನ್ಸುಕಿಯಾ ವಿಭಾಗದ ಫುರ್ಕಟಿಂಗ್–ಮರಿಯಾನಿ ಸೆಕ್ಷನ್(ನುಮಾಲಿಗಢ ಕಡೆ) ನಡುವೆ ಸಂಪರ್ಕ ಕಲ್ಪಿಸುತ್ತದೆ </p></li><li><p>ನಾಲ್ಕು ಪ್ರಮುಖ ರೈಲು ನಿಲ್ದಾಣಗಳು ಎರಡು ವಿಮಾನ ನಿಲ್ದಾಣಗಳು ಹಾಗೂ ಎರಡು ಒಳನಾಡು ಜಲಮಾರ್ಗಗಳಿಗೆ ಸಂಪರ್ಕ ಕಲ್ಪಿಸಿ ಪ್ರಯಾಣಿಕರ ಸಂಚಾರ ಸರಕುಗಳ ಸಾಗಣೆಗೆ ಹಾಗೂ ಪ್ರವಾಸೋದ್ಯಮಕ್ಕೆ ನೆರವಾಗಲಿದೆ </p></li><li><p>ಈ ಯೋಜನೆಯಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 80 ಲಕ್ಷ ಮಾನವ ದಿನಗಳಷ್ಟು ಉದ್ಯೋಗ ಸೃಷ್ಟಿಯಾಗಲಿದೆ</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>