<p><strong>ಸಿಂಧನೂರು: </strong>ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಹಳೆ ಪ್ರಾಂಗಣದಲ್ಲಿ ಅನಧಿಕೃತವಾಗಿ ಕಟ್ಟಿದ್ದ ಕಟ್ಟಡಗಳನ್ನು ಎಪಿಎಂಸಿ ಅಧ್ಯಕ್ಷೆ ಎನ್.ಶಾಂತಾ ಭೀಮನಗೌಡ ಮಂಗಳವಾರ ತೆರವುಗೊಳಿಸಲು ಸೂಚಿಸಿದ ಹಿನ್ನೆಲೆಯಲ್ಲಿ ವರ್ತಕರೇ ತಮ್ಮ ಕಟ್ಟಡಗಳನ್ನು ಒಡೆದುಕೊಂಡರು. <br /> <br /> ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪಕ್ಕದಲ್ಲಿ ವರ್ತಕರಿಗೆ ತಲಾ 39್ಡ12 ಅಡಿಯ ನಿವೇಶನಗಳನ್ನು ನೀಡಲಾಗಿತ್ತು. ಆದರೆ ವರ್ತಕರು ತಮಗೆ ನೀಡಿದ ನಿವೇಶನಕ್ಕಿಂತ ಹೆಚ್ಚಿನ ಜಾಗೆಯನ್ನು ಅತಿಕ್ರಮಿಸಿ 51್ಡ12 ನಿವೇಶನದಲ್ಲಿ ಮಳಿಗೆ ಕಟ್ಟಿಕೊಂಡಿದ್ದರು. <br /> <br /> ಎಪಿಎಂಸಿಯ ಚುನಾವಣಾ ಫಲಿತಾಂಶ ಪ್ರಕಟವಾಗುವ ದಿನದಂದು ಬೆಳಗಿನ ಜಾವ ಪೊಲೀಸ್ ಬಿಗಿ ಭದ್ರತೆಯಲ್ಲಿ ಸಹಾಯಕ ಆಯುಕ್ತ ಉಜ್ವಲ್ಕುಮಾರ ಘೋಷ್ ಮತ್ತು ಎಪಿಎಂಸಿ ಕಾರ್ಯದರ್ಶಿ ಸತೀಶಕುಮಾರ ಅಕ್ರಮವಾಗಿ ಕಟ್ಟಿದ್ದ 8 ಮಳಿಗೆಗಳನ್ನು ಹಿಟಾಚಿ ಮೂಲಕ ತಾಸಿನಲ್ಲಿಯೇ ಒಡೆದುರುಳಿಸಿದ್ದರು. <br /> <br /> ಆನಂತರ ವರ್ತಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಹೆಚ್ಚಿನ ಪ್ರಮಾಣದಲ್ಲಿ ಒಡೆಯದಂತೆ ನೋಡಿಕೊಂಡಿದ್ದರು. ಸಹಾಯಕ ಆಯುಕ್ತರು ತೆರವುಗೊಳಿಸಿದ್ದರೂ ಮಾಲೀಕರು ಮಳಿಗೆಗಳನ್ನು ಪುನಃ ಕಟ್ಟಿಕೊಂಡಿದ್ದರು. <br /> <br /> ಮಂಗಳವಾರದ ಪ್ರಜಾವಾಣಿ ಸಂಚಿಕೆಯಲ್ಲಿ ಸಹಾಯಕ ಆಯುಕ್ತರು ಅಕ್ರಮ ಕಟ್ಟಡಗಳನ್ನು ದ್ವಂಸಗೊಳಿಸಿದರೂ ಪುನಃ ಕಟ್ಟಿಕೊಂಡ ಬಗ್ಗೆ ಪ್ರಕಟವಾದ ವರದಿಗೆ ಸ್ಪಂದಿಸಿದ ಎಪಿಎಂಸಿ ಅಧ್ಯಕ್ಷೆ ಎನ್. ಶಾಂತಾ ಭೀಮನಗೌಡ ಅತಿಕ್ರಮಣಕಾರರಿಗೆ ತೆರವುಗೊಳಿಸಲು ಸೂಚಿಸಿದರು. <br /> <br /> ನಿರ್ದೇಶಕರಾದ ಹರಟನೂರು ಕರಿಯಪ್ಪ ವಕೀಲರು, ಮಲ್ಲನಗೌಡ ಮೇಟಿ, ಬಸನಗೌಡ, ಚನ್ನಬಸವರಾಜ ಮತ್ತಿತರರು ವರ್ತಕರ ತಮ್ಮ ಮಳಿಗೆಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಧನೂರು: </strong>ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಹಳೆ ಪ್ರಾಂಗಣದಲ್ಲಿ ಅನಧಿಕೃತವಾಗಿ ಕಟ್ಟಿದ್ದ ಕಟ್ಟಡಗಳನ್ನು ಎಪಿಎಂಸಿ ಅಧ್ಯಕ್ಷೆ ಎನ್.ಶಾಂತಾ ಭೀಮನಗೌಡ ಮಂಗಳವಾರ ತೆರವುಗೊಳಿಸಲು ಸೂಚಿಸಿದ ಹಿನ್ನೆಲೆಯಲ್ಲಿ ವರ್ತಕರೇ ತಮ್ಮ ಕಟ್ಟಡಗಳನ್ನು ಒಡೆದುಕೊಂಡರು. <br /> <br /> ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪಕ್ಕದಲ್ಲಿ ವರ್ತಕರಿಗೆ ತಲಾ 39್ಡ12 ಅಡಿಯ ನಿವೇಶನಗಳನ್ನು ನೀಡಲಾಗಿತ್ತು. ಆದರೆ ವರ್ತಕರು ತಮಗೆ ನೀಡಿದ ನಿವೇಶನಕ್ಕಿಂತ ಹೆಚ್ಚಿನ ಜಾಗೆಯನ್ನು ಅತಿಕ್ರಮಿಸಿ 51್ಡ12 ನಿವೇಶನದಲ್ಲಿ ಮಳಿಗೆ ಕಟ್ಟಿಕೊಂಡಿದ್ದರು. <br /> <br /> ಎಪಿಎಂಸಿಯ ಚುನಾವಣಾ ಫಲಿತಾಂಶ ಪ್ರಕಟವಾಗುವ ದಿನದಂದು ಬೆಳಗಿನ ಜಾವ ಪೊಲೀಸ್ ಬಿಗಿ ಭದ್ರತೆಯಲ್ಲಿ ಸಹಾಯಕ ಆಯುಕ್ತ ಉಜ್ವಲ್ಕುಮಾರ ಘೋಷ್ ಮತ್ತು ಎಪಿಎಂಸಿ ಕಾರ್ಯದರ್ಶಿ ಸತೀಶಕುಮಾರ ಅಕ್ರಮವಾಗಿ ಕಟ್ಟಿದ್ದ 8 ಮಳಿಗೆಗಳನ್ನು ಹಿಟಾಚಿ ಮೂಲಕ ತಾಸಿನಲ್ಲಿಯೇ ಒಡೆದುರುಳಿಸಿದ್ದರು. <br /> <br /> ಆನಂತರ ವರ್ತಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಹೆಚ್ಚಿನ ಪ್ರಮಾಣದಲ್ಲಿ ಒಡೆಯದಂತೆ ನೋಡಿಕೊಂಡಿದ್ದರು. ಸಹಾಯಕ ಆಯುಕ್ತರು ತೆರವುಗೊಳಿಸಿದ್ದರೂ ಮಾಲೀಕರು ಮಳಿಗೆಗಳನ್ನು ಪುನಃ ಕಟ್ಟಿಕೊಂಡಿದ್ದರು. <br /> <br /> ಮಂಗಳವಾರದ ಪ್ರಜಾವಾಣಿ ಸಂಚಿಕೆಯಲ್ಲಿ ಸಹಾಯಕ ಆಯುಕ್ತರು ಅಕ್ರಮ ಕಟ್ಟಡಗಳನ್ನು ದ್ವಂಸಗೊಳಿಸಿದರೂ ಪುನಃ ಕಟ್ಟಿಕೊಂಡ ಬಗ್ಗೆ ಪ್ರಕಟವಾದ ವರದಿಗೆ ಸ್ಪಂದಿಸಿದ ಎಪಿಎಂಸಿ ಅಧ್ಯಕ್ಷೆ ಎನ್. ಶಾಂತಾ ಭೀಮನಗೌಡ ಅತಿಕ್ರಮಣಕಾರರಿಗೆ ತೆರವುಗೊಳಿಸಲು ಸೂಚಿಸಿದರು. <br /> <br /> ನಿರ್ದೇಶಕರಾದ ಹರಟನೂರು ಕರಿಯಪ್ಪ ವಕೀಲರು, ಮಲ್ಲನಗೌಡ ಮೇಟಿ, ಬಸನಗೌಡ, ಚನ್ನಬಸವರಾಜ ಮತ್ತಿತರರು ವರ್ತಕರ ತಮ್ಮ ಮಳಿಗೆಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>