<p>ಬೆಂಗಳೂರು: ‘ನೀನಿಲ್ಲದೆ’ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಶಿವಗಣಪತಿ ಅವರ ವಿರುದ್ಧ ಕಾನೂನು ಸಮರ ಸಾರಿದ್ದ ನಟಿ ಪೂಜಾ ಗಾಂಧಿ ಕೊನೆಗೂ ‘ಗೆದ್ದಿದ್ದಾರೆ’!<br /> <br /> ಈ ಚಿತ್ರಕ್ಕೆ ಬರಬೇಕಿದ್ದ ಒಟ್ಟು ಸಂಭಾವನೆ ಪೈಕಿ ಪ್ರಥಮ ಹಂತದಲ್ಲಿ ಸಿಗಬೇಕಿದ್ದ ನಾಲ್ಕು ಲಕ್ಷ ರೂಪಾಯಿಗಳನ್ನು ನೀಡಲು ಶಿವಗಣಪತಿ ಅವರು ಗುರುವಾರ ಸಿವಿಲ್ ಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾರೆ. ಇದರೊಂದಿಗೆ, ಇದೇ ಶುಕ್ರವಾರ ಚಿತ್ರದ ಬಿಡುಗಡೆಗೆ ಹಾದಿಯೂ ಸುಗಮಗೊಂಡಿದೆ.<br /> <br /> ಒಪ್ಪಂದದ ಪ್ರಕಾರ, ದಕ್ಷಿಣ ಕನ್ನಡ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿನ ಚಿತ್ರ ಹಂಚಿಕೆಯ ಹಕ್ಕನ್ನು ಪೂಜಾ ಅವರಿಗೆ ನೀಡಲಾಗಿದೆ. ಅದರಲ್ಲಿ ಬಂದ ಲಾಭಾಂಶದಲ್ಲಿ ನಾಲ್ಕು ಲಕ್ಷ ರೂಪಾಯಿಗಳನ್ನು ಪೂಜಾ ಅವರಿಗೆ ನೀಡಲಾಗುವುದು. <br /> <br /> ಒಂದು ವೇಳೆ ಅದಕ್ಕಿಂತ ಹೆಚ್ಚಿಗೆ ಲಾಭ ದೊರೆತರೆ ಹೆಚ್ಚುವರಿ ಹಣವನ್ನು ಶಿವಗಣಪತಿ ಅವರಿಗೆ ನೀಡಬೇಕು, ಕಡಿಮೆ ಲಾಭ ಬಂದರೆ, ಶಿವಗಣಪತಿ ಅವರು ಉಳಿದ ಹಣವನ್ನು ಪೂಜಾ ಅವರಿಗೆ ತುಂಬಿ ಕೊಡಬೇಕು. ಈ ಒಪ್ಪಂದದ ಕುರಿತು ಶಿವಗಣಪತಿ ಪರ ವಕೀಲರು ಕೋರ್ಟ್ಗೆ ತಿಳಿಸಿದರು.<br /> <br /> ‘ಚಿತ್ರೀಕರಣ ಪೂರ್ಣಗೊಂಡರೂ ತಮಗೆ ದೊರಕಬೇಕಿರುವ 12 ಲಕ್ಷ ರೂಪಾಯಿಗಳ ಸಂಭಾವನೆ ಪೈಕಿ ಆರಂಭಿಕ ಹಂತದ ನಾಲ್ಕು ಲಕ್ಷ ರೂಪಾಯಿಗಳನ್ನೇ ಶಿವಗಣಪತಿ ಅವರು ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಸಂಭಾವನೆ ನೀಡಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೀಡಿರುವ ದೂರು ಇತ್ಯರ್ಥಗೊಳ್ಳುವವರೆಗೆ ಚಿತ್ರ ಬಿಡುಗಡೆಗೆ ತಡೆ ನೀಡಬೇಕು’ ಎಂದು ಕೋರಿ ಪೂಜಾ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಒಪ್ಪಂದದ ಹಿನ್ನೆಲೆಯಲ್ಲಿ ಕೋರ್ಟ್ ಇತ್ಯರ್ಥಗೊಳಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ನೀನಿಲ್ಲದೆ’ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಶಿವಗಣಪತಿ ಅವರ ವಿರುದ್ಧ ಕಾನೂನು ಸಮರ ಸಾರಿದ್ದ ನಟಿ ಪೂಜಾ ಗಾಂಧಿ ಕೊನೆಗೂ ‘ಗೆದ್ದಿದ್ದಾರೆ’!<br /> <br /> ಈ ಚಿತ್ರಕ್ಕೆ ಬರಬೇಕಿದ್ದ ಒಟ್ಟು ಸಂಭಾವನೆ ಪೈಕಿ ಪ್ರಥಮ ಹಂತದಲ್ಲಿ ಸಿಗಬೇಕಿದ್ದ ನಾಲ್ಕು ಲಕ್ಷ ರೂಪಾಯಿಗಳನ್ನು ನೀಡಲು ಶಿವಗಣಪತಿ ಅವರು ಗುರುವಾರ ಸಿವಿಲ್ ಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾರೆ. ಇದರೊಂದಿಗೆ, ಇದೇ ಶುಕ್ರವಾರ ಚಿತ್ರದ ಬಿಡುಗಡೆಗೆ ಹಾದಿಯೂ ಸುಗಮಗೊಂಡಿದೆ.<br /> <br /> ಒಪ್ಪಂದದ ಪ್ರಕಾರ, ದಕ್ಷಿಣ ಕನ್ನಡ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿನ ಚಿತ್ರ ಹಂಚಿಕೆಯ ಹಕ್ಕನ್ನು ಪೂಜಾ ಅವರಿಗೆ ನೀಡಲಾಗಿದೆ. ಅದರಲ್ಲಿ ಬಂದ ಲಾಭಾಂಶದಲ್ಲಿ ನಾಲ್ಕು ಲಕ್ಷ ರೂಪಾಯಿಗಳನ್ನು ಪೂಜಾ ಅವರಿಗೆ ನೀಡಲಾಗುವುದು. <br /> <br /> ಒಂದು ವೇಳೆ ಅದಕ್ಕಿಂತ ಹೆಚ್ಚಿಗೆ ಲಾಭ ದೊರೆತರೆ ಹೆಚ್ಚುವರಿ ಹಣವನ್ನು ಶಿವಗಣಪತಿ ಅವರಿಗೆ ನೀಡಬೇಕು, ಕಡಿಮೆ ಲಾಭ ಬಂದರೆ, ಶಿವಗಣಪತಿ ಅವರು ಉಳಿದ ಹಣವನ್ನು ಪೂಜಾ ಅವರಿಗೆ ತುಂಬಿ ಕೊಡಬೇಕು. ಈ ಒಪ್ಪಂದದ ಕುರಿತು ಶಿವಗಣಪತಿ ಪರ ವಕೀಲರು ಕೋರ್ಟ್ಗೆ ತಿಳಿಸಿದರು.<br /> <br /> ‘ಚಿತ್ರೀಕರಣ ಪೂರ್ಣಗೊಂಡರೂ ತಮಗೆ ದೊರಕಬೇಕಿರುವ 12 ಲಕ್ಷ ರೂಪಾಯಿಗಳ ಸಂಭಾವನೆ ಪೈಕಿ ಆರಂಭಿಕ ಹಂತದ ನಾಲ್ಕು ಲಕ್ಷ ರೂಪಾಯಿಗಳನ್ನೇ ಶಿವಗಣಪತಿ ಅವರು ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಸಂಭಾವನೆ ನೀಡಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೀಡಿರುವ ದೂರು ಇತ್ಯರ್ಥಗೊಳ್ಳುವವರೆಗೆ ಚಿತ್ರ ಬಿಡುಗಡೆಗೆ ತಡೆ ನೀಡಬೇಕು’ ಎಂದು ಕೋರಿ ಪೂಜಾ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಒಪ್ಪಂದದ ಹಿನ್ನೆಲೆಯಲ್ಲಿ ಕೋರ್ಟ್ ಇತ್ಯರ್ಥಗೊಳಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>