<p><strong>ಬೆಂಗಳೂರು:</strong> ಮಾಧ್ಯಮ ಪ್ರತಿನಿಧಿಗಳು, ಪೊಲೀಸರ ಮೇಲೆ ಹಲ್ಲೆ ಮಾಡಿ ಗೂಂಡಾಗಳಂತೆ ವರ್ತಿಸಿದ ವಕೀಲರು, ಕೊನೆಗೆ ಕದ್ದುಮುಚ್ಚಿ ಕೋರ್ಟ್ ಆವರಣದಿಂದ ಹೊರ ಹೋಗುವ ಪ್ರಯತ್ನ ನಡೆಸಿದರು.<br /> ವಕೀಲರ ಗೂಂಡಾಗಿರಿಯಿಂದ ಕೋರ್ಟ್ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿಯನ್ನು ನ್ಯಾಯಾಧೀಶರ ವಾಹನದಲ್ಲಿ ಮೆಜೆಸ್ಟಿಕ್ಗೆ ತಲುಪಿಸಲಾಯಿತು.<br /> <br /> ಆಗ ಕದ್ದುಮುಚ್ಚಿ ನ್ಯಾಯಾಧೀಶರ ವಾಹನದಲ್ಲಿ ಹೊರ ಹೋಗಲು ಪ್ರಯತ್ನಿಸಿದ ವಕೀಲರನ್ನು ಪತ್ತೆ ಹಚ್ಚಿದ ಪೊಲೀಸರು ಹೊರಗೆ ದಬ್ಬಿದರು. ಗೂಂಡಾಗಿರಿ ತೋರಿದ ವಕೀಲರ ವಿರುದ್ಧ ಲಾಠಿ ಪ್ರಹಾರ ನಡೆಸಲು ಪೊಲೀಸರು ಮುಂದಾಗುತ್ತಿದ್ದಂತೆಯೇ, ವಕೀಲರು ಓಡಿ ಹೋಗಿ ಕೋರ್ಟ್ ಒಳಗೆ ಬಚ್ಚಿಟ್ಟುಕೊಂಡರು.<br /> <br /> ಒಳಗೆ ಹೋದ ನಂತರವೂ ಸುಮ್ಮನಾಗದ ವಕೀಲರು, ಕುರ್ಚಿ, ಮೇಜುಗಳನ್ನು ಮೇಲಿಂದ ಎಸೆದಾಗ ಆತಂಕಗೊಂಡ ಮಹಿಳಾ ಸಿಬ್ಬಂದಿ ಜೋರಾಗಿ ಕಿರುಚಿಕೊಂಡರು. ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರಿಂದ ಕಣ್ಣು ಬಿಡಲು ಆಗುತ್ತಿರಲಿಲ್ಲ. ಸಂಜೆವರೆಗೂ ಆತಂಕದಲ್ಲೇ ಕಾರ್ಯನಿರ್ವಹಿಸಲಾಯಿತು ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.<br /> <br /> ನ್ಯಾಯಾಲಯ ಕಟ್ಟಡಗಳ ಕಿಟಕಿ, ಗ್ಲಾಸುಗಳನ್ನು ಪುಡಿ, ಪುಡಿ ಮಾಡಿದರು. ವಾಹನಗಳಿಗೂ ಬೆಂಕಿಹಚ್ಚಿದ್ದರಿಂದ ಭಯದ ವಾತಾವರಣವಿತ್ತು. ಆಚೆಗೆ ಹೋಗಲು ಆಗುತ್ತಿರಲಿಲ್ಲ ಎಂದು ಅಳಲು ತೋಡಿಕೊಂಡರು.</p>.<p><strong>ಆರು ದಿವಸ ನಿಷೇಧಾಜ್ಞೆ</strong></p>.<p><strong>ಬೆಂಗಳೂರು: </strong>ಸಿಟಿ ಸಿವಿಲ್ ನ್ಯಾಯಾಲಯದ ಬಳಿ ವಕೀಲರು ಶುಕ್ರವಾರ ದಾಂದಲೆ ನಡೆಸಿದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ ಶನಿವಾರದಿಂದ (ಮಾ.3) ಆರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಆದೇಶ ಹೊರಡಿಸಿದ್ದಾರೆ.<br /> <br /> ಅಶೋಕನಗರ, ಹಲಸೂರುಗೇಟ್, ಸಿಲ್ವರ್ಜ್ಯುಬಿಲಿ ಪಾರ್ಕ್, ಸಂಪಂಗಿರಾಮನಗರ, ಕಬ್ಬನ್ಪಾರ್ಕ್, ವಿಧಾನಸೌಧ, ಹೈಗ್ರೌಂಡ್ಸ್, ಚಿಕ್ಕಪೇಟೆ, ಉಪ್ಪಾರಪೇಟೆ ಮತ್ತು ಸಿಟಿ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಠಾಣೆಗಳ ವ್ಯಾಪ್ತಿಯಲ್ಲಿ ಪ್ರತಿಭಟನೆ ಹಾಗೂ ಸಾರ್ವಜನಿಕರ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಮಿರ್ಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮಾಧ್ಯಮ ಪ್ರತಿನಿಧಿಗಳು, ಪೊಲೀಸರ ಮೇಲೆ ಹಲ್ಲೆ ಮಾಡಿ ಗೂಂಡಾಗಳಂತೆ ವರ್ತಿಸಿದ ವಕೀಲರು, ಕೊನೆಗೆ ಕದ್ದುಮುಚ್ಚಿ ಕೋರ್ಟ್ ಆವರಣದಿಂದ ಹೊರ ಹೋಗುವ ಪ್ರಯತ್ನ ನಡೆಸಿದರು.<br /> ವಕೀಲರ ಗೂಂಡಾಗಿರಿಯಿಂದ ಕೋರ್ಟ್ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿಯನ್ನು ನ್ಯಾಯಾಧೀಶರ ವಾಹನದಲ್ಲಿ ಮೆಜೆಸ್ಟಿಕ್ಗೆ ತಲುಪಿಸಲಾಯಿತು.<br /> <br /> ಆಗ ಕದ್ದುಮುಚ್ಚಿ ನ್ಯಾಯಾಧೀಶರ ವಾಹನದಲ್ಲಿ ಹೊರ ಹೋಗಲು ಪ್ರಯತ್ನಿಸಿದ ವಕೀಲರನ್ನು ಪತ್ತೆ ಹಚ್ಚಿದ ಪೊಲೀಸರು ಹೊರಗೆ ದಬ್ಬಿದರು. ಗೂಂಡಾಗಿರಿ ತೋರಿದ ವಕೀಲರ ವಿರುದ್ಧ ಲಾಠಿ ಪ್ರಹಾರ ನಡೆಸಲು ಪೊಲೀಸರು ಮುಂದಾಗುತ್ತಿದ್ದಂತೆಯೇ, ವಕೀಲರು ಓಡಿ ಹೋಗಿ ಕೋರ್ಟ್ ಒಳಗೆ ಬಚ್ಚಿಟ್ಟುಕೊಂಡರು.<br /> <br /> ಒಳಗೆ ಹೋದ ನಂತರವೂ ಸುಮ್ಮನಾಗದ ವಕೀಲರು, ಕುರ್ಚಿ, ಮೇಜುಗಳನ್ನು ಮೇಲಿಂದ ಎಸೆದಾಗ ಆತಂಕಗೊಂಡ ಮಹಿಳಾ ಸಿಬ್ಬಂದಿ ಜೋರಾಗಿ ಕಿರುಚಿಕೊಂಡರು. ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರಿಂದ ಕಣ್ಣು ಬಿಡಲು ಆಗುತ್ತಿರಲಿಲ್ಲ. ಸಂಜೆವರೆಗೂ ಆತಂಕದಲ್ಲೇ ಕಾರ್ಯನಿರ್ವಹಿಸಲಾಯಿತು ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.<br /> <br /> ನ್ಯಾಯಾಲಯ ಕಟ್ಟಡಗಳ ಕಿಟಕಿ, ಗ್ಲಾಸುಗಳನ್ನು ಪುಡಿ, ಪುಡಿ ಮಾಡಿದರು. ವಾಹನಗಳಿಗೂ ಬೆಂಕಿಹಚ್ಚಿದ್ದರಿಂದ ಭಯದ ವಾತಾವರಣವಿತ್ತು. ಆಚೆಗೆ ಹೋಗಲು ಆಗುತ್ತಿರಲಿಲ್ಲ ಎಂದು ಅಳಲು ತೋಡಿಕೊಂಡರು.</p>.<p><strong>ಆರು ದಿವಸ ನಿಷೇಧಾಜ್ಞೆ</strong></p>.<p><strong>ಬೆಂಗಳೂರು: </strong>ಸಿಟಿ ಸಿವಿಲ್ ನ್ಯಾಯಾಲಯದ ಬಳಿ ವಕೀಲರು ಶುಕ್ರವಾರ ದಾಂದಲೆ ನಡೆಸಿದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಪ್ರದೇಶದಲ್ಲಿ ಶನಿವಾರದಿಂದ (ಮಾ.3) ಆರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಆದೇಶ ಹೊರಡಿಸಿದ್ದಾರೆ.<br /> <br /> ಅಶೋಕನಗರ, ಹಲಸೂರುಗೇಟ್, ಸಿಲ್ವರ್ಜ್ಯುಬಿಲಿ ಪಾರ್ಕ್, ಸಂಪಂಗಿರಾಮನಗರ, ಕಬ್ಬನ್ಪಾರ್ಕ್, ವಿಧಾನಸೌಧ, ಹೈಗ್ರೌಂಡ್ಸ್, ಚಿಕ್ಕಪೇಟೆ, ಉಪ್ಪಾರಪೇಟೆ ಮತ್ತು ಸಿಟಿ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಠಾಣೆಗಳ ವ್ಯಾಪ್ತಿಯಲ್ಲಿ ಪ್ರತಿಭಟನೆ ಹಾಗೂ ಸಾರ್ವಜನಿಕರ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಮಿರ್ಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>