<p><strong> ಬೆಂಗಳೂರು:</strong> `ಇಂದು ಜಾತಿ ಸಮಾಜವನ್ನು ನಿರ್ಮಿಸುವವರಿದ್ದಾರೆಯೇ ಹೊರತು, ಕನ್ನಡ ಸಮಾಜ ನಿರ್ಮಾಣಕ್ಕೆ ಯಾರೊಬ್ಬರು ಗಮನ ನೀಡದಿರುವುದು ದುರದೃಷ್ಟಕರ~ ಎಂದು ಸಮಾಜವಾದಿ ಚಿಂತಕ ಕೋಣಂದೂರು ವೆಂಕಪ್ಪಗೌಡ ವಿಷಾದಿಸಿದರು.<br /> <br /> ಕನ್ನಡ ಜನಶಕ್ತಿ ಸಂಸ್ಥೆ ನಗರದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ನಮ್ಮಡನಿರುವ ಕನ್ನಡ ಕುಲದೀಪಕರೊಂದಿಗೆ ಸಲ್ಲಾಪ- ಸಂವಾದ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> `ರಾಜಕಾರಣಿಗಳು ತಮ್ಮ ಜಾತಿಯವರನ್ನು ಸಂಘಟಿಸುತ್ತಾ ಜಾತಿ ಮುಖಂಡರಾಗಿ ರೂಪುಗೊಳ್ಳುತ್ತಿದ್ದಾರೆ. ಆದರೆ ಸರ್ವರನ್ನು ಸಮಾನವಾಗಿ ಕಾಣುವ, ಎಲ್ಲರಿಗೂ ಸಮಾನ ಸೌಲಭ್ಯ ದೊರೆಯುವಂತಹ ಸಮಾಜ ನಿರ್ಮಾಣ ಮಾಡುವಂತಹ ಆದರ್ಶ ಪ್ರಭಾವಿ ನಾಯಕರು ಕಾಣುತ್ತಿಲ್ಲ~ ಎಂದು ವಿಷಾದಿಸಿದರು.<br /> <br /> `ಇಂಗ್ಲಿಷ್ ಭಾಷೆಯ ವ್ಯಾಪಕ ಬಳಕೆಯನ್ನು ನೋಡಿದಾಗ ಇಂದಿಗೂ ಬ್ರಿಟಿಷರ ಗುಲಾಮರಾಗಿದ್ದೇವೆ ಎಂಬ ಭಾವನೆ ಮೂಡುತ್ತದೆ. ಭಾಷೆ ಎಂಬುದು ಒಂದು ಜನಾಂಗದ ವೀರತ್ವದ ಪ್ರತೀಕ. ಸಾಧನೆಯ ಸಂಕೇತ. ಇನ್ನಾದರೂ ಎಲ್ಲರೂ ಕನ್ನಡ ಭಾಷೆಯನ್ನೇ ಬಳಸುವಂತಾಗಬೇಕು~ ಎಂದರು.<br /> <br /> `ಶಾಂತವೇರಿ ಗೋಪಾಲಗೌಡರು ಆದರ್ಶ ವ್ಯಕ್ತಿ. ಅಂತಹ ಮಹಾನ್ ವ್ಯಕ್ತಿಗಳನ್ನು ಇಂದು ನಿರೀಕ್ಷಿಸುವಂತಿಲ್ಲ. ಹಾಗಾಗಿ ಗೋಪಾಲಗೌಡರ ಪ್ರತಿಮೆ ನಿರ್ಮಾಣವಾಗಬೇಕು ಎಂಬುದು ನನ್ನ ಬಹುಕಾಲದ ಬಯಕೆ~ ಎಂದು ಭಾವುಕರಾಗಿ ನುಡಿದರು.<br /> <br /> `ದೇಶ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಜನತೆಯೇ ಕಾರಣ. ಅಯೋಗ್ಯರು, ಅಸಮರ್ಥರನ್ನು ವಿಜೃಂಭಿಸುವ ಕಾರ್ಯ ನಡೆದೇ ಇದೆ. ಜನರಲ್ಲಿ ನಿರ್ಲಕ್ಷ್ಯ ಮನೋಭಾವದಿಂದಾಗಿ ಭಾವೈಕ್ಯತೆಯ ವಾತಾವರಣ ಸೃಷ್ಟಿಯಾಗಲು ಸಾಧ್ಯವಾಗಿಲ್ಲ~ ಎಂದರು. ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ. ರಾಮೇಗೌಡ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong> ಬೆಂಗಳೂರು:</strong> `ಇಂದು ಜಾತಿ ಸಮಾಜವನ್ನು ನಿರ್ಮಿಸುವವರಿದ್ದಾರೆಯೇ ಹೊರತು, ಕನ್ನಡ ಸಮಾಜ ನಿರ್ಮಾಣಕ್ಕೆ ಯಾರೊಬ್ಬರು ಗಮನ ನೀಡದಿರುವುದು ದುರದೃಷ್ಟಕರ~ ಎಂದು ಸಮಾಜವಾದಿ ಚಿಂತಕ ಕೋಣಂದೂರು ವೆಂಕಪ್ಪಗೌಡ ವಿಷಾದಿಸಿದರು.<br /> <br /> ಕನ್ನಡ ಜನಶಕ್ತಿ ಸಂಸ್ಥೆ ನಗರದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ನಮ್ಮಡನಿರುವ ಕನ್ನಡ ಕುಲದೀಪಕರೊಂದಿಗೆ ಸಲ್ಲಾಪ- ಸಂವಾದ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> `ರಾಜಕಾರಣಿಗಳು ತಮ್ಮ ಜಾತಿಯವರನ್ನು ಸಂಘಟಿಸುತ್ತಾ ಜಾತಿ ಮುಖಂಡರಾಗಿ ರೂಪುಗೊಳ್ಳುತ್ತಿದ್ದಾರೆ. ಆದರೆ ಸರ್ವರನ್ನು ಸಮಾನವಾಗಿ ಕಾಣುವ, ಎಲ್ಲರಿಗೂ ಸಮಾನ ಸೌಲಭ್ಯ ದೊರೆಯುವಂತಹ ಸಮಾಜ ನಿರ್ಮಾಣ ಮಾಡುವಂತಹ ಆದರ್ಶ ಪ್ರಭಾವಿ ನಾಯಕರು ಕಾಣುತ್ತಿಲ್ಲ~ ಎಂದು ವಿಷಾದಿಸಿದರು.<br /> <br /> `ಇಂಗ್ಲಿಷ್ ಭಾಷೆಯ ವ್ಯಾಪಕ ಬಳಕೆಯನ್ನು ನೋಡಿದಾಗ ಇಂದಿಗೂ ಬ್ರಿಟಿಷರ ಗುಲಾಮರಾಗಿದ್ದೇವೆ ಎಂಬ ಭಾವನೆ ಮೂಡುತ್ತದೆ. ಭಾಷೆ ಎಂಬುದು ಒಂದು ಜನಾಂಗದ ವೀರತ್ವದ ಪ್ರತೀಕ. ಸಾಧನೆಯ ಸಂಕೇತ. ಇನ್ನಾದರೂ ಎಲ್ಲರೂ ಕನ್ನಡ ಭಾಷೆಯನ್ನೇ ಬಳಸುವಂತಾಗಬೇಕು~ ಎಂದರು.<br /> <br /> `ಶಾಂತವೇರಿ ಗೋಪಾಲಗೌಡರು ಆದರ್ಶ ವ್ಯಕ್ತಿ. ಅಂತಹ ಮಹಾನ್ ವ್ಯಕ್ತಿಗಳನ್ನು ಇಂದು ನಿರೀಕ್ಷಿಸುವಂತಿಲ್ಲ. ಹಾಗಾಗಿ ಗೋಪಾಲಗೌಡರ ಪ್ರತಿಮೆ ನಿರ್ಮಾಣವಾಗಬೇಕು ಎಂಬುದು ನನ್ನ ಬಹುಕಾಲದ ಬಯಕೆ~ ಎಂದು ಭಾವುಕರಾಗಿ ನುಡಿದರು.<br /> <br /> `ದೇಶ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಜನತೆಯೇ ಕಾರಣ. ಅಯೋಗ್ಯರು, ಅಸಮರ್ಥರನ್ನು ವಿಜೃಂಭಿಸುವ ಕಾರ್ಯ ನಡೆದೇ ಇದೆ. ಜನರಲ್ಲಿ ನಿರ್ಲಕ್ಷ್ಯ ಮನೋಭಾವದಿಂದಾಗಿ ಭಾವೈಕ್ಯತೆಯ ವಾತಾವರಣ ಸೃಷ್ಟಿಯಾಗಲು ಸಾಧ್ಯವಾಗಿಲ್ಲ~ ಎಂದರು. ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ. ರಾಮೇಗೌಡ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>