<p>ಆರ್ಟ್ ಬೆಂಗಳೂರು ಕಳೆದೊಂದು ತಿಂಗಳಿಂದ ನಡೆಸುತ್ತಿರುವ `ಕಲಾ ಹಬ್ಬ~ದ ಕೊನೆಯ ಭಾಗವಾಗಿ ಈ ಕಾರ್ಯಕ್ರಮ ನಡೆಯಲಿದೆ. ಸ್ವಾತಂತ್ರ್ಯಪೂರ್ವ ಕಲಾವಿದರಾದ ರವೀಂದ್ರನಾಥ ಟ್ಯಾಗೋರರಿಂದ ಆರಂಭಿಸಿ ಯುವ ಕಲಾವಿದರ ಕಲಾಕೃತಿಗಳೂ ಕಲಾಪ್ರಿಯರಿಗೆ ಲಭ್ಯವಾಗಲಿವೆ. <br /> <br /> ಇದರೊಂದಿಗೆ ಕಲಾವಿದರ ಮೂರ್ತಿ, ಅವರು ಬಳಸುತ್ತಿದ್ದ ಕಾಫಿ ಟೇಬಲ್, ಕುರ್ಚಿ ಹಾಗೂ ಇತರ ದಿನಬಳಕೆಯ ವಸ್ತುಗಳೂ ಹರಾಜಿನ ಭಾಗವಾಗಿರುವುದು ವಿಶೇಷ. <br /> ಎಂ.ಎಫ್.ಹುಸೇನ್, ಜಾಮಿನಿ ರಾಯ್, ಎಸ್.ಎಚ್.ರಾಜಾ, ಬಿ.ಪ್ರಭಾ, ಎಫ್.ಎನ್. ಸೋಜಾ, ಗಣೇಶ್ ಪ್ಯಾನೆ, ಕೆ.ಕೆ.ಹೆಬ್ಬಾರ್, ಕೃಷ್ಣನ್ ಖನ್ನಾ, ರಾಮ್ಕುಮಾರ್, ಬಾಕ್ರೆ, ಸೋಮ್ನಾಥ್ ಹೊರೆ ಮೊದಲಾದ ಹಿರಿಯ ಕಲಾವಿದರ ಕಲಾಕೃತಿಗಳು ಎರಡರಿಂದ ಹತ್ತು ಲಕ್ಷದ ಆಸುಪಾಸಿನಲ್ಲಿ ದೊರೆಯಲಿವೆ. <br /> <br /> `ಕಲಾಕೃತಿಗಳ ಸಾಲಿಗೆ ಈ ಬಾರಿ ಆಧುನಿಕ ಪೀಠೋಪಕರಣಗಳನ್ನು, ಆಭರಣಗಳನ್ನು ಸೇರಿಸಿರುವುದು ವಿಶಿಷ್ಟ. ಜ್ಯುವೆಲ್ಲರಿಗಳ ವಿನ್ಯಾಸವನ್ನು ನೋಡಿ ಕಲಾಕೃತಿ ರಚಿಸಿದ್ದು ಭಾರೀ ಪ್ರಶಂಸೆಗೆ ಪಾತ್ರವಾಯಿತು. ವಿವಿಧ ರಾಜ್ಯಗಳ ಕಲಾಸಂಸ್ಕೃತಿಯನ್ನು ಪರಿಚಯಿಸಲು ಇದೊಂದು ಉತ್ತಮ ವೇದಿಕೆಯಾಗಲಿದೆ. ಹಾಗೆಯೇ ಅನ್ಯಭಾಷಿಗರ ಕಲಾಕೃತಿಗಳು ಕನ್ನಡಿಗರಿಗೆ ದೊರೆಯಲಿವೆ~ ಎಂದರು `ಆರ್ಟ್ ಬೆಂಗಳೂರು~ ಸಂಯೋಜಕಿ ಉಜ್ಮಾ ಇರ್ಫಾನ್. <br /> <br /> `ವೃತ್ತಿಪರರ ಕಲಾಕೃತಿಗಳು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಹರಾಜಾಗುತ್ತಿವೆ. ಕಳೆದ 60 ವರ್ಷಗಳಲ್ಲಿ ಕಲಾಕ್ಷೇತ್ರದಲ್ಲಾದ ಎಲ್ಲಾ ಬದಲಾವಣೆಗಳನ್ನೂ ಗುರುತು ಹಾಕಿಕೊಂಡು ಆಯಾ ಕಾಲಘಟ್ಟದ ಒಬ್ಬೊಬ್ಬ ಕಲಾವಿದರ ಕಲಾಕೃತಿಗಳನ್ನು ಹರಾಜಿನಲ್ಲಿಟ್ಟಿದ್ದೇವೆ. <br /> <br /> ದಕ್ಷಿಣ ಭಾರತದ ಹಲವಾರು ಮಹಿಳಾ ಕಲಾವಿದರನ್ನೂ ಸೇರಿಸಿಕೊಂಡಿದ್ದೇವೆ~ ಎಂದರು ಈ ಹರಾಜು ನಡೆಸಿಕೊಡಲಿರುವ ಅಂಜೀರಾ ಆರ್ಯ. ದೇಶದಾದ್ಯಂತ ನಡೆಯುವ ಶೇ 80ರಷ್ಟು ಹರಾಜು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಅಂಜಿರಾ ಆರ್ಯ ನಗರದಲ್ಲಿ ನಡೆಯಲಿರುವ ಹರಾಜಿನ ಜವಾಬ್ದಾರಿ ಹೊತ್ತಿದ್ದಾರೆ. <br /> <br /> ಇಲ್ಲಿ ಸಂಗ್ರಹವಾಗುವ ಹಣವನ್ನು ಕ್ರಿಸ್ಟೆಲ್ ಹೌಸ್ ಇಂಡಿಯಾಗೆ ಸಹಾಯಾರ್ಥವಾಗಿ ನೀಡಲಾಗುವುದು. `ನಾವು ಐದು ವರ್ಷದ ಅನಾಥ ಮಕ್ಕಳಿಗೆ ಶಿಕ್ಷಣ ನೀಡಿ, ಅವರಿಗೆ ಉದ್ಯೋಗ ದೊರಕುವವರೆಗೆ ನೋಡಿಕೊಳ್ಳುತ್ತೇವೆ.</p>.<p><br /> ಪ್ರಸ್ತುತ 1000 ಮಕ್ಕಳು ನಮ್ಮಲ್ಲಿ ಆಶ್ರಯ ಪಡೆದಿದ್ದಾರೆ. ಶಾಲೆಯ ಮೇಲುಸ್ತುವಾರಿಗೆ ಟ್ರಸ್ಟ್ ನೇಮಿಸಿರುವುದರಿಂದ ನಿಧಿ ಸಂಗ್ರಹದ ಅಷ್ಟೂ ಭಾಗ ಮಕ್ಕಳಿಗೆ ಸಂದಾಯವಾಗುತ್ತದೆ. ಬೆಂಗಳೂರಿಗರಿಗೆ ಉತ್ತಮ ಗುಣಮಟ್ಟದ ಕಲಾಕೃತಿ ಕೊಳ್ಳಲು ಇದೊಂದು ಉತ್ತಮ ಅವಕಾಶ~ ಎಂದರು ಕ್ರಿಸ್ಟೆಲ್ ಹೌಸ್ ಇಂಡಿಯಾದ ಮುಖ್ಯಸ್ಥ ರಾಜು ಸಹಾನಿ.<br /> <br /> ಹಿರಿಯ ಕಲಾವಿದ ಎಸ್.ಜಿ. ವಾಸುದೇವ್ ಸಹ ಈ ಕಾರ್ಯಕ್ರಮದ ಭಾಗವಾಗಿದ್ದರು. ದೆಹಲಿ, ಮುಂಬೈನಂತಹ ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದ ಕಲಾ ಹರಾಜು ಬೆಂಗಳೂರಿಗೂ ಬಂದಿದ್ದು ಸಂತಸದ ಸಂಗತಿ. ಕಲೆಗೆ ಅಷ್ಟಾಗಿ ಪ್ರೋತ್ಸಾಹ ಸಿಗದ ಉದ್ಯಾನನಗರಿಯಲ್ಲೂ ಕಳೆದ ಹತ್ತು ವರ್ಷಗಳಿಂದ ಉತ್ತಮ ಕಲಾಕೃತಿಗಳನ್ನು ಇಷ್ಟಪಡುವ ಮಂದಿ ಹೆಚ್ಚುತ್ತಿದ್ದಾರೆ.<br /> <br /> ನಮ್ಮ ಕಲಾಕೃತಿಗಳು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತವೆ ಎಂದಾದರೆ ಚಿತ್ರ ಬಿಡಿಸಿದ ನಮಗೂ ಹೆಮ್ಮೆಯ ವಿಷಯವೇ. ಯುವ ಕಲಾವಿದರು ಇದರಿಂದ ಪ್ರೇರಣೆ ಪಡೆಯಬೇಕು. ನನ್ನ `ಶೀ ಆಂಡ್ ಟ್ರೀ~ ಸರಣಿಯ ಕೆಲವು ಕಲಾಕೃತಿಗಳನ್ನು ಈ ಹರಾಜಿಗಾಗಿ ಕೊಟ್ಟಿದ್ದೇನೆ ಎಂದರು. <br /> <br /> 1930ರ ಬಳಿಕದ ಅನೇಕ ಕಲಾವಿದರ ಕಲಾಕೃತಿಗಳು ಹರಾಜಾಗಲಿವೆ. ಇದು ಸಾರ್ವಜನಿಕರಿಗೆ ಮುಕ್ತವಾಗಿದ್ದು ಆಸಕ್ತರೆಲ್ಲರೂ ಪಾಲ್ಗೊಳ್ಳಬಹುದು. ಆಫ್ರಿಕನ್ ಕಲಾವಿದರ ಎರಡು ಕಲಾಕೃತಿಗಳೂ ಸೇರಿದಂತೆ 114 ಕಲಾಕೃತಿಗಳು ಇಲ್ಲಿ ಮಾರಾಟವಾಗಲಿವೆಯಂತೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆರ್ಟ್ ಬೆಂಗಳೂರು ಕಳೆದೊಂದು ತಿಂಗಳಿಂದ ನಡೆಸುತ್ತಿರುವ `ಕಲಾ ಹಬ್ಬ~ದ ಕೊನೆಯ ಭಾಗವಾಗಿ ಈ ಕಾರ್ಯಕ್ರಮ ನಡೆಯಲಿದೆ. ಸ್ವಾತಂತ್ರ್ಯಪೂರ್ವ ಕಲಾವಿದರಾದ ರವೀಂದ್ರನಾಥ ಟ್ಯಾಗೋರರಿಂದ ಆರಂಭಿಸಿ ಯುವ ಕಲಾವಿದರ ಕಲಾಕೃತಿಗಳೂ ಕಲಾಪ್ರಿಯರಿಗೆ ಲಭ್ಯವಾಗಲಿವೆ. <br /> <br /> ಇದರೊಂದಿಗೆ ಕಲಾವಿದರ ಮೂರ್ತಿ, ಅವರು ಬಳಸುತ್ತಿದ್ದ ಕಾಫಿ ಟೇಬಲ್, ಕುರ್ಚಿ ಹಾಗೂ ಇತರ ದಿನಬಳಕೆಯ ವಸ್ತುಗಳೂ ಹರಾಜಿನ ಭಾಗವಾಗಿರುವುದು ವಿಶೇಷ. <br /> ಎಂ.ಎಫ್.ಹುಸೇನ್, ಜಾಮಿನಿ ರಾಯ್, ಎಸ್.ಎಚ್.ರಾಜಾ, ಬಿ.ಪ್ರಭಾ, ಎಫ್.ಎನ್. ಸೋಜಾ, ಗಣೇಶ್ ಪ್ಯಾನೆ, ಕೆ.ಕೆ.ಹೆಬ್ಬಾರ್, ಕೃಷ್ಣನ್ ಖನ್ನಾ, ರಾಮ್ಕುಮಾರ್, ಬಾಕ್ರೆ, ಸೋಮ್ನಾಥ್ ಹೊರೆ ಮೊದಲಾದ ಹಿರಿಯ ಕಲಾವಿದರ ಕಲಾಕೃತಿಗಳು ಎರಡರಿಂದ ಹತ್ತು ಲಕ್ಷದ ಆಸುಪಾಸಿನಲ್ಲಿ ದೊರೆಯಲಿವೆ. <br /> <br /> `ಕಲಾಕೃತಿಗಳ ಸಾಲಿಗೆ ಈ ಬಾರಿ ಆಧುನಿಕ ಪೀಠೋಪಕರಣಗಳನ್ನು, ಆಭರಣಗಳನ್ನು ಸೇರಿಸಿರುವುದು ವಿಶಿಷ್ಟ. ಜ್ಯುವೆಲ್ಲರಿಗಳ ವಿನ್ಯಾಸವನ್ನು ನೋಡಿ ಕಲಾಕೃತಿ ರಚಿಸಿದ್ದು ಭಾರೀ ಪ್ರಶಂಸೆಗೆ ಪಾತ್ರವಾಯಿತು. ವಿವಿಧ ರಾಜ್ಯಗಳ ಕಲಾಸಂಸ್ಕೃತಿಯನ್ನು ಪರಿಚಯಿಸಲು ಇದೊಂದು ಉತ್ತಮ ವೇದಿಕೆಯಾಗಲಿದೆ. ಹಾಗೆಯೇ ಅನ್ಯಭಾಷಿಗರ ಕಲಾಕೃತಿಗಳು ಕನ್ನಡಿಗರಿಗೆ ದೊರೆಯಲಿವೆ~ ಎಂದರು `ಆರ್ಟ್ ಬೆಂಗಳೂರು~ ಸಂಯೋಜಕಿ ಉಜ್ಮಾ ಇರ್ಫಾನ್. <br /> <br /> `ವೃತ್ತಿಪರರ ಕಲಾಕೃತಿಗಳು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಹರಾಜಾಗುತ್ತಿವೆ. ಕಳೆದ 60 ವರ್ಷಗಳಲ್ಲಿ ಕಲಾಕ್ಷೇತ್ರದಲ್ಲಾದ ಎಲ್ಲಾ ಬದಲಾವಣೆಗಳನ್ನೂ ಗುರುತು ಹಾಕಿಕೊಂಡು ಆಯಾ ಕಾಲಘಟ್ಟದ ಒಬ್ಬೊಬ್ಬ ಕಲಾವಿದರ ಕಲಾಕೃತಿಗಳನ್ನು ಹರಾಜಿನಲ್ಲಿಟ್ಟಿದ್ದೇವೆ. <br /> <br /> ದಕ್ಷಿಣ ಭಾರತದ ಹಲವಾರು ಮಹಿಳಾ ಕಲಾವಿದರನ್ನೂ ಸೇರಿಸಿಕೊಂಡಿದ್ದೇವೆ~ ಎಂದರು ಈ ಹರಾಜು ನಡೆಸಿಕೊಡಲಿರುವ ಅಂಜೀರಾ ಆರ್ಯ. ದೇಶದಾದ್ಯಂತ ನಡೆಯುವ ಶೇ 80ರಷ್ಟು ಹರಾಜು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ಅಂಜಿರಾ ಆರ್ಯ ನಗರದಲ್ಲಿ ನಡೆಯಲಿರುವ ಹರಾಜಿನ ಜವಾಬ್ದಾರಿ ಹೊತ್ತಿದ್ದಾರೆ. <br /> <br /> ಇಲ್ಲಿ ಸಂಗ್ರಹವಾಗುವ ಹಣವನ್ನು ಕ್ರಿಸ್ಟೆಲ್ ಹೌಸ್ ಇಂಡಿಯಾಗೆ ಸಹಾಯಾರ್ಥವಾಗಿ ನೀಡಲಾಗುವುದು. `ನಾವು ಐದು ವರ್ಷದ ಅನಾಥ ಮಕ್ಕಳಿಗೆ ಶಿಕ್ಷಣ ನೀಡಿ, ಅವರಿಗೆ ಉದ್ಯೋಗ ದೊರಕುವವರೆಗೆ ನೋಡಿಕೊಳ್ಳುತ್ತೇವೆ.</p>.<p><br /> ಪ್ರಸ್ತುತ 1000 ಮಕ್ಕಳು ನಮ್ಮಲ್ಲಿ ಆಶ್ರಯ ಪಡೆದಿದ್ದಾರೆ. ಶಾಲೆಯ ಮೇಲುಸ್ತುವಾರಿಗೆ ಟ್ರಸ್ಟ್ ನೇಮಿಸಿರುವುದರಿಂದ ನಿಧಿ ಸಂಗ್ರಹದ ಅಷ್ಟೂ ಭಾಗ ಮಕ್ಕಳಿಗೆ ಸಂದಾಯವಾಗುತ್ತದೆ. ಬೆಂಗಳೂರಿಗರಿಗೆ ಉತ್ತಮ ಗುಣಮಟ್ಟದ ಕಲಾಕೃತಿ ಕೊಳ್ಳಲು ಇದೊಂದು ಉತ್ತಮ ಅವಕಾಶ~ ಎಂದರು ಕ್ರಿಸ್ಟೆಲ್ ಹೌಸ್ ಇಂಡಿಯಾದ ಮುಖ್ಯಸ್ಥ ರಾಜು ಸಹಾನಿ.<br /> <br /> ಹಿರಿಯ ಕಲಾವಿದ ಎಸ್.ಜಿ. ವಾಸುದೇವ್ ಸಹ ಈ ಕಾರ್ಯಕ್ರಮದ ಭಾಗವಾಗಿದ್ದರು. ದೆಹಲಿ, ಮುಂಬೈನಂತಹ ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದ ಕಲಾ ಹರಾಜು ಬೆಂಗಳೂರಿಗೂ ಬಂದಿದ್ದು ಸಂತಸದ ಸಂಗತಿ. ಕಲೆಗೆ ಅಷ್ಟಾಗಿ ಪ್ರೋತ್ಸಾಹ ಸಿಗದ ಉದ್ಯಾನನಗರಿಯಲ್ಲೂ ಕಳೆದ ಹತ್ತು ವರ್ಷಗಳಿಂದ ಉತ್ತಮ ಕಲಾಕೃತಿಗಳನ್ನು ಇಷ್ಟಪಡುವ ಮಂದಿ ಹೆಚ್ಚುತ್ತಿದ್ದಾರೆ.<br /> <br /> ನಮ್ಮ ಕಲಾಕೃತಿಗಳು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತವೆ ಎಂದಾದರೆ ಚಿತ್ರ ಬಿಡಿಸಿದ ನಮಗೂ ಹೆಮ್ಮೆಯ ವಿಷಯವೇ. ಯುವ ಕಲಾವಿದರು ಇದರಿಂದ ಪ್ರೇರಣೆ ಪಡೆಯಬೇಕು. ನನ್ನ `ಶೀ ಆಂಡ್ ಟ್ರೀ~ ಸರಣಿಯ ಕೆಲವು ಕಲಾಕೃತಿಗಳನ್ನು ಈ ಹರಾಜಿಗಾಗಿ ಕೊಟ್ಟಿದ್ದೇನೆ ಎಂದರು. <br /> <br /> 1930ರ ಬಳಿಕದ ಅನೇಕ ಕಲಾವಿದರ ಕಲಾಕೃತಿಗಳು ಹರಾಜಾಗಲಿವೆ. ಇದು ಸಾರ್ವಜನಿಕರಿಗೆ ಮುಕ್ತವಾಗಿದ್ದು ಆಸಕ್ತರೆಲ್ಲರೂ ಪಾಲ್ಗೊಳ್ಳಬಹುದು. ಆಫ್ರಿಕನ್ ಕಲಾವಿದರ ಎರಡು ಕಲಾಕೃತಿಗಳೂ ಸೇರಿದಂತೆ 114 ಕಲಾಕೃತಿಗಳು ಇಲ್ಲಿ ಮಾರಾಟವಾಗಲಿವೆಯಂತೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>