<p><strong>ಕಡೂರು: </strong>ತಾಲ್ಲೂಕಿನ ಯಗಟಿ ಹೋಬಳಿ ಅಣ್ಣಿಗೆರೆ ಗ್ರಾಮದಲ್ಲಿ ಸೋಮವಾರ ಕಲುಷಿತ ನೀರು ಸೇವನೆಯಿಂದ 40 ಕ್ಕೂ ಹೆಚ್ಚು ರೋಗಿಗಳು ಕಡೂರು, ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.<br /> <br /> ಸೀತಾಪುರ ತಾಂಡ್ಯದಲ್ಲಿ ಕಳೆದ 15 ದಿನಗಳ ಹಿಂದೆ ಕಾಣಿಸಿಕೊಂಡಿದ್ದ ವಾಂತಿ-ಭೇದಿ ಪ್ರಕರಣದಿಂದ ಮೂರು ಜನರು ಮೃತಪಟ್ಟ ಘಟನೆ ಮಾಸುವ ಮುನ್ನ ಅಣ್ಣಿಗೆರೆ ಗ್ರಾಮದಲ್ಲಿ ಪ್ರಕರಣ ಮರುಕಳಿಸಿದೆ. <br /> ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲವರು ದಾಖಲಾಗಿ ಚಿಕಿತ್ಸೆ ಪಡೆದರು. <br /> <br /> ಇನ್ನುಳಿದವರು ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಅಣ್ಣಿಗೆರೆ ಗ್ರಾಮದಲ್ಲಿ ಡಾ.ಪ್ರಭು ಅವರ ನೇತೃತ್ವದಲ್ಲಿ ಶಾಲೆಯಲ್ಲೇ ತೆರೆದಿರುವ ಕ್ಲಿನಿಕ್ನಲ್ಲಿ ಚಿಕಿತ್ಸೆ ನೀಡಲಾಯಿತು. <br /> <br /> ಅಣ್ಣಿಗೆರೆ ಗ್ರಾಮದಲ್ಲಿ ನೀರಿನ ಪೈಪ್ಲೈನ್ ಒಳಗೆ ಮಳೆಯ ನೀರು ಶೇಖರಣೆಗೊಂಡು ಕಲುಷಿತವಾ ಗಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದು, ಈ ನೀರನ್ನು ಗ್ರಾಮಸ್ಥರು ಕುಡಿದು ವಾಂತಿ- ಭೇದಿ ಕಾಣಿಸಿಕೊಂಡಿರುವುದಾಗಿ ಡಾ.ಪ್ರಭು ಪತ್ರಿಕೆಗೆ ಮಾಹಿತಿ ನೀಡಿದರು. <br /> <br /> ಗ್ರಾಮಕ್ಕೆ ಶುದ್ಧ ನೀರಿನ ಟ್ಯಾಂಕರ್ಗಳನ್ನು ಕಳುಹಿಸಿ ನೀರನ್ನು ನೀಡುತ್ತಿದ್ದು, ರಾತ್ರಿ ವೇಳೆಗೆ ವಾಂತಿ- ಭೇದಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಚಿಕಿತ್ಸೆಗೆ ಪೂರಕ ಔಷಧಿ ಸಾಮಗ್ರಿಗಳು ಇದ್ದು, ಸಮಸ್ಯೆ ತಲೆದೋರದಂತೆ ರಾತ್ರಿಯ ವೇಳೆಯಲ್ಲೂ ಶಾಲೆಯಲ್ಲಿ ಕ್ಲಿನಿಕ್ ತೆರೆಯಲಾಗುವುದಾಗಿ ಮಾಹಿತಿ ನೀಡಿದರು. <br /> <br /> ಶಾಸಕ ಡಾ.ವೈ.ಸಿ.ವಿಶ್ವನಾಥ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರು ಶುದ್ಧ ಕುಡಿಯುವ ನೀರನ್ನು ಬಳಸಬೇಕು, ನೀರನ್ನು ಕಾಯಿಸಿ ಆರಿಸಿದ ನಂತರ ಕುಡಿಯಲು ಮನವಿ ಮಾಡಿದರು. ಔಷಧಿ, ವೈದ್ಯರ ಕೊರತೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸಲು ವೈದ್ಯಾಧಿಕಾರಿಗಳು ಎಚ್ಚರ ವಹಿಸಲು ಸಲಹೆ ನೀಡಿದರು. <br /> ಸೀತಾಪುರ ತಾಂಡ್ಯದಲ್ಲಿ ಕಾಣಿಸಿಕೊಂಡಿದ್ದ ವಾಂತಿ ಭೇದಿ ಪ್ರಕರಣದ ಲ್ಯಾಬ್ ಪರೀಕ್ಷೆಯ ವರದಿ ಬಂದಿದ್ದು ಮಂಜುಳಾ ಎಂಬುವರಿಗೆ ಕಾಲರಾ ಇರುವುದಾಗಿ ವರದಿಯಿಂದ ದೃಢಪಟ್ಟಿದೆ ಎಂದು ಡಾ.ಸುಮಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು: </strong>ತಾಲ್ಲೂಕಿನ ಯಗಟಿ ಹೋಬಳಿ ಅಣ್ಣಿಗೆರೆ ಗ್ರಾಮದಲ್ಲಿ ಸೋಮವಾರ ಕಲುಷಿತ ನೀರು ಸೇವನೆಯಿಂದ 40 ಕ್ಕೂ ಹೆಚ್ಚು ರೋಗಿಗಳು ಕಡೂರು, ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.<br /> <br /> ಸೀತಾಪುರ ತಾಂಡ್ಯದಲ್ಲಿ ಕಳೆದ 15 ದಿನಗಳ ಹಿಂದೆ ಕಾಣಿಸಿಕೊಂಡಿದ್ದ ವಾಂತಿ-ಭೇದಿ ಪ್ರಕರಣದಿಂದ ಮೂರು ಜನರು ಮೃತಪಟ್ಟ ಘಟನೆ ಮಾಸುವ ಮುನ್ನ ಅಣ್ಣಿಗೆರೆ ಗ್ರಾಮದಲ್ಲಿ ಪ್ರಕರಣ ಮರುಕಳಿಸಿದೆ. <br /> ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲವರು ದಾಖಲಾಗಿ ಚಿಕಿತ್ಸೆ ಪಡೆದರು. <br /> <br /> ಇನ್ನುಳಿದವರು ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಅಣ್ಣಿಗೆರೆ ಗ್ರಾಮದಲ್ಲಿ ಡಾ.ಪ್ರಭು ಅವರ ನೇತೃತ್ವದಲ್ಲಿ ಶಾಲೆಯಲ್ಲೇ ತೆರೆದಿರುವ ಕ್ಲಿನಿಕ್ನಲ್ಲಿ ಚಿಕಿತ್ಸೆ ನೀಡಲಾಯಿತು. <br /> <br /> ಅಣ್ಣಿಗೆರೆ ಗ್ರಾಮದಲ್ಲಿ ನೀರಿನ ಪೈಪ್ಲೈನ್ ಒಳಗೆ ಮಳೆಯ ನೀರು ಶೇಖರಣೆಗೊಂಡು ಕಲುಷಿತವಾ ಗಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದು, ಈ ನೀರನ್ನು ಗ್ರಾಮಸ್ಥರು ಕುಡಿದು ವಾಂತಿ- ಭೇದಿ ಕಾಣಿಸಿಕೊಂಡಿರುವುದಾಗಿ ಡಾ.ಪ್ರಭು ಪತ್ರಿಕೆಗೆ ಮಾಹಿತಿ ನೀಡಿದರು. <br /> <br /> ಗ್ರಾಮಕ್ಕೆ ಶುದ್ಧ ನೀರಿನ ಟ್ಯಾಂಕರ್ಗಳನ್ನು ಕಳುಹಿಸಿ ನೀರನ್ನು ನೀಡುತ್ತಿದ್ದು, ರಾತ್ರಿ ವೇಳೆಗೆ ವಾಂತಿ- ಭೇದಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಚಿಕಿತ್ಸೆಗೆ ಪೂರಕ ಔಷಧಿ ಸಾಮಗ್ರಿಗಳು ಇದ್ದು, ಸಮಸ್ಯೆ ತಲೆದೋರದಂತೆ ರಾತ್ರಿಯ ವೇಳೆಯಲ್ಲೂ ಶಾಲೆಯಲ್ಲಿ ಕ್ಲಿನಿಕ್ ತೆರೆಯಲಾಗುವುದಾಗಿ ಮಾಹಿತಿ ನೀಡಿದರು. <br /> <br /> ಶಾಸಕ ಡಾ.ವೈ.ಸಿ.ವಿಶ್ವನಾಥ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರು ಶುದ್ಧ ಕುಡಿಯುವ ನೀರನ್ನು ಬಳಸಬೇಕು, ನೀರನ್ನು ಕಾಯಿಸಿ ಆರಿಸಿದ ನಂತರ ಕುಡಿಯಲು ಮನವಿ ಮಾಡಿದರು. ಔಷಧಿ, ವೈದ್ಯರ ಕೊರತೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸಲು ವೈದ್ಯಾಧಿಕಾರಿಗಳು ಎಚ್ಚರ ವಹಿಸಲು ಸಲಹೆ ನೀಡಿದರು. <br /> ಸೀತಾಪುರ ತಾಂಡ್ಯದಲ್ಲಿ ಕಾಣಿಸಿಕೊಂಡಿದ್ದ ವಾಂತಿ ಭೇದಿ ಪ್ರಕರಣದ ಲ್ಯಾಬ್ ಪರೀಕ್ಷೆಯ ವರದಿ ಬಂದಿದ್ದು ಮಂಜುಳಾ ಎಂಬುವರಿಗೆ ಕಾಲರಾ ಇರುವುದಾಗಿ ವರದಿಯಿಂದ ದೃಢಪಟ್ಟಿದೆ ಎಂದು ಡಾ.ಸುಮಾ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>