<p><strong>ವಿಜಾಪುರ:`</strong>ಬಸವನ ಬಾಗೇವಾಡಿ ತಾಲ್ಲೂಕು ಕೂಡಗಿಯಲ್ಲಿ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ ಬೃಹತ್ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಿಂದ 3 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ~ ಎಂದು ನಿಗಮದ ಕೂಡಗಿ ಸ್ಥಾವರದ ಪ್ರಧಾನ ವ್ಯವಸ್ಥಾಪಕ ಆಸಿಮ್ಕುಮಾರ ಸಾಮಂತಾ ಹೇಳಿದರು.<br /> <br /> `ಈ ಒಂದೇ ಸ್ಥಾವರಕ್ಕೆ 15 ಸಾವಿರ ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತ ಹೂಡಿಕೆಯಾಗುತ್ತಿದೆ. ಸಿಮೆಂಟ್ ಉತ್ಪಾದನೆ, ಇಟ್ಟಿಗೆ ತಯಾರಿಕೆಯೂ ಸೇರಿದಂತೆ ಹಲವಾರು ಪೂರಕ ಕೈಗಾರಿಕೆಗಳು ಸ್ಥಾಪನೆಯಾಗಲಿವೆ. ಆ ಮೂಲಕ ವಿಜಾಪುರ ಜಿಲ್ಲೆಯ ಆರ್ಥಿಕ ಚಿತ್ರಣವೇ ಬದಲಾಗಲಿದೆ~ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<br /> <br /> `ಈ ಭಾಗದ ಮಕ್ಕಳ ಕೌಶಲ್ಯ ಅಬಿವೃದ್ಧಿಗಾಗಿ ಇಲ್ಲೊಂದು ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಆರಂಭಿಸಲಾಗುವುದು. ಇದರ ಜೊತೆಗೆ ಕೂಡಗಿ ಸ್ಥಾವರ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಮರಗಳನ್ನು ಬೆಳೆಸಲಾಗುವುದು. <br /> <br /> ಸುತ್ತಲಿನ ಗ್ರಾಮಗಳಲ್ಲಿ ಹಸಿರು ಹೊದಿಕೆ, ಬಸ್ ತಂಗುದಾಣ, ಶಾಲಾ ಮಕ್ಕಳಿಗೆ ಶಿಷ್ಯವೇತನ, ಶಾಲೆಗಳಿಗೆ ಕಂಪೌಂಡ್ ನಿರ್ಮಾಣವೂ ಸೇರಿದಂತೆ ಹಲವು ಜನೋಪಯೋಗಿ ಕಾರ್ಯ ಮಾಡಲಾಗುವುದು. ಈ ಕುರಿತು ಗ್ರಾಮಸ್ಥರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಆಡಳಿತದ ಸಲಹೆ-ಸಹಕಾರ ಪಡೆಯಲಾಗುವುದು~ ಎಂದರು.<br /> <br /> `ಈ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಿಂದ ಉಷ್ಣತೆ ಹೆಚ್ಚಾಗುತ್ತದೆ. ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂಬುದು ತಪ್ಪು ಕಲ್ಪನೆ. ನಾವು ಸ್ಥಾಪಿಸುತ್ತಿರುವುದು ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನದ ಅಲ್ಟ್ರಾ ಮೆಗಾ ವಿದ್ಯುತ್ ಸ್ಥಾವರ. ಹೀಗಾಗಿ ಇದರಿಂದ ಯಾವುದೇ ಹಾನಿ ಇಲ್ಲ. <br /> <br /> ರಾಮಗುಂಡಂ ಸ್ಥಾವರದ ಸುತ್ತಲೂ ಹಸಿರು ಹೊದಿಕೆ ನಿರ್ಮಿಸಿದ್ದರಿಂದ ಅಲ್ಲಿಯ ಉಷ್ಣತೆಯಲ್ಲಿ 3 ಡಿಗ್ರಿ ಸೆಲ್ಸಿಯಸ್ನಷ್ಟು ಕಡಿಮೆಯಾಗಿದೆ~ ಎಂದು ಹೇಳಿದರು.<br /> <br /> `ಜಮೀನಿಗೆ ದರ ಪರಿಷ್ಕರಿಸುವ ವಿಷಯ ರಾಜ್ಯ ಸರ್ಕಾರಕ್ಕೆ ಸೇರಿದ್ದು~ ಎಂದಷ್ಟೇ ಪ್ರತಿಕ್ರಿಯಿಸಿದ ಅವರು, ಜಮೀನು ಕಳೆದುಕೊಂಡು ಸಂತ್ರಸ್ತರಾಗುವ ರೈತರ ಮಕ್ಕಳಿಗೆ ತಮ್ಮ ಐಟಿಐಯಲ್ಲಿ ತರಬೇತಿ ನೀಡುವ ಯೋಜನೆಯೂ ಇದೆ ಎಂದರು.<br /> <br /> `ಕೂಡಗಿ ಸ್ಥಾವರಕ್ಕೆ ವಶಪಡಿಸಿಕೊಂಡ ಜಮೀನಿಗೆ ಬೇಲಿ ನಿರ್ಮಿಸುವ ಕೆಲಸ ನಡೆಯುತ್ತಿದೆ. ಈಗ 65 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಶೀಘ್ರವೇ ಅಲ್ಲೊಂದು ಕಚೇರಿ ಆರಂಭಿಸಲಾಗುವುದು~. <br /> <br /> `ಎನ್ಟಿಪಿಸಿ ದೇಶದಲ್ಲಿ ಈಗ 18 ಐಟಿಐಗಳನ್ನು ಹೊಂದಿದೆ. ಹೊಸದಾಗಿ ಎಂಟು ಐಟಿಐ ಆರಂಭಿಸಲಾಗುತ್ತಿದ್ದು, ಅದರಲ್ಲಿ ವಿಜಾಪುರ ಜಿಲ್ಲೆಯ ಒಂದು ಸೇರಿದೆ~ ಎಂದರು.<br /> <br /> ಈ ಸ್ಥಾವರ ಸ್ಥಾಪನೆಯಿಂದ ವಿದ್ಯುತ್ ಲಭ್ಯತೆಯ ಜೊತೆಗೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯೂ ಆಗಲಿದೆ. ಅದಕ್ಕಾಗಿ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.<br /> <br /> ಉಪ ಪ್ರಧಾನ ವ್ಯವಸ್ಥಾಪಕ ಆರ್.ಎಸ್. ಪುಟ್ಟರಾಜು, ಮುಖ್ಯ ವ್ಯವಸ್ಥಾಪಕ ಪಿ. ಶ್ರೀನಿವಾಸರಾವ್, ಸಾರ್ವಜನಿಕ ಸಂಪರ್ಕ ವಿಭಾಗದ ಹಿರಿಯ ವ್ಯವಸ್ಥಾಪಕ ಅಲ್ಬರ್ಟ್ ಸಿ. ಪತ್ರಿಕಾಗೋಷ್ಠಿಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಾಪುರ:`</strong>ಬಸವನ ಬಾಗೇವಾಡಿ ತಾಲ್ಲೂಕು ಕೂಡಗಿಯಲ್ಲಿ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ ಬೃಹತ್ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಿಂದ 3 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ~ ಎಂದು ನಿಗಮದ ಕೂಡಗಿ ಸ್ಥಾವರದ ಪ್ರಧಾನ ವ್ಯವಸ್ಥಾಪಕ ಆಸಿಮ್ಕುಮಾರ ಸಾಮಂತಾ ಹೇಳಿದರು.<br /> <br /> `ಈ ಒಂದೇ ಸ್ಥಾವರಕ್ಕೆ 15 ಸಾವಿರ ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತ ಹೂಡಿಕೆಯಾಗುತ್ತಿದೆ. ಸಿಮೆಂಟ್ ಉತ್ಪಾದನೆ, ಇಟ್ಟಿಗೆ ತಯಾರಿಕೆಯೂ ಸೇರಿದಂತೆ ಹಲವಾರು ಪೂರಕ ಕೈಗಾರಿಕೆಗಳು ಸ್ಥಾಪನೆಯಾಗಲಿವೆ. ಆ ಮೂಲಕ ವಿಜಾಪುರ ಜಿಲ್ಲೆಯ ಆರ್ಥಿಕ ಚಿತ್ರಣವೇ ಬದಲಾಗಲಿದೆ~ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<br /> <br /> `ಈ ಭಾಗದ ಮಕ್ಕಳ ಕೌಶಲ್ಯ ಅಬಿವೃದ್ಧಿಗಾಗಿ ಇಲ್ಲೊಂದು ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಆರಂಭಿಸಲಾಗುವುದು. ಇದರ ಜೊತೆಗೆ ಕೂಡಗಿ ಸ್ಥಾವರ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಮರಗಳನ್ನು ಬೆಳೆಸಲಾಗುವುದು. <br /> <br /> ಸುತ್ತಲಿನ ಗ್ರಾಮಗಳಲ್ಲಿ ಹಸಿರು ಹೊದಿಕೆ, ಬಸ್ ತಂಗುದಾಣ, ಶಾಲಾ ಮಕ್ಕಳಿಗೆ ಶಿಷ್ಯವೇತನ, ಶಾಲೆಗಳಿಗೆ ಕಂಪೌಂಡ್ ನಿರ್ಮಾಣವೂ ಸೇರಿದಂತೆ ಹಲವು ಜನೋಪಯೋಗಿ ಕಾರ್ಯ ಮಾಡಲಾಗುವುದು. ಈ ಕುರಿತು ಗ್ರಾಮಸ್ಥರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಆಡಳಿತದ ಸಲಹೆ-ಸಹಕಾರ ಪಡೆಯಲಾಗುವುದು~ ಎಂದರು.<br /> <br /> `ಈ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಿಂದ ಉಷ್ಣತೆ ಹೆಚ್ಚಾಗುತ್ತದೆ. ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂಬುದು ತಪ್ಪು ಕಲ್ಪನೆ. ನಾವು ಸ್ಥಾಪಿಸುತ್ತಿರುವುದು ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನದ ಅಲ್ಟ್ರಾ ಮೆಗಾ ವಿದ್ಯುತ್ ಸ್ಥಾವರ. ಹೀಗಾಗಿ ಇದರಿಂದ ಯಾವುದೇ ಹಾನಿ ಇಲ್ಲ. <br /> <br /> ರಾಮಗುಂಡಂ ಸ್ಥಾವರದ ಸುತ್ತಲೂ ಹಸಿರು ಹೊದಿಕೆ ನಿರ್ಮಿಸಿದ್ದರಿಂದ ಅಲ್ಲಿಯ ಉಷ್ಣತೆಯಲ್ಲಿ 3 ಡಿಗ್ರಿ ಸೆಲ್ಸಿಯಸ್ನಷ್ಟು ಕಡಿಮೆಯಾಗಿದೆ~ ಎಂದು ಹೇಳಿದರು.<br /> <br /> `ಜಮೀನಿಗೆ ದರ ಪರಿಷ್ಕರಿಸುವ ವಿಷಯ ರಾಜ್ಯ ಸರ್ಕಾರಕ್ಕೆ ಸೇರಿದ್ದು~ ಎಂದಷ್ಟೇ ಪ್ರತಿಕ್ರಿಯಿಸಿದ ಅವರು, ಜಮೀನು ಕಳೆದುಕೊಂಡು ಸಂತ್ರಸ್ತರಾಗುವ ರೈತರ ಮಕ್ಕಳಿಗೆ ತಮ್ಮ ಐಟಿಐಯಲ್ಲಿ ತರಬೇತಿ ನೀಡುವ ಯೋಜನೆಯೂ ಇದೆ ಎಂದರು.<br /> <br /> `ಕೂಡಗಿ ಸ್ಥಾವರಕ್ಕೆ ವಶಪಡಿಸಿಕೊಂಡ ಜಮೀನಿಗೆ ಬೇಲಿ ನಿರ್ಮಿಸುವ ಕೆಲಸ ನಡೆಯುತ್ತಿದೆ. ಈಗ 65 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಶೀಘ್ರವೇ ಅಲ್ಲೊಂದು ಕಚೇರಿ ಆರಂಭಿಸಲಾಗುವುದು~. <br /> <br /> `ಎನ್ಟಿಪಿಸಿ ದೇಶದಲ್ಲಿ ಈಗ 18 ಐಟಿಐಗಳನ್ನು ಹೊಂದಿದೆ. ಹೊಸದಾಗಿ ಎಂಟು ಐಟಿಐ ಆರಂಭಿಸಲಾಗುತ್ತಿದ್ದು, ಅದರಲ್ಲಿ ವಿಜಾಪುರ ಜಿಲ್ಲೆಯ ಒಂದು ಸೇರಿದೆ~ ಎಂದರು.<br /> <br /> ಈ ಸ್ಥಾವರ ಸ್ಥಾಪನೆಯಿಂದ ವಿದ್ಯುತ್ ಲಭ್ಯತೆಯ ಜೊತೆಗೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯೂ ಆಗಲಿದೆ. ಅದಕ್ಕಾಗಿ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.<br /> <br /> ಉಪ ಪ್ರಧಾನ ವ್ಯವಸ್ಥಾಪಕ ಆರ್.ಎಸ್. ಪುಟ್ಟರಾಜು, ಮುಖ್ಯ ವ್ಯವಸ್ಥಾಪಕ ಪಿ. ಶ್ರೀನಿವಾಸರಾವ್, ಸಾರ್ವಜನಿಕ ಸಂಪರ್ಕ ವಿಭಾಗದ ಹಿರಿಯ ವ್ಯವಸ್ಥಾಪಕ ಅಲ್ಬರ್ಟ್ ಸಿ. ಪತ್ರಿಕಾಗೋಷ್ಠಿಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>