<p>ತಿರುವನಂತಪುರ (ಪಿಟಿಐ): ಕೇರಳ ವಿಧಾನಸಭೆಗೆ ಬುಧವಾರ ಚುನಾವಣೆ ನಡೆಯಲಿದ್ದು ಬಹಿರಂಗ ಪ್ರಚಾರ ಮುಕ್ತಾಯದ ದಿನವಾದ ಸೋಮವಾರ ರಾಜ್ಯದ ವಿವಿಧೆಡೆ ಘರ್ಷಣೆ ನಡೆದ ವರದಿಯಾಗಿದೆ.<br /> <br /> ತಿರುವನಂತಪುರ ವಿಧಾನಸಭಾ ಕ್ಷೇತ್ರದ ಪೂಂತುರ ಎಂಬಲ್ಲಿ ಆಡಳಿತಾರೂಢ ಎಲ್ಡಿಎಫ್ ಮತ್ತು ಪ್ರತಿಪಕ್ಷದ ಒಕ್ಕೂಟ ಯುಡಿಎಫ್ ಕಾರ್ಯಕರ್ತರ ನಡುವೆ ಕಲ್ಲು ತೂರಾಟ ಸಂಭವಿಸಿದ್ದು ಘಟನೆಯಲ್ಲಿ ಸಚಿವರೊಬ್ಬರು ಗಾಯಗೊಂಡಿದ್ದಾರೆ.<br /> <br /> ಎಲ್ಡಿಎಫ್ ಒಕ್ಕೂಟದ ಅಭ್ಯರ್ಥಿಯಾದ ಕೇರಳ ಕಾಂಗ್ರೆಸ್ ಬಣದ (ಥಾಮಸ್) ಸಚಿವ ವಿ.ಸುರೇಂದ್ರನ್ ಪಿಳ್ಳೈ ಅವರಿದ್ದ ವಾಹನವನ್ನು ತಡೆಗಟ್ಟಿದ ಯುಡಿಎಫ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದರು. <br /> <br /> ಇತ್ತೀಚೆಗೆ ಕೇಂದ್ರ ಸಚಿವ ಎ.ಕೆ.ಆಂಟನಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ ಎಲ್ಡಿಎಫ್ ಕಾರ್ಯಕರ್ತರು ಅಡ್ಡಿಯುಂಟು ಮಾಡಿದ್ದರು. ಆಂಟನಿ ಅವರ ರೋಡ್ ಷೋಗೆ ಅಡಚಣೆ ಮಾಡಿದ್ದರು ಎಂದು ಆರೋಪಿಸಿ ಈ ಕಲ್ಲು ತೂರಾಟ ನಡೆದಿದೆ.<br /> <br /> ಮಲ್ಲಪುರದಲ್ಲೂ ಘರ್ಷಣೆ: ಮಲ್ಲಪುರ ಜಿಲ್ಲೆಯ ಪೆರಿಂತಲಮನ್ನ ಕ್ಷೇತ್ರದಲ್ಲೂ ಸೋಮವಾರ ಸಿಪಿಐ (ಎಂ) ಮತ್ತು ಮುಸ್ಲಿಂ ಲೀಗ್ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ. ಇದೇ ರೀತಿ ಮತ್ತನ್ನೂರು, ಕಯಾಂಕುಳಂ. ಕರುಂಗಪ್ಪಲಿ ಮತ್ತು ಕೈಪಮಂಗಲಗಳಲ್ಲೂ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಚುನಾವಣಾ ಘರ್ಷಣೆ ಸಂಭವಿಸಿದ ವರದಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಿರುವನಂತಪುರ (ಪಿಟಿಐ): ಕೇರಳ ವಿಧಾನಸಭೆಗೆ ಬುಧವಾರ ಚುನಾವಣೆ ನಡೆಯಲಿದ್ದು ಬಹಿರಂಗ ಪ್ರಚಾರ ಮುಕ್ತಾಯದ ದಿನವಾದ ಸೋಮವಾರ ರಾಜ್ಯದ ವಿವಿಧೆಡೆ ಘರ್ಷಣೆ ನಡೆದ ವರದಿಯಾಗಿದೆ.<br /> <br /> ತಿರುವನಂತಪುರ ವಿಧಾನಸಭಾ ಕ್ಷೇತ್ರದ ಪೂಂತುರ ಎಂಬಲ್ಲಿ ಆಡಳಿತಾರೂಢ ಎಲ್ಡಿಎಫ್ ಮತ್ತು ಪ್ರತಿಪಕ್ಷದ ಒಕ್ಕೂಟ ಯುಡಿಎಫ್ ಕಾರ್ಯಕರ್ತರ ನಡುವೆ ಕಲ್ಲು ತೂರಾಟ ಸಂಭವಿಸಿದ್ದು ಘಟನೆಯಲ್ಲಿ ಸಚಿವರೊಬ್ಬರು ಗಾಯಗೊಂಡಿದ್ದಾರೆ.<br /> <br /> ಎಲ್ಡಿಎಫ್ ಒಕ್ಕೂಟದ ಅಭ್ಯರ್ಥಿಯಾದ ಕೇರಳ ಕಾಂಗ್ರೆಸ್ ಬಣದ (ಥಾಮಸ್) ಸಚಿವ ವಿ.ಸುರೇಂದ್ರನ್ ಪಿಳ್ಳೈ ಅವರಿದ್ದ ವಾಹನವನ್ನು ತಡೆಗಟ್ಟಿದ ಯುಡಿಎಫ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದರು. <br /> <br /> ಇತ್ತೀಚೆಗೆ ಕೇಂದ್ರ ಸಚಿವ ಎ.ಕೆ.ಆಂಟನಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ ಎಲ್ಡಿಎಫ್ ಕಾರ್ಯಕರ್ತರು ಅಡ್ಡಿಯುಂಟು ಮಾಡಿದ್ದರು. ಆಂಟನಿ ಅವರ ರೋಡ್ ಷೋಗೆ ಅಡಚಣೆ ಮಾಡಿದ್ದರು ಎಂದು ಆರೋಪಿಸಿ ಈ ಕಲ್ಲು ತೂರಾಟ ನಡೆದಿದೆ.<br /> <br /> ಮಲ್ಲಪುರದಲ್ಲೂ ಘರ್ಷಣೆ: ಮಲ್ಲಪುರ ಜಿಲ್ಲೆಯ ಪೆರಿಂತಲಮನ್ನ ಕ್ಷೇತ್ರದಲ್ಲೂ ಸೋಮವಾರ ಸಿಪಿಐ (ಎಂ) ಮತ್ತು ಮುಸ್ಲಿಂ ಲೀಗ್ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ. ಇದೇ ರೀತಿ ಮತ್ತನ್ನೂರು, ಕಯಾಂಕುಳಂ. ಕರುಂಗಪ್ಪಲಿ ಮತ್ತು ಕೈಪಮಂಗಲಗಳಲ್ಲೂ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಚುನಾವಣಾ ಘರ್ಷಣೆ ಸಂಭವಿಸಿದ ವರದಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>