<p><strong>ಭುವನೇಶ್ವರ: </strong>ದೇಶದ ಕೃಷಿ ಪರಂಪರೆ ರಕ್ಷಣೆಯಲ್ಲಿ ಮಾಡಿದ ಅನನ್ಯ ಸಾಧನೆಗಾಗಿ ಕೊರಾಪುಟ್ ಜಿಲ್ಲೆಯ ಬುಡಕಟ್ಟು ವಾಸಿಗಳಾದ ಮದುಲಿ ಹಾಗೂ ಚಂದ್ರ ಮೋಹನ್ ಅವರಿಗೆ ಪ್ರಧಾನಿ ಮನಮೋಹನ್ ಸಿಂಗ್ ಮಂಗಳವಾರ ಪ್ರಶಸ್ತಿ ಪ್ರದಾನ ಮಾಡಿದರು.<br /> <br /> ಇಲ್ಲಿ ನಡೆಯುತ್ತಿರುವ ವಿಜ್ಞಾನ ಸಮಾವೇಶದಲ್ಲಿ ಅವರಿಬ್ಬರೂ ಪ್ರಧಾನಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದು ಮಾತ್ರವಲ್ಲ; ಮೂವರು ನೊಬೆಲ್ ಪ್ರಶಸ್ತಿ ಪುರಸ್ಕೃತರ ಜತೆ ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು. <br /> <br /> ಕೊರಾಪುಟ್ ಬುಡಕಟ್ಟು ವಾಸಿಗಳು ಕೃಷಿ ಪರಂಪರೆಯನ್ನು ಉಳಿಸಲು ಅಳವಡಿಸಿಕೊಂಡ ವಿಧಾನವನ್ನು ವಿಶ್ವ ಸಂಸ್ಥೆಯ ಆಹಾರ ಹಾಗೂ ಕೃಷಿ ಸಂಸ್ಥೆಯು ಗುರುತಿಸಿದ್ದರ ಫಲಶ್ರುತಿಯಾಗಿ ಈ ಪ್ರಶಸ್ತಿ ನೀಡಲಾಗಿದೆ.<br /> <br /> ಕೊರಾಪುಟ್ ಸಸ್ಯ ಹಾಗೂ ಜೀವವೈವಿಧ್ಯಕ್ಕೆ ಮಾತ್ರವಲ್ಲ; ಭತ್ತ ಬೆಳೆಯುವ ಪ್ರಮುಖ ಸ್ಥಳ ಎಂದೂ ಗುರುತಿಸಿಕೊಂಡಿದೆ. ಬೇರೆಲ್ಲೂ ಕಾಣಸಿಗದ 79 ಬಗೆಯ ಹೂ ಬಿಡುವ ಸಸ್ಯಗಳು ಹಾಗೂ ಹಣ್ಣಿನ ಗಿಡಗಳಿಂದಾಗಿ ಇಲ್ಲಿನ ಪ್ರಾದೇಶಿಕ ತಳಿ ವೈವಿಧ್ಯ ಮಹತ್ವ ಪಡೆದುಕೊಂಡಿದೆ.<br /> <br /> ನೈಸರ್ಗಿಕ ಒತ್ತಡದಿಂದಾಗಿ ಇಲ್ಲಿನ ಸಾಂಪ್ರದಾಯಿಕ ಕೃಷಿ ಪದ್ಧತಿ ಬದಲಾಗ್ದ್ದಿದರೂ, ವಿಶಿಷ್ಟ ತಳಿಗಳ ರಕ್ಷಣೆಗೆ ಬುಡಕಟ್ಟು ಜನರು ಟೊಂಕಕಟ್ಟಿ ನಿಂತಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ: </strong>ದೇಶದ ಕೃಷಿ ಪರಂಪರೆ ರಕ್ಷಣೆಯಲ್ಲಿ ಮಾಡಿದ ಅನನ್ಯ ಸಾಧನೆಗಾಗಿ ಕೊರಾಪುಟ್ ಜಿಲ್ಲೆಯ ಬುಡಕಟ್ಟು ವಾಸಿಗಳಾದ ಮದುಲಿ ಹಾಗೂ ಚಂದ್ರ ಮೋಹನ್ ಅವರಿಗೆ ಪ್ರಧಾನಿ ಮನಮೋಹನ್ ಸಿಂಗ್ ಮಂಗಳವಾರ ಪ್ರಶಸ್ತಿ ಪ್ರದಾನ ಮಾಡಿದರು.<br /> <br /> ಇಲ್ಲಿ ನಡೆಯುತ್ತಿರುವ ವಿಜ್ಞಾನ ಸಮಾವೇಶದಲ್ಲಿ ಅವರಿಬ್ಬರೂ ಪ್ರಧಾನಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದು ಮಾತ್ರವಲ್ಲ; ಮೂವರು ನೊಬೆಲ್ ಪ್ರಶಸ್ತಿ ಪುರಸ್ಕೃತರ ಜತೆ ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು. <br /> <br /> ಕೊರಾಪುಟ್ ಬುಡಕಟ್ಟು ವಾಸಿಗಳು ಕೃಷಿ ಪರಂಪರೆಯನ್ನು ಉಳಿಸಲು ಅಳವಡಿಸಿಕೊಂಡ ವಿಧಾನವನ್ನು ವಿಶ್ವ ಸಂಸ್ಥೆಯ ಆಹಾರ ಹಾಗೂ ಕೃಷಿ ಸಂಸ್ಥೆಯು ಗುರುತಿಸಿದ್ದರ ಫಲಶ್ರುತಿಯಾಗಿ ಈ ಪ್ರಶಸ್ತಿ ನೀಡಲಾಗಿದೆ.<br /> <br /> ಕೊರಾಪುಟ್ ಸಸ್ಯ ಹಾಗೂ ಜೀವವೈವಿಧ್ಯಕ್ಕೆ ಮಾತ್ರವಲ್ಲ; ಭತ್ತ ಬೆಳೆಯುವ ಪ್ರಮುಖ ಸ್ಥಳ ಎಂದೂ ಗುರುತಿಸಿಕೊಂಡಿದೆ. ಬೇರೆಲ್ಲೂ ಕಾಣಸಿಗದ 79 ಬಗೆಯ ಹೂ ಬಿಡುವ ಸಸ್ಯಗಳು ಹಾಗೂ ಹಣ್ಣಿನ ಗಿಡಗಳಿಂದಾಗಿ ಇಲ್ಲಿನ ಪ್ರಾದೇಶಿಕ ತಳಿ ವೈವಿಧ್ಯ ಮಹತ್ವ ಪಡೆದುಕೊಂಡಿದೆ.<br /> <br /> ನೈಸರ್ಗಿಕ ಒತ್ತಡದಿಂದಾಗಿ ಇಲ್ಲಿನ ಸಾಂಪ್ರದಾಯಿಕ ಕೃಷಿ ಪದ್ಧತಿ ಬದಲಾಗ್ದ್ದಿದರೂ, ವಿಶಿಷ್ಟ ತಳಿಗಳ ರಕ್ಷಣೆಗೆ ಬುಡಕಟ್ಟು ಜನರು ಟೊಂಕಕಟ್ಟಿ ನಿಂತಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>