<p><strong>ಕೊಪ್ಪ: </strong>ಪಟ್ಟಣದ ಊರದೇವತೆ ಕೋಪದ ವೀರಭದ್ರಸ್ವಾಮಿ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.<br /> <br /> ಕಳೆದ ಮೂರು ದಿನಗಳಿಂದ ವೀರಭದ್ರಸ್ವಾಮಿಗೆ ವಿಶೇಷ ಪೂಜೆ ಉತ್ಸವಗಳು ನಡೆಯುತಿದ್ದು, ಶುಕ್ರವಾರ ಮುಂಜಾನೆ ದೇವಸ್ಥಾನದಲ್ಲಿ ನಡೆದ ಕೆಂಡೋತ್ಸವದಲ್ಲಿ ಪಟ್ಟಣದ ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಕೆಂಡ ಹಾಯ್ದರು.<br /> <br /> ವರ್ಣರಂಜಿತ ಪತಾಕೆಗಳು, ಹೂಮಾಲೆಗಳಿಂದ ಅಲಂಕೃತ ರಥಕ್ಕೆ ಸ್ವಾಮಿಯ ಆರೋಹಣವಾಗುತಿದ್ದಂತೆ ಭಕ್ತರು ಫಲಪುಷ್ಪಗಳ ಸುರಿಮಳೆಗರೆದರು. ರಥೋತ್ಸವದ ನಂತರ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಜನ ಪಾಲ್ಗೊಂ ಡರು. ಸತ್ಯಸಾಯಿ ಸೇವಾಸಮಿತಿ ಭಕ್ತರಿಗೆ ಉಚಿತ ಮಜ್ಜಿಗೆ ಸೇವೆ ಸಲ್ಲಿಸಿತು.<br /> <br /> ತಾಲ್ಲೂಕಿನ ಗಬ್ಬಾನೆ ಪಂಚಲಿಂಗಸ್ವಾಮಿ ದುರ್ಗಾ ಪರಮೆಶ್ವರಿ ರಥೋತ್ಸವವು ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಉತ್ಸವದ ಅಂಗವಾಗಿ ತುಲಾಭಾರ ಸೇರಿದಂತೆ ಹಲವು ಹರಕೆಗಳನ್ನು ಭಕ್ತರು ಸಮರ್ಪಿಸಿದರು.<br /> ಕಾಚಕಲ್ ಸೋಮ್ಲಾಪುರ, ಮರಿತೊಟ್ಲು, ನುಗ್ಗಿ, ಬಿಂತ್ರವಳ್ಳಿ, ಕೊಪ್ಪ ಮೊದಲಾದೆಡೆಯಿಂದ ಸಾವಿರಾರು ಭಕ್ತರು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.<br /> <br /> <strong>ಕಡೂರು: ಕರುಮಾರಿಯಮ್ಮನ ಕರಗ <br /> ಕಡೂರು: </strong>ಪಟ್ಟಣದ ಕೆ.ಎಂ.ರಸ್ತೆಯಲ್ಲಿರುವ ಮಾತಾ ಕರುಮಾರಿಯಮ್ಮ ಕರಗ ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ನಡೆಯಿತು. ದೇವಿಯ ಕರಗವನ್ನು ಬ್ರಹ್ಮಚಾರಿ ವಿಜಯ್ ಹೊತ್ತು ತೆರಳಿದಾಗ ಸೇರಿದ್ದ ಸಾವಿರಾರು ಭಕ್ತರ ಘೋಷಣೆಗಳೊಂದಿಗೆ ಮೆರವಣಿಗೆ ತೆರಳಿತು. <br /> <br /> ಶುಕ್ರವಾರ ಬೆಳಗ್ಗಿನಿಂದ ದೇವಿಗೆ ಅಭಿಷೇಕ, ಕುಂಕುಮಾರ್ಚನೆ, ಮದುವಣಗಿತ್ತಿ ಸೇವೆ, ಕಂಕಣಧಾರಣೆ ಮೊದಲಾದ ಪೂಜೆ ಮಾಡಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಅರುಣ್ಕುಮಾರ್, ಟಿ.ಎನ್.ಎ.ಮೊದಲಿಯಾರ್, ಎ.ಮಣಿ, ಮಂಜುನಾಥ್, ಕೃಷ್ಣಪ್ಪ, ರವಿ, ಬಾಬು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. <br /> <br /> <strong>ಬಾಲಸುಬ್ರಹ್ಮಣ್ಯಸ್ವಾಮಿ ರಥೋತ್ಸವ <br /> ಚಿಕ್ಕಮಗಳೂರು:</strong> ಸಖರಾಯಪಟ್ಟಣದ ಶಿವಬಾಲ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.ಬೆಳಿಗ್ಗೆ ಸಿದ್ದಿವಿನಾಯಕಸ್ವಾಮಿ, ವಿಶ್ವನಾಥಸ್ವಾಮಿ, ವಿಶಾಲಾಕ್ಷಮ್ಮ ಅವರಿಗೆ ಅಭಿಷೇಕ, ಬಾಲಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಮಹಾಮಂಗಳಾರತಿ ನೆರವೇರಿಸಲಾ ಯಿತು. ಕಾವಡಿ ಸಮರ್ಪಣೆ, ಊರಿನ ಮುಖ್ಯ ಬೀದಿಗಳಲ್ಲಿ ವೆುರವಣಿಗೆ ಮೂಲಕ ದೇವರನ್ನು ಕರೆತರಲಾಯಿತು.<br /> ರಥೋತ್ಸವಕ್ಕೆ ಸಹಸ್ರಾರು ಮಂದಿ ಆಗಮಿಸಿದ್ದರು. ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪ: </strong>ಪಟ್ಟಣದ ಊರದೇವತೆ ಕೋಪದ ವೀರಭದ್ರಸ್ವಾಮಿ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.<br /> <br /> ಕಳೆದ ಮೂರು ದಿನಗಳಿಂದ ವೀರಭದ್ರಸ್ವಾಮಿಗೆ ವಿಶೇಷ ಪೂಜೆ ಉತ್ಸವಗಳು ನಡೆಯುತಿದ್ದು, ಶುಕ್ರವಾರ ಮುಂಜಾನೆ ದೇವಸ್ಥಾನದಲ್ಲಿ ನಡೆದ ಕೆಂಡೋತ್ಸವದಲ್ಲಿ ಪಟ್ಟಣದ ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಕೆಂಡ ಹಾಯ್ದರು.<br /> <br /> ವರ್ಣರಂಜಿತ ಪತಾಕೆಗಳು, ಹೂಮಾಲೆಗಳಿಂದ ಅಲಂಕೃತ ರಥಕ್ಕೆ ಸ್ವಾಮಿಯ ಆರೋಹಣವಾಗುತಿದ್ದಂತೆ ಭಕ್ತರು ಫಲಪುಷ್ಪಗಳ ಸುರಿಮಳೆಗರೆದರು. ರಥೋತ್ಸವದ ನಂತರ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಜನ ಪಾಲ್ಗೊಂ ಡರು. ಸತ್ಯಸಾಯಿ ಸೇವಾಸಮಿತಿ ಭಕ್ತರಿಗೆ ಉಚಿತ ಮಜ್ಜಿಗೆ ಸೇವೆ ಸಲ್ಲಿಸಿತು.<br /> <br /> ತಾಲ್ಲೂಕಿನ ಗಬ್ಬಾನೆ ಪಂಚಲಿಂಗಸ್ವಾಮಿ ದುರ್ಗಾ ಪರಮೆಶ್ವರಿ ರಥೋತ್ಸವವು ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಉತ್ಸವದ ಅಂಗವಾಗಿ ತುಲಾಭಾರ ಸೇರಿದಂತೆ ಹಲವು ಹರಕೆಗಳನ್ನು ಭಕ್ತರು ಸಮರ್ಪಿಸಿದರು.<br /> ಕಾಚಕಲ್ ಸೋಮ್ಲಾಪುರ, ಮರಿತೊಟ್ಲು, ನುಗ್ಗಿ, ಬಿಂತ್ರವಳ್ಳಿ, ಕೊಪ್ಪ ಮೊದಲಾದೆಡೆಯಿಂದ ಸಾವಿರಾರು ಭಕ್ತರು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.<br /> <br /> <strong>ಕಡೂರು: ಕರುಮಾರಿಯಮ್ಮನ ಕರಗ <br /> ಕಡೂರು: </strong>ಪಟ್ಟಣದ ಕೆ.ಎಂ.ರಸ್ತೆಯಲ್ಲಿರುವ ಮಾತಾ ಕರುಮಾರಿಯಮ್ಮ ಕರಗ ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ನಡೆಯಿತು. ದೇವಿಯ ಕರಗವನ್ನು ಬ್ರಹ್ಮಚಾರಿ ವಿಜಯ್ ಹೊತ್ತು ತೆರಳಿದಾಗ ಸೇರಿದ್ದ ಸಾವಿರಾರು ಭಕ್ತರ ಘೋಷಣೆಗಳೊಂದಿಗೆ ಮೆರವಣಿಗೆ ತೆರಳಿತು. <br /> <br /> ಶುಕ್ರವಾರ ಬೆಳಗ್ಗಿನಿಂದ ದೇವಿಗೆ ಅಭಿಷೇಕ, ಕುಂಕುಮಾರ್ಚನೆ, ಮದುವಣಗಿತ್ತಿ ಸೇವೆ, ಕಂಕಣಧಾರಣೆ ಮೊದಲಾದ ಪೂಜೆ ಮಾಡಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಅರುಣ್ಕುಮಾರ್, ಟಿ.ಎನ್.ಎ.ಮೊದಲಿಯಾರ್, ಎ.ಮಣಿ, ಮಂಜುನಾಥ್, ಕೃಷ್ಣಪ್ಪ, ರವಿ, ಬಾಬು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. <br /> <br /> <strong>ಬಾಲಸುಬ್ರಹ್ಮಣ್ಯಸ್ವಾಮಿ ರಥೋತ್ಸವ <br /> ಚಿಕ್ಕಮಗಳೂರು:</strong> ಸಖರಾಯಪಟ್ಟಣದ ಶಿವಬಾಲ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.ಬೆಳಿಗ್ಗೆ ಸಿದ್ದಿವಿನಾಯಕಸ್ವಾಮಿ, ವಿಶ್ವನಾಥಸ್ವಾಮಿ, ವಿಶಾಲಾಕ್ಷಮ್ಮ ಅವರಿಗೆ ಅಭಿಷೇಕ, ಬಾಲಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಮಹಾಮಂಗಳಾರತಿ ನೆರವೇರಿಸಲಾ ಯಿತು. ಕಾವಡಿ ಸಮರ್ಪಣೆ, ಊರಿನ ಮುಖ್ಯ ಬೀದಿಗಳಲ್ಲಿ ವೆುರವಣಿಗೆ ಮೂಲಕ ದೇವರನ್ನು ಕರೆತರಲಾಯಿತು.<br /> ರಥೋತ್ಸವಕ್ಕೆ ಸಹಸ್ರಾರು ಮಂದಿ ಆಗಮಿಸಿದ್ದರು. ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>