<p>ಜಿಲ್ಲಾ ಕೇಂದ್ರವಾದ ರಾಯಚೂರಿನಲ್ಲೂ ಒಂದು ಕ್ರೀಡಾಂಗಣವಿದೆ. ಇದು ಹೆಸರಿಗಷ್ಟೇ ಕ್ರೀಡಾಂಗಣ!<br /> <br /> 2013ರ ಮಾರ್ಚ್ ತಿಂಗಳಲ್ಲಿ ‘ಪ್ರಜಾವಾಣಿ’ ಕ್ರೀಡಾ ಪುರವಣಿಯಲ್ಲಿ ಈ ಕ್ರೀಡಾಂಗಣದ ಹದಗೆಟ್ಟ ಸ್ಥಿತಿಯ ಬಗ್ಗೆ ವರದಿ ಪ್ರಕಟಗೊಂಡಿತ್ತು. ಆಗ ಸಂಬಂಧ ಪಟ್ಟ ಇಲಾಖೆ ಮತ್ತು ಜಿಲ್ಲಾಡಳಿತದವರು ಸರಸರನೆ ಕ್ರೀಡಾಂಗಣದಲ್ಲೆಲ್ಲಾ ಓಡಾಡಿದ್ದರು. ಸಭೆ ನಡೆಸಿ ದ್ದರು. ಕ್ರೀಡಾಂಗಣ ಅಭಿವೃದ್ಧಿಗೆ ₨ 22 ಕೋಟಿ ಮೊತ್ತದ ಪ್ರಸ್ತಾವನೆಯನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಯುವಜನ ಸಬಲೀಕರಣ ಇಲಾಖೆ ಅಧಿಕಾರಿಗಳೂ ಹೇಳಿದ್ದರು.<br /> <br /> ಒಂದು ವರ್ಷ ಉರುಳಿದೆ. ಕ್ರೀಡಾಂಗಣ ಸ್ಥಿತಿ ಹೇಗಿತ್ತೋ ಹಾಗೆಯೇ ಇದೆ ! ಸಂಪೂರ್ಣ ಹಾಳಾ ಗಿರುವ ಓಟದ ಟ್ರ್ಯಾಕ್, ಮಳೆ ಬಂದರೆ ಕೆರೆಯಂತಾ ಗುವ ಅರ್ಧ ಕ್ರೀಡಾಂಗಣ, ಯಾವುದೇ ಕ್ಷಣದಲ್ಲಾ ದರೂ ಕುಸಿಯಬಹುದು ಎಂಬಂತಿರುವ ಪ್ರೇಕ್ಷಕರ ಗ್ಯಾಲರಿ ಈ ಕ್ರೀಡಾಂಗಣದ ಹದಗೆಟ್ಟ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.<br /> <br /> ಶಿಥಿಲಾವಸ್ಥೆಯಲ್ಲಿರುವ ಗ್ಯಾಲರಿಯೂ ಬಿದ್ದು ಹೋಗಿ ಅಪಾಯ ಸಂಭವಿಸಬಹುದು ಎಂಬ ಆತಂಕ ಜಿಲ್ಲಾಡಳಿತಕ್ಕೆ ಕಾಡಿತ್ತು. ಹೀಗಾಗಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕೃಷಿ ವಿಶ್ವವಿದ್ಯಾಲಯ ಮೈದಾನಕ್ಕೆ ಸ್ಥಳಾಂತರಿಸುವ ಪ್ರಯತ್ನಕ್ಕೆ ಜಿಲ್ಲಾಡಳಿತ ಮುಂದಾಗಿತ್ತು.<br /> <br /> ಇಷ್ಟೆಲ್ಲ ಆದರೂ ಕ್ರೀಡಾಂಗಣಕ್ಕೆ ಅಭಿವೃದ್ಧಿ ಭಾಗ್ಯ ಬಂದಿಲ್ಲ! ಗ್ಯಾಲರಿಯನ್ನು ನೆಲಸಮಗೊಳಿಸಲು ಜಿಲ್ಲಾಧಿಕಾರಿಗಳು ಈಚೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಮಚಂದ್ರ ಕಣಬರಗಿ ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ಆದರೆ ಈವರೆಗೂ ಆ ಇಲಾಖೆಯಿಂದ ಅಂಥ ಯಾವುದೇ ಕಾಮಗಾರಿ ಆರಂಭವಾಗಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜಿಲ್ಲಾ ಕೇಂದ್ರವಾದ ರಾಯಚೂರಿನಲ್ಲೂ ಒಂದು ಕ್ರೀಡಾಂಗಣವಿದೆ. ಇದು ಹೆಸರಿಗಷ್ಟೇ ಕ್ರೀಡಾಂಗಣ!<br /> <br /> 2013ರ ಮಾರ್ಚ್ ತಿಂಗಳಲ್ಲಿ ‘ಪ್ರಜಾವಾಣಿ’ ಕ್ರೀಡಾ ಪುರವಣಿಯಲ್ಲಿ ಈ ಕ್ರೀಡಾಂಗಣದ ಹದಗೆಟ್ಟ ಸ್ಥಿತಿಯ ಬಗ್ಗೆ ವರದಿ ಪ್ರಕಟಗೊಂಡಿತ್ತು. ಆಗ ಸಂಬಂಧ ಪಟ್ಟ ಇಲಾಖೆ ಮತ್ತು ಜಿಲ್ಲಾಡಳಿತದವರು ಸರಸರನೆ ಕ್ರೀಡಾಂಗಣದಲ್ಲೆಲ್ಲಾ ಓಡಾಡಿದ್ದರು. ಸಭೆ ನಡೆಸಿ ದ್ದರು. ಕ್ರೀಡಾಂಗಣ ಅಭಿವೃದ್ಧಿಗೆ ₨ 22 ಕೋಟಿ ಮೊತ್ತದ ಪ್ರಸ್ತಾವನೆಯನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಯುವಜನ ಸಬಲೀಕರಣ ಇಲಾಖೆ ಅಧಿಕಾರಿಗಳೂ ಹೇಳಿದ್ದರು.<br /> <br /> ಒಂದು ವರ್ಷ ಉರುಳಿದೆ. ಕ್ರೀಡಾಂಗಣ ಸ್ಥಿತಿ ಹೇಗಿತ್ತೋ ಹಾಗೆಯೇ ಇದೆ ! ಸಂಪೂರ್ಣ ಹಾಳಾ ಗಿರುವ ಓಟದ ಟ್ರ್ಯಾಕ್, ಮಳೆ ಬಂದರೆ ಕೆರೆಯಂತಾ ಗುವ ಅರ್ಧ ಕ್ರೀಡಾಂಗಣ, ಯಾವುದೇ ಕ್ಷಣದಲ್ಲಾ ದರೂ ಕುಸಿಯಬಹುದು ಎಂಬಂತಿರುವ ಪ್ರೇಕ್ಷಕರ ಗ್ಯಾಲರಿ ಈ ಕ್ರೀಡಾಂಗಣದ ಹದಗೆಟ್ಟ ಸ್ಥಿತಿಗೆ ಹಿಡಿದ ಕನ್ನಡಿಯಂತಿದೆ.<br /> <br /> ಶಿಥಿಲಾವಸ್ಥೆಯಲ್ಲಿರುವ ಗ್ಯಾಲರಿಯೂ ಬಿದ್ದು ಹೋಗಿ ಅಪಾಯ ಸಂಭವಿಸಬಹುದು ಎಂಬ ಆತಂಕ ಜಿಲ್ಲಾಡಳಿತಕ್ಕೆ ಕಾಡಿತ್ತು. ಹೀಗಾಗಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕೃಷಿ ವಿಶ್ವವಿದ್ಯಾಲಯ ಮೈದಾನಕ್ಕೆ ಸ್ಥಳಾಂತರಿಸುವ ಪ್ರಯತ್ನಕ್ಕೆ ಜಿಲ್ಲಾಡಳಿತ ಮುಂದಾಗಿತ್ತು.<br /> <br /> ಇಷ್ಟೆಲ್ಲ ಆದರೂ ಕ್ರೀಡಾಂಗಣಕ್ಕೆ ಅಭಿವೃದ್ಧಿ ಭಾಗ್ಯ ಬಂದಿಲ್ಲ! ಗ್ಯಾಲರಿಯನ್ನು ನೆಲಸಮಗೊಳಿಸಲು ಜಿಲ್ಲಾಧಿಕಾರಿಗಳು ಈಚೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಮಚಂದ್ರ ಕಣಬರಗಿ ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ಆದರೆ ಈವರೆಗೂ ಆ ಇಲಾಖೆಯಿಂದ ಅಂಥ ಯಾವುದೇ ಕಾಮಗಾರಿ ಆರಂಭವಾಗಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>