<p><strong>ಬೆಂಗಳೂರು: </strong>ಯಲಹಂಕ ಸಮೀಪದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮಾರ್ಚ್ 30ರಿಂದ ಕಾಣೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪಾರ್ವತಿ (23) ಎಂಬುವರು ಕಾಣೆಯಾಗಿದ್ದು, ಈ ಸಂಬಂಧ ಯುವತಿಯ ತಂದೆ ಸದಾಶಿವ ಅವರು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು ಯುವತಿಯ ಪತ್ತೆ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದರು.<br /> <br /> ಈ ಮೊದಲು ದೇವನಹಳ್ಳಿಯಲ್ಲಿರುವ `ಸ್ವಯಂಕೃಷಿ~ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪಾರ್ವತಿ, ಮೂರು ತಿಂಗಳ ಹಿಂದೆ ಅಲ್ಲಿನ ಕೆಲಸ ಬಿಟ್ಟು ಬೇರೆ ಕಂಪೆನಿಗೆ ಸೇರಿದ್ದರು ಎಂದು ಪೊಲೀಸರು ಹೇಳಿದರು.<br /> `ಮಾರ್ಚ್ 30ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋದ ನನ್ನ ಮಗಳು, ಈವರೆಗೂ ಮನೆಗೆ ಹಿಂತಿರುಗಿಲ್ಲ. <br /> <br /> ಈ ಬಗ್ಗೆ ನಮ್ಮ ಸಂಬಂಧಿಕರ ಮನೆ ಸೇರಿದಂತೆ ಗೊತ್ತಿರುವ ಕಡೆಯೆಲ್ಲಾ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಮಾರ್ಚ್ 31ರಂದು `ಸ್ವಯಂಕೃಷಿ~ ಸಂಸ್ಥೆಯ ಸಂಸ್ಥಾಪಕ ವೀರೇಂದ್ರ ಬಾಬು ಅವರ ಪತ್ನಿ ಚಂದ್ರಿಕಾ ಅವರು ನನಗೆ ಕರೆ ಮಾಡಿ, ನಿಮ್ಮ ಮಗಳು ಮತ್ತು ನನ್ನ ಗಂಡ ಇಬ್ಬರೂ ಹೈದರಾಬಾದ್ನಲ್ಲಿದ್ದಾರೆ.<br /> <br /> ನಿಮ್ಮ ಮಗಳು ನನ್ನ ಗಂಡನನ್ನು ಬಿಡದೇ ಹೋದರೆ ನಾನು ನಿಮ್ಮ ಮನೆ ಮುಂದೆ ಗಲಾಟೆ ಮಾಡುತ್ತೇನೆ~ ಎಂದು ಹೇಳಿದರು ಎಂದು ಸದಾಶಿವ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಯಲಹಂಕ ಸಮೀಪದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮಾರ್ಚ್ 30ರಿಂದ ಕಾಣೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪಾರ್ವತಿ (23) ಎಂಬುವರು ಕಾಣೆಯಾಗಿದ್ದು, ಈ ಸಂಬಂಧ ಯುವತಿಯ ತಂದೆ ಸದಾಶಿವ ಅವರು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು ಯುವತಿಯ ಪತ್ತೆ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದರು.<br /> <br /> ಈ ಮೊದಲು ದೇವನಹಳ್ಳಿಯಲ್ಲಿರುವ `ಸ್ವಯಂಕೃಷಿ~ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪಾರ್ವತಿ, ಮೂರು ತಿಂಗಳ ಹಿಂದೆ ಅಲ್ಲಿನ ಕೆಲಸ ಬಿಟ್ಟು ಬೇರೆ ಕಂಪೆನಿಗೆ ಸೇರಿದ್ದರು ಎಂದು ಪೊಲೀಸರು ಹೇಳಿದರು.<br /> `ಮಾರ್ಚ್ 30ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋದ ನನ್ನ ಮಗಳು, ಈವರೆಗೂ ಮನೆಗೆ ಹಿಂತಿರುಗಿಲ್ಲ. <br /> <br /> ಈ ಬಗ್ಗೆ ನಮ್ಮ ಸಂಬಂಧಿಕರ ಮನೆ ಸೇರಿದಂತೆ ಗೊತ್ತಿರುವ ಕಡೆಯೆಲ್ಲಾ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಮಾರ್ಚ್ 31ರಂದು `ಸ್ವಯಂಕೃಷಿ~ ಸಂಸ್ಥೆಯ ಸಂಸ್ಥಾಪಕ ವೀರೇಂದ್ರ ಬಾಬು ಅವರ ಪತ್ನಿ ಚಂದ್ರಿಕಾ ಅವರು ನನಗೆ ಕರೆ ಮಾಡಿ, ನಿಮ್ಮ ಮಗಳು ಮತ್ತು ನನ್ನ ಗಂಡ ಇಬ್ಬರೂ ಹೈದರಾಬಾದ್ನಲ್ಲಿದ್ದಾರೆ.<br /> <br /> ನಿಮ್ಮ ಮಗಳು ನನ್ನ ಗಂಡನನ್ನು ಬಿಡದೇ ಹೋದರೆ ನಾನು ನಿಮ್ಮ ಮನೆ ಮುಂದೆ ಗಲಾಟೆ ಮಾಡುತ್ತೇನೆ~ ಎಂದು ಹೇಳಿದರು ಎಂದು ಸದಾಶಿವ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>