<p><strong>ಮಂಡ್ಯ: </strong> ನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವ ನಗರದ ಹೃದಯ ಭಾಗದಲ್ಲಿ ಇರುವ ಪ್ರಮುಖ ರಸ್ತೆಯೊಂದು ಕಳೆದ ನಾಲ್ಕೈದು ವರ್ಷಗಳಿಂದ ದುರಸ್ತಿ ಭಾಗ್ಯವನ್ನೇ ಕಾಣದೇ ವಾಹನ ಚಾಲಕರ ಪಾಲಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ.<br /> <br /> ಇದು, ಎಸ್.ಡಿ.ಜಯರಾಂ ವೃತ್ತದಿಂದ ಪೇಟೆ ಬೀದಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲು ರಸ್ತೆ. ಸಾಮಾನ್ಯ ರೈಲು ಸಂಚಾರದ ಸಂದರ್ಭದಲ್ಲಿ ಫ್ಯಾಕ್ಟರಿ ವೃತ್ತ ಮತ್ತು ಮಹಾವೀರ ವೃತ್ತದ ಬಳಿ ಗೇಟು ಮುಚ್ಚುವ ಕಾರಣ ಹೆಚ್ಚು ಬಳಕೆಯಾಗುವ ರಸ್ತೆಯೂ ಹೌದು.<br /> <br /> ರೈಲ್ವೆ ಮೇಲು ರಸ್ತೆಯಾದ್ದರಿಂದ ಗುಣಮಟ್ಟ ಉತ್ತಮವಾಗಿ ಇರಬೇಕು ಎಂದು ನಿರೀಕ್ಷಿಸುವುದು ಸಹಜ. ಆದರೆ, ರಸ್ತೆ ದುಃಸ್ಥಿತಿ ಹೇಳಲಾರದಷ್ಟು ಹದಗೆಟ್ಟಿದೆ. ರಸ್ತೆಯುದ್ದಕ್ಕೂ ಆರಂಭದಿಂದ ಅಂತ್ಯದವರೆಗೂ ಗುಂಡಿಗಳೇ ಇವೆ. ರಸ್ತೆಯ ಬದಿಯಲ್ಲಿ ತಡೆಗೋಡೆಗಳು ಕೂಡಾ ವಾಲಿದ್ದು, ಚಾಲಕರು ಸ್ವಲ್ಪ ಆಯತಪ್ಪಿದರೂ ಅಪಾಯ.<br /> <br /> ಮೈಷುಗರ್ ಕಾರ್ಖಾನೆಗೆ ಕಬ್ಬು ಸಾಗಿಸುವ ಎತ್ತಿನ ಗಾಡಿಗಳು, ನಾಗಮಂಗಲ ಕಡೆಗೆ ತೆರಳುವ ಖಾಸಗಿ ಬಸ್ಸುಗಳು, ಆಸ್ಪತ್ರೆ ರಸ್ತೆಯಿಂದ ಪೇಟೆ ಬೀದಿಗೆ ತಲುಪಬಯಸುವ ಅಸಂಖ್ಯ ವಾಹನಗಳಿಗೆ ಈ ಮೇಲು ರಸ್ತೆಯೇ ಏಕೈಕ ಮಾರ್ಗ.<br /> <br /> ಮೈಷುಗರ್ ಕಾರ್ಖಾನೆಗೆ ತೆರಳುವ ಜನಪ್ರತಿನಿಧಿಗಳು, ಮಂತ್ರಿಗಳು, ಅಧಿಕಾರಿಗಳು ಈ ರಸ್ತೆಯ ಮೂಲಕ ಹಾದು ಹೋದರೂ ಅವರು ಈ ರಸ್ತೆಗೆ ದುರಸ್ತಿ ಭಾಗ್ಯ ನೀಡುವತ್ತ ಗಮನವನ್ನೇ ಹರಿಸಿಲ್ಲ. ಅವರೂ ನಿರ್ಲಕ್ಷ್ಯ ತಳೆದಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.<br /> <br /> ಈ ರಸ್ತೆಯೂ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರಲಿದ್ದು, ಇಲಾಖೆಯು ಅದೇಕೋ ನಾಲ್ಕೈದು ವರ್ಷಗಳಿಂದ ಇತ್ತ ಗಮನಹರಿಸಿಲ್ಲ. ಈ ರಸ್ತೆಯು ನಮ್ಮ ವ್ಯಾಪ್ತಿಗೆ ಬರದ ಹಿನ್ನೆಲೆಯಲ್ಲಿ ದುರಸ್ತಿ ಮಾಡಲು ಬರುವುದಿಲ್ಲ ಎಂದು ನಗರಸಭೆಯೂ ಕೈಚೆಲ್ಲಿದೆ.<br /> <br /> ರಸ್ತೆಯ ದುಃಸ್ಥಿತಿ ನಮ್ಮ ಗಮನಕ್ಕೆ ಬಂದಿದೆ. ಆದರೆ, ಇದು ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರಲಿದ್ದು, ಆದಷ್ಟು ಬೇಗ ದುರಸ್ತಿ ಪಡಿಸುವಂತೆ ನಾವು ಗಮನ ಸೆಳೆದಿದ್ದೇವೆ ಎನ್ನುತ್ತಾರೆ ನಗರಸಭೆ ಅಧ್ಯಕ್ಷ ಎಂ.ಪಿ.ಅರುಣ್ಕುಮಾರ್.<br /> <br /> ಈ ಹಿಂದೆ ಲೋಕೋಪಯೋಗಿ ಇಲಾಖೆ ಎಇಇ ಆಗಿದ್ದ ದಯಾನಂದ್ ಅವರ ಗಮನಕ್ಕೆ ಮೂರು -ನಾಲ್ಕು ಬಾರಿ ತಂದಿದ್ದೆವು. ದುರಸ್ತಿ ಮಾಡುವ ಭರವಸೆ ನೀಡಿದ್ದರಾದರೂ, ವರ್ಗಾವಣೆ ಆದರು. ಅವರ ಜಾಗಕ್ಕೆಬಂದಿರುವ ಹೊಸ ಎಇಇ ಗಮನಕ್ಕೂ ತಂದಿದ್ದೇವೆ ಎಂದು ಪ್ರತಿಕ್ರಿಯಿಸಿದರು.<br /> <br /> ಮೊದಲೇ ಹಣಕಾಸು ಕೊರತೆ ಇರುವ ನಗರಸಭೆ ಈ ರಸ್ತೆ ದುರಸ್ತಿ ಕೈಗೆತ್ತಿಗೊಳ್ಳುವುದು ಕಷ್ಟ. ಅನುದಾನದ ಲಭ್ಯತೆ ಆಧರಿಸಿ ಸಾಧ್ಯತೆ ಇದ್ದರೆ ಗಮನ ಹರಿಸಬಹುದೇನೋ ಎಂದು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ವರ್ಷ ಗುಂಡಿಗಳಿಂದ ತುಂಬಿದ ರಸ್ತೆಯನ್ನು ಸಹಿಸಿಕೊಳ್ಳುವ ಅನಿವಾರ್ಯತೆ ವಾಹನ ಚಾಲಕರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ: </strong> ನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವ ನಗರದ ಹೃದಯ ಭಾಗದಲ್ಲಿ ಇರುವ ಪ್ರಮುಖ ರಸ್ತೆಯೊಂದು ಕಳೆದ ನಾಲ್ಕೈದು ವರ್ಷಗಳಿಂದ ದುರಸ್ತಿ ಭಾಗ್ಯವನ್ನೇ ಕಾಣದೇ ವಾಹನ ಚಾಲಕರ ಪಾಲಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ.<br /> <br /> ಇದು, ಎಸ್.ಡಿ.ಜಯರಾಂ ವೃತ್ತದಿಂದ ಪೇಟೆ ಬೀದಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲು ರಸ್ತೆ. ಸಾಮಾನ್ಯ ರೈಲು ಸಂಚಾರದ ಸಂದರ್ಭದಲ್ಲಿ ಫ್ಯಾಕ್ಟರಿ ವೃತ್ತ ಮತ್ತು ಮಹಾವೀರ ವೃತ್ತದ ಬಳಿ ಗೇಟು ಮುಚ್ಚುವ ಕಾರಣ ಹೆಚ್ಚು ಬಳಕೆಯಾಗುವ ರಸ್ತೆಯೂ ಹೌದು.<br /> <br /> ರೈಲ್ವೆ ಮೇಲು ರಸ್ತೆಯಾದ್ದರಿಂದ ಗುಣಮಟ್ಟ ಉತ್ತಮವಾಗಿ ಇರಬೇಕು ಎಂದು ನಿರೀಕ್ಷಿಸುವುದು ಸಹಜ. ಆದರೆ, ರಸ್ತೆ ದುಃಸ್ಥಿತಿ ಹೇಳಲಾರದಷ್ಟು ಹದಗೆಟ್ಟಿದೆ. ರಸ್ತೆಯುದ್ದಕ್ಕೂ ಆರಂಭದಿಂದ ಅಂತ್ಯದವರೆಗೂ ಗುಂಡಿಗಳೇ ಇವೆ. ರಸ್ತೆಯ ಬದಿಯಲ್ಲಿ ತಡೆಗೋಡೆಗಳು ಕೂಡಾ ವಾಲಿದ್ದು, ಚಾಲಕರು ಸ್ವಲ್ಪ ಆಯತಪ್ಪಿದರೂ ಅಪಾಯ.<br /> <br /> ಮೈಷುಗರ್ ಕಾರ್ಖಾನೆಗೆ ಕಬ್ಬು ಸಾಗಿಸುವ ಎತ್ತಿನ ಗಾಡಿಗಳು, ನಾಗಮಂಗಲ ಕಡೆಗೆ ತೆರಳುವ ಖಾಸಗಿ ಬಸ್ಸುಗಳು, ಆಸ್ಪತ್ರೆ ರಸ್ತೆಯಿಂದ ಪೇಟೆ ಬೀದಿಗೆ ತಲುಪಬಯಸುವ ಅಸಂಖ್ಯ ವಾಹನಗಳಿಗೆ ಈ ಮೇಲು ರಸ್ತೆಯೇ ಏಕೈಕ ಮಾರ್ಗ.<br /> <br /> ಮೈಷುಗರ್ ಕಾರ್ಖಾನೆಗೆ ತೆರಳುವ ಜನಪ್ರತಿನಿಧಿಗಳು, ಮಂತ್ರಿಗಳು, ಅಧಿಕಾರಿಗಳು ಈ ರಸ್ತೆಯ ಮೂಲಕ ಹಾದು ಹೋದರೂ ಅವರು ಈ ರಸ್ತೆಗೆ ದುರಸ್ತಿ ಭಾಗ್ಯ ನೀಡುವತ್ತ ಗಮನವನ್ನೇ ಹರಿಸಿಲ್ಲ. ಅವರೂ ನಿರ್ಲಕ್ಷ್ಯ ತಳೆದಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.<br /> <br /> ಈ ರಸ್ತೆಯೂ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರಲಿದ್ದು, ಇಲಾಖೆಯು ಅದೇಕೋ ನಾಲ್ಕೈದು ವರ್ಷಗಳಿಂದ ಇತ್ತ ಗಮನಹರಿಸಿಲ್ಲ. ಈ ರಸ್ತೆಯು ನಮ್ಮ ವ್ಯಾಪ್ತಿಗೆ ಬರದ ಹಿನ್ನೆಲೆಯಲ್ಲಿ ದುರಸ್ತಿ ಮಾಡಲು ಬರುವುದಿಲ್ಲ ಎಂದು ನಗರಸಭೆಯೂ ಕೈಚೆಲ್ಲಿದೆ.<br /> <br /> ರಸ್ತೆಯ ದುಃಸ್ಥಿತಿ ನಮ್ಮ ಗಮನಕ್ಕೆ ಬಂದಿದೆ. ಆದರೆ, ಇದು ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರಲಿದ್ದು, ಆದಷ್ಟು ಬೇಗ ದುರಸ್ತಿ ಪಡಿಸುವಂತೆ ನಾವು ಗಮನ ಸೆಳೆದಿದ್ದೇವೆ ಎನ್ನುತ್ತಾರೆ ನಗರಸಭೆ ಅಧ್ಯಕ್ಷ ಎಂ.ಪಿ.ಅರುಣ್ಕುಮಾರ್.<br /> <br /> ಈ ಹಿಂದೆ ಲೋಕೋಪಯೋಗಿ ಇಲಾಖೆ ಎಇಇ ಆಗಿದ್ದ ದಯಾನಂದ್ ಅವರ ಗಮನಕ್ಕೆ ಮೂರು -ನಾಲ್ಕು ಬಾರಿ ತಂದಿದ್ದೆವು. ದುರಸ್ತಿ ಮಾಡುವ ಭರವಸೆ ನೀಡಿದ್ದರಾದರೂ, ವರ್ಗಾವಣೆ ಆದರು. ಅವರ ಜಾಗಕ್ಕೆಬಂದಿರುವ ಹೊಸ ಎಇಇ ಗಮನಕ್ಕೂ ತಂದಿದ್ದೇವೆ ಎಂದು ಪ್ರತಿಕ್ರಿಯಿಸಿದರು.<br /> <br /> ಮೊದಲೇ ಹಣಕಾಸು ಕೊರತೆ ಇರುವ ನಗರಸಭೆ ಈ ರಸ್ತೆ ದುರಸ್ತಿ ಕೈಗೆತ್ತಿಗೊಳ್ಳುವುದು ಕಷ್ಟ. ಅನುದಾನದ ಲಭ್ಯತೆ ಆಧರಿಸಿ ಸಾಧ್ಯತೆ ಇದ್ದರೆ ಗಮನ ಹರಿಸಬಹುದೇನೋ ಎಂದು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ವರ್ಷ ಗುಂಡಿಗಳಿಂದ ತುಂಬಿದ ರಸ್ತೆಯನ್ನು ಸಹಿಸಿಕೊಳ್ಳುವ ಅನಿವಾರ್ಯತೆ ವಾಹನ ಚಾಲಕರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>