<p><strong>ಮುದ್ದೇಬಿಹಾಳ:</strong> ಪಟ್ಟಣದಲ್ಲಿ ಹಳೆ ತಹಶೀಲ್ದಾರ್ ಕಚೇರಿ ಹತ್ತಿರದ ಮುಖ್ಯ ರಸ್ತೆಯಿಂದ ಕೆರೆಯತನಕ ಮಾಡಲಾಗುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡುವಂತೆ ಆಗ್ರಹಿಸಿ ಪಟ್ಟಣದ ವ್ಯಾಪಾರಸ್ಥರು ಪುರಸಭೆ ಮುಖ್ಯಾಧಿಕಾರಿ ಎಂ.ಆರ್.ದಾಯಿ ಅವರನ್ನು ಆಗ್ರಹಿಸಿದರು.<br /> <br /> ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವಾಸುದೇವ ಶಾಸ್ತ್ರಿ ಹಾಗೂ ಬುಡ್ಡಾ ಕುಂಟೋಜಿ, ಸ್ಥಳದಲ್ಲಿಯೇ ಇದ್ದ ಮುಖ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದು ಮುಖ್ಯ ರಸ್ತೆ, ಕಾಮಗಾರಿ ಗುಣಮಟ್ಟದಿಂದ ನಡೆಯಬೇಕು. ಇದರ ಎಸ್ಟಿಮೇಟ್ ಎಷ್ಟು ? ಗುತ್ತಿಗೆದಾರರು ಯಾರು?<br /> <br /> ಕಾಮಗಾರಿಯ ಮಾಹಿತಿ ನೀಡುವ ಫಲಕವನ್ನು ಕಾಮಗಾರಿ ನಡೆಯವ ಸ್ಥಳದಲ್ಲಿ ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿದರು. ಪುರಸಭೆ ಮುಖ್ಯಾಧಿಕಾರಿ ದಾಯಿ ಕೂಡಲೇ ಪುರಸಭೆಯ ಎಂಜಿನಿಯರ್ ಶಾಸ್ತ್ರಿ ಅವರಿಗೆ ಮಾಹಿತಿ ಫಲಕ ಹಾಕುವಂತೆ ಸೂಚಿಸಿದರು. ನಗರೋತ್ಥಾನ ಯೋಜನೆಯಡಿಯಲ್ಲಿ ₹ 42 ಲಕ್ಷದಲ್ಲಿ ಕಾಮಗಾರಿ ನಡೆಯುತ್ತಿದೆ, ಇದನ್ನು ಗುತ್ತಿಗೆದಾರರಾದ ಜಮ್ಮಲ ದಿನ್ನಿಯ ಪಾಟೀಲ ಎಂಬುವವರು ಮಾಡುತ್ತಿದ್ದಾರೆ. ಕಾಮಗಾರಿಯ ಗುಣಮಟ್ಟ ಪರೀಕ್ಷಿಸಲು ಥರ್ಡ್ ಪಾರ್ಟಿಯವರೂ ಬಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.<br /> <br /> ಪಟ್ಟಣದ ಮುಖ್ಯ ರಸ್ತೆ ಇದಾಗಿದ್ದು, ಕಾಮಗಾರಿ ಗುಣಮಟ್ಟದಿಂದ ನಡೆಯಬೇಕು ಹಾಗೂ ರಸ್ತೆ ಬದಿಗೆ ಹಚ್ಚುವ ಸಣ್ಣ ಪುಟ್ಟ ಒತ್ತು ಗಾಡಿಗಳು ಪ್ರಯಾಣಿಕರ ಸಂಚಾರಕ್ಕೆ ಅಡ್ಡಿಯಾಗದಂತೆ ಅವರಿಗೆ ಬೇರೆ ಕಡೆ ಸ್ಥಳ ನೀಡಬೇಕು ಎಂದು ಸಮಾಜ ಸೇವಕ ಬಾಬು ಬಿರಾದಾರ ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದ್ದೇಬಿಹಾಳ:</strong> ಪಟ್ಟಣದಲ್ಲಿ ಹಳೆ ತಹಶೀಲ್ದಾರ್ ಕಚೇರಿ ಹತ್ತಿರದ ಮುಖ್ಯ ರಸ್ತೆಯಿಂದ ಕೆರೆಯತನಕ ಮಾಡಲಾಗುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡುವಂತೆ ಆಗ್ರಹಿಸಿ ಪಟ್ಟಣದ ವ್ಯಾಪಾರಸ್ಥರು ಪುರಸಭೆ ಮುಖ್ಯಾಧಿಕಾರಿ ಎಂ.ಆರ್.ದಾಯಿ ಅವರನ್ನು ಆಗ್ರಹಿಸಿದರು.<br /> <br /> ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವಾಸುದೇವ ಶಾಸ್ತ್ರಿ ಹಾಗೂ ಬುಡ್ಡಾ ಕುಂಟೋಜಿ, ಸ್ಥಳದಲ್ಲಿಯೇ ಇದ್ದ ಮುಖ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದು ಮುಖ್ಯ ರಸ್ತೆ, ಕಾಮಗಾರಿ ಗುಣಮಟ್ಟದಿಂದ ನಡೆಯಬೇಕು. ಇದರ ಎಸ್ಟಿಮೇಟ್ ಎಷ್ಟು ? ಗುತ್ತಿಗೆದಾರರು ಯಾರು?<br /> <br /> ಕಾಮಗಾರಿಯ ಮಾಹಿತಿ ನೀಡುವ ಫಲಕವನ್ನು ಕಾಮಗಾರಿ ನಡೆಯವ ಸ್ಥಳದಲ್ಲಿ ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿದರು. ಪುರಸಭೆ ಮುಖ್ಯಾಧಿಕಾರಿ ದಾಯಿ ಕೂಡಲೇ ಪುರಸಭೆಯ ಎಂಜಿನಿಯರ್ ಶಾಸ್ತ್ರಿ ಅವರಿಗೆ ಮಾಹಿತಿ ಫಲಕ ಹಾಕುವಂತೆ ಸೂಚಿಸಿದರು. ನಗರೋತ್ಥಾನ ಯೋಜನೆಯಡಿಯಲ್ಲಿ ₹ 42 ಲಕ್ಷದಲ್ಲಿ ಕಾಮಗಾರಿ ನಡೆಯುತ್ತಿದೆ, ಇದನ್ನು ಗುತ್ತಿಗೆದಾರರಾದ ಜಮ್ಮಲ ದಿನ್ನಿಯ ಪಾಟೀಲ ಎಂಬುವವರು ಮಾಡುತ್ತಿದ್ದಾರೆ. ಕಾಮಗಾರಿಯ ಗುಣಮಟ್ಟ ಪರೀಕ್ಷಿಸಲು ಥರ್ಡ್ ಪಾರ್ಟಿಯವರೂ ಬಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.<br /> <br /> ಪಟ್ಟಣದ ಮುಖ್ಯ ರಸ್ತೆ ಇದಾಗಿದ್ದು, ಕಾಮಗಾರಿ ಗುಣಮಟ್ಟದಿಂದ ನಡೆಯಬೇಕು ಹಾಗೂ ರಸ್ತೆ ಬದಿಗೆ ಹಚ್ಚುವ ಸಣ್ಣ ಪುಟ್ಟ ಒತ್ತು ಗಾಡಿಗಳು ಪ್ರಯಾಣಿಕರ ಸಂಚಾರಕ್ಕೆ ಅಡ್ಡಿಯಾಗದಂತೆ ಅವರಿಗೆ ಬೇರೆ ಕಡೆ ಸ್ಥಳ ನೀಡಬೇಕು ಎಂದು ಸಮಾಜ ಸೇವಕ ಬಾಬು ಬಿರಾದಾರ ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>