<p><span style="font-size: 26px;"><strong>ಧಾರವಾಡ: </strong>`ಯಾರ ಮನೆಯಲ್ಲಿ ಗುಬ್ಬಿಗಳು ಇರುತ್ತವೆಯೋ, ಆ ಮನೆ ಮತ್ತು ಸುತ್ತಲಿನ ವಾತಾವರಣ ಶುದ್ಧವಿದೆ ಎಂದು ಅರ್ಥ' ಎಂದು ಪಕ್ಷಿತಜ್ಞ ಆರ್.ಜಿ ತಿಮ್ಮೋಪುರ ತಿಳಿಸಿದರು.</span><br /> <br /> ಗ್ರೀನ್ ಆರ್ಮಿ ನಡೆಸುತ್ತಿರುವ ಪರಿಸರ ಸಪ್ತಾಹದ ಅಂಗವಾಗಿ `ಗುಬ್ಬಿಯೇ ಮರಳಿ ಬಾ ಗೂಡಿಗೆ' ಯೋಜನೆಯ ಅಂಗವಾಗಿ ಮಂಗಳವಾರ ಮಕ್ಕಳಿಗೆ ಗುಬ್ಬಿ ಗೂಡುಗಳನ್ನು ವಿತರಿಸಿ ಮಾತನಾಡಿದ ಅವರು, `ಅಷ್ಟೇ ಅಲ್ಲದೇ, ಗುಬ್ಬಿಗಳು ಇಂದಿನ ದಿನಗಳಲ್ಲಿ ಉಪಯೋಗಿಸುವ ಅಹಾರ ಪದ್ಧತಿಯಿಂದ, ಸಿರಿಧಾನ್ಯಗಳ ಕೊರತೆಯಿಂದ, ರಾಸಾಯನಿಕ ಮಿಶ್ರಿತ ನೀರಿನಿಂದ, ಮೊಬೈಲ್ ತರಂಗಗಳಿಂದ ಸಾಮಾನ್ಯ ಗುಬ್ಬಿ ಸಂಕುಲವು ನಶಿಸಿ ಹೋಗಿದೆ. ಅಳಿದುಳಿದ ಕೆಲವೇ ಗುಬ್ಬಿಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದರು.<br /> <br /> ಡಾ.ಧೀರಜ ವೀರನಗೌಡರ, ಗ್ರೀನ್ ಆರ್ಮಿ ಅಧ್ಯಕ್ಷ ಪ್ರಕಾಶ ಗೌಡರ, ಓಂ ಶಾಲೆಯ ಸಂಸ್ಥಾಪಕ ಬಸವರಾಜ ಯಗಟಿಮಠ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕಿ ರೂಪಾಲಿ ಅವರಗೇರಿಮಠ ವಹಿಸಿದ್ದರು. ಶಾಲಾ ಶಿಕ್ಷಕ ಫಕ್ಕೀರಪ್ಪ ಸೋಮಣ್ಣವರ ಪರಿಸರದ ಸದ್ಯದ ಸ್ಥಿತಿಗತಿಯ ಬಗ್ಗೆ ಮಕ್ಕಳಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಧಾರವಾಡ: </strong>`ಯಾರ ಮನೆಯಲ್ಲಿ ಗುಬ್ಬಿಗಳು ಇರುತ್ತವೆಯೋ, ಆ ಮನೆ ಮತ್ತು ಸುತ್ತಲಿನ ವಾತಾವರಣ ಶುದ್ಧವಿದೆ ಎಂದು ಅರ್ಥ' ಎಂದು ಪಕ್ಷಿತಜ್ಞ ಆರ್.ಜಿ ತಿಮ್ಮೋಪುರ ತಿಳಿಸಿದರು.</span><br /> <br /> ಗ್ರೀನ್ ಆರ್ಮಿ ನಡೆಸುತ್ತಿರುವ ಪರಿಸರ ಸಪ್ತಾಹದ ಅಂಗವಾಗಿ `ಗುಬ್ಬಿಯೇ ಮರಳಿ ಬಾ ಗೂಡಿಗೆ' ಯೋಜನೆಯ ಅಂಗವಾಗಿ ಮಂಗಳವಾರ ಮಕ್ಕಳಿಗೆ ಗುಬ್ಬಿ ಗೂಡುಗಳನ್ನು ವಿತರಿಸಿ ಮಾತನಾಡಿದ ಅವರು, `ಅಷ್ಟೇ ಅಲ್ಲದೇ, ಗುಬ್ಬಿಗಳು ಇಂದಿನ ದಿನಗಳಲ್ಲಿ ಉಪಯೋಗಿಸುವ ಅಹಾರ ಪದ್ಧತಿಯಿಂದ, ಸಿರಿಧಾನ್ಯಗಳ ಕೊರತೆಯಿಂದ, ರಾಸಾಯನಿಕ ಮಿಶ್ರಿತ ನೀರಿನಿಂದ, ಮೊಬೈಲ್ ತರಂಗಗಳಿಂದ ಸಾಮಾನ್ಯ ಗುಬ್ಬಿ ಸಂಕುಲವು ನಶಿಸಿ ಹೋಗಿದೆ. ಅಳಿದುಳಿದ ಕೆಲವೇ ಗುಬ್ಬಿಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದರು.<br /> <br /> ಡಾ.ಧೀರಜ ವೀರನಗೌಡರ, ಗ್ರೀನ್ ಆರ್ಮಿ ಅಧ್ಯಕ್ಷ ಪ್ರಕಾಶ ಗೌಡರ, ಓಂ ಶಾಲೆಯ ಸಂಸ್ಥಾಪಕ ಬಸವರಾಜ ಯಗಟಿಮಠ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕಿ ರೂಪಾಲಿ ಅವರಗೇರಿಮಠ ವಹಿಸಿದ್ದರು. ಶಾಲಾ ಶಿಕ್ಷಕ ಫಕ್ಕೀರಪ್ಪ ಸೋಮಣ್ಣವರ ಪರಿಸರದ ಸದ್ಯದ ಸ್ಥಿತಿಗತಿಯ ಬಗ್ಗೆ ಮಕ್ಕಳಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>