<p>ಬೆಂಗಳೂರು: ನಗರದಲ್ಲಿ ಮಂಗಳವಾರ ಗುರುಪೂರ್ಣಿಮೆ ಪ್ರಯುಕ್ತ ಹಿಂದೂ, ಬೌದ್ದ ಮತ್ತು ಜೈನ ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು. ಗುರುರೂಪದಲ್ಲಿ ಜನರಿಗೆ ಮಾರ್ಗದರ್ಶನ ನೀಡಿದ ಗುರು ರಾಘವೇಂದ್ರಸ್ವಾಮಿ, ಶಿರಡಿ ಸಾಯಿಬಾಬಾ, ಬುದ್ದ ಹಾಗೂ ಮಹಾವೀರ ಮಂದಿರಗಳಲ್ಲಿ ಅಭಿಷೇಕ, ಹೋಮ-ಹವನ ಹಾಗೂ ಸಾಮೂಹಿಕ ಪ್ರಾರ್ಥನೆ, ಮಹಾಮಂಗಳಾರತಿ ಜರುಗಿತು.<br /> <br /> ಭಕ್ತಾದಿಗಳು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಗುರುವಿನ ಅನುಗ್ರಹಕ್ಕೆ ಪಾತ್ರರಾದರು. ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಗೆ ಗುರುದೇವತಾ ಪೂಜೆ ಮತ್ತು ವ್ಯಾಸ ಮಂತ್ರಾಕ್ಷತೆಯ ಕಾರ್ಯಕ್ರಮ ನಡೆಯಿತು.<br /> <br /> ಯಶವಂತಪುರ ವೃತ್ತದಲ್ಲಿರುವ ಗಾಯತ್ರಿ ದೇವಸ್ಥಾನದಲ್ಲಿ ಮಹಾಯಾಗ ಮತ್ತು ದೇವಿಗೆ ಅಭಿಷೇಕ ಹಮ್ಮಿಕೊಳ್ಳಲಾಗಿತ್ತು.ದೇವಸ್ಥಾನದ ಸಂಸ್ಥಾಪನಾಚಾರ್ಯರಾದ ಚಿದಂಬರ ದೀಕ್ಷಿತ ಸ್ವಾಮೀಜಿ ಅವರಿಗೆ ಭಕ್ತರಿಂದ ಗುರುವಂದನಾ ಕಾರ್ಯಕ್ರಮ ನೆರವೇರಿಸಲಾಯಿತು.<br /> <br /> ಸೌತ್ ಎಂಡ್ ವೃತ್ತದಲ್ಲಿರುವ ಭಗವಾನ್ ಶ್ರೀ 1008 ಆದಿನಾಥ ಜಿನಮಂದಿರದಲ್ಲಿ ಚಾತುರ್ಮಾಸ ಸಮಾರಂಭ ನಡೆಯಿತು. ಬೌದ್ದ ಬಿಕ್ಕುಗಳು ಗಾಂಧಿ ನಗರದಲ್ಲಿರುವ `ಮಹಾಬೋಧಿ~ ಬೌದ್ದ ವಿಹಾರದಲ್ಲಿ ಬುದ್ದನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.<br /> <br /> `ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ~ ಎಂಬ ದಾಸರ ವಾಣಿಯಂತೆ ನೃತ್ಯಪಟು ವೈಜಯಂತಿ ಕಾಶಿ ಅವರ ಶಿಷ್ಯ ಗುರುರಾಜ ಅವರು ನಾಟ್ಯ ಕಲಿಸಿದ ಗುರುವಿಗೆ ನಮನ ಸಲ್ಲಿಸಲು ಕೆಂಗೇರಿಯಲ್ಲಿರುವ ಶಂಕರಮಠದಲ್ಲಿ `ಗುರುಭ್ಯೋ ನಮಃ~ ಭರತನಾಟ್ಯ ಪ್ರದರ್ಶಿಸಿದರು. <br /> <br /> ಪತಂಜಲಿ ಯೋಗಾಶ್ರಮ ಟ್ರಸ್ಟ್ ಗುರುಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಕಾಶ್ ಯೋಗಿ ಗುರೂಜಿ ವಿಶೇಷ ಉಪನ್ಯಾಸ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ನಗರದಲ್ಲಿ ಮಂಗಳವಾರ ಗುರುಪೂರ್ಣಿಮೆ ಪ್ರಯುಕ್ತ ಹಿಂದೂ, ಬೌದ್ದ ಮತ್ತು ಜೈನ ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು. ಗುರುರೂಪದಲ್ಲಿ ಜನರಿಗೆ ಮಾರ್ಗದರ್ಶನ ನೀಡಿದ ಗುರು ರಾಘವೇಂದ್ರಸ್ವಾಮಿ, ಶಿರಡಿ ಸಾಯಿಬಾಬಾ, ಬುದ್ದ ಹಾಗೂ ಮಹಾವೀರ ಮಂದಿರಗಳಲ್ಲಿ ಅಭಿಷೇಕ, ಹೋಮ-ಹವನ ಹಾಗೂ ಸಾಮೂಹಿಕ ಪ್ರಾರ್ಥನೆ, ಮಹಾಮಂಗಳಾರತಿ ಜರುಗಿತು.<br /> <br /> ಭಕ್ತಾದಿಗಳು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಗುರುವಿನ ಅನುಗ್ರಹಕ್ಕೆ ಪಾತ್ರರಾದರು. ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಗೆ ಗುರುದೇವತಾ ಪೂಜೆ ಮತ್ತು ವ್ಯಾಸ ಮಂತ್ರಾಕ್ಷತೆಯ ಕಾರ್ಯಕ್ರಮ ನಡೆಯಿತು.<br /> <br /> ಯಶವಂತಪುರ ವೃತ್ತದಲ್ಲಿರುವ ಗಾಯತ್ರಿ ದೇವಸ್ಥಾನದಲ್ಲಿ ಮಹಾಯಾಗ ಮತ್ತು ದೇವಿಗೆ ಅಭಿಷೇಕ ಹಮ್ಮಿಕೊಳ್ಳಲಾಗಿತ್ತು.ದೇವಸ್ಥಾನದ ಸಂಸ್ಥಾಪನಾಚಾರ್ಯರಾದ ಚಿದಂಬರ ದೀಕ್ಷಿತ ಸ್ವಾಮೀಜಿ ಅವರಿಗೆ ಭಕ್ತರಿಂದ ಗುರುವಂದನಾ ಕಾರ್ಯಕ್ರಮ ನೆರವೇರಿಸಲಾಯಿತು.<br /> <br /> ಸೌತ್ ಎಂಡ್ ವೃತ್ತದಲ್ಲಿರುವ ಭಗವಾನ್ ಶ್ರೀ 1008 ಆದಿನಾಥ ಜಿನಮಂದಿರದಲ್ಲಿ ಚಾತುರ್ಮಾಸ ಸಮಾರಂಭ ನಡೆಯಿತು. ಬೌದ್ದ ಬಿಕ್ಕುಗಳು ಗಾಂಧಿ ನಗರದಲ್ಲಿರುವ `ಮಹಾಬೋಧಿ~ ಬೌದ್ದ ವಿಹಾರದಲ್ಲಿ ಬುದ್ದನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.<br /> <br /> `ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ~ ಎಂಬ ದಾಸರ ವಾಣಿಯಂತೆ ನೃತ್ಯಪಟು ವೈಜಯಂತಿ ಕಾಶಿ ಅವರ ಶಿಷ್ಯ ಗುರುರಾಜ ಅವರು ನಾಟ್ಯ ಕಲಿಸಿದ ಗುರುವಿಗೆ ನಮನ ಸಲ್ಲಿಸಲು ಕೆಂಗೇರಿಯಲ್ಲಿರುವ ಶಂಕರಮಠದಲ್ಲಿ `ಗುರುಭ್ಯೋ ನಮಃ~ ಭರತನಾಟ್ಯ ಪ್ರದರ್ಶಿಸಿದರು. <br /> <br /> ಪತಂಜಲಿ ಯೋಗಾಶ್ರಮ ಟ್ರಸ್ಟ್ ಗುರುಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಕಾಶ್ ಯೋಗಿ ಗುರೂಜಿ ವಿಶೇಷ ಉಪನ್ಯಾಸ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>