<p><strong>ರಾಯಚೂರು: </strong>ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಸುಯತೀಂದ್ರತೀರ್ಥ ಸ್ವಾಮೀಜಿ ಮತ್ತು ಉತ್ತರಾಧಿಕಾರಿ ಸುಬುಧೇಂದ್ರತೀರ್ಥ ಸ್ವಾಮೀಜಿ ಅವರು 393ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 419ನೇ ವರ್ಧಂತಿ ಉತ್ಸವ ಕಾರ್ಯಕ್ರಮವನ್ನೊಳಗೊಂಡ ‘ಶ್ರೀ ರಾಘವೇಂದ್ರ ಗುರುಭಕ್ತಿ ಉತ್ಸವ’ಕ್ಕೆ ಚಾಲನೆ ಸೋಮವಾರ ಚಾಲನೆ ನೀಡಿದರು.<br /> <br /> ಬೆಳಿಗ್ಗೆ ರಾಘವೇಂದ್ರಸ್ವಾಮಿಗಳ ಮೂಲಬೃಂದಾವನಕ್ಕೆ ಅಭಿಷೇಕ ನಡೆಯಿತು. ಅನಂತರ ರಾಯರ ಮೂಲ ಪಾದುಕೆಗಳಿಗೆ ಪೀಠಾಧಿಪತಿ ಮತ್ತು ಉತ್ತರಾಧಿಕಾರಿಗಳಿಬ್ಬರು ಪುಷ್ಪ, ಕನಕ, ಮುತ್ತು, ರತ್ನಗಳಿಂದ ಅಭಿಷೇಕ ಮಾಡಿದರು.<br /> <br /> ನವರತ್ನ ಖಚಿತ ಚಿನ್ನದ ರಥೋತ್ಸವ ನಡೆಯಿತು. ಚಿನ್ನದ ಪಲ್ಲಕ್ಕಿಯಲ್ಲಿ ರಾಘವೇಂದ್ರಸ್ವಾಮಿಗಳ ಮೂಲ ಪಾದುಕೆಗಳನ್ನಿಟ್ಟು ಉತ್ಸವ ಮಾಡಲಾಯಿತು. ಸಾವಿರಾರು ಭಕ್ತರು ಪಟ್ಟಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಗುರುಭಕ್ತಿ ಉತ್ಸವವು ಮಾ.8ರವರೆಗೆ ಮುಂದುವರಿಯಲಿದೆ.<br /> <br /> ಪೀಠಾಧಿಪತಿ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್, ಆಡಳಿತಾಧಿಕಾರಿ ಆರ್. ಪ್ರಭಾಕರರಾವ್, ರಾಜಾ ಎಸ್. ಗಿರಿರಾಜಾಚಾರ್ಯ, ವಿದ್ವಾಂಸರಾದ ವಿ.ಆರ್ ಪಂಚಮುಖಿ, ಎನ್. ವಾದಿರಾಜಾಚಾರ್ಯ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ಮಂತ್ರಾಲಯದ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಸುಯತೀಂದ್ರತೀರ್ಥ ಸ್ವಾಮೀಜಿ ಮತ್ತು ಉತ್ತರಾಧಿಕಾರಿ ಸುಬುಧೇಂದ್ರತೀರ್ಥ ಸ್ವಾಮೀಜಿ ಅವರು 393ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 419ನೇ ವರ್ಧಂತಿ ಉತ್ಸವ ಕಾರ್ಯಕ್ರಮವನ್ನೊಳಗೊಂಡ ‘ಶ್ರೀ ರಾಘವೇಂದ್ರ ಗುರುಭಕ್ತಿ ಉತ್ಸವ’ಕ್ಕೆ ಚಾಲನೆ ಸೋಮವಾರ ಚಾಲನೆ ನೀಡಿದರು.<br /> <br /> ಬೆಳಿಗ್ಗೆ ರಾಘವೇಂದ್ರಸ್ವಾಮಿಗಳ ಮೂಲಬೃಂದಾವನಕ್ಕೆ ಅಭಿಷೇಕ ನಡೆಯಿತು. ಅನಂತರ ರಾಯರ ಮೂಲ ಪಾದುಕೆಗಳಿಗೆ ಪೀಠಾಧಿಪತಿ ಮತ್ತು ಉತ್ತರಾಧಿಕಾರಿಗಳಿಬ್ಬರು ಪುಷ್ಪ, ಕನಕ, ಮುತ್ತು, ರತ್ನಗಳಿಂದ ಅಭಿಷೇಕ ಮಾಡಿದರು.<br /> <br /> ನವರತ್ನ ಖಚಿತ ಚಿನ್ನದ ರಥೋತ್ಸವ ನಡೆಯಿತು. ಚಿನ್ನದ ಪಲ್ಲಕ್ಕಿಯಲ್ಲಿ ರಾಘವೇಂದ್ರಸ್ವಾಮಿಗಳ ಮೂಲ ಪಾದುಕೆಗಳನ್ನಿಟ್ಟು ಉತ್ಸವ ಮಾಡಲಾಯಿತು. ಸಾವಿರಾರು ಭಕ್ತರು ಪಟ್ಟಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಗುರುಭಕ್ತಿ ಉತ್ಸವವು ಮಾ.8ರವರೆಗೆ ಮುಂದುವರಿಯಲಿದೆ.<br /> <br /> ಪೀಠಾಧಿಪತಿ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್, ಆಡಳಿತಾಧಿಕಾರಿ ಆರ್. ಪ್ರಭಾಕರರಾವ್, ರಾಜಾ ಎಸ್. ಗಿರಿರಾಜಾಚಾರ್ಯ, ವಿದ್ವಾಂಸರಾದ ವಿ.ಆರ್ ಪಂಚಮುಖಿ, ಎನ್. ವಾದಿರಾಜಾಚಾರ್ಯ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>