<p><strong>ಹಿರಿಯೂರು:</strong> ತಾಲ್ಲೂಕಿನ ನಂದಿಹಳ್ಳಿಯ ರಂಗನಾಥಸ್ವಾಮಿ ದೇಗುಲದ ಮುಂಭಾಗದ ಬಯಲಿನಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಅವರು ರಾಸುಗಳಿಗೆ ಹುಲ್ಲು ಹಾಕುವ ಮೂಲಕ ಗೋಶಾಲೆ ಉದ್ಘಾಟಿಸಿದರು.<br /> <br /> ಹಣ ಕೊಟ್ಟರೂ ಮೇವು ಸಿಗುವುದು ಕಷ್ಟವಾಗಿದೆ. ಇಡೀ ದೇಶದಲ್ಲಿ ಬರಗಾಲ ಇರುವ ಕಾರಣ ಎಲ್ಲೂ ಮೇವಿನ ಲಭ್ಯತೆ ಇಲ್ಲ. ಪ್ರಯುಕ್ತ ರೈತರು ಮೇವನ್ನು ಜೋಪಾನವಾಗಿ ಬಳಸಬೇಕು. ಒಂದು ಕಡ್ಡಿಯೂ ಹಾಳಾಗದಂತೆ ಕತ್ತರಿಸಿ ಬಳಸಿ. ದನ-ಕರು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಕೆಲವೇ ದಿನಗಳಲ್ಲಿ ಮೇವು ಕತ್ತರಿಸುವ ಯಂತ್ರ ಕೊಡಿಸಲಾಗುವುದು ಎಂದುಭರವಸೆ ನೀಡಿದರು.<br /> <br /> ಗೋಶಾಲೆಯಲ್ಲಿ ದನ-ಕರುಗಳ ಜತೆ ಇರುವ ರೈತರಿಗೆ ಊಟದ ವ್ಯವಸ್ಥೆ ಮಾಡಬೇಕು ಎಂಬ ರೈತರ ಮನವಿಗೆ, ಮೊದಲು ಜಾನುವಾರು ಉಳಿಸುವ ಕೆಲಸ ಮಾಡೋಣ. ನಂತರ ನಿಮ್ಮ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಭರವಸೆ ನೀಡಿದರು.</p>.<p><br /> ತಾಲ್ಲೂಕಿನ ಯಲ್ಲದಕೆರೆ ಗೋಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲೂ ಸಚಿವರು, ರೈತರಿಗೆ ಇದೇ ಭರವಸೆ ನೀಡಿದರು.<br /> <br /> ಶಾಸಕ ಡಿ. ಸುಧಾಕರ್, ಉಪ ವಿಭಾಗಾಧಿಕಾರಿ ನಾಗರಾಜ್, ತಹಶೀಲ್ದಾರ್ ತಿಪ್ಪೇಸ್ವಾಮಿ, ಜಿ.ಆರ್. ರಮೇಶ್, ರಾಘವೇಂದ್ರರೆಡ್ಡಿ, ಸುರೇಶ್ಬಾಬು, ಎಂ.ಟಿ. ಸುರೇಶ್, ಈರಲಿಂಗೇಗೌಡ, ಆರ್. ನಾಗೇಂದ್ರನಾಯ್ಕ, ತಿಪ್ಪೀರಣ್ಣ, ಚಿದಾನಂದ, ಅಶೋಕ್, ಸದಾನಂದ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರಿಯೂರು:</strong> ತಾಲ್ಲೂಕಿನ ನಂದಿಹಳ್ಳಿಯ ರಂಗನಾಥಸ್ವಾಮಿ ದೇಗುಲದ ಮುಂಭಾಗದ ಬಯಲಿನಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಅವರು ರಾಸುಗಳಿಗೆ ಹುಲ್ಲು ಹಾಕುವ ಮೂಲಕ ಗೋಶಾಲೆ ಉದ್ಘಾಟಿಸಿದರು.<br /> <br /> ಹಣ ಕೊಟ್ಟರೂ ಮೇವು ಸಿಗುವುದು ಕಷ್ಟವಾಗಿದೆ. ಇಡೀ ದೇಶದಲ್ಲಿ ಬರಗಾಲ ಇರುವ ಕಾರಣ ಎಲ್ಲೂ ಮೇವಿನ ಲಭ್ಯತೆ ಇಲ್ಲ. ಪ್ರಯುಕ್ತ ರೈತರು ಮೇವನ್ನು ಜೋಪಾನವಾಗಿ ಬಳಸಬೇಕು. ಒಂದು ಕಡ್ಡಿಯೂ ಹಾಳಾಗದಂತೆ ಕತ್ತರಿಸಿ ಬಳಸಿ. ದನ-ಕರು ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಕೆಲವೇ ದಿನಗಳಲ್ಲಿ ಮೇವು ಕತ್ತರಿಸುವ ಯಂತ್ರ ಕೊಡಿಸಲಾಗುವುದು ಎಂದುಭರವಸೆ ನೀಡಿದರು.<br /> <br /> ಗೋಶಾಲೆಯಲ್ಲಿ ದನ-ಕರುಗಳ ಜತೆ ಇರುವ ರೈತರಿಗೆ ಊಟದ ವ್ಯವಸ್ಥೆ ಮಾಡಬೇಕು ಎಂಬ ರೈತರ ಮನವಿಗೆ, ಮೊದಲು ಜಾನುವಾರು ಉಳಿಸುವ ಕೆಲಸ ಮಾಡೋಣ. ನಂತರ ನಿಮ್ಮ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಭರವಸೆ ನೀಡಿದರು.</p>.<p><br /> ತಾಲ್ಲೂಕಿನ ಯಲ್ಲದಕೆರೆ ಗೋಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲೂ ಸಚಿವರು, ರೈತರಿಗೆ ಇದೇ ಭರವಸೆ ನೀಡಿದರು.<br /> <br /> ಶಾಸಕ ಡಿ. ಸುಧಾಕರ್, ಉಪ ವಿಭಾಗಾಧಿಕಾರಿ ನಾಗರಾಜ್, ತಹಶೀಲ್ದಾರ್ ತಿಪ್ಪೇಸ್ವಾಮಿ, ಜಿ.ಆರ್. ರಮೇಶ್, ರಾಘವೇಂದ್ರರೆಡ್ಡಿ, ಸುರೇಶ್ಬಾಬು, ಎಂ.ಟಿ. ಸುರೇಶ್, ಈರಲಿಂಗೇಗೌಡ, ಆರ್. ನಾಗೇಂದ್ರನಾಯ್ಕ, ತಿಪ್ಪೀರಣ್ಣ, ಚಿದಾನಂದ, ಅಶೋಕ್, ಸದಾನಂದ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>