<p>ಚನ್ನಪಟ್ಟಣ: ನೊಂದ ಶೂದ್ರ ಸಮಾಜಕ್ಕೆ ಆತ್ಮವಿಶ್ವಾಸ, ಗೌರವ ತಂದು ಕೊಟ್ಟ ಮಹಾ ಪುರುಷ ಕಾನ್ಶಿರಾಂ ಎಂದು ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ಎಂ. ನಾಗೇಶ್ ಅಭಿಪ್ರಾಯಪಟ್ಟರು. <br /> <br /> ಪಟ್ಟಣದ ಬಿಎಸ್ಪಿ ಕಚೇರಿಯಲ್ಲಿ ನಡೆದ ಕಾನ್ಶಿರಾಂ ಜನ್ಮದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ, ದೇಶದಲ್ಲಿ ಶೂದ್ರರು ರಾಜ್ಯವಾಳುವ ಅವಕಾಶವನ್ನು ಮಾಡಿಕೊಟ್ಟ ಹಿರಿಮೆ ಸಾಮಾಜಿಕ ಚಳುವಳಿಗಾರ ಕಾನ್ಶಿರಾಂ ಅವರಿಗೆ ಸಲ್ಲುತ್ತದೆ ಎಂದರು.<br /> <br /> ಮಿಲಿಟರಿ ಶಾಲೆಯಲ್ಲಿ ಸಂಶೋಧನಾ ಅಧಿಕಾರಿಯಾಗಿ ಕೆಲಸಮಾಡಿದ ಅವರು ಸಮಾಜದ ಉದ್ದಾರಕ್ಕಾಗಿ ಸರಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ದೇಶದುದ್ದಗಲದಲ್ಲಿ ಪ್ರವಾಸ ಮಾಡಿ ಶೂದ್ರರಲ್ಲಿ ಆತ್ಮಾಭಿಮಾನ ಮೂಡಿಸಿದರೆಂದು ತಿಳಿಸಿದರು. ಸಂದರ್ಭದಲ್ಲಿ ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಸುಜೀವನ್ ಕುಮಾರ್, ಮುಖಂಡರಾದ ಜಯಶೀಲ, ಖಲೀಂ ಉಲ್ಲಾ ಮತ್ತಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚನ್ನಪಟ್ಟಣ: ನೊಂದ ಶೂದ್ರ ಸಮಾಜಕ್ಕೆ ಆತ್ಮವಿಶ್ವಾಸ, ಗೌರವ ತಂದು ಕೊಟ್ಟ ಮಹಾ ಪುರುಷ ಕಾನ್ಶಿರಾಂ ಎಂದು ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ಎಂ. ನಾಗೇಶ್ ಅಭಿಪ್ರಾಯಪಟ್ಟರು. <br /> <br /> ಪಟ್ಟಣದ ಬಿಎಸ್ಪಿ ಕಚೇರಿಯಲ್ಲಿ ನಡೆದ ಕಾನ್ಶಿರಾಂ ಜನ್ಮದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ, ದೇಶದಲ್ಲಿ ಶೂದ್ರರು ರಾಜ್ಯವಾಳುವ ಅವಕಾಶವನ್ನು ಮಾಡಿಕೊಟ್ಟ ಹಿರಿಮೆ ಸಾಮಾಜಿಕ ಚಳುವಳಿಗಾರ ಕಾನ್ಶಿರಾಂ ಅವರಿಗೆ ಸಲ್ಲುತ್ತದೆ ಎಂದರು.<br /> <br /> ಮಿಲಿಟರಿ ಶಾಲೆಯಲ್ಲಿ ಸಂಶೋಧನಾ ಅಧಿಕಾರಿಯಾಗಿ ಕೆಲಸಮಾಡಿದ ಅವರು ಸಮಾಜದ ಉದ್ದಾರಕ್ಕಾಗಿ ಸರಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ದೇಶದುದ್ದಗಲದಲ್ಲಿ ಪ್ರವಾಸ ಮಾಡಿ ಶೂದ್ರರಲ್ಲಿ ಆತ್ಮಾಭಿಮಾನ ಮೂಡಿಸಿದರೆಂದು ತಿಳಿಸಿದರು. ಸಂದರ್ಭದಲ್ಲಿ ಬಿಎಸ್ಪಿ ತಾಲ್ಲೂಕು ಅಧ್ಯಕ್ಷ ಸುಜೀವನ್ ಕುಮಾರ್, ಮುಖಂಡರಾದ ಜಯಶೀಲ, ಖಲೀಂ ಉಲ್ಲಾ ಮತ್ತಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>