<p><strong>ಗುಲ್ಬರ್ಗ: </strong>ಮನೆಯ ಮುಂದಿನ ತೆರೆದ ಚರಂಡಿಗೆ ಬಿದ್ದು ಬಾಲಕ ಮೃತಪಟ್ಟ ಘಟನೆ ಇಲ್ಲಿನ 49 ನೇ ವಾರ್ಡ್ನ ಇಂದಿರಾನಗರದಲ್ಲಿ ನಡೆದಿದೆ. <br /> <br /> ನಾಲ್ಕು ವರ್ಷದ ಅಭಿಷೇಕ ಮೃತಪಟ್ಟ ಬಾಲಕ. ಇಲ್ಲಿನ ಸಂತೋಷ ಬೈರಾಮಡಗಿ ಮತ್ತು ಮಲ್ಲಮ್ಮ ದಂಪತಿಯ ಪುತ್ರ. ಎಂದಿನಂತೆ ಆಟವಾಡುತ್ತಿದ್ದ ಬಾಲಕ ನಾಪತ್ತೆಯಾಗಿದ್ದ. ಸ್ಪಲ್ಪ ಹೊತ್ತಿನಲ್ಲಿ ಮನೆಯ ಮುಂದಿನ ತೆರೆದ ಚರಂಡಿ ನೀರಿನಲ್ಲೇ ಶವ ಪತ್ತೆಯಾಗಿದೆ. ಆಟವಾಡುತ್ತಿದ್ದಾಗ ಚರಂಡಿಗೆ ಬಿದ್ದು ಮೃತಪಟ್ಟಿರಬಹುದು ಎನ್ನಲಾಗಿದೆ.<br /> `ಸ್ಥಳಕ್ಕೆ ಪಾಲಿಕೆಯ ಹಿರಿಯ ಅಧಿಕಾರಿಗಳನ್ನು ಕಳುಹಿಸಲಾಗಿದೆ. <br /> <br /> ಅವರು ವರದಿ ನೀಡಿದ ತಕ್ಷಣ ಪರಿಹಾರ ನೀಡಲಾಗುವುದು. ಚರಂಡಿ ತೆರೆದಿರಲು ಕಾರಣವನ್ನು ಪತ್ತೆ ಹಚ್ಚಿ, ಕಾಮಗಾರಿ ನಡೆಸಿದ ಸಂಸ್ಥೆ ಹಾಗೂ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು~ ಎಂದು ಕಚೇರಿ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಪಾಲಿಕೆಯ ಆಯುಕ್ತ ಸಿ. ನಾಗಯ್ಯ `ಪ್ರಜಾವಾಣಿ~ಗೆ ತಿಳಿಸಿದರು. <br /> ಮಾಜಿ ಮೇಯರ್ ಸುನಂದಾ ರಾಜಾರಾಮ್ ಈ ವಾರ್ಡ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಸೋಮಶೇಖರ ಮೇಲಿನಮನಿ ತಿಳಿಸಿದರು. <br /> <br /> ಸುಮಾರು 5 ಅಡಿಗೂ ಆಳದ ಈ ಪ್ರಮುಖ ಚರಂಡಿಯು ಹಲವು ವರ್ಷಗಳಿಂದ ತೆರೆದ ಸ್ಥಿತಿಯಲ್ಲೇ ಇದೆ. ಈ ತನಕ ಹಲವು ಮಕ್ಕಳು ಮತ್ತು ದೊಡ್ಡವರು ಬಿದ್ದು ಕೈ-ಕಾಲು ಮುರಿದುಕೊಂಡಿದ್ದಾರೆ. ಚರಂಡಿಯ ಕಸವನ್ನು ತೆಗೆದು ಪಕ್ಕದಲ್ಲೇ ಹಾಕುತ್ತಾರೆ. ಸೂಕ್ತ ವಿಲೇವಾರಿ ಮಾಡುವುದಿಲ್ಲ. ಹೀಗಾಗಿ ಜಾರಿ ಬೀಳುತ್ತಾರೆ. ಸ್ಥಳೀಯ ಕೆಲವು ಶೌಚಾಲಯಗಳ ಸಂಪರ್ಕವನ್ನೂ ಇದಕ್ಕೆ ಕೊಟ್ಟಿದ್ದಾರೆ. ಈ ತನಕ ಚಪ್ಪಡಿಯನ್ನೂ ಮುಚ್ಚಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಲ್ಬರ್ಗ: </strong>ಮನೆಯ ಮುಂದಿನ ತೆರೆದ ಚರಂಡಿಗೆ ಬಿದ್ದು ಬಾಲಕ ಮೃತಪಟ್ಟ ಘಟನೆ ಇಲ್ಲಿನ 49 ನೇ ವಾರ್ಡ್ನ ಇಂದಿರಾನಗರದಲ್ಲಿ ನಡೆದಿದೆ. <br /> <br /> ನಾಲ್ಕು ವರ್ಷದ ಅಭಿಷೇಕ ಮೃತಪಟ್ಟ ಬಾಲಕ. ಇಲ್ಲಿನ ಸಂತೋಷ ಬೈರಾಮಡಗಿ ಮತ್ತು ಮಲ್ಲಮ್ಮ ದಂಪತಿಯ ಪುತ್ರ. ಎಂದಿನಂತೆ ಆಟವಾಡುತ್ತಿದ್ದ ಬಾಲಕ ನಾಪತ್ತೆಯಾಗಿದ್ದ. ಸ್ಪಲ್ಪ ಹೊತ್ತಿನಲ್ಲಿ ಮನೆಯ ಮುಂದಿನ ತೆರೆದ ಚರಂಡಿ ನೀರಿನಲ್ಲೇ ಶವ ಪತ್ತೆಯಾಗಿದೆ. ಆಟವಾಡುತ್ತಿದ್ದಾಗ ಚರಂಡಿಗೆ ಬಿದ್ದು ಮೃತಪಟ್ಟಿರಬಹುದು ಎನ್ನಲಾಗಿದೆ.<br /> `ಸ್ಥಳಕ್ಕೆ ಪಾಲಿಕೆಯ ಹಿರಿಯ ಅಧಿಕಾರಿಗಳನ್ನು ಕಳುಹಿಸಲಾಗಿದೆ. <br /> <br /> ಅವರು ವರದಿ ನೀಡಿದ ತಕ್ಷಣ ಪರಿಹಾರ ನೀಡಲಾಗುವುದು. ಚರಂಡಿ ತೆರೆದಿರಲು ಕಾರಣವನ್ನು ಪತ್ತೆ ಹಚ್ಚಿ, ಕಾಮಗಾರಿ ನಡೆಸಿದ ಸಂಸ್ಥೆ ಹಾಗೂ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು~ ಎಂದು ಕಚೇರಿ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಪಾಲಿಕೆಯ ಆಯುಕ್ತ ಸಿ. ನಾಗಯ್ಯ `ಪ್ರಜಾವಾಣಿ~ಗೆ ತಿಳಿಸಿದರು. <br /> ಮಾಜಿ ಮೇಯರ್ ಸುನಂದಾ ರಾಜಾರಾಮ್ ಈ ವಾರ್ಡ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಸೋಮಶೇಖರ ಮೇಲಿನಮನಿ ತಿಳಿಸಿದರು. <br /> <br /> ಸುಮಾರು 5 ಅಡಿಗೂ ಆಳದ ಈ ಪ್ರಮುಖ ಚರಂಡಿಯು ಹಲವು ವರ್ಷಗಳಿಂದ ತೆರೆದ ಸ್ಥಿತಿಯಲ್ಲೇ ಇದೆ. ಈ ತನಕ ಹಲವು ಮಕ್ಕಳು ಮತ್ತು ದೊಡ್ಡವರು ಬಿದ್ದು ಕೈ-ಕಾಲು ಮುರಿದುಕೊಂಡಿದ್ದಾರೆ. ಚರಂಡಿಯ ಕಸವನ್ನು ತೆಗೆದು ಪಕ್ಕದಲ್ಲೇ ಹಾಕುತ್ತಾರೆ. ಸೂಕ್ತ ವಿಲೇವಾರಿ ಮಾಡುವುದಿಲ್ಲ. ಹೀಗಾಗಿ ಜಾರಿ ಬೀಳುತ್ತಾರೆ. ಸ್ಥಳೀಯ ಕೆಲವು ಶೌಚಾಲಯಗಳ ಸಂಪರ್ಕವನ್ನೂ ಇದಕ್ಕೆ ಕೊಟ್ಟಿದ್ದಾರೆ. ಈ ತನಕ ಚಪ್ಪಡಿಯನ್ನೂ ಮುಚ್ಚಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>