<p>ರಾಳೇಗಣ ಸಿದ್ಧಿ, ಮಹಾರಾಷ್ಟ್ರ (ಐಎಎನ್ ಎಸ್): ಜನಲೋಕಪಾಲ ಮಸೂದೆಯನ್ನು ವಿರೋಧಿಸುವ ಸಂಸತ್ ಸದಸ್ಯರ ಮನೆಗಳಿಗೆ ~ಮುತ್ತಿಗೆ~ ಹಾಕುವಂತೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಜನರನ್ನು ಶನಿವಾರ ಆಗ್ರಹಿಸಿದರು.<br /> <br /> ~ಜನಲೋಕಪಾಲ ಮಸೂದೆಯನ್ನು ವಿರೋಧಿಸುವ ಸಂಸತ್ ಸದಸ್ಯರ ಮನೆಗಳಿಗೆ ನಾವು ಮುತ್ತಿಗೆ ಹಾಕಬೇಕು. ಅವರನ್ನು ಮನೆಯಿಂದ ಹೊರಕ್ಕೆ ಬರಲು ಬಿಡಬಾರದು~ ಎಂದು 74ರ ಹರೆಯದ ಅಣ್ಣಾ ಅಹಮದ್ ನಗರ ಜಿಲ್ಲೆಯ ತಮ್ಮ ಗ್ರಾಮ ರಾಳೇಗಣ ಸಿದ್ಧಿಯಲ್ಲಿ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತೆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು. <br /> <br /> ~ಇಂತಹ ಸಂಸತ್ ಸದಸ್ಯರನ್ನು ಮರುಆಯ್ಕೆ ಮಾಡಬೇಡಿ. ಮಸೂದೆಯನ್ನು ಬೆಂಬಲಿಸುವ ಸಂಸತ್ ಸದಸ್ಯರು ಮರುಆಯ್ಕೆ ಆಗುವಂತೆ ಖಾತರಿ ಪಡಿಸಬೇಕಾದದ್ದು ನಮ್ಮ ಕರ್ತವ್ಯ. ಮಸೂದೆ ವಿರೋಧಿಸುವವರ ಪರ ಯಾರೊಬ್ಬರೂ ಮತ ಚಲಾಯಿಸಬಾರದು~ ಎಂದು ಹಜಾರೆ ಕರೆ ನೀಡಿದರು.<br /> <br /> ಶನಿವಾರ ಬೆಳಗ್ಗೆ ಆರಂಭವಾದ ಅಣ್ಣಾ ತಂಡದ ಸಭೆ ವಿವಿಧ ಸಮಾವೇಶಗಳಲ್ಲಿ ಹೋರಾಟದ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸುವುದು. ಭ್ರಷ್ಟಾಚಾರ ವಿರುದ್ಧ ಭಾರತ ಸಂಘಟನೆಯ 45 ಮಂದಿ ಸೇರಿದಂತೆ ನವದೆಹಲಿಯಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಸತ್ಯಾಗ್ರಹವನ್ನು ಬೆಂಬಲಿಸಿದ್ದ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.<br /> <br /> ಅರವಿಂದ ಕೇಜ್ರಿವಾಲ್, ಕಿರಣ್ ಬೇಡಿ, ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಪ್ರಶಾಂತ ಭೂಷಣ್ ಸಭೆಯಲ್ಲಿ ಪಾಲ್ಗೊಂಡಿರುವ ಪ್ರಮುಖರಲ್ಲಿ ಸೇರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಳೇಗಣ ಸಿದ್ಧಿ, ಮಹಾರಾಷ್ಟ್ರ (ಐಎಎನ್ ಎಸ್): ಜನಲೋಕಪಾಲ ಮಸೂದೆಯನ್ನು ವಿರೋಧಿಸುವ ಸಂಸತ್ ಸದಸ್ಯರ ಮನೆಗಳಿಗೆ ~ಮುತ್ತಿಗೆ~ ಹಾಕುವಂತೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಜನರನ್ನು ಶನಿವಾರ ಆಗ್ರಹಿಸಿದರು.<br /> <br /> ~ಜನಲೋಕಪಾಲ ಮಸೂದೆಯನ್ನು ವಿರೋಧಿಸುವ ಸಂಸತ್ ಸದಸ್ಯರ ಮನೆಗಳಿಗೆ ನಾವು ಮುತ್ತಿಗೆ ಹಾಕಬೇಕು. ಅವರನ್ನು ಮನೆಯಿಂದ ಹೊರಕ್ಕೆ ಬರಲು ಬಿಡಬಾರದು~ ಎಂದು 74ರ ಹರೆಯದ ಅಣ್ಣಾ ಅಹಮದ್ ನಗರ ಜಿಲ್ಲೆಯ ತಮ್ಮ ಗ್ರಾಮ ರಾಳೇಗಣ ಸಿದ್ಧಿಯಲ್ಲಿ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತೆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು. <br /> <br /> ~ಇಂತಹ ಸಂಸತ್ ಸದಸ್ಯರನ್ನು ಮರುಆಯ್ಕೆ ಮಾಡಬೇಡಿ. ಮಸೂದೆಯನ್ನು ಬೆಂಬಲಿಸುವ ಸಂಸತ್ ಸದಸ್ಯರು ಮರುಆಯ್ಕೆ ಆಗುವಂತೆ ಖಾತರಿ ಪಡಿಸಬೇಕಾದದ್ದು ನಮ್ಮ ಕರ್ತವ್ಯ. ಮಸೂದೆ ವಿರೋಧಿಸುವವರ ಪರ ಯಾರೊಬ್ಬರೂ ಮತ ಚಲಾಯಿಸಬಾರದು~ ಎಂದು ಹಜಾರೆ ಕರೆ ನೀಡಿದರು.<br /> <br /> ಶನಿವಾರ ಬೆಳಗ್ಗೆ ಆರಂಭವಾದ ಅಣ್ಣಾ ತಂಡದ ಸಭೆ ವಿವಿಧ ಸಮಾವೇಶಗಳಲ್ಲಿ ಹೋರಾಟದ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸುವುದು. ಭ್ರಷ್ಟಾಚಾರ ವಿರುದ್ಧ ಭಾರತ ಸಂಘಟನೆಯ 45 ಮಂದಿ ಸೇರಿದಂತೆ ನವದೆಹಲಿಯಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಸತ್ಯಾಗ್ರಹವನ್ನು ಬೆಂಬಲಿಸಿದ್ದ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.<br /> <br /> ಅರವಿಂದ ಕೇಜ್ರಿವಾಲ್, ಕಿರಣ್ ಬೇಡಿ, ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಪ್ರಶಾಂತ ಭೂಷಣ್ ಸಭೆಯಲ್ಲಿ ಪಾಲ್ಗೊಂಡಿರುವ ಪ್ರಮುಖರಲ್ಲಿ ಸೇರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>