<p><strong>ನವದೆಹಲಿ(ಪಿಟಿಐ): </strong>ರಾಜಸ್ತಾನ ಪತ್ರಿಕಾಕ್ಕೆ ಸರ್ಕಾರಿ ಜಾಹೀರಾತು ನಿಲ್ಲಿಸಲು ನಿರ್ಧರಿಸಿರುವ ಛತ್ತೀಸ್ಗಡ ಸರ್ಕಾರದ ನಿರ್ಧಾರವನ್ನು ಸಂಪಾದಕರ ಕೂಟ (ಎಡಿಟರ್ಸ್ ಗಿಲ್ಡ್) ತೀವ್ರವಾಗಿ ಖಂಡಿಸಿದೆ.<br /> <br /> ಸರ್ಕಾರದ ಪರವಾದ ಸಂಪಾದಕೀಯ ಮತ್ತು ಸುದ್ದಿಗಳು ಬರುತ್ತಿಲ್ಲ ಎನ್ನುವ ಕಾರಣಕ್ಕೆ ಪತ್ರಿಕೆಗೆ ಜಾಹೀರಾತು ನಿಲ್ಲಿಸುವುದು ಸರಿಯಲ್ಲ ಎಂದು ಅದು ಹೇಳಿದೆ.<br /> <br /> ವಿಧಾನಸಭೆಯ ಕಲಾಪ ವರದಿ ಮಾಡಲು ಈ ಪತ್ರಿಕೆಯ ವರದಿಗಾರರಿಗೆ ಅವಕಾಶ ನಿರಾಕರಿಸಿರುವ ಛತ್ತೀಸ್ಗಡ ವಿಧಾನಸಭೆ ಸ್ಪೀಕರ್ ಕ್ರಮವೂ ಸರಿಯಿಲ್ಲ ಎಂದು ಗಿಲ್ಡ್ ಖಂಡಿಸಿದೆ. ಈ ಸಂಬಂಧ ಮುಖ್ಯಮಂತ್ರಿ ರಮಣ್ ಸಿಂಗ್ ಅವರಿಗೆ ಗಿಲ್ಡ್ ಅಧ್ಯಕ್ಷ ಟಿ.ಎನ್. ನಿನಾನ್ ಪತ್ರ ಬರೆದಿದ್ದಾರೆ.ಪತ್ರಿಕೆಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಸರ್ಕಾರಿ ಜಾಹೀರಾತು ನೀಡುವುದಿಲ್ಲ. ಜನರಿಗೆ ಯಾವುದೋ ವಿಚಾರ ಮುಟ್ಟಿಸುವ ಉದ್ದೇಶದಿಂದ ಜಾಹೀರಾತು ಪ್ರಕಟಿಸಲಾಗುತ್ತದೆ.<br /> <br /> ಸಂಪಾದಕೀಯ ಹಾಗೂ ಜಾಹೀರಾತಿನ ನಡುವೆ ಸಂಬಂಧ ಕಲ್ಪಿಸಿದಲ್ಲಿ ಪತ್ರಿಕೆಯ ಮೇಲೆ ಆರ್ಥಿಕ ಒತ್ತಡ ತಂದಂತೆ ಆಗುತ್ತದೆ. ಆ ಮೂಲಕ ಅಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ನಿನಾನ್ ಪತ್ರದಲ್ಲಿ ಬರೆದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ(ಪಿಟಿಐ): </strong>ರಾಜಸ್ತಾನ ಪತ್ರಿಕಾಕ್ಕೆ ಸರ್ಕಾರಿ ಜಾಹೀರಾತು ನಿಲ್ಲಿಸಲು ನಿರ್ಧರಿಸಿರುವ ಛತ್ತೀಸ್ಗಡ ಸರ್ಕಾರದ ನಿರ್ಧಾರವನ್ನು ಸಂಪಾದಕರ ಕೂಟ (ಎಡಿಟರ್ಸ್ ಗಿಲ್ಡ್) ತೀವ್ರವಾಗಿ ಖಂಡಿಸಿದೆ.<br /> <br /> ಸರ್ಕಾರದ ಪರವಾದ ಸಂಪಾದಕೀಯ ಮತ್ತು ಸುದ್ದಿಗಳು ಬರುತ್ತಿಲ್ಲ ಎನ್ನುವ ಕಾರಣಕ್ಕೆ ಪತ್ರಿಕೆಗೆ ಜಾಹೀರಾತು ನಿಲ್ಲಿಸುವುದು ಸರಿಯಲ್ಲ ಎಂದು ಅದು ಹೇಳಿದೆ.<br /> <br /> ವಿಧಾನಸಭೆಯ ಕಲಾಪ ವರದಿ ಮಾಡಲು ಈ ಪತ್ರಿಕೆಯ ವರದಿಗಾರರಿಗೆ ಅವಕಾಶ ನಿರಾಕರಿಸಿರುವ ಛತ್ತೀಸ್ಗಡ ವಿಧಾನಸಭೆ ಸ್ಪೀಕರ್ ಕ್ರಮವೂ ಸರಿಯಿಲ್ಲ ಎಂದು ಗಿಲ್ಡ್ ಖಂಡಿಸಿದೆ. ಈ ಸಂಬಂಧ ಮುಖ್ಯಮಂತ್ರಿ ರಮಣ್ ಸಿಂಗ್ ಅವರಿಗೆ ಗಿಲ್ಡ್ ಅಧ್ಯಕ್ಷ ಟಿ.ಎನ್. ನಿನಾನ್ ಪತ್ರ ಬರೆದಿದ್ದಾರೆ.ಪತ್ರಿಕೆಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಸರ್ಕಾರಿ ಜಾಹೀರಾತು ನೀಡುವುದಿಲ್ಲ. ಜನರಿಗೆ ಯಾವುದೋ ವಿಚಾರ ಮುಟ್ಟಿಸುವ ಉದ್ದೇಶದಿಂದ ಜಾಹೀರಾತು ಪ್ರಕಟಿಸಲಾಗುತ್ತದೆ.<br /> <br /> ಸಂಪಾದಕೀಯ ಹಾಗೂ ಜಾಹೀರಾತಿನ ನಡುವೆ ಸಂಬಂಧ ಕಲ್ಪಿಸಿದಲ್ಲಿ ಪತ್ರಿಕೆಯ ಮೇಲೆ ಆರ್ಥಿಕ ಒತ್ತಡ ತಂದಂತೆ ಆಗುತ್ತದೆ. ಆ ಮೂಲಕ ಅಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ನಿನಾನ್ ಪತ್ರದಲ್ಲಿ ಬರೆದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>