<p><strong>ಬೆಂಗಳೂರು:</strong> ದಾವಣಗೆರೆಯ ಬಸವಕೇಂದ್ರ, ಶಿವಯೋಗಾಶ್ರಮದ ಆಶ್ರಯದಲ್ಲಿ ಜಯದೇವ ಮುರುಘರಾಜೇಂದ್ರ ಮಹಾಸ್ವಾಮೀಜಿ ಅವರ 56ನೇ ಸ್ಮರಣೋತ್ಸವದ ಅಂಗವಾಗಿ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರಿಗೆ `ಜಯದೇವಶ್ರೀ' ಪ್ರಶಸ್ತಿ ನೀಡಿ ಗೌರವಿಸಲಾಯಿತು.<br /> <br /> ನಗರದ ಬನಶಂಕರಿಯಲ್ಲಿರುವ ಜಿ.ಎಸ್.ಎಸ್ ಸ್ವಗೃಹದಲ್ಲಿ ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಹಿರಿಯ ಕವಿಗೆ ಪ್ರಶಸ್ತಿ ಪ್ರದಾನ ಮಾಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.<br /> <br /> ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, `ಜಿ.ಎಸ್.ಎಸ್. ಅವರ ಸಾಹಿತ್ಯ ಸೇವೆ ವಿಸ್ಮಯ ಮೂಡಿಸುವಂತಹುದು. ಅವರ ಬರಹ ಕನ್ನಡಕ್ಕೆ ದೊಡ್ಡ ಕಾಣಿಕೆ. ಈಗಲೂ ಅವರ ಜೀವನೋತ್ಸಾಹ ಕುಂದಿಲ್ಲ. ಅವರ ನೆನಪಿನ ಶಕ್ತಿ ಅಗಾಧ' ಎಂದು ಬಣ್ಣಿಸಿದರು.<br /> <br /> `ಕಾವ್ಯ, ವಿಮರ್ಶೆ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲಿ ಅವರು ಅಪಾರ ಸಾಧನೆ ಮಾಡಿದ್ದಾರೆ. ಇಂದಿನ ಸಾಹಿತಿಗಳಿಗೆ ಹಾಗೂ ಯುವ ಬರಹಗಾರರಿಗೆ ಜಿ.ಎಸ್.ಎಸ್. ಸ್ಫೂರ್ತಿ' ಎಂದರು.<br /> <br /> ಜಿ.ಎಸ್.ಶಿವರುದ್ರಪ್ಪ ಮಾತನಾಡಿ, ಜಯದೇವಶ್ರೀ ಪ್ರಶಸ್ತಿ ಸ್ವೀಕಾರ ಮಾಡುತ್ತಿರುವುದು ಸಂತಸ ತಂದಿದೆ. ಜನರ ಸಹಕಾರ ಹಾಗೂ ಸಾಹಿತ್ಯ ಅಭಿಮಾನಿಗಳ ಪ್ರೀತಿಯಿಂದ ಹೃದಯ ತುಂಬಿ ಬಂದಿದೆ ಎಂದರು.<br /> <br /> ವಸತಿ ಸಚಿವ ವಿ.ಸೋಮಣ್ಣ, ಹಿರಿಯ ವಿಮರ್ಶಕ ಡಾ.ಮರುಳಸಿದ್ದಪ್ಪ, ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ, ಜಿ.ಎಸ್.ಎಸ್. ಅವರ ಪತ್ನಿ ರುದ್ರಾಣಿ, ಲೇಖಕ ಬೈರಮಂಗಲ ರಾಮೇಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ದಾವಣಗೆರೆಯ ಬಸವಕೇಂದ್ರ, ಶಿವಯೋಗಾಶ್ರಮದ ಆಶ್ರಯದಲ್ಲಿ ಜಯದೇವ ಮುರುಘರಾಜೇಂದ್ರ ಮಹಾಸ್ವಾಮೀಜಿ ಅವರ 56ನೇ ಸ್ಮರಣೋತ್ಸವದ ಅಂಗವಾಗಿ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರಿಗೆ `ಜಯದೇವಶ್ರೀ' ಪ್ರಶಸ್ತಿ ನೀಡಿ ಗೌರವಿಸಲಾಯಿತು.<br /> <br /> ನಗರದ ಬನಶಂಕರಿಯಲ್ಲಿರುವ ಜಿ.ಎಸ್.ಎಸ್ ಸ್ವಗೃಹದಲ್ಲಿ ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಹಿರಿಯ ಕವಿಗೆ ಪ್ರಶಸ್ತಿ ಪ್ರದಾನ ಮಾಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.<br /> <br /> ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, `ಜಿ.ಎಸ್.ಎಸ್. ಅವರ ಸಾಹಿತ್ಯ ಸೇವೆ ವಿಸ್ಮಯ ಮೂಡಿಸುವಂತಹುದು. ಅವರ ಬರಹ ಕನ್ನಡಕ್ಕೆ ದೊಡ್ಡ ಕಾಣಿಕೆ. ಈಗಲೂ ಅವರ ಜೀವನೋತ್ಸಾಹ ಕುಂದಿಲ್ಲ. ಅವರ ನೆನಪಿನ ಶಕ್ತಿ ಅಗಾಧ' ಎಂದು ಬಣ್ಣಿಸಿದರು.<br /> <br /> `ಕಾವ್ಯ, ವಿಮರ್ಶೆ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲಿ ಅವರು ಅಪಾರ ಸಾಧನೆ ಮಾಡಿದ್ದಾರೆ. ಇಂದಿನ ಸಾಹಿತಿಗಳಿಗೆ ಹಾಗೂ ಯುವ ಬರಹಗಾರರಿಗೆ ಜಿ.ಎಸ್.ಎಸ್. ಸ್ಫೂರ್ತಿ' ಎಂದರು.<br /> <br /> ಜಿ.ಎಸ್.ಶಿವರುದ್ರಪ್ಪ ಮಾತನಾಡಿ, ಜಯದೇವಶ್ರೀ ಪ್ರಶಸ್ತಿ ಸ್ವೀಕಾರ ಮಾಡುತ್ತಿರುವುದು ಸಂತಸ ತಂದಿದೆ. ಜನರ ಸಹಕಾರ ಹಾಗೂ ಸಾಹಿತ್ಯ ಅಭಿಮಾನಿಗಳ ಪ್ರೀತಿಯಿಂದ ಹೃದಯ ತುಂಬಿ ಬಂದಿದೆ ಎಂದರು.<br /> <br /> ವಸತಿ ಸಚಿವ ವಿ.ಸೋಮಣ್ಣ, ಹಿರಿಯ ವಿಮರ್ಶಕ ಡಾ.ಮರುಳಸಿದ್ದಪ್ಪ, ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ, ಜಿ.ಎಸ್.ಎಸ್. ಅವರ ಪತ್ನಿ ರುದ್ರಾಣಿ, ಲೇಖಕ ಬೈರಮಂಗಲ ರಾಮೇಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>