<p><strong>ನವದೆಹಲಿ (ಪಿಟಿಐ):</strong> ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ಮೊದಲು ಕೇಂದ್ರ ಸರ್ಕಾರಿ ಮಟ್ಟದಲ್ಲಿ ಜಾರಿಗೆ ತರಬೇಕು ಎಂದು ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಯಶವಂತ್ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.<br /> <br /> ಪರೋಕ್ಷ ತೆರಿಗೆ ಸುಧಾರಣಾ ಕ್ರಮಗಳ ಜಾರಿ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮೊದಲು ‘ಜಿಎಸ್ಟಿ’ ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರಗಳಿಗೆ ಮಾದರಿಯಾಗಲಿ ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.<br /> <br /> ಕೇಂದ್ರ ಸರ್ಕಾರ ಮಟ್ಟದಲ್ಲಿ ಕೇಂದ್ರೀಯ ಅಬಕಾರಿ ಸುಂಕ ಮತ್ತು ಸೇವಾ ತೆರಿಗೆಗಳು ಇವೆ. ಈ ಎರಡೂ ತೆರಿಗೆಗಳನ್ನು ಕೇಂದ್ರ ಸರ್ಕಾರವು ಮೊದಲು ವಿಲೀನಗೊಳಿಸಿದರೆ ಅದರಿಂದ ಕೇಂದ್ರದ ‘ಜಿಎಸ್ಟಿ’ ಜಾರಿಗೆ ಬಂದಂತೆ ಆಗುವುದು. ಈ ವ್ಯವಸ್ಥೆ ಅನುಸರಿಸಲು ಕೇಂದ್ರವು ಆಮೇಲೆ ರಾಜ್ಯಗಳಿಗೆ ಸಲಹೆ ನೀಡಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.<br /> <br /> ಸಂಸತ್ತಿನ ಬಜೆಟ್ ಅಧಿವೇಶನದಲ್ಲಿಯೇ ‘ಜಿಎಸ್ಟಿ’ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲು ಆಲೋಚಿಸುತ್ತಿರುವುದನ್ನೂ ಬಿಜೆಪಿಯ ಮುಖಂಡರೂ ಆಗಿರುವ ಸಿನ್ಹಾ ಟೀಕಿಸಿದ್ದಾರೆ. <br /> <br /> ‘ಜಿಎಸ್ಟಿ’ ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದ ಎಲ್ಲ ಮೂರೂ ಕರಡು ಪ್ರಸ್ತಾವನೆಗಳು ಇದುವರೆಗೆ ನೆನೆಗುದಿಗೆ ಬಿದ್ದಿವೆ. ಬಿಜೆಪಿ ಆಡಳಿತ ಇರುವ ರಾಜ್ಯ ಸರ್ಕಾರಗಳು ಪ್ರಮುಖವಾಗಿ ಈ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುತ್ತಿವೆ. ಈ ವಿರೋಧದ ಮಧ್ಯೆಯೂ ಸರ್ಕಾರವು ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲು ಬಜೆಟ್ ಅಧಿವೇಶನದ ಕಲಾಪ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ. ಈ ಮಸೂದೆ ಅಂಗೀಕಾರವಾಗಲು ಸಂಸತ್ತಿನ ಉಭಯ ಸದನಗಳಲ್ಲಿ ಎರಡು ಮೂರಾಂಶದಷ್ಟು ಬಹುಮತ ದೊರೆಯಬೇಕಾಗುತ್ತದೆ.<br /> <br /> 2010ರ ಏಪ್ರಿಲ್ನಿಂದಲೇ ದೇಶದಾದ್ಯಂತ ‘ಜಿಎಸ್ಟಿ’ ಜಾರಿಗೆ ಬರಬೇಕಾಗಿತ್ತು. ಈಗ ಅದನ್ನು 2011ರ ಏಪ್ರಿಲ್ನಿಂದ ಜಾರಿಗೆ ತರಲು ಕೇಂದ್ರವು ಬಯಸಿದ್ದರೂ, ಅದು ಕೂಡ ನೆರವೇರುವ ಸಾಧ್ಯತೆಗಳು ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ಮೊದಲು ಕೇಂದ್ರ ಸರ್ಕಾರಿ ಮಟ್ಟದಲ್ಲಿ ಜಾರಿಗೆ ತರಬೇಕು ಎಂದು ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಯಶವಂತ್ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.<br /> <br /> ಪರೋಕ್ಷ ತೆರಿಗೆ ಸುಧಾರಣಾ ಕ್ರಮಗಳ ಜಾರಿ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮೊದಲು ‘ಜಿಎಸ್ಟಿ’ ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರಗಳಿಗೆ ಮಾದರಿಯಾಗಲಿ ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.<br /> <br /> ಕೇಂದ್ರ ಸರ್ಕಾರ ಮಟ್ಟದಲ್ಲಿ ಕೇಂದ್ರೀಯ ಅಬಕಾರಿ ಸುಂಕ ಮತ್ತು ಸೇವಾ ತೆರಿಗೆಗಳು ಇವೆ. ಈ ಎರಡೂ ತೆರಿಗೆಗಳನ್ನು ಕೇಂದ್ರ ಸರ್ಕಾರವು ಮೊದಲು ವಿಲೀನಗೊಳಿಸಿದರೆ ಅದರಿಂದ ಕೇಂದ್ರದ ‘ಜಿಎಸ್ಟಿ’ ಜಾರಿಗೆ ಬಂದಂತೆ ಆಗುವುದು. ಈ ವ್ಯವಸ್ಥೆ ಅನುಸರಿಸಲು ಕೇಂದ್ರವು ಆಮೇಲೆ ರಾಜ್ಯಗಳಿಗೆ ಸಲಹೆ ನೀಡಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.<br /> <br /> ಸಂಸತ್ತಿನ ಬಜೆಟ್ ಅಧಿವೇಶನದಲ್ಲಿಯೇ ‘ಜಿಎಸ್ಟಿ’ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲು ಆಲೋಚಿಸುತ್ತಿರುವುದನ್ನೂ ಬಿಜೆಪಿಯ ಮುಖಂಡರೂ ಆಗಿರುವ ಸಿನ್ಹಾ ಟೀಕಿಸಿದ್ದಾರೆ. <br /> <br /> ‘ಜಿಎಸ್ಟಿ’ ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದ ಎಲ್ಲ ಮೂರೂ ಕರಡು ಪ್ರಸ್ತಾವನೆಗಳು ಇದುವರೆಗೆ ನೆನೆಗುದಿಗೆ ಬಿದ್ದಿವೆ. ಬಿಜೆಪಿ ಆಡಳಿತ ಇರುವ ರಾಜ್ಯ ಸರ್ಕಾರಗಳು ಪ್ರಮುಖವಾಗಿ ಈ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುತ್ತಿವೆ. ಈ ವಿರೋಧದ ಮಧ್ಯೆಯೂ ಸರ್ಕಾರವು ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲು ಬಜೆಟ್ ಅಧಿವೇಶನದ ಕಲಾಪ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ. ಈ ಮಸೂದೆ ಅಂಗೀಕಾರವಾಗಲು ಸಂಸತ್ತಿನ ಉಭಯ ಸದನಗಳಲ್ಲಿ ಎರಡು ಮೂರಾಂಶದಷ್ಟು ಬಹುಮತ ದೊರೆಯಬೇಕಾಗುತ್ತದೆ.<br /> <br /> 2010ರ ಏಪ್ರಿಲ್ನಿಂದಲೇ ದೇಶದಾದ್ಯಂತ ‘ಜಿಎಸ್ಟಿ’ ಜಾರಿಗೆ ಬರಬೇಕಾಗಿತ್ತು. ಈಗ ಅದನ್ನು 2011ರ ಏಪ್ರಿಲ್ನಿಂದ ಜಾರಿಗೆ ತರಲು ಕೇಂದ್ರವು ಬಯಸಿದ್ದರೂ, ಅದು ಕೂಡ ನೆರವೇರುವ ಸಾಧ್ಯತೆಗಳು ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>