<p><strong>ಮುಂಬೈ (ಪಿಟಿಐ):</strong> 26/11 ಮುಂಬೈ ದಾಳಿಯ ಪ್ರಮುಖ ಸೂತ್ರಧಾರಿ ಸೈಯದ್ ಜಬಿಯುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್ ಭಾನುವಾರ ಇಲ್ಲಿ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.<br /> ಈ ಹೇಳಿಕೆಯಲ್ಲಿ 2008ರ ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಪಾತ್ರ ಬಗ್ಗೆ ಜುಂದಾಲ್ ಹೆಚ್ಚಿನ ವಿವರಗಳನ್ನು ತಿಳಿಸಿದ್ದಾನೆ.</p>.<p><br /> ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋಣೆಯಲ್ಲಿ ಜುಂದಾಲ್ನನ್ನು ಹಾಜರುಪಡಿಸಲಾಯಿತು. ಮುಂಬೈ ದಾಳಿಯ ಇನ್ನೊಬ್ಬ ಆರೋಪಿ ಕಸಾಬ್ ಮತ್ತು ಜುಂದಾಲ್ ಎದುರುಬದುರಾಗಿ ನಿಲ್ಲಿಸಲಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ನ್ಯಾಯಾಲಯದ ಗುಮಾಸ್ತ ಸಹ ಹಾಜರಿದ್ದ. <br /> <br /> ತಮ್ಮ ಮುಂದೆ ಹಾಜರಾದ ಜುಂದಾಲ್ಗೆ ತಪ್ಪೊಪ್ಪಿಗೆ ಹೇಳಿಕೆಯ ಪ್ರಕ್ರಿಯೆ ಬಗ್ಗೆ ವಿವರಿಸಿದ ನ್ಯಾಯಾಧೀಶರು, `ಅಪರಾಧ ಸಂಹಿತೆ 164ರ ಪ್ರಕಾರ ಹೇಳಿಕೆಯನ್ನು ದಾಖಲಿಸಿಕೊಂಡು ಅದನ್ನು ನಿನ್ನ ವಿರುದ್ಧವೇ ಬಳಸಿಕೊಳ್ಳಲಾಗುವುದು~ ಎಂದು ವಿವರಿಸಿದರು ಎನ್ನಲಾಗಿದೆ.<br /> <br /> `ತಪ್ಪೊಪ್ಪಿಗೆ ಹೇಳಿಕೆ ನೀಡುವ ನಿರ್ಧಾರದ ಬಗ್ಗೆ ಯೋಚಿಸಿದ್ದೀಯಾ? ಮತ್ತು ಇದು ನಿನ್ನ ಸ್ವಯಂ ನಿರ್ಧಾರವೇ ಎಂಬ ನ್ಯಾಯಾಧೀಶರ ಪ್ರಶ್ನೆಗೆ ಹೌದು ಎಂದು ಜುಂದಾಲ್ ಉತ್ತರಿಸಿದ~ ಎಂದು ಮೂಲಗಳು ತಿಳಿಸಿವೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ):</strong> 26/11 ಮುಂಬೈ ದಾಳಿಯ ಪ್ರಮುಖ ಸೂತ್ರಧಾರಿ ಸೈಯದ್ ಜಬಿಯುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್ ಭಾನುವಾರ ಇಲ್ಲಿ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.<br /> ಈ ಹೇಳಿಕೆಯಲ್ಲಿ 2008ರ ಮುಂಬೈ ದಾಳಿಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಪಾತ್ರ ಬಗ್ಗೆ ಜುಂದಾಲ್ ಹೆಚ್ಚಿನ ವಿವರಗಳನ್ನು ತಿಳಿಸಿದ್ದಾನೆ.</p>.<p><br /> ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋಣೆಯಲ್ಲಿ ಜುಂದಾಲ್ನನ್ನು ಹಾಜರುಪಡಿಸಲಾಯಿತು. ಮುಂಬೈ ದಾಳಿಯ ಇನ್ನೊಬ್ಬ ಆರೋಪಿ ಕಸಾಬ್ ಮತ್ತು ಜುಂದಾಲ್ ಎದುರುಬದುರಾಗಿ ನಿಲ್ಲಿಸಲಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ನ್ಯಾಯಾಲಯದ ಗುಮಾಸ್ತ ಸಹ ಹಾಜರಿದ್ದ. <br /> <br /> ತಮ್ಮ ಮುಂದೆ ಹಾಜರಾದ ಜುಂದಾಲ್ಗೆ ತಪ್ಪೊಪ್ಪಿಗೆ ಹೇಳಿಕೆಯ ಪ್ರಕ್ರಿಯೆ ಬಗ್ಗೆ ವಿವರಿಸಿದ ನ್ಯಾಯಾಧೀಶರು, `ಅಪರಾಧ ಸಂಹಿತೆ 164ರ ಪ್ರಕಾರ ಹೇಳಿಕೆಯನ್ನು ದಾಖಲಿಸಿಕೊಂಡು ಅದನ್ನು ನಿನ್ನ ವಿರುದ್ಧವೇ ಬಳಸಿಕೊಳ್ಳಲಾಗುವುದು~ ಎಂದು ವಿವರಿಸಿದರು ಎನ್ನಲಾಗಿದೆ.<br /> <br /> `ತಪ್ಪೊಪ್ಪಿಗೆ ಹೇಳಿಕೆ ನೀಡುವ ನಿರ್ಧಾರದ ಬಗ್ಗೆ ಯೋಚಿಸಿದ್ದೀಯಾ? ಮತ್ತು ಇದು ನಿನ್ನ ಸ್ವಯಂ ನಿರ್ಧಾರವೇ ಎಂಬ ನ್ಯಾಯಾಧೀಶರ ಪ್ರಶ್ನೆಗೆ ಹೌದು ಎಂದು ಜುಂದಾಲ್ ಉತ್ತರಿಸಿದ~ ಎಂದು ಮೂಲಗಳು ತಿಳಿಸಿವೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>