<p>ನ<strong>ವದೆಹಲಿ (ಐಎಎನ್ಎಸ್):</strong> 2ಜಿ ತರಂಗಗುಚ್ಚ ಹಗರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಜಂಟಿ ಸಮಿತಿ (ಜೆಪಿಸಿ) ಸಲ್ಲಿಸಿದ ವರದಿಯನ್ನು ಲೋಕಸಭೆ ಸೋಮವಾರ ಧ್ವನಿಮತದಿಂದ ಅಂಗೀಕರಿಸಿದೆ.<br /> <br /> ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಈ ವರದಿಯಲ್ಲಿ ದೋಷಮುಕ್ತಗೊಳಿಸಲಾಗಿದ್ದರೆ, ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಲಾಗಿದೆ.ವರದಿಗೆ ವಿರೋಧ ವ್ಯಕ್ತಪಡಿಸಿದ ರಾಜಾ ಅವರ ಪಕ್ಷ ಡಿಎಂಕೆ ಸಭಾತ್ಯಾಗ ಮಾಡಿತು.<br /> <br /> ಸ್ಪೀಕರ್ ಮೀರಾ ಕುಮಾರ್ ಸದನದ ಸಮ್ಮತಿಗಾಗಿ ಪಿ.ಸಿ. ಚಾಕೊ ನೇತೃತ್ವದ ವರದಿಯನ್ನು ಮಂಡಿಸಿದ ನಂತರ ಅದನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.<br /> <br /> ವರದಿಯ ಕುರಿತು ಚರ್ಚೆಗೆ ಕೋರಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಹಾಗೂ ಸಿಪಿಎಂ ನಾಯಕ ಬಸುದೇವ ಅಚಾರ್ಯ ಅವರು ಕಳುಹಿಸಿದ್ದ ಮನವಿಗಳನ್ನು ಸ್ಪೀಕರ್ ತಿರಸ್ಕರಿಸಿದರು.<br /> <br /> 2ಜಿ ತರಂಗಗುಚ್ಚಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು ಇದರಿಂದ ಸರ್ಕಾರದ ಬೊಕ್ಕಸಕ್ಕೆ ₨ 1.76 ಲಕ್ಷ ಕೋಟಿ ನಷ್ಟವುಂಟಾಗಿದೆ ಎಂದು ಮಹಾಲೇಖಪಾಲರು ನೀಡಿರುವ ವರದಿಗೆ ಸಮಿತಿಯ ಬಹುತೇಕ ಸದಸ್ಯರು ಸಮ್ಮತಿ ಸೂಚಿಸಿಲ್ಲ. ಹಿಂದಿನ ಎನ್ಡಿಎ ಸರ್ಕಾರದ ಅವಧಿಯ (1998–2004) ತಪ್ಪು ದೂರಸಂಪರ್ಕ ನೀತಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ₨ 40,000 ಕೋಟಿ ನಷ್ಟವುಂಟಾಗಿದೆ ಎಂದೂ ಸಮಿತಿ ದೂರಿದೆ.<br /> <br /> 19 ತಿಂಗಳ ವಿಚಾರಣೆಯ ನಂತರ ಚಾಕೊ ತಮ್ಮ ವರದಿಯನ್ನು ಅ.29ರಂದು ಸ್ಪೀಕರ್ ಅವರಿಗೆ ಸಲ್ಲಿಸಿದ್ದರು. ಪಕ್ಷಪಾತದಿಂದ ಕೂಡಿರುವ ಈ ವರದಿಯನ್ನು ಹಿಂತಿರುಗಿಸಬೇಕು ಎಂದು ಮಾಜಿ ಸಚಿವ ಎ. ರಾಜಾ ಅವರು ಲೋಕಸಭೆ ಸ್ಪೀಕರ್ ಅವರನ್ನು ಒತ್ತಾಯಿಸಿದ್ದರು.<br /> <br /> ಪ್ರಧಾನಿ ಹಾಗೂ ಹಣಕಾಸು ಸಚಿವರನ್ನು ತಪ್ಪಿತಸ್ಥರ ಪಟ್ಟಿಯಿಂದ ಕೈಬಿಡುವ ನಿರ್ಧಾರ ಪ್ರತಿಭಟಿಸಿ ಸಮಿತಿ-ಯಲ್ಲಿದ್ದ ಬಿಜೆಪಿ ಸದಸ್ಯರು ಈ ಸಂಬಂಧದ ಹಲವು ಸಭೆಗಳನ್ನು ಬಹಿಷ್ಕರಿಸಿದ್ದರು.ಆದರೆ ನಂತರ ಈ ಸದಸ್ಯರು ಸಮಿತಿಯ ಸಭೆಗಳಿಗೆ ಹಾಜರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನ<strong>ವದೆಹಲಿ (ಐಎಎನ್ಎಸ್):</strong> 2ಜಿ ತರಂಗಗುಚ್ಚ ಹಗರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಜಂಟಿ ಸಮಿತಿ (ಜೆಪಿಸಿ) ಸಲ್ಲಿಸಿದ ವರದಿಯನ್ನು ಲೋಕಸಭೆ ಸೋಮವಾರ ಧ್ವನಿಮತದಿಂದ ಅಂಗೀಕರಿಸಿದೆ.<br /> <br /> ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಈ ವರದಿಯಲ್ಲಿ ದೋಷಮುಕ್ತಗೊಳಿಸಲಾಗಿದ್ದರೆ, ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಲಾಗಿದೆ.ವರದಿಗೆ ವಿರೋಧ ವ್ಯಕ್ತಪಡಿಸಿದ ರಾಜಾ ಅವರ ಪಕ್ಷ ಡಿಎಂಕೆ ಸಭಾತ್ಯಾಗ ಮಾಡಿತು.<br /> <br /> ಸ್ಪೀಕರ್ ಮೀರಾ ಕುಮಾರ್ ಸದನದ ಸಮ್ಮತಿಗಾಗಿ ಪಿ.ಸಿ. ಚಾಕೊ ನೇತೃತ್ವದ ವರದಿಯನ್ನು ಮಂಡಿಸಿದ ನಂತರ ಅದನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.<br /> <br /> ವರದಿಯ ಕುರಿತು ಚರ್ಚೆಗೆ ಕೋರಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಹಾಗೂ ಸಿಪಿಎಂ ನಾಯಕ ಬಸುದೇವ ಅಚಾರ್ಯ ಅವರು ಕಳುಹಿಸಿದ್ದ ಮನವಿಗಳನ್ನು ಸ್ಪೀಕರ್ ತಿರಸ್ಕರಿಸಿದರು.<br /> <br /> 2ಜಿ ತರಂಗಗುಚ್ಚಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು ಇದರಿಂದ ಸರ್ಕಾರದ ಬೊಕ್ಕಸಕ್ಕೆ ₨ 1.76 ಲಕ್ಷ ಕೋಟಿ ನಷ್ಟವುಂಟಾಗಿದೆ ಎಂದು ಮಹಾಲೇಖಪಾಲರು ನೀಡಿರುವ ವರದಿಗೆ ಸಮಿತಿಯ ಬಹುತೇಕ ಸದಸ್ಯರು ಸಮ್ಮತಿ ಸೂಚಿಸಿಲ್ಲ. ಹಿಂದಿನ ಎನ್ಡಿಎ ಸರ್ಕಾರದ ಅವಧಿಯ (1998–2004) ತಪ್ಪು ದೂರಸಂಪರ್ಕ ನೀತಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ₨ 40,000 ಕೋಟಿ ನಷ್ಟವುಂಟಾಗಿದೆ ಎಂದೂ ಸಮಿತಿ ದೂರಿದೆ.<br /> <br /> 19 ತಿಂಗಳ ವಿಚಾರಣೆಯ ನಂತರ ಚಾಕೊ ತಮ್ಮ ವರದಿಯನ್ನು ಅ.29ರಂದು ಸ್ಪೀಕರ್ ಅವರಿಗೆ ಸಲ್ಲಿಸಿದ್ದರು. ಪಕ್ಷಪಾತದಿಂದ ಕೂಡಿರುವ ಈ ವರದಿಯನ್ನು ಹಿಂತಿರುಗಿಸಬೇಕು ಎಂದು ಮಾಜಿ ಸಚಿವ ಎ. ರಾಜಾ ಅವರು ಲೋಕಸಭೆ ಸ್ಪೀಕರ್ ಅವರನ್ನು ಒತ್ತಾಯಿಸಿದ್ದರು.<br /> <br /> ಪ್ರಧಾನಿ ಹಾಗೂ ಹಣಕಾಸು ಸಚಿವರನ್ನು ತಪ್ಪಿತಸ್ಥರ ಪಟ್ಟಿಯಿಂದ ಕೈಬಿಡುವ ನಿರ್ಧಾರ ಪ್ರತಿಭಟಿಸಿ ಸಮಿತಿ-ಯಲ್ಲಿದ್ದ ಬಿಜೆಪಿ ಸದಸ್ಯರು ಈ ಸಂಬಂಧದ ಹಲವು ಸಭೆಗಳನ್ನು ಬಹಿಷ್ಕರಿಸಿದ್ದರು.ಆದರೆ ನಂತರ ಈ ಸದಸ್ಯರು ಸಮಿತಿಯ ಸಭೆಗಳಿಗೆ ಹಾಜರಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>