<p><strong>ಖಾನಾಪುರ</strong>: ಕಳೆದ ಎರಡು ತಿಂಗಳುಗಳಿಂದ ತಾಲ್ಲೂಕಿನ ಇದ್ದಲಹೊಂಡ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡುವ ಕೌಂಟರ್ ತೆರೆಯದಿರುವ ಕಾರಣ ಇದ್ದಲಹೊಂಡ ನಿಲ್ದಾಣದ ಆಸುಪಾಸಿನಲ್ಲಿರುವ ಇದ್ದಲಹೊಂಡ, ಶಿಂಗಿನಕೊಪ್ಪ, ಗರ್ಲಗುಂಜಿ, ನಿಡಗಲ್, ಸಣ್ಣಹೊಸೂರ, ಭಂಡರಗಾಳಿ ಮುಂತಾದ ಗ್ರಾಮಗಳ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.<br /> <br /> ಪ್ರತಿನಿತ್ಯ ನೂರಾರು ಪ್ರಯಾಣಿಕರು ಈ ನಿಲ್ದಾಣದಲ್ಲಿ ನಿಲುಗಡೆಗೊಳ್ಳುವ ಕ್ಯಾಸಲರಾಕ್ ಮೀರಜ್, ಲೋಂಡಾ ಮೀರಜ್, ಹುಬ್ಬಳ್ಳಿ-ಮೀರಜ್ ಪ್ಯಾಸೆಂಜರ್ ರೈಲುಗಳ ಮೂಲಕ ಬೆಳಗಾವಿ, ಘಟಪ್ರಭಾ, ಸುಳಧಾಳ, ಮೀರಜ್, ಪಂಢರಪುರ, ರಾಯಬಾಗ, ಕುಡಚಿ, ಗೋಕಾಕ ರೋಡ್ ಮುಂತಾದೆಡೆ ಹಾಗೂ ಮೀರಜ್-ಕ್ಯಾಸಲರಾಕ್, ಮೀರಜ್ ಹುಬ್ಬಳ್ಳಿ ಹಾಗೂ ಮೀರಜ್ ಲೋಂಡಾ ರೈಲುಗಳ ಮೂಲಕ ಖಾನಾಪುರ, ಗುಂಜಿ, ದೇವರಾಯಿ, ಧಾರವಾಡ, ಹುಬ್ಬಳ್ಳಿ, ಲೋಂಡಾ, ಅಳ್ನಾವರ ಮತ್ತಿತರ ಕಡೆಗೆ ಪ್ರಯಾಣಿಸುತ್ತಾರೆ. ಆದರೆ ಕಳೆದ ಎರಡು ತಿಂಗಳುಗಳಿಂದ ಈ ರೈಲು ನಿಲ್ದಾಣದಲ್ಲಿ ಟಿಕೆಟ್ ವಿತರಿಸಲಾಗುತ್ತಿಲ್ಲ. ಹೀಗಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.<br /> <br /> ಈ ಬಗ್ಗೆ ಬೆಳಗಾವಿ ಹಾಗೂ ಖಾನಾಪುರ ರೈಲು ನಿಲ್ದಾಣದ ಅಧಿಕಾರಿಗಳನ್ನು ವಿಚಾರಿಸಿದರೆ ಇದ್ದಲಹೊಂಡ ನಿಲ್ದಾಣದ ಟಿಕೆಟ್ ವಿತರಣಾ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಗುತ್ತಿಗೆ ಆಧಾರದ ಮೇಲೆ ಖಾಸಗಿ ವ್ಯಕ್ತಿಯೋಬ್ಬರಿಗೆ ನೀಡಿದೆ. ಕಳೆದ ಹಲವಾರು ವರ್ಷಗಳಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಖಾಸಗಿ ಈ ವ್ಯಕ್ತಿ ಈಗ ಯಾರಿಗೂ ಹೇಳದೇ ಕೇಳದೇ ನಾಪತ್ತೆಯಾಗಿರುವ ಕಾರಣ ಈ ರೀತಿಯ ತೊಂದರೆಯಾಗಿದೆ. ಇಲಾಖೆಯ ವತಿಯಿಂದಲೂ ಈ ವ್ಯಕ್ತಿಯ ಶೋಧಕಾರ್ಯ ನಡೆದಿದೆ. ಈ ಬಗ್ಗೆ ಈಗಾಗಲೇ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದು, ಶೀಘ್ರದಲ್ಲಿ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡುವ ಮೂಲಕ ಟಿಕೆಟ್ ವಿತರಣೆಯನ್ನು ಪುನರಾರಂಭಿಸುತ್ತೇವೆ ಎಂದಿದ್ದಾರೆ.<br /> <br /> ಈ ನಿಲ್ದಾಣದಲ್ಲಿ ಟಿಕೆಟ್ ವಿತರಣೆ ಇಲ್ಲದ ಕಾರಣ ಅನಿವಾರ್ಯವಾಗಿ ಟಿಕೆಟ್ ಇಲ್ಲದೇ ಪ್ರಯಾಣ ಮಾಡಿದ ಈ ಭಾಗದ ಜನರನ್ನು ರೈಲ್ವೆ ತಪಾಸಣಾ ಅಧಿಕಾರಿಗಳು ತಪಾಸಣೆಗೊಳಪಡಿಸಿ ನೂರಾರು ರೂಪಾಯಿ ದಂಡ ವಿಧಿಸುತ್ತಿದ್ದಾರೆ. ಹೀಗಾಗಿ ತಮ್ಮದಲ್ಲದ ತಪ್ಪಿಗಾಗಿ ಜನರು ದಂಡ ತೆರಬೇಕಾದ ಸಂದರ್ಭ ಮೇಲಿಂದ ಮೇಲೆ ಒದಗಿ ಬರುತ್ತಿದ್ದು, ರೈಲ್ವೆ ಇಲಾಖೆ ಕೂಡಲೇ ಈ ನಿಲ್ದಾಣದಲ್ಲಿ ಟಿಕೆಟ್ ವಿತರಣಾ ವ್ಯವಸ್ಥೆಯನ್ನು ಪ್ರಾರಂಭಿಸಬೇಕು ಎಂದು ಸಂಬಂಧಪಟ್ಟವರನ್ನು ಇದ್ದಲಹೊಂಡ, ನಿಡಗಲ್, ಭಂಡರಗಾಳಿ, ಶಿಂಗಿನಕೊಪ್ಪ, ಗರ್ಲಗುಂಜಿ ಗ್ರಾಮಸ್ಥರು ಒತ್ತಾಯಿಸುತ್ತಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಖಾನಾಪುರ</strong>: ಕಳೆದ ಎರಡು ತಿಂಗಳುಗಳಿಂದ ತಾಲ್ಲೂಕಿನ ಇದ್ದಲಹೊಂಡ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡುವ ಕೌಂಟರ್ ತೆರೆಯದಿರುವ ಕಾರಣ ಇದ್ದಲಹೊಂಡ ನಿಲ್ದಾಣದ ಆಸುಪಾಸಿನಲ್ಲಿರುವ ಇದ್ದಲಹೊಂಡ, ಶಿಂಗಿನಕೊಪ್ಪ, ಗರ್ಲಗುಂಜಿ, ನಿಡಗಲ್, ಸಣ್ಣಹೊಸೂರ, ಭಂಡರಗಾಳಿ ಮುಂತಾದ ಗ್ರಾಮಗಳ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.<br /> <br /> ಪ್ರತಿನಿತ್ಯ ನೂರಾರು ಪ್ರಯಾಣಿಕರು ಈ ನಿಲ್ದಾಣದಲ್ಲಿ ನಿಲುಗಡೆಗೊಳ್ಳುವ ಕ್ಯಾಸಲರಾಕ್ ಮೀರಜ್, ಲೋಂಡಾ ಮೀರಜ್, ಹುಬ್ಬಳ್ಳಿ-ಮೀರಜ್ ಪ್ಯಾಸೆಂಜರ್ ರೈಲುಗಳ ಮೂಲಕ ಬೆಳಗಾವಿ, ಘಟಪ್ರಭಾ, ಸುಳಧಾಳ, ಮೀರಜ್, ಪಂಢರಪುರ, ರಾಯಬಾಗ, ಕುಡಚಿ, ಗೋಕಾಕ ರೋಡ್ ಮುಂತಾದೆಡೆ ಹಾಗೂ ಮೀರಜ್-ಕ್ಯಾಸಲರಾಕ್, ಮೀರಜ್ ಹುಬ್ಬಳ್ಳಿ ಹಾಗೂ ಮೀರಜ್ ಲೋಂಡಾ ರೈಲುಗಳ ಮೂಲಕ ಖಾನಾಪುರ, ಗುಂಜಿ, ದೇವರಾಯಿ, ಧಾರವಾಡ, ಹುಬ್ಬಳ್ಳಿ, ಲೋಂಡಾ, ಅಳ್ನಾವರ ಮತ್ತಿತರ ಕಡೆಗೆ ಪ್ರಯಾಣಿಸುತ್ತಾರೆ. ಆದರೆ ಕಳೆದ ಎರಡು ತಿಂಗಳುಗಳಿಂದ ಈ ರೈಲು ನಿಲ್ದಾಣದಲ್ಲಿ ಟಿಕೆಟ್ ವಿತರಿಸಲಾಗುತ್ತಿಲ್ಲ. ಹೀಗಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.<br /> <br /> ಈ ಬಗ್ಗೆ ಬೆಳಗಾವಿ ಹಾಗೂ ಖಾನಾಪುರ ರೈಲು ನಿಲ್ದಾಣದ ಅಧಿಕಾರಿಗಳನ್ನು ವಿಚಾರಿಸಿದರೆ ಇದ್ದಲಹೊಂಡ ನಿಲ್ದಾಣದ ಟಿಕೆಟ್ ವಿತರಣಾ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಗುತ್ತಿಗೆ ಆಧಾರದ ಮೇಲೆ ಖಾಸಗಿ ವ್ಯಕ್ತಿಯೋಬ್ಬರಿಗೆ ನೀಡಿದೆ. ಕಳೆದ ಹಲವಾರು ವರ್ಷಗಳಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಖಾಸಗಿ ಈ ವ್ಯಕ್ತಿ ಈಗ ಯಾರಿಗೂ ಹೇಳದೇ ಕೇಳದೇ ನಾಪತ್ತೆಯಾಗಿರುವ ಕಾರಣ ಈ ರೀತಿಯ ತೊಂದರೆಯಾಗಿದೆ. ಇಲಾಖೆಯ ವತಿಯಿಂದಲೂ ಈ ವ್ಯಕ್ತಿಯ ಶೋಧಕಾರ್ಯ ನಡೆದಿದೆ. ಈ ಬಗ್ಗೆ ಈಗಾಗಲೇ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದು, ಶೀಘ್ರದಲ್ಲಿ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡುವ ಮೂಲಕ ಟಿಕೆಟ್ ವಿತರಣೆಯನ್ನು ಪುನರಾರಂಭಿಸುತ್ತೇವೆ ಎಂದಿದ್ದಾರೆ.<br /> <br /> ಈ ನಿಲ್ದಾಣದಲ್ಲಿ ಟಿಕೆಟ್ ವಿತರಣೆ ಇಲ್ಲದ ಕಾರಣ ಅನಿವಾರ್ಯವಾಗಿ ಟಿಕೆಟ್ ಇಲ್ಲದೇ ಪ್ರಯಾಣ ಮಾಡಿದ ಈ ಭಾಗದ ಜನರನ್ನು ರೈಲ್ವೆ ತಪಾಸಣಾ ಅಧಿಕಾರಿಗಳು ತಪಾಸಣೆಗೊಳಪಡಿಸಿ ನೂರಾರು ರೂಪಾಯಿ ದಂಡ ವಿಧಿಸುತ್ತಿದ್ದಾರೆ. ಹೀಗಾಗಿ ತಮ್ಮದಲ್ಲದ ತಪ್ಪಿಗಾಗಿ ಜನರು ದಂಡ ತೆರಬೇಕಾದ ಸಂದರ್ಭ ಮೇಲಿಂದ ಮೇಲೆ ಒದಗಿ ಬರುತ್ತಿದ್ದು, ರೈಲ್ವೆ ಇಲಾಖೆ ಕೂಡಲೇ ಈ ನಿಲ್ದಾಣದಲ್ಲಿ ಟಿಕೆಟ್ ವಿತರಣಾ ವ್ಯವಸ್ಥೆಯನ್ನು ಪ್ರಾರಂಭಿಸಬೇಕು ಎಂದು ಸಂಬಂಧಪಟ್ಟವರನ್ನು ಇದ್ದಲಹೊಂಡ, ನಿಡಗಲ್, ಭಂಡರಗಾಳಿ, ಶಿಂಗಿನಕೊಪ್ಪ, ಗರ್ಲಗುಂಜಿ ಗ್ರಾಮಸ್ಥರು ಒತ್ತಾಯಿಸುತ್ತಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>