<p>ಗುಡಿಬಂಡೆ: `ತಾಯಿ ಇಲ್ಲದ ಮಗ, ಯಾರು ನೋಡಿಕೋಬೇಕು ಹೇಳು? ಅವನ ಅಪ್ಪ ಕೂಲಿಗೆ ಹೋಗದೆ ದಿನ ಕಳೆಯೋದು ಕಷ್ಟ. ಇವನನ್ನು ನೋಡಿಕೊಂಡು ಕೂತರೆ ಹೊಟ್ಟೆ ಕೇಳಬೇಕಲ್ಲ~ ಎಂದು ಪರಿಚಿತರು ನಿಟ್ಟುಸಿರಿಟ್ಟರೆ, `ಅಲ್ನೋಡು ಬೆತ್ತಲೆ ಕೂತಿದ್ದಾನೆ. ಅವನ ಮನೆಯವರಿಗಾದರೂ ಗೊತ್ತಾಗಲ್ವಾ?~ ಎಂದು ಅಪರಿಚಿತರು ಬಯ್ದುಕೊಳ್ಳುತ್ತಾರೆ. <br /> <br /> ಈ ಎರಡೂ ಬಗೆ ಮಾತಿಗೂ ತನಗೂ ಸಂಬಂಧವೆ ಇಲ್ಲ ಎಂಬ ರೀತಿಯಲ್ಲಿ ಈತ ರಸ್ತೆಬದಿಯಲ್ಲಿ ಬೆತ್ತಲೆ ಕೂತಿರುತ್ತಾನೆ.<br /> <br /> `ಈತ~ನ ಹೆಸರು ತಿಮ್ಮಪ್ಪ. ವಯಸ್ಸು 25. ಗುಡಿಬಂಡೆ ಸಮೀಪದ ಚಿಕ್ಕಬಳ್ಳಾಪುರ ತಾಲ್ಲೂಕಿನ ಬೊಮ್ಮಗಾನಹಳ್ಳಿಯವನು. ತಿಮ್ಮಪ್ಪ ಹುಟ್ಟಿನಿಂದಲೇ ಮಾನಸಿಕ ಅಸ್ವಸ್ಥ ಎಂದು ಗ್ರಾಮಸ್ಥರು ಹೇಳುತ್ತಾರೆ. <br /> <br /> ಈತನ ತಾಯಿ ಬದುಕಿರುವವರೆಗೆ ಪರಿಸ್ಥಿತಿ ಇಷ್ಟು ಹದಗೆಟ್ಟಿರಲಿಲ್ಲ. ಕೆಲ ವರ್ಷಗಳ ಹಿಂದೆ ಆಕೆ ತೀರಿಕೊಂಡರು. ಆ ನಂತರ ಮನೆಯಲ್ಲಿ ಉಳಿದಿದ್ದು ತಂದೆ- ಮಗ ಹಾಗೂ ಬಡತನ. <br /> <br /> ಕೂಲಿ ಕೆಲಸಕ್ಕೆ ಹೋಗುವ ತಂದೆಗೆ ಮಗನ ಆರೈಕೆ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. `ತಿಮ್ಮಪ್ಪ ಯಾವಾಗೆಂದರೆ ಆಗ ಮೈಮೇಲಿನ ಬಟ್ಟೆಯೆಲ್ಲ ಕಳಚಿ ರಸ್ತೆ ಮಧ್ಯಕ್ಕೆ ಬಂದು ಬಿಡುತ್ತಾನೆ. <br /> <br /> ಪೆರೆಸಂದ್ರ ಹಾಗೂ ಗುಡಿಬಂಡೆ ಮಧ್ಯೆ ಸಂಚರಿಸುವ ವಾಹನಗಳಿಗೆ ಈತ ಸಿಕ್ಕಿಕೊಂಡ ಉದಾಹರಣೆಯೂ ಇದೆ. ಸಣ್ಣ- ಪುಟ್ಟ ಗಾಯಗಳೂ ಆಗಿವೆ. ಕಷ್ಟಪಟ್ಟು ಬಟ್ಟೆ ಹಾಕಿದರೂ ಕೆಲವೇ ಕ್ಷಣಗಳಲ್ಲಿ ಕಳಚಿ ಹಾಕಿ ಮತ್ತೆ ರಸ್ತೆಗೆ ಬಂದುಬಿಡುತ್ತಾನೆ~ ಎಂದು ತಿಮ್ಮಪ್ಪನ ತಂದೆ ನಾಗಪ್ಪ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. <br /> <br /> ಈತನ ಚಿಕಿತ್ಸೆಗಾಗಿ ಪೋಷಕರು ತಮ್ಮ ಆರ್ಥಿಕ ಚೈತನ್ಯಕ್ಕೆ ನಿಲುಕುವ ಎಲ್ಲ ವೈದ್ಯರ ಬಳಿ ಎಡತಾಕಿದ್ದಾರೆ. ಆದರೆ ಏನೂ ಸುಧಾರಣೆಯಾಗಿಲ್ಲ. `ದೊಡ್ಡ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ತೋರಿಸುವುದಕ್ಕೆ ಬಡತನದ ಬಂಡೆ ಎದೆ ಮೇಲೆ ಕೂತಿದೆ~ ಎಂದು ನಾಗಪ್ಪನವರು ಮಗನೆಡೆಗೆ ದೈನ್ಯದಿಂದ ನೋಡುತ್ತಾರೆ.<br /> <br /> ತಿಮ್ಮಪ್ಪನಿಗೆ ತುರ್ತು ಮಾನಸಿಕ ಚಿಕಿತ್ಸೆ ಅಗತ್ಯವಿದೆ. ಅಂಗವಿಕಲ ಇಲಾಖೆ ಅಥವಾ ಸಹೃದಯಿಗಳ ಸಹಾಯಹಸ್ತ ದೊರೆತರೆ ತಿಮ್ಮಪ್ಪನ ಮನಸ್ಸಿಗೆ ಚಿಕಿತ್ಸೆ ದೊರಕಿಸಬಹುದು. ಸಂಪರ್ಕ ಸಂಖ್ಯೆ 8970859234.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುಡಿಬಂಡೆ: `ತಾಯಿ ಇಲ್ಲದ ಮಗ, ಯಾರು ನೋಡಿಕೋಬೇಕು ಹೇಳು? ಅವನ ಅಪ್ಪ ಕೂಲಿಗೆ ಹೋಗದೆ ದಿನ ಕಳೆಯೋದು ಕಷ್ಟ. ಇವನನ್ನು ನೋಡಿಕೊಂಡು ಕೂತರೆ ಹೊಟ್ಟೆ ಕೇಳಬೇಕಲ್ಲ~ ಎಂದು ಪರಿಚಿತರು ನಿಟ್ಟುಸಿರಿಟ್ಟರೆ, `ಅಲ್ನೋಡು ಬೆತ್ತಲೆ ಕೂತಿದ್ದಾನೆ. ಅವನ ಮನೆಯವರಿಗಾದರೂ ಗೊತ್ತಾಗಲ್ವಾ?~ ಎಂದು ಅಪರಿಚಿತರು ಬಯ್ದುಕೊಳ್ಳುತ್ತಾರೆ. <br /> <br /> ಈ ಎರಡೂ ಬಗೆ ಮಾತಿಗೂ ತನಗೂ ಸಂಬಂಧವೆ ಇಲ್ಲ ಎಂಬ ರೀತಿಯಲ್ಲಿ ಈತ ರಸ್ತೆಬದಿಯಲ್ಲಿ ಬೆತ್ತಲೆ ಕೂತಿರುತ್ತಾನೆ.<br /> <br /> `ಈತ~ನ ಹೆಸರು ತಿಮ್ಮಪ್ಪ. ವಯಸ್ಸು 25. ಗುಡಿಬಂಡೆ ಸಮೀಪದ ಚಿಕ್ಕಬಳ್ಳಾಪುರ ತಾಲ್ಲೂಕಿನ ಬೊಮ್ಮಗಾನಹಳ್ಳಿಯವನು. ತಿಮ್ಮಪ್ಪ ಹುಟ್ಟಿನಿಂದಲೇ ಮಾನಸಿಕ ಅಸ್ವಸ್ಥ ಎಂದು ಗ್ರಾಮಸ್ಥರು ಹೇಳುತ್ತಾರೆ. <br /> <br /> ಈತನ ತಾಯಿ ಬದುಕಿರುವವರೆಗೆ ಪರಿಸ್ಥಿತಿ ಇಷ್ಟು ಹದಗೆಟ್ಟಿರಲಿಲ್ಲ. ಕೆಲ ವರ್ಷಗಳ ಹಿಂದೆ ಆಕೆ ತೀರಿಕೊಂಡರು. ಆ ನಂತರ ಮನೆಯಲ್ಲಿ ಉಳಿದಿದ್ದು ತಂದೆ- ಮಗ ಹಾಗೂ ಬಡತನ. <br /> <br /> ಕೂಲಿ ಕೆಲಸಕ್ಕೆ ಹೋಗುವ ತಂದೆಗೆ ಮಗನ ಆರೈಕೆ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. `ತಿಮ್ಮಪ್ಪ ಯಾವಾಗೆಂದರೆ ಆಗ ಮೈಮೇಲಿನ ಬಟ್ಟೆಯೆಲ್ಲ ಕಳಚಿ ರಸ್ತೆ ಮಧ್ಯಕ್ಕೆ ಬಂದು ಬಿಡುತ್ತಾನೆ. <br /> <br /> ಪೆರೆಸಂದ್ರ ಹಾಗೂ ಗುಡಿಬಂಡೆ ಮಧ್ಯೆ ಸಂಚರಿಸುವ ವಾಹನಗಳಿಗೆ ಈತ ಸಿಕ್ಕಿಕೊಂಡ ಉದಾಹರಣೆಯೂ ಇದೆ. ಸಣ್ಣ- ಪುಟ್ಟ ಗಾಯಗಳೂ ಆಗಿವೆ. ಕಷ್ಟಪಟ್ಟು ಬಟ್ಟೆ ಹಾಕಿದರೂ ಕೆಲವೇ ಕ್ಷಣಗಳಲ್ಲಿ ಕಳಚಿ ಹಾಕಿ ಮತ್ತೆ ರಸ್ತೆಗೆ ಬಂದುಬಿಡುತ್ತಾನೆ~ ಎಂದು ತಿಮ್ಮಪ್ಪನ ತಂದೆ ನಾಗಪ್ಪ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. <br /> <br /> ಈತನ ಚಿಕಿತ್ಸೆಗಾಗಿ ಪೋಷಕರು ತಮ್ಮ ಆರ್ಥಿಕ ಚೈತನ್ಯಕ್ಕೆ ನಿಲುಕುವ ಎಲ್ಲ ವೈದ್ಯರ ಬಳಿ ಎಡತಾಕಿದ್ದಾರೆ. ಆದರೆ ಏನೂ ಸುಧಾರಣೆಯಾಗಿಲ್ಲ. `ದೊಡ್ಡ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ತೋರಿಸುವುದಕ್ಕೆ ಬಡತನದ ಬಂಡೆ ಎದೆ ಮೇಲೆ ಕೂತಿದೆ~ ಎಂದು ನಾಗಪ್ಪನವರು ಮಗನೆಡೆಗೆ ದೈನ್ಯದಿಂದ ನೋಡುತ್ತಾರೆ.<br /> <br /> ತಿಮ್ಮಪ್ಪನಿಗೆ ತುರ್ತು ಮಾನಸಿಕ ಚಿಕಿತ್ಸೆ ಅಗತ್ಯವಿದೆ. ಅಂಗವಿಕಲ ಇಲಾಖೆ ಅಥವಾ ಸಹೃದಯಿಗಳ ಸಹಾಯಹಸ್ತ ದೊರೆತರೆ ತಿಮ್ಮಪ್ಪನ ಮನಸ್ಸಿಗೆ ಚಿಕಿತ್ಸೆ ದೊರಕಿಸಬಹುದು. ಸಂಪರ್ಕ ಸಂಖ್ಯೆ 8970859234.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>