<p><strong>ಬೆಂಗಳೂರು:</strong> ತೋಟಗಾರಿಕಾ ಇಲಾಖೆಯಲ್ಲಿ ತೋಟಗಾರಿಕಾ ಸಹಾಯಕ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) 2010ರ ಸೆ.6ರಂದು ಕರೆದಿರುವ ಅಧಿಸೂಚನೆ ಅನ್ವಯ ಮುಂದಿನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಅಂಗವಿಕಲರ ರಕ್ಷಣೆಯ ರಾಜ್ಯ ಆಯೋಗ ಮಂಗಳವಾರ ಆದೇಶಿಸಿದೆ.<br /> <br /> ಅಂಗವಿಕಲರ ರಕ್ಷಣೆ ಕಾಯ್ದೆ-1995 ಅಡಿ ಅಂಗವಿಕಲರಿಗೆ ಮೀಸಲು ಇಡಬೇಕಿರುವ ಸ್ಥಾನವನ್ನು ಕಾಯ್ದಿರಿಸಿ ಹೊಸದಾಗಿ ಅಧಿಸೂಚನೆಯನ್ನು ಹೊರಡಿಸುವಂತೆ ಕೆಪಿಎಸ್ಸಿಗೆ ಆಯೋಗದ ಆಯುಕ್ತ ಕೆ.ವಿ.ರಾಜಣ್ಣ ಆದೇಶಿಸಿದ್ದಾರೆ. <br /> <br /> 418 ಹುದ್ದೆಗಳ ಭರ್ತಿಗೆ ಕರೆಯಲಾಗಿರುವ ಈ ಅಧಿಸೂಚನೆಯಲ್ಲಿ ನಿಯಮದ ಪ್ರಕಾರ ಅಂಗವಿಕಲರಿಗೆ ಮೀಸಲಾತಿ ನೀಡದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.<br /> <br /> ಈಗ ಹೊರಡಿಸಿರುವ ಅಧಿಸೂಚನೆಯಲ್ಲಿ ಕುಷ್ಠರೋಗದಿಂದ ಮುಕ್ತರಾದವರಿಗೆ ಮಾತ್ರ ಮೀಸಲಾತಿ ನೀಡಲಾಗಿದೆ. ಆದರೆ ನಿಯಮದ ಪ್ರಕಾರ ಎಲ್ಲ ಬಗೆಯ ಅಂಗವಿಕಲರಿಗೆ ಶೇ 5ರಷ್ಟು ಮೀಸಲಾತಿ ನೀಡಬೇಕು. ಇದರ ಉಲ್ಲಂಘನೆ ಆಗಿರುವ ಹಿನ್ನೆಲೆಯಲ್ಲಿ ಆಯೋಗಕ್ಕೆ ದೂರುಗಳು ಬಂದಿದ್ದವು. <br /> <br /> ಈ ದೂರುಗಳ ಆಧಾರದ ಮೇಲೆ ಆಯೋಗವು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿತು. ಅಂಗವಿಕಲರಿಗೆ ಮೀಸಲಾತಿ ನೀಡದೇ ಇರುವುದು ‘ಅಂಗವಿಕಲರ ರಕ್ಷಣೆ ಕಾಯ್ದೆ’ ಮಾತ್ರವಲ್ಲದೇ ‘ಕರ್ನಾಟಕ ನಾಗರಿಕ ಸೇವಾ ಕಾಯ್ದೆ’ಯ ಉಲ್ಲಂಘನೆಯೂ ಆಗಿದೆ ಎಂದು ಆಯೋಗ ಅಭಿಪ್ರಾಯ ಪಟ್ಟಿದೆ. ಈ ಸಂಬಂಧ ತೋಟಗಾರಿಕಾ ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳಿಗೆ ಸಮನ್ಸ್ ಜಾರಿ ಮಾಡಲಾಗಿತ್ತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ತೋಟಗಾರಿಕಾ ಇಲಾಖೆಯಲ್ಲಿ ತೋಟಗಾರಿಕಾ ಸಹಾಯಕ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) 2010ರ ಸೆ.6ರಂದು ಕರೆದಿರುವ ಅಧಿಸೂಚನೆ ಅನ್ವಯ ಮುಂದಿನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಅಂಗವಿಕಲರ ರಕ್ಷಣೆಯ ರಾಜ್ಯ ಆಯೋಗ ಮಂಗಳವಾರ ಆದೇಶಿಸಿದೆ.<br /> <br /> ಅಂಗವಿಕಲರ ರಕ್ಷಣೆ ಕಾಯ್ದೆ-1995 ಅಡಿ ಅಂಗವಿಕಲರಿಗೆ ಮೀಸಲು ಇಡಬೇಕಿರುವ ಸ್ಥಾನವನ್ನು ಕಾಯ್ದಿರಿಸಿ ಹೊಸದಾಗಿ ಅಧಿಸೂಚನೆಯನ್ನು ಹೊರಡಿಸುವಂತೆ ಕೆಪಿಎಸ್ಸಿಗೆ ಆಯೋಗದ ಆಯುಕ್ತ ಕೆ.ವಿ.ರಾಜಣ್ಣ ಆದೇಶಿಸಿದ್ದಾರೆ. <br /> <br /> 418 ಹುದ್ದೆಗಳ ಭರ್ತಿಗೆ ಕರೆಯಲಾಗಿರುವ ಈ ಅಧಿಸೂಚನೆಯಲ್ಲಿ ನಿಯಮದ ಪ್ರಕಾರ ಅಂಗವಿಕಲರಿಗೆ ಮೀಸಲಾತಿ ನೀಡದೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.<br /> <br /> ಈಗ ಹೊರಡಿಸಿರುವ ಅಧಿಸೂಚನೆಯಲ್ಲಿ ಕುಷ್ಠರೋಗದಿಂದ ಮುಕ್ತರಾದವರಿಗೆ ಮಾತ್ರ ಮೀಸಲಾತಿ ನೀಡಲಾಗಿದೆ. ಆದರೆ ನಿಯಮದ ಪ್ರಕಾರ ಎಲ್ಲ ಬಗೆಯ ಅಂಗವಿಕಲರಿಗೆ ಶೇ 5ರಷ್ಟು ಮೀಸಲಾತಿ ನೀಡಬೇಕು. ಇದರ ಉಲ್ಲಂಘನೆ ಆಗಿರುವ ಹಿನ್ನೆಲೆಯಲ್ಲಿ ಆಯೋಗಕ್ಕೆ ದೂರುಗಳು ಬಂದಿದ್ದವು. <br /> <br /> ಈ ದೂರುಗಳ ಆಧಾರದ ಮೇಲೆ ಆಯೋಗವು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿತು. ಅಂಗವಿಕಲರಿಗೆ ಮೀಸಲಾತಿ ನೀಡದೇ ಇರುವುದು ‘ಅಂಗವಿಕಲರ ರಕ್ಷಣೆ ಕಾಯ್ದೆ’ ಮಾತ್ರವಲ್ಲದೇ ‘ಕರ್ನಾಟಕ ನಾಗರಿಕ ಸೇವಾ ಕಾಯ್ದೆ’ಯ ಉಲ್ಲಂಘನೆಯೂ ಆಗಿದೆ ಎಂದು ಆಯೋಗ ಅಭಿಪ್ರಾಯ ಪಟ್ಟಿದೆ. ಈ ಸಂಬಂಧ ತೋಟಗಾರಿಕಾ ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳಿಗೆ ಸಮನ್ಸ್ ಜಾರಿ ಮಾಡಲಾಗಿತ್ತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>