<p><strong>ಶಿವಮೊಗ್ಗ:</strong> ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಎದುರು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಸ್ಪರ್ಧಿಸಿದ್ದರಿಂದ 2009ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರ ರಾಷ್ಟ್ರ ಮಟ್ಟದಲ್ಲಿ ಹೆಚ್ಚಿನ ಗಮನ ಸೆಳೆದಿತ್ತು.<br /> <br /> ಪರಸ್ಪರರನ್ನು ಮಣಿಸುವ ಮೇಲಾಟದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು– ಅಂದರೆ ಚುನಾವಣಾ ನೀತಿ ಸಂಹಿತೆಯ 105 ಉಲ್ಲಂಘನೆ ಪ್ರಕರಣಗಳು ಈ ಕ್ಷೇತ್ರದಿಂದಲೇ ದಾಖಲಾಗಿದ್ದವು.<br /> <br /> ಬಂಗಾರಪ್ಪ, ರಾಘವೇಂದ್ರ ಸೇರಿದಂತೆ ಹಲವು ರಾಜಕಾರಣಿಗಳ ವಿರುದ್ಧ ಈ ಕ್ಷೇತ್ರದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದ್ದವು. ಚುನಾವಣಾ ಆಯೋಗದ ಮಾಹಿತಿಯಂತೆ 80 ಪ್ರಕರಣಗಳು ಬಿಜೆಪಿ ಮೇಲೆಯೇ ಇವೆ.<br /> <br /> ಈಗ ಐದು ವರ್ಷಗಳು ಕಳೆದಿದೆ. ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಅವರ ಮೇಲೆ ಹಲವು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿದ್ದರೂ, ಅವರು ತಮ್ಮ ಅಧಿಕಾರಾವಧಿಯನ್ನು ಸಮಸ್ಯೆಗಳಿಲ್ಲದೆ ಮುಗಿಸಿದ್ದಾರೆ. ಇವರೊಬ್ಬರೇ ಅಲ್ಲ, ನೀತಿ ಸಂಹಿತೆ ಉಲ್ಲಂಘಿಸಿದ ಯಾವೊಬ್ಬ ಜನಪ್ರತಿನಿಧಿಯೂ ಇದುವರೆಗೂ ಚುನಾವಣಾ ಆಯೋಗದ ಕ್ರಮಕ್ಕೆ ಒಳಗಾಗಿಲ್ಲ!<br /> <br /> 2009ರ ‘ಮಹಾಸಮರ’ದ ಸಮಯದಲ್ಲಿ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಅವರ ಪುತ್ರನೇ ಈ ಕ್ಷೇತ್ರದ ಅಭ್ಯರ್ಥಿಯಾಗಿದ್ದರು. ಅವರಿಗೆ ಶತಾಯಗತಾಯ ಗೆಲುವು ಪಡೆಯಬೇಕಾಗಿತ್ತು. ಕಾಂಗ್ರೆಸ್ಗೂ ಇದು ಸವಾಲಿನ ಪ್ರಶ್ನೆಯಾಗಿತ್ತು. ಜೆಡಿಎಸ್ ಕೂಡ ಅದರ ನೆರವಿಗೆ ಬಂದಿತ್ತು. ಕದನದಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಲೆಕ್ಕವೇ ಇಲ್ಲದಾಯಿತು. ಕೊನೆಗೆ ಬಿಜೆಪಿ ಗೆದ್ದ ರೀತಿಯ ಬಗ್ಗೆ ಅವರದೇ ಪಕ್ಷದ ಮುಖಂಡ ಕೆ.ಎಸ್.ಈಶ್ವರಪ್ಪ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದರು. ಇದು ರಾಜಕೀಯದಲ್ಲಿ ದೊಡ್ಡ ಸುದ್ದಿಯಾಗಿತ್ತು.<br /> <br /> ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆ ಅಡಿ 27, ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸಿದ 39, ಭಾರತೀಯ ದಂಡ ಸಂಹಿತೆ ಅಡಿ 20, ಕರ್ನಾಟಕ ಪೊಲೀಸ್ ಕಾಯ್ದೆ ಉಲ್ಲಂಘಿಸಿದ 2 ಹಾಗೂ ಅಬಕಾರಿ ಇಲಾಖೆ ದಾಖಲಿಸಿದ 17, ಒಟ್ಟಾರೆ 105 ಪ್ರಕರಣಗಳು ಈ ಲೋಕಸಭಾ ಕ್ಷೇತ್ರದಲ್ಲಿ ದಾಖಲಾಗಿದ್ದವು.<br /> <br /> ಸೊರಬದ ಉಳವಿಯ ಬಿಜೆಪಿ ಪದಾಧಿಕಾರಿಯೊಬ್ಬರ ಮನೆಯಲ್ಲಿ ಅಪಾರ ಪ್ರಮಾಣದ ಮದ್ಯ ಪತ್ತೆಯಾಗಿದ್ದು, ಇದೇ ಪ್ರಕರಣದಲ್ಲಿ ಆಗ ಸಚಿವರಾಗಿದ್ದ ಎಚ್.ಹಾಲಪ್ಪ ಅವರ ಗನ್ಮನ್ನ ಬಂದೂಕಿನಿಂದ ಗುಂಡು ಸಿಡಿದಿದ್ದು, ಭದ್ರಾವತಿಯಲ್ಲಿ ಬಂಗಾರಪ್ಪ–ಬಿ.ಕೆ.ಸಂಗಮೇಶ್ವರ ಬೆಂಬಲಿಗರ ಹೊಡೆದಾಟ, ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಅವರ ವಿವಾದಾತ್ಮಕ ಭಾಷಣ, ಭದ್ರಾವತಿಯ ಕಾರೇಹಳ್ಳಿ ರಸ್ತೆ ಗಡಿಯಲ್ಲಿ ಸಿಕ್ಕ ದಾಖಲೆ ಇಲ್ಲದ ರೂ. 52 ಲಕ್ಷ, ಡಿ.ಎಚ್.ಶಂಕರಮೂರ್ತಿ ಅವರು ಸಂತ ಥಾಮಸ್ ಸಮುದಾಯ ಭವನದಲ್ಲಿ ಕಾರ್ಯಕರ್ತರಿಗೆ ಊಟ ಹಾಕಿಸಿದ್ದು, ಮತ್ತಿತರರ ಪ್ರಕರಣಗಳು ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿಗಳಾಗಿದ್ದವು. <br /> <br /> ಬಿಜೆಪಿ ಪರ ಪ್ರಚಾರಕ್ಕೆ ಬಂದ ನಟ ಜಗ್ಗೇಶ್, ಕಾಂಗ್ರೆಸ್ ಪರ ಬಂದಿದ್ದ ಮಾರ್ಗರೆಟ್ ಆಳ್ವ, ಹೋಟೆಲ್ನಲ್ಲಿ ಸಭೆ ನಡೆಸಿ ಶ್ರೀಕಾಮಾಕ್ಷಿ ಕೋ–ಆಪರೇಟಿವ್ ಸೊಸೈಟಿಗೆ ರೂ. 5 ಲಕ್ಷ ನೀಡುವ ಭರವಸೆ ನೀಡಿದ್ದ ಕೆ.ಎಸ್.ಈಶ್ವರಪ್ಪ, ಹೊಸನಗರದಲ್ಲಿ ಕಾರ್ಯಕರ್ತರ ಸಭೆಯ ಲೆಕ್ಕ ನೀಡದ ಬಿ.ವೈ.ರಾಘವೇಂದ್ರ, ಚರ್ಚ್–ಶಾದಿ ಮಹಲ್ಗಳಲ್ಲಿ ಮತಯಾಚನೆ ಮಾಡಿದ ಎಸ್.ಬಂಗಾರಪ್ಪ ವಿರುದ್ಧ ನೀತಿ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿದ್ದವು. ಊಟ ಹಾಕಿಸಿದ್ದು, ಹಣ ಹಂಚಿದ್ದು, ಅನುಮತಿ ಇಲ್ಲದೆ ವಾಹನ ಬಳಸಿದ್ದು, ಸಭೆ ನಡೆಸಿದ್ದು ಮತ್ತಿತರ ಪ್ರಕರಣಗಳಿಗೆ ಲೆಕ್ಕವೇ ಇಲ್ಲ; ದಾಖಲಾಗದ ಪ್ರಕರಣಗಳು ಇನ್ನಷ್ಟು ಇದ್ದವೊ!.<br /> <br /> ಇವುಗಳಲ್ಲಿ ಸೊರಬದ ಉಳವಿಯಲ್ಲಿ ಮದ್ಯ ದಾಸ್ತಾನು ಪ್ರಕರಣದಲ್ಲಿ ಆರೋಪಿ ನ್ಯಾಯಾಲಯದಲ್ಲಿ ಹಾಜರಾಗಿ ಷರತ್ತಿನ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ. ಬಂಗಾರಪ್ಪ–ಸಂಗಮೇಶ್ವರರ ಗಲಾಟೆಯಲ್ಲಿ ಇಂದಿಗೂ ಸಂಗಮೇಶ್ವರ ಅವರು ಪೊಲೀಸ್ ಠಾಣೆಗೆ ಓಡಾಡುತ್ತಿದ್ದಾರೆ. ಅಬಕಾರಿ ಇಲಾಖೆಯ ಎಲ್ಲಾ ಪ್ರಕರಣಗಳು ಇನ್ನೂ ವಿಚಾರಣೆಯಲ್ಲಿವೆ.<br /> <br /> ‘ಚುನಾವಣಾ ಆಯೋಗ ಪ್ರಕರಣ ದಾಖಲಿಸುತ್ತದೆ. ಮುಂದಿನ ಕ್ರಮವನ್ನು ಪೊಲೀಸರು ಜರುಗಿಸಬೇಕು. ನಾನಾ ನೆಪವೊಡ್ಡಿ ಜನಪ್ರತಿನಿಧಿಗಳ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ಹಿಂಜರಿಯುತ್ತಾರೆ. ಇದರಿಂದ ಆಯೋಗದ ಕ್ರಮಗಳ ಬಗ್ಗೆಯೇ ಜನ ಅನುಮಾನ ಪಡುವಂತಾಗುತ್ತದೆ’ ಎನ್ನುತ್ತಾರೆ ವಕೀಲ ಕೆ.ಪಿ.ಶ್ರೀಪಾಲ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಎದುರು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಸ್ಪರ್ಧಿಸಿದ್ದರಿಂದ 2009ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರ ರಾಷ್ಟ್ರ ಮಟ್ಟದಲ್ಲಿ ಹೆಚ್ಚಿನ ಗಮನ ಸೆಳೆದಿತ್ತು.<br /> <br /> ಪರಸ್ಪರರನ್ನು ಮಣಿಸುವ ಮೇಲಾಟದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು– ಅಂದರೆ ಚುನಾವಣಾ ನೀತಿ ಸಂಹಿತೆಯ 105 ಉಲ್ಲಂಘನೆ ಪ್ರಕರಣಗಳು ಈ ಕ್ಷೇತ್ರದಿಂದಲೇ ದಾಖಲಾಗಿದ್ದವು.<br /> <br /> ಬಂಗಾರಪ್ಪ, ರಾಘವೇಂದ್ರ ಸೇರಿದಂತೆ ಹಲವು ರಾಜಕಾರಣಿಗಳ ವಿರುದ್ಧ ಈ ಕ್ಷೇತ್ರದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದ್ದವು. ಚುನಾವಣಾ ಆಯೋಗದ ಮಾಹಿತಿಯಂತೆ 80 ಪ್ರಕರಣಗಳು ಬಿಜೆಪಿ ಮೇಲೆಯೇ ಇವೆ.<br /> <br /> ಈಗ ಐದು ವರ್ಷಗಳು ಕಳೆದಿದೆ. ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಅವರ ಮೇಲೆ ಹಲವು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿದ್ದರೂ, ಅವರು ತಮ್ಮ ಅಧಿಕಾರಾವಧಿಯನ್ನು ಸಮಸ್ಯೆಗಳಿಲ್ಲದೆ ಮುಗಿಸಿದ್ದಾರೆ. ಇವರೊಬ್ಬರೇ ಅಲ್ಲ, ನೀತಿ ಸಂಹಿತೆ ಉಲ್ಲಂಘಿಸಿದ ಯಾವೊಬ್ಬ ಜನಪ್ರತಿನಿಧಿಯೂ ಇದುವರೆಗೂ ಚುನಾವಣಾ ಆಯೋಗದ ಕ್ರಮಕ್ಕೆ ಒಳಗಾಗಿಲ್ಲ!<br /> <br /> 2009ರ ‘ಮಹಾಸಮರ’ದ ಸಮಯದಲ್ಲಿ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಅವರ ಪುತ್ರನೇ ಈ ಕ್ಷೇತ್ರದ ಅಭ್ಯರ್ಥಿಯಾಗಿದ್ದರು. ಅವರಿಗೆ ಶತಾಯಗತಾಯ ಗೆಲುವು ಪಡೆಯಬೇಕಾಗಿತ್ತು. ಕಾಂಗ್ರೆಸ್ಗೂ ಇದು ಸವಾಲಿನ ಪ್ರಶ್ನೆಯಾಗಿತ್ತು. ಜೆಡಿಎಸ್ ಕೂಡ ಅದರ ನೆರವಿಗೆ ಬಂದಿತ್ತು. ಕದನದಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಲೆಕ್ಕವೇ ಇಲ್ಲದಾಯಿತು. ಕೊನೆಗೆ ಬಿಜೆಪಿ ಗೆದ್ದ ರೀತಿಯ ಬಗ್ಗೆ ಅವರದೇ ಪಕ್ಷದ ಮುಖಂಡ ಕೆ.ಎಸ್.ಈಶ್ವರಪ್ಪ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದರು. ಇದು ರಾಜಕೀಯದಲ್ಲಿ ದೊಡ್ಡ ಸುದ್ದಿಯಾಗಿತ್ತು.<br /> <br /> ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆ ಅಡಿ 27, ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸಿದ 39, ಭಾರತೀಯ ದಂಡ ಸಂಹಿತೆ ಅಡಿ 20, ಕರ್ನಾಟಕ ಪೊಲೀಸ್ ಕಾಯ್ದೆ ಉಲ್ಲಂಘಿಸಿದ 2 ಹಾಗೂ ಅಬಕಾರಿ ಇಲಾಖೆ ದಾಖಲಿಸಿದ 17, ಒಟ್ಟಾರೆ 105 ಪ್ರಕರಣಗಳು ಈ ಲೋಕಸಭಾ ಕ್ಷೇತ್ರದಲ್ಲಿ ದಾಖಲಾಗಿದ್ದವು.<br /> <br /> ಸೊರಬದ ಉಳವಿಯ ಬಿಜೆಪಿ ಪದಾಧಿಕಾರಿಯೊಬ್ಬರ ಮನೆಯಲ್ಲಿ ಅಪಾರ ಪ್ರಮಾಣದ ಮದ್ಯ ಪತ್ತೆಯಾಗಿದ್ದು, ಇದೇ ಪ್ರಕರಣದಲ್ಲಿ ಆಗ ಸಚಿವರಾಗಿದ್ದ ಎಚ್.ಹಾಲಪ್ಪ ಅವರ ಗನ್ಮನ್ನ ಬಂದೂಕಿನಿಂದ ಗುಂಡು ಸಿಡಿದಿದ್ದು, ಭದ್ರಾವತಿಯಲ್ಲಿ ಬಂಗಾರಪ್ಪ–ಬಿ.ಕೆ.ಸಂಗಮೇಶ್ವರ ಬೆಂಬಲಿಗರ ಹೊಡೆದಾಟ, ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಅವರ ವಿವಾದಾತ್ಮಕ ಭಾಷಣ, ಭದ್ರಾವತಿಯ ಕಾರೇಹಳ್ಳಿ ರಸ್ತೆ ಗಡಿಯಲ್ಲಿ ಸಿಕ್ಕ ದಾಖಲೆ ಇಲ್ಲದ ರೂ. 52 ಲಕ್ಷ, ಡಿ.ಎಚ್.ಶಂಕರಮೂರ್ತಿ ಅವರು ಸಂತ ಥಾಮಸ್ ಸಮುದಾಯ ಭವನದಲ್ಲಿ ಕಾರ್ಯಕರ್ತರಿಗೆ ಊಟ ಹಾಕಿಸಿದ್ದು, ಮತ್ತಿತರರ ಪ್ರಕರಣಗಳು ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿಗಳಾಗಿದ್ದವು. <br /> <br /> ಬಿಜೆಪಿ ಪರ ಪ್ರಚಾರಕ್ಕೆ ಬಂದ ನಟ ಜಗ್ಗೇಶ್, ಕಾಂಗ್ರೆಸ್ ಪರ ಬಂದಿದ್ದ ಮಾರ್ಗರೆಟ್ ಆಳ್ವ, ಹೋಟೆಲ್ನಲ್ಲಿ ಸಭೆ ನಡೆಸಿ ಶ್ರೀಕಾಮಾಕ್ಷಿ ಕೋ–ಆಪರೇಟಿವ್ ಸೊಸೈಟಿಗೆ ರೂ. 5 ಲಕ್ಷ ನೀಡುವ ಭರವಸೆ ನೀಡಿದ್ದ ಕೆ.ಎಸ್.ಈಶ್ವರಪ್ಪ, ಹೊಸನಗರದಲ್ಲಿ ಕಾರ್ಯಕರ್ತರ ಸಭೆಯ ಲೆಕ್ಕ ನೀಡದ ಬಿ.ವೈ.ರಾಘವೇಂದ್ರ, ಚರ್ಚ್–ಶಾದಿ ಮಹಲ್ಗಳಲ್ಲಿ ಮತಯಾಚನೆ ಮಾಡಿದ ಎಸ್.ಬಂಗಾರಪ್ಪ ವಿರುದ್ಧ ನೀತಿ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿದ್ದವು. ಊಟ ಹಾಕಿಸಿದ್ದು, ಹಣ ಹಂಚಿದ್ದು, ಅನುಮತಿ ಇಲ್ಲದೆ ವಾಹನ ಬಳಸಿದ್ದು, ಸಭೆ ನಡೆಸಿದ್ದು ಮತ್ತಿತರ ಪ್ರಕರಣಗಳಿಗೆ ಲೆಕ್ಕವೇ ಇಲ್ಲ; ದಾಖಲಾಗದ ಪ್ರಕರಣಗಳು ಇನ್ನಷ್ಟು ಇದ್ದವೊ!.<br /> <br /> ಇವುಗಳಲ್ಲಿ ಸೊರಬದ ಉಳವಿಯಲ್ಲಿ ಮದ್ಯ ದಾಸ್ತಾನು ಪ್ರಕರಣದಲ್ಲಿ ಆರೋಪಿ ನ್ಯಾಯಾಲಯದಲ್ಲಿ ಹಾಜರಾಗಿ ಷರತ್ತಿನ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ. ಬಂಗಾರಪ್ಪ–ಸಂಗಮೇಶ್ವರರ ಗಲಾಟೆಯಲ್ಲಿ ಇಂದಿಗೂ ಸಂಗಮೇಶ್ವರ ಅವರು ಪೊಲೀಸ್ ಠಾಣೆಗೆ ಓಡಾಡುತ್ತಿದ್ದಾರೆ. ಅಬಕಾರಿ ಇಲಾಖೆಯ ಎಲ್ಲಾ ಪ್ರಕರಣಗಳು ಇನ್ನೂ ವಿಚಾರಣೆಯಲ್ಲಿವೆ.<br /> <br /> ‘ಚುನಾವಣಾ ಆಯೋಗ ಪ್ರಕರಣ ದಾಖಲಿಸುತ್ತದೆ. ಮುಂದಿನ ಕ್ರಮವನ್ನು ಪೊಲೀಸರು ಜರುಗಿಸಬೇಕು. ನಾನಾ ನೆಪವೊಡ್ಡಿ ಜನಪ್ರತಿನಿಧಿಗಳ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ಹಿಂಜರಿಯುತ್ತಾರೆ. ಇದರಿಂದ ಆಯೋಗದ ಕ್ರಮಗಳ ಬಗ್ಗೆಯೇ ಜನ ಅನುಮಾನ ಪಡುವಂತಾಗುತ್ತದೆ’ ಎನ್ನುತ್ತಾರೆ ವಕೀಲ ಕೆ.ಪಿ.ಶ್ರೀಪಾಲ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>