<p><strong>ರಾಯಚೂರು</strong>: ದೇವದುರ್ಗ ಉಪಚುನಾವಣೆಗೆ ಕಾಂಗ್ರೆಸ್ನಿಂದ ದಿವಂಗತ ವೆಂಕಟೇಶ ನಾಯಕ ಅವರ ಕಿರಿಯ ಪುತ್ರ ರಾಜಶೇಖರ ನಾಯಕ ಹಾಗೂ ಬಿಜೆಪಿಯಿಂದ ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರು ಬುಧವಾರ ಉಮೇದುವಾರಿಕೆ ಸಲ್ಲಿಸಿದರು.</p>.<p>ಉಭಯ ಅಭ್ಯರ್ಥಿಗಳು ತಂತಮ್ಮ ಕೆಲವೇ ಬೆಂಬಲಿಗರೊಟ್ಟಿಗೆ ಬುಧವಾರ ಬೆಳಿಗ್ಗೆ ಮುಹೂರ್ತ ಸಹಿತ ನಾಮಪತ್ರಗಳನ್ನು ಸಲ್ಲಿಸಿದರು.</p>.<p>ಇದಾದ ಬಳಿಕ ಅಭ್ಯರ್ಥಿದ್ವಯರು ಪಕ್ಷದ ಮುಖಂಡರೊಟ್ಟಿಗೆ ಬೃಹತ್ ಸಂಖ್ಯೆಯ ಬೆಂಬಲಿಗರ ಸಹಿತ ಮೆರವಣಿಗೆಯೊಂದಿಗೆ ಬಂದು ಮತ್ತೊಂದು ಸುತ್ತು ಉಮೇದುವಾರಿಕೆಗಳನ್ನು ಸಲ್ಲಿಸಿದರು.</p>.<p>ಸೋಮವಾರವೇ ನಾಮಪತ್ರ ಸಲ್ಲಿಸಿದ್ದ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಗೋಪಾಲಕೃಷ್ಣ ಅವರು ಲಿಂಗಸೂರು ಉಪವಿಭಾಗಾಧಿಕಾರಿಯೂ ಆಗಿರುವ ಚುನಾವಣಾಧಿಕಾರಿ ಆರ್.ಚೆಲುವಮಣಿ ಅವರಿಗೆ ಸೋಮವಾರ ಇನ್ನೊಂದು ಸುತ್ತು ನಾಮಪತ್ರ ಸಲ್ಲಿಸಿದರು.</p>.<p>ಫೆಬ್ರುವರಿ 13ರಂದು ಮೂರು ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿದೆ.</p>.<p>ಕಾಂಗ್ರೆಸ್ ಶಾಸಕರಾಗಿದ್ದ ವೆಂಕಟೇಶ ನಾಯಕ ಅವರು ರೈಲು ಅಪಘಾತದಲ್ಲಿ ಮೃತಪಟ್ಟಿದ್ದರಿಂದ ದೇವದುರ್ಗ ಸ್ಥಾನ ಖಾಲಿಯಾಗಿತ್ತು. ಈ ಕ್ಷೇತ್ರಕ್ಕೆ ಅವರ ಕಿರಿಯ ಪುತ್ರ ರಾಜಶೇಖರ ನಾಯಕ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ದೇವದುರ್ಗ ಉಪಚುನಾವಣೆಗೆ ಕಾಂಗ್ರೆಸ್ನಿಂದ ದಿವಂಗತ ವೆಂಕಟೇಶ ನಾಯಕ ಅವರ ಕಿರಿಯ ಪುತ್ರ ರಾಜಶೇಖರ ನಾಯಕ ಹಾಗೂ ಬಿಜೆಪಿಯಿಂದ ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರು ಬುಧವಾರ ಉಮೇದುವಾರಿಕೆ ಸಲ್ಲಿಸಿದರು.</p>.<p>ಉಭಯ ಅಭ್ಯರ್ಥಿಗಳು ತಂತಮ್ಮ ಕೆಲವೇ ಬೆಂಬಲಿಗರೊಟ್ಟಿಗೆ ಬುಧವಾರ ಬೆಳಿಗ್ಗೆ ಮುಹೂರ್ತ ಸಹಿತ ನಾಮಪತ್ರಗಳನ್ನು ಸಲ್ಲಿಸಿದರು.</p>.<p>ಇದಾದ ಬಳಿಕ ಅಭ್ಯರ್ಥಿದ್ವಯರು ಪಕ್ಷದ ಮುಖಂಡರೊಟ್ಟಿಗೆ ಬೃಹತ್ ಸಂಖ್ಯೆಯ ಬೆಂಬಲಿಗರ ಸಹಿತ ಮೆರವಣಿಗೆಯೊಂದಿಗೆ ಬಂದು ಮತ್ತೊಂದು ಸುತ್ತು ಉಮೇದುವಾರಿಕೆಗಳನ್ನು ಸಲ್ಲಿಸಿದರು.</p>.<p>ಸೋಮವಾರವೇ ನಾಮಪತ್ರ ಸಲ್ಲಿಸಿದ್ದ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಗೋಪಾಲಕೃಷ್ಣ ಅವರು ಲಿಂಗಸೂರು ಉಪವಿಭಾಗಾಧಿಕಾರಿಯೂ ಆಗಿರುವ ಚುನಾವಣಾಧಿಕಾರಿ ಆರ್.ಚೆಲುವಮಣಿ ಅವರಿಗೆ ಸೋಮವಾರ ಇನ್ನೊಂದು ಸುತ್ತು ನಾಮಪತ್ರ ಸಲ್ಲಿಸಿದರು.</p>.<p>ಫೆಬ್ರುವರಿ 13ರಂದು ಮೂರು ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿದೆ.</p>.<p>ಕಾಂಗ್ರೆಸ್ ಶಾಸಕರಾಗಿದ್ದ ವೆಂಕಟೇಶ ನಾಯಕ ಅವರು ರೈಲು ಅಪಘಾತದಲ್ಲಿ ಮೃತಪಟ್ಟಿದ್ದರಿಂದ ದೇವದುರ್ಗ ಸ್ಥಾನ ಖಾಲಿಯಾಗಿತ್ತು. ಈ ಕ್ಷೇತ್ರಕ್ಕೆ ಅವರ ಕಿರಿಯ ಪುತ್ರ ರಾಜಶೇಖರ ನಾಯಕ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>