<p>ಬದಿಯಡ್ಕ: `ಪ್ರತಿಯೊಂದು ಊರಿನಲ್ಲೂ ಇರುವ ದೇವಾಲಯಗಳು ಊರಿಗೆ ಕಣ್ಣುಗಳಂತೆ ಕೆಲಸ ಮಾಡುತ್ತದೆ. ಯುಗಾದಿಯ ದಿನ ಏತಡ್ಕ ಸದಾಶಿವ ಕ್ಷೇತ್ರದ ಭೋಜನಶಾಲೆ ಲೋಕಾರ್ಪಣೆ ಆಗಿರುವುದು ಔಚಿತ್ಯಪೂರ್ಣ~ ಎಂದು ಪತ್ತಡ್ಕ ಗಣಪತಿ ಭಟ್ ಹೇಳಿದರು. <br /> <br /> ಏತಡ್ಕದ ಸದಾಶಿವ ಕ್ಷೇತ್ರದ ನೂತನ ಭೋಜನ ಶಾಲೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಡಾ.ವೈ. ಸುಬ್ರಾಯ ಭಟ್ ವಹಿಸಿದ್ದರು. <br /> <br /> ಕಾರ್ಯಕ್ರಮದಲ್ಲಿ ಕಾರಿಂಜ ಹಳೆಮನೆ ಶಿವರಾಮ ಭಟ್, ಕೈಂತಜೆ ಶಂಕರಿ ಅಮ್ಮ, ಡಾ.ಪ್ರಕಾಶ್ ವೈ, ಸ್ತುತಿ ಏತಡ್ಕ, ಚಂದ್ರಶೇಖರ ಏತಡ್ಕ, ಟಿ.ಶಂಕರನಾರಾಯಣ ಭಟ್, ವೈ. ವೆಂಕಟ್ರಮಣ ಭಟ್ ಇದ್ದರು.<br /> <br /> ಈ ಸಂದರ್ಭದಲ್ಲಿ ಭೋಜನ ಶಾಲೆಯ ತಾಂತ್ರಿಕ ಸಲಹೆಗಾರ ಕಿನಿಲ ರವಿ ಅವರಿಗೆ ನೀಡಿದ ಸನ್ಮಾನವನ್ನು ಉಷಾ ನಂಜನಗೂಡು ಸ್ವೀಕರಿಸಿದರು.<br /> <br /> ಈ ಸಂದರ್ಭದಲ್ಲಿ ಗಮಕ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನಡೆದ ಗಮಕ ಕಾರ್ಯಕ್ರಮದಲ್ಲಿ ವಿದ್ವಾನ್ ಕೈಂತಜೆ ನರಸಿಂಹ ಭಟ್ `ಪಾಶುಪತ ಪ್ರದಾನ~ ಕುರಿತಾದ ಕಾವ್ಯವಾಚನ ಮಾಡಿದರು. ಮುಖ್ಯ ಶಿಕ್ಷಕ ನರಹರಿ ವ್ಯಖ್ಯಾನ ನೀಡಿದರು. ನಂತರ ಕಳತ್ತೂರಿನ ಮಹಾದೇವಿ ಮಹಿಳಾ ಭಜನಾ ಸಂಘದ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬದಿಯಡ್ಕ: `ಪ್ರತಿಯೊಂದು ಊರಿನಲ್ಲೂ ಇರುವ ದೇವಾಲಯಗಳು ಊರಿಗೆ ಕಣ್ಣುಗಳಂತೆ ಕೆಲಸ ಮಾಡುತ್ತದೆ. ಯುಗಾದಿಯ ದಿನ ಏತಡ್ಕ ಸದಾಶಿವ ಕ್ಷೇತ್ರದ ಭೋಜನಶಾಲೆ ಲೋಕಾರ್ಪಣೆ ಆಗಿರುವುದು ಔಚಿತ್ಯಪೂರ್ಣ~ ಎಂದು ಪತ್ತಡ್ಕ ಗಣಪತಿ ಭಟ್ ಹೇಳಿದರು. <br /> <br /> ಏತಡ್ಕದ ಸದಾಶಿವ ಕ್ಷೇತ್ರದ ನೂತನ ಭೋಜನ ಶಾಲೆಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಡಾ.ವೈ. ಸುಬ್ರಾಯ ಭಟ್ ವಹಿಸಿದ್ದರು. <br /> <br /> ಕಾರ್ಯಕ್ರಮದಲ್ಲಿ ಕಾರಿಂಜ ಹಳೆಮನೆ ಶಿವರಾಮ ಭಟ್, ಕೈಂತಜೆ ಶಂಕರಿ ಅಮ್ಮ, ಡಾ.ಪ್ರಕಾಶ್ ವೈ, ಸ್ತುತಿ ಏತಡ್ಕ, ಚಂದ್ರಶೇಖರ ಏತಡ್ಕ, ಟಿ.ಶಂಕರನಾರಾಯಣ ಭಟ್, ವೈ. ವೆಂಕಟ್ರಮಣ ಭಟ್ ಇದ್ದರು.<br /> <br /> ಈ ಸಂದರ್ಭದಲ್ಲಿ ಭೋಜನ ಶಾಲೆಯ ತಾಂತ್ರಿಕ ಸಲಹೆಗಾರ ಕಿನಿಲ ರವಿ ಅವರಿಗೆ ನೀಡಿದ ಸನ್ಮಾನವನ್ನು ಉಷಾ ನಂಜನಗೂಡು ಸ್ವೀಕರಿಸಿದರು.<br /> <br /> ಈ ಸಂದರ್ಭದಲ್ಲಿ ಗಮಕ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನಡೆದ ಗಮಕ ಕಾರ್ಯಕ್ರಮದಲ್ಲಿ ವಿದ್ವಾನ್ ಕೈಂತಜೆ ನರಸಿಂಹ ಭಟ್ `ಪಾಶುಪತ ಪ್ರದಾನ~ ಕುರಿತಾದ ಕಾವ್ಯವಾಚನ ಮಾಡಿದರು. ಮುಖ್ಯ ಶಿಕ್ಷಕ ನರಹರಿ ವ್ಯಖ್ಯಾನ ನೀಡಿದರು. ನಂತರ ಕಳತ್ತೂರಿನ ಮಹಾದೇವಿ ಮಹಿಳಾ ಭಜನಾ ಸಂಘದ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>