<p><strong>ಹುಬ್ಬಳ್ಳಿ:</strong> `ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಮೀಸಲಾತಿ ಸೌಲಭ್ಯವನ್ನು ಮುಂದುವರಿಸುವುದು ಅತ್ಯಗತ್ಯವಾಗಿದೆ~ ಎಂದು ಪ್ರತಿಪಾದಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಕಾರ್ಯವಾಹ ಸುರೇಶ (ಭಯ್ಯಾಜಿ) ಜೋಶಿ, `ಧರ್ಮಾಧಾರಿತ ಮೀಸಲಾತಿಗೆ ನಮ್ಮ ವಿರೋಧವಿದೆ~ ಎಂದೂ ತಿಳಿಸಿದರು.<br /> <br /> ನಗರದಲ್ಲಿ ಏರ್ಪಡಿಸಿರುವ `ಹಿಂದೂ ಶಕ್ತಿ ಸಂಗಮ~ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು, ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. <br /> <br /> `ಹಿಂದೂಗಳಲ್ಲಿಯೇ ಹಿಂದುಳಿದ ಜಾತಿಗಳಿಗೆ ಈ ಸೌಲಭ್ಯ ದೊರೆಯಬೇಕೇ ವಿನಃ ಒಬಿಸಿ ಕೋಟಾದ ಅಡಿಯಲ್ಲಿ ಮುಸ್ಲಿಮರು ಸೇರಿದಂತೆ ಇತರ ಧರ್ಮಗಳ ಸಾಮಾನ್ಯ ವರ್ಗಗಳಿಗೆ ಅವಕಾಶ ನೀಡುವುದಕ್ಕೆ ನಮ್ಮ ವಿರೋಧವಿದೆ. ಮತಬ್ಯಾಂಕ್ ಹೊಂದುವ ಉದ್ದೇಶದಿಂದ ಧರ್ಮಾಧಾರಿತ ಮೀಸಲಾತಿ ಕಲ್ಪಿಸುವಂತಹ ರಾಜಕೀಯ ಆಟ ಆಡಲಾಗುತ್ತಿದೆ~ ಎಂದು ಕಿಡಿಕಾರಿದರು.<br /> <br /> `ಯಾವುದೇ ಕಾರಣಕ್ಕೂ ಮೀಸಲಾತಿ ಪ್ರಮಾಣ ಶೇ 50 ಮೀರಬಾರದು. ಇದರಿಂದ ಇನ್ನೊಂದು ರೀತಿಯ ಸಮಸ್ಯೆ ಉದ್ಭವವಾಗುತ್ತದೆ. ಉಳಿದವರ ಹಕ್ಕಿನ ಮೇಲೆ ಏಟು ಬೀಳುತ್ತದೆ. ಆದ್ದರಿಂದಲೇ ಸುಪ್ರೀಂ ಕೋರ್ಟ್ ಈ ಮಿತಿಯನ್ನು ಹೇರಿದೆ~ ಎಂದು ತಿಳಿಸಿದರು. <br /> <br /> `ಸಂಘ ಪರಿವಾರದಿಂದ ಎಲ್ಲ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಶ್ರಮಿಸಲಾಗುತ್ತಿದೆ. ಆದರೆ, ಈ ಕೆಲಸ ಇನ್ನೂ ಪೂರ್ಣ ತೃಪ್ತಿತಂದಿಲ್ಲ. ದೀನ-ದಲಿತರ ಪ್ರಗತಿಗಾಗಿ ಆರ್ಎಸ್ಎಸ್ ಇನ್ನಷ್ಟು ಸಕ್ರಿಯವಾಗಿ ಶ್ರಮಿಸಲಿದೆ~ ಎಂದು ಅವರು ಹೇಳಿದರು.<br /> <br /> `ಜಗತ್ತಿನ ತುಂಬಾ ಹೆಚ್ಚಿರುವ ಆತಂಕವಾದ, ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ತಲೆ ಎತ್ತಿರುವ ಪ್ರತ್ಯೇಕತಾವಾದ, ಅನಕ್ಷರತೆ, ಬಡತನ, ಜಾತಿಭೇದ, ಗಡಿಯಲ್ಲಿ ಹೆಚ್ಚಿರುವ ನುಸುಳುವಿಕೆ, ಆಂತರಿಕವಾಗಿ ಕಾಡುವ ಗಡಿ ಹಾಗೂ ಭಾಷಾ ವಿವಾದಗಳೇ ದೇಶ, ಹಿಂದೂ ಸಮಾಜ ಮತ್ತು ಸಂಘದ ಮುಂದಿರುವ ಪ್ರಮುಖ ಸವಾಲುಗಳಾಗಿವೆ~ ಎಂದು ಜೋಶಿ ವಿವರಿಸಿದರು.<br /> <br /> `ಕ್ರಿಶ್ಚಿಯನ್ ಮಿಷನರಿಗಳು ಸಮಾಜ ಸೇವೆ ಹೆಸರಿನಲ್ಲಿ ತಮ್ಮ ಧರ್ಮವನ್ನು ಹೇರುವ ಯತ್ನ ಮಾಡುತ್ತಿವೆ. ಹಿಂದೂಗಳು ಇಂತಹ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಿದೆ~ ಎಂದು ಅವರು ಹೇಳಿದರು.<br /> <br /> `ಒಳ್ಳೆಯ ಸರ್ಕಾರ ನೀಡಬೇಕು. ರಾಷ್ಟ್ರ ಮತ್ತು ಜನರ ಸೇವೆ ಮಾಡಬೇಕು ಎಂಬ ಸಲಹೆಯನ್ನು ಸಂಘದ ಹಿನ್ನೆಲೆ ಹೊಂದಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಯಾರೇ ತಪ್ಪು ಮಾಡಿದರೂ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸುವ ದಾರಿ ಮುಕ್ತವಾಗಿದೆ~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.<br /> <br /> ಸಂಘದ ದಕ್ಷಿಣ-ಮಧ್ಯ ಪ್ರಾಂತ ಸಂಚಾಲಕ ನ್ಯಾ. ಪರ್ವತರಾವ್, ಉತ್ತರ ಕರ್ನಾಟಕ ಪ್ರಾಂತ ಕಾರ್ಯವಾಹ ಅರವಿಂದ ದೇಶಪಾಂಡೆ, ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಜಿಗಜಿನ್ನಿ ಹಾಜರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> `ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಮೀಸಲಾತಿ ಸೌಲಭ್ಯವನ್ನು ಮುಂದುವರಿಸುವುದು ಅತ್ಯಗತ್ಯವಾಗಿದೆ~ ಎಂದು ಪ್ರತಿಪಾದಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಕಾರ್ಯವಾಹ ಸುರೇಶ (ಭಯ್ಯಾಜಿ) ಜೋಶಿ, `ಧರ್ಮಾಧಾರಿತ ಮೀಸಲಾತಿಗೆ ನಮ್ಮ ವಿರೋಧವಿದೆ~ ಎಂದೂ ತಿಳಿಸಿದರು.<br /> <br /> ನಗರದಲ್ಲಿ ಏರ್ಪಡಿಸಿರುವ `ಹಿಂದೂ ಶಕ್ತಿ ಸಂಗಮ~ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು, ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. <br /> <br /> `ಹಿಂದೂಗಳಲ್ಲಿಯೇ ಹಿಂದುಳಿದ ಜಾತಿಗಳಿಗೆ ಈ ಸೌಲಭ್ಯ ದೊರೆಯಬೇಕೇ ವಿನಃ ಒಬಿಸಿ ಕೋಟಾದ ಅಡಿಯಲ್ಲಿ ಮುಸ್ಲಿಮರು ಸೇರಿದಂತೆ ಇತರ ಧರ್ಮಗಳ ಸಾಮಾನ್ಯ ವರ್ಗಗಳಿಗೆ ಅವಕಾಶ ನೀಡುವುದಕ್ಕೆ ನಮ್ಮ ವಿರೋಧವಿದೆ. ಮತಬ್ಯಾಂಕ್ ಹೊಂದುವ ಉದ್ದೇಶದಿಂದ ಧರ್ಮಾಧಾರಿತ ಮೀಸಲಾತಿ ಕಲ್ಪಿಸುವಂತಹ ರಾಜಕೀಯ ಆಟ ಆಡಲಾಗುತ್ತಿದೆ~ ಎಂದು ಕಿಡಿಕಾರಿದರು.<br /> <br /> `ಯಾವುದೇ ಕಾರಣಕ್ಕೂ ಮೀಸಲಾತಿ ಪ್ರಮಾಣ ಶೇ 50 ಮೀರಬಾರದು. ಇದರಿಂದ ಇನ್ನೊಂದು ರೀತಿಯ ಸಮಸ್ಯೆ ಉದ್ಭವವಾಗುತ್ತದೆ. ಉಳಿದವರ ಹಕ್ಕಿನ ಮೇಲೆ ಏಟು ಬೀಳುತ್ತದೆ. ಆದ್ದರಿಂದಲೇ ಸುಪ್ರೀಂ ಕೋರ್ಟ್ ಈ ಮಿತಿಯನ್ನು ಹೇರಿದೆ~ ಎಂದು ತಿಳಿಸಿದರು. <br /> <br /> `ಸಂಘ ಪರಿವಾರದಿಂದ ಎಲ್ಲ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಶ್ರಮಿಸಲಾಗುತ್ತಿದೆ. ಆದರೆ, ಈ ಕೆಲಸ ಇನ್ನೂ ಪೂರ್ಣ ತೃಪ್ತಿತಂದಿಲ್ಲ. ದೀನ-ದಲಿತರ ಪ್ರಗತಿಗಾಗಿ ಆರ್ಎಸ್ಎಸ್ ಇನ್ನಷ್ಟು ಸಕ್ರಿಯವಾಗಿ ಶ್ರಮಿಸಲಿದೆ~ ಎಂದು ಅವರು ಹೇಳಿದರು.<br /> <br /> `ಜಗತ್ತಿನ ತುಂಬಾ ಹೆಚ್ಚಿರುವ ಆತಂಕವಾದ, ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ತಲೆ ಎತ್ತಿರುವ ಪ್ರತ್ಯೇಕತಾವಾದ, ಅನಕ್ಷರತೆ, ಬಡತನ, ಜಾತಿಭೇದ, ಗಡಿಯಲ್ಲಿ ಹೆಚ್ಚಿರುವ ನುಸುಳುವಿಕೆ, ಆಂತರಿಕವಾಗಿ ಕಾಡುವ ಗಡಿ ಹಾಗೂ ಭಾಷಾ ವಿವಾದಗಳೇ ದೇಶ, ಹಿಂದೂ ಸಮಾಜ ಮತ್ತು ಸಂಘದ ಮುಂದಿರುವ ಪ್ರಮುಖ ಸವಾಲುಗಳಾಗಿವೆ~ ಎಂದು ಜೋಶಿ ವಿವರಿಸಿದರು.<br /> <br /> `ಕ್ರಿಶ್ಚಿಯನ್ ಮಿಷನರಿಗಳು ಸಮಾಜ ಸೇವೆ ಹೆಸರಿನಲ್ಲಿ ತಮ್ಮ ಧರ್ಮವನ್ನು ಹೇರುವ ಯತ್ನ ಮಾಡುತ್ತಿವೆ. ಹಿಂದೂಗಳು ಇಂತಹ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಿದೆ~ ಎಂದು ಅವರು ಹೇಳಿದರು.<br /> <br /> `ಒಳ್ಳೆಯ ಸರ್ಕಾರ ನೀಡಬೇಕು. ರಾಷ್ಟ್ರ ಮತ್ತು ಜನರ ಸೇವೆ ಮಾಡಬೇಕು ಎಂಬ ಸಲಹೆಯನ್ನು ಸಂಘದ ಹಿನ್ನೆಲೆ ಹೊಂದಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಯಾರೇ ತಪ್ಪು ಮಾಡಿದರೂ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸುವ ದಾರಿ ಮುಕ್ತವಾಗಿದೆ~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.<br /> <br /> ಸಂಘದ ದಕ್ಷಿಣ-ಮಧ್ಯ ಪ್ರಾಂತ ಸಂಚಾಲಕ ನ್ಯಾ. ಪರ್ವತರಾವ್, ಉತ್ತರ ಕರ್ನಾಟಕ ಪ್ರಾಂತ ಕಾರ್ಯವಾಹ ಅರವಿಂದ ದೇಶಪಾಂಡೆ, ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಜಿಗಜಿನ್ನಿ ಹಾಜರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>