<p><strong>ಹೆಬ್ರಿ : </strong>ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪೊಲೀಸರು ಮುಕ್ತ ಶಾಂತಿಯುತ ಮತದಾನಕ್ಕಾಗಿ ಸಿದ್ಧತೆ ಗಳನ್ನು ನಡೆಸುತ್ತಿದ್ದಾರೆ.<br /> ನಕ್ಸಲ್ ಪೀಡಿತ ಅತೀ ಸೂಕ್ಷ್ಮ ಪ್ರದೇಶದ ಮತಗಟ್ಟೆಗಳಿಗೆ ಪೊಲೀಸ್ ವಿಶೇಷ ಭದ್ರತೆ ಒದಗಿಸಲು ಬಂಕರ್ ನಿರ್ಮಾ ಣಕ್ಕಾಗಿ ಹೆಬ್ರಿ ಪೊಲೀಸರು ಗೋಣಿ ಚೀಲದಲ್ಲಿ ಮರಳು ತುಂಬಿಸಿ ಸನ್ನದ್ಧ ಸ್ಥಿತಿಯಲ್ಲಿರಿಸಿದ್ದಾರೆ.<br /> <br /> ಜಿಲ್ಲಾ ಚುನಾವಣಾಧಿಕಾರಿಗಳಾದ ಉಡುಪಿ ಜಿಲ್ಲಾಧಿಕಾರಿ ಡಾ.ಮುದ್ದು ಮೊೀಹನ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಬಿ. ಬೋರ ಲಿಂಗಯ್ಯ ಅವರು ನಕ್ಸಲ್ ಪೀಡಿತ ಅತೀ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.<br /> <br /> ನಿರಂತರ ಕೂಂಬಿಂಗ್: ಲೋಕಸಭಾ ಚುನಾವಣೆ ಘೋಷಣೆ ಯಾದ ಬಳಿಕ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳ ಮಾರ್ಗ ದರ್ಶನದಲ್ಲಿ ನಕ್ಸಲ್ ನಿಗ್ರಹ ಯೋಧರ ಕೂಂಬಿಂಗ್ ನಡೆಯುತ್ತಿದೆ.<br /> <br /> ಕೇರಳ ಪೊಲೀಸ್: ಚುನಾವಣೆಗೆ ವಿಶೇಷ ಭಧ್ರತೆ ನೀಡುವ ಹಿನ್ನೆಲೆಯಲ್ಲಿ ಸುಮಾರು 80 ಕೇರಳ ರಾಜ್ಯ ಪೊಲೀ ಸರು ವಾರದ ಹಿಂದೆಯೇ ಹೆಬ್ರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ಚುನಾವಣೆಗೆ ಮೂರ್ನಾಲ್ಕು ದಿನವಿರುವಾಗ ಹೊರ ರಾಜ್ಯದ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿತ್ತು. ಆದರೆ ಈ ಭಾರಿ ಹಲವು ದಿನ ಇರುವಾಗಲೇ ಪೊಲೀಸ ರನ್ನು ನಿಯೋಜಿಸಿರುವುದು ವಿಶೇಷವಾ ಗಿತ್ತು. ಹೆಬ್ರಿ ಪೊಲೀಸರು ಚುನಾವಣೆಗೆ ಭದ್ರತೆಯ ಹೊಣೆಹೊತ್ತು ಸನ್ನದ್ದರಾಗಿ ದ್ದಾರೆ. ನಕ್ಸಲ್ ನಿಗ್ರಹ ದಳ ಹದ್ದಿನ ಕಣ್ಣಿಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೆಬ್ರಿ : </strong>ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪೊಲೀಸರು ಮುಕ್ತ ಶಾಂತಿಯುತ ಮತದಾನಕ್ಕಾಗಿ ಸಿದ್ಧತೆ ಗಳನ್ನು ನಡೆಸುತ್ತಿದ್ದಾರೆ.<br /> ನಕ್ಸಲ್ ಪೀಡಿತ ಅತೀ ಸೂಕ್ಷ್ಮ ಪ್ರದೇಶದ ಮತಗಟ್ಟೆಗಳಿಗೆ ಪೊಲೀಸ್ ವಿಶೇಷ ಭದ್ರತೆ ಒದಗಿಸಲು ಬಂಕರ್ ನಿರ್ಮಾ ಣಕ್ಕಾಗಿ ಹೆಬ್ರಿ ಪೊಲೀಸರು ಗೋಣಿ ಚೀಲದಲ್ಲಿ ಮರಳು ತುಂಬಿಸಿ ಸನ್ನದ್ಧ ಸ್ಥಿತಿಯಲ್ಲಿರಿಸಿದ್ದಾರೆ.<br /> <br /> ಜಿಲ್ಲಾ ಚುನಾವಣಾಧಿಕಾರಿಗಳಾದ ಉಡುಪಿ ಜಿಲ್ಲಾಧಿಕಾರಿ ಡಾ.ಮುದ್ದು ಮೊೀಹನ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಬಿ. ಬೋರ ಲಿಂಗಯ್ಯ ಅವರು ನಕ್ಸಲ್ ಪೀಡಿತ ಅತೀ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.<br /> <br /> ನಿರಂತರ ಕೂಂಬಿಂಗ್: ಲೋಕಸಭಾ ಚುನಾವಣೆ ಘೋಷಣೆ ಯಾದ ಬಳಿಕ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳ ಮಾರ್ಗ ದರ್ಶನದಲ್ಲಿ ನಕ್ಸಲ್ ನಿಗ್ರಹ ಯೋಧರ ಕೂಂಬಿಂಗ್ ನಡೆಯುತ್ತಿದೆ.<br /> <br /> ಕೇರಳ ಪೊಲೀಸ್: ಚುನಾವಣೆಗೆ ವಿಶೇಷ ಭಧ್ರತೆ ನೀಡುವ ಹಿನ್ನೆಲೆಯಲ್ಲಿ ಸುಮಾರು 80 ಕೇರಳ ರಾಜ್ಯ ಪೊಲೀ ಸರು ವಾರದ ಹಿಂದೆಯೇ ಹೆಬ್ರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ಚುನಾವಣೆಗೆ ಮೂರ್ನಾಲ್ಕು ದಿನವಿರುವಾಗ ಹೊರ ರಾಜ್ಯದ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿತ್ತು. ಆದರೆ ಈ ಭಾರಿ ಹಲವು ದಿನ ಇರುವಾಗಲೇ ಪೊಲೀಸ ರನ್ನು ನಿಯೋಜಿಸಿರುವುದು ವಿಶೇಷವಾ ಗಿತ್ತು. ಹೆಬ್ರಿ ಪೊಲೀಸರು ಚುನಾವಣೆಗೆ ಭದ್ರತೆಯ ಹೊಣೆಹೊತ್ತು ಸನ್ನದ್ದರಾಗಿ ದ್ದಾರೆ. ನಕ್ಸಲ್ ನಿಗ್ರಹ ದಳ ಹದ್ದಿನ ಕಣ್ಣಿಟ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>