<p>ಕುಂಜಾರುಗಿರಿ ದೇಗುಲದಲ್ಲಿ ಪಂಕ್ತಿಭೇದ ಆಚರಿಸುತ್ತಿರುವ ಕುರಿತು ಮಣಿಪಾಲದ ದೀಪಾಲಿ ಕಾಮತ್ ಎತ್ತಿರುವ ಪ್ರಶ್ನೆಗಳಿಗಾಗಿ ನಾನವರನ್ನು ಅಭಿನಂದಿಸುತ್ತೇನೆ. ಆದರೆ ಜಾತೀಯತೆ ಆಚರಿಸುವುದರಲ್ಲಿ ಗೌಡ ಸಾರಸ್ವತರು ಕೂಡ ಹಿಂದೆ ಇಲ್ಲ ಎಂದು ಹೇಳಬಯಸುವೆ.<br /> <br /> ಇದು 40 ವರುಷದ ಹಿಂದಿನ ಕತೆ. ಶಿವಮೊಗ್ಗೆಯ ಸಾರಸ್ವತ ಕಲ್ಯಾಣಮಂಟಪದಲ್ಲಿ ಸಾರಸ್ವತ ಜನಾಂಗದ ಎಲ್ಲರಿಗೆ ಊರೂಟ ಇತ್ತು. (ಗಾಂವ್ ಜವಣ್) ಊಟದ ಸಮಯದಲ್ಲಿ ನನ್ನ ಎದುರಿಗೆ ಊಟದ ಎಲೆಯ ಮುಂದೆ ಕೂತ ಮನುಷ್ಯನನ್ನು ಎಬ್ಬಿಸಲಾಯಿತು. <br /> <br /> ಯಾಕೆಂದು ನನ್ನ ತಾಯಿಯವರನ್ನು ಕೇಳಿದೆ. `ಅವನು ನಮ್ಮ ಜಾತಿಯವನಲ್ಲ, ಅದಕ್ಕೆ~ ಎಂದರು. ಅವನು ನೋಡುವುದಕ್ಕೆ ನಮ್ಮ ಹಾಗೆಯೇ ಇದ್ದಾನೆ ಅವನು ಬೇರೆ ಜಾತಿ ಎಂದು ಹೇಗೆ ಗೊತ್ತಾಯಿತು ಎಂದು ಕೇಳಿದೆ. ಅವನ ಭಾಷೆಯಿಂದ ಎಂದರು. <br /> <br /> ಒಳ್ಳೆ ಮೂಕನ ಹಾಗೆ ಕುಳಿತಿದ್ದಾನೆ. ಅವನು ಮಾತೇ ಆಡಿಲ್ಲವಲ್ಲ ಎಂದೆ. ತೋಂಡ್ ದಂಪ್ರನು ಬಸ್ಲಾ... ಕಶ್ಯಿ ಕಳ್ಳೆ? ತೂ ತೋಂಡ್ ದಂಪ್ರನು ಬೈಸ... ಅಂತ ನನ್ನ ತಾಯಿ ನನ್ನ ಬಾಯಿ ಮುಚ್ಚಿಸಿದರು. ಅಂದಿನಿಂದ ನಾನಂತು ಊರೂಟಗಳಿಗೆ ಹೋಗುವುದನ್ನು ನಿಲ್ಲಿಸಿದೆ!<br /> <br /> ನಾವು ಬದಲಾಗದೆ ಜಗತ್ತು ಬದಲಾಗುವುದೆ? ಮನೆಯಲ್ಲಿ ಊಟ ಇಲ್ಲ ಎಂದು ಯಾರೂ ದೇಗುಲಕ್ಕೆ ಊಟಕ್ಕೆ ಹೋಗುವುದಿಲ್ಲ. <br /> <br /> ಒಂದೊಮ್ಮೆ ಹಾಗೆ ಹೋದರೂ ಅನ್ನದೇವರ ಮುಂದೆ ಕುಳಿತವನನ್ನು ಎಬ್ಬಿಸುವುದು ಮಾನವೀಯತೆ ಅಲ್ಲ. ಜಗತ್ತು ಎಷ್ಟೆಲ್ಲ ಬದಲಾಗಿದೆ ಎಂದು ಹೇಳುತ್ತಿರುತ್ತೇವೆ. ಆದರೆ ನಾವು ಬದಲಾಗಿದ್ದೇವೆಯೇ?<br /> <br /> ಎಲ್ಲರು ಉಣ್ಣುವ ಅನ್ನ ಒಂದೇ. ಆದರೆ ಊಟ ಮಾಡುವ ಮನುಷ್ಯರು ಮಾತ್ರ ಬೇರೆ ಬೇರೆ ಎಂದು ತಿಳಿಯುವ ಪರಿ ವಿಚಿತ್ರದ್ದಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುಂಜಾರುಗಿರಿ ದೇಗುಲದಲ್ಲಿ ಪಂಕ್ತಿಭೇದ ಆಚರಿಸುತ್ತಿರುವ ಕುರಿತು ಮಣಿಪಾಲದ ದೀಪಾಲಿ ಕಾಮತ್ ಎತ್ತಿರುವ ಪ್ರಶ್ನೆಗಳಿಗಾಗಿ ನಾನವರನ್ನು ಅಭಿನಂದಿಸುತ್ತೇನೆ. ಆದರೆ ಜಾತೀಯತೆ ಆಚರಿಸುವುದರಲ್ಲಿ ಗೌಡ ಸಾರಸ್ವತರು ಕೂಡ ಹಿಂದೆ ಇಲ್ಲ ಎಂದು ಹೇಳಬಯಸುವೆ.<br /> <br /> ಇದು 40 ವರುಷದ ಹಿಂದಿನ ಕತೆ. ಶಿವಮೊಗ್ಗೆಯ ಸಾರಸ್ವತ ಕಲ್ಯಾಣಮಂಟಪದಲ್ಲಿ ಸಾರಸ್ವತ ಜನಾಂಗದ ಎಲ್ಲರಿಗೆ ಊರೂಟ ಇತ್ತು. (ಗಾಂವ್ ಜವಣ್) ಊಟದ ಸಮಯದಲ್ಲಿ ನನ್ನ ಎದುರಿಗೆ ಊಟದ ಎಲೆಯ ಮುಂದೆ ಕೂತ ಮನುಷ್ಯನನ್ನು ಎಬ್ಬಿಸಲಾಯಿತು. <br /> <br /> ಯಾಕೆಂದು ನನ್ನ ತಾಯಿಯವರನ್ನು ಕೇಳಿದೆ. `ಅವನು ನಮ್ಮ ಜಾತಿಯವನಲ್ಲ, ಅದಕ್ಕೆ~ ಎಂದರು. ಅವನು ನೋಡುವುದಕ್ಕೆ ನಮ್ಮ ಹಾಗೆಯೇ ಇದ್ದಾನೆ ಅವನು ಬೇರೆ ಜಾತಿ ಎಂದು ಹೇಗೆ ಗೊತ್ತಾಯಿತು ಎಂದು ಕೇಳಿದೆ. ಅವನ ಭಾಷೆಯಿಂದ ಎಂದರು. <br /> <br /> ಒಳ್ಳೆ ಮೂಕನ ಹಾಗೆ ಕುಳಿತಿದ್ದಾನೆ. ಅವನು ಮಾತೇ ಆಡಿಲ್ಲವಲ್ಲ ಎಂದೆ. ತೋಂಡ್ ದಂಪ್ರನು ಬಸ್ಲಾ... ಕಶ್ಯಿ ಕಳ್ಳೆ? ತೂ ತೋಂಡ್ ದಂಪ್ರನು ಬೈಸ... ಅಂತ ನನ್ನ ತಾಯಿ ನನ್ನ ಬಾಯಿ ಮುಚ್ಚಿಸಿದರು. ಅಂದಿನಿಂದ ನಾನಂತು ಊರೂಟಗಳಿಗೆ ಹೋಗುವುದನ್ನು ನಿಲ್ಲಿಸಿದೆ!<br /> <br /> ನಾವು ಬದಲಾಗದೆ ಜಗತ್ತು ಬದಲಾಗುವುದೆ? ಮನೆಯಲ್ಲಿ ಊಟ ಇಲ್ಲ ಎಂದು ಯಾರೂ ದೇಗುಲಕ್ಕೆ ಊಟಕ್ಕೆ ಹೋಗುವುದಿಲ್ಲ. <br /> <br /> ಒಂದೊಮ್ಮೆ ಹಾಗೆ ಹೋದರೂ ಅನ್ನದೇವರ ಮುಂದೆ ಕುಳಿತವನನ್ನು ಎಬ್ಬಿಸುವುದು ಮಾನವೀಯತೆ ಅಲ್ಲ. ಜಗತ್ತು ಎಷ್ಟೆಲ್ಲ ಬದಲಾಗಿದೆ ಎಂದು ಹೇಳುತ್ತಿರುತ್ತೇವೆ. ಆದರೆ ನಾವು ಬದಲಾಗಿದ್ದೇವೆಯೇ?<br /> <br /> ಎಲ್ಲರು ಉಣ್ಣುವ ಅನ್ನ ಒಂದೇ. ಆದರೆ ಊಟ ಮಾಡುವ ಮನುಷ್ಯರು ಮಾತ್ರ ಬೇರೆ ಬೇರೆ ಎಂದು ತಿಳಿಯುವ ಪರಿ ವಿಚಿತ್ರದ್ದಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>