<p>ಯಲಹಂಕ ಉಪನಗರದ ಎ ಸೆಕ್ಟರ್ ಅನ್ನು ವ್ಯವಸ್ಥಿತ ಪ್ರದೇಶ ಎನ್ನುವುದುಂಟು. ಆದರೆ ಅಲ್ಲಿ ಕೆಲ ಕಡೆ ಖಾಲಿ ನಿವೇಶನಗಳು ವರ್ಷಗಟ್ಟಲೆಯಿಂದ ಇವೆ. ಪೊದೆಗಳು ದೊಡ್ಡದಾಗಿ ಮಿನಿ ಕಾಡಿನಂತಾಗಿವೆ. ಕಸ ಎಸೆಯುವ ಮುಕ್ತ ತಾಣಗಳಾಗಿವೆ.<br /> <br /> <br /> ಬಿ.ಬಿ.ಎಂ.ಪಿ.ಯ ಸಹಾಯಕ ಕಾರ್ಯಪಾಲಕ ಎಂಜಿನಿಯರರ ಕಚೇರಿಗೆ ಈ ಸಂಬಂಧ ಹಲವು ಸಲ ಹೋಗಿ ಬಂದಿದ್ದೇನೆ. 2011ರ ಜನೆವರಿ 29ರಂದು ಲಿಖಿತ ದೂರು ನೀಡಿದ್ದೇನೆ. ದಿ. 18-7-11 ರಂದು ಇನ್ನೊಂದು ಪತ್ರ ಬರೆದಿದ್ದೇನೆ. <br /> <br /> ಒಮ್ಮೆ ಮಹಾನಗರ ಪಾಲಿಕೆಯ ಮುಖ್ಯ ಕಚೇರಿಗೂ ಹೋಗಿ ದೂರುಗಳ ಪ್ರತಿಯನ್ನೂ ನೀಡಿದ್ದೇನೆ. ಖಾಲಿ ನಿವೇಶನದಿಂದ ನೆರೆಹೊರೆಯವರಿಗೆ ಸೊಳ್ಳೆ, ಹಾವುಗಳ ಕಾಟ ಇರದಂತೆ ಕ್ರಮ ಕೈಗೊಳ್ಳುವುದು ಪಾಲಿಕೆ ಅಧಿಕಾರಿಗಳ (ವಾರ್ಡ್ 4, ಯಲಹಂಕ ಉಪನಗರ, ಉಪವಿಭಾಗ) ಕರ್ತವ್ಯ.<br /> <br /> ಮುನಿಸಿಪಾಲಿಟಿಗಳೂ ಇಂತಹ ಸಂದರ್ಭಗಳಲ್ಲಿ ನೋಟೀಸ್ ನೀಡಿ, ನಿವೇಶನಗಳನ್ನು ಸ್ವಚ್ಛಗೊಳಿಸಿ, ಮಾಲೀಕರಿಗೆ ಇದರ ವೆಚ್ಚವನ್ನು ಕಂದಾಯದ ಬಾಕಿಯಾಗಿ ನೀಡುವಂತೆ ಸೂಚಿಸಿವೆ. ಬಿ.ಬಿ.ಎಂ.ಪಿ.ಯ ಹಿಂದಿನ ಬಜೆಟ್ನಲ್ಲೂ ಈ ಅಂಶ ಸೇರ್ಪಡೆಯಾಗಿದೆ. ಈಗಲಾದರೂ ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳುವರೆ?</p>.<p>-</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಲಹಂಕ ಉಪನಗರದ ಎ ಸೆಕ್ಟರ್ ಅನ್ನು ವ್ಯವಸ್ಥಿತ ಪ್ರದೇಶ ಎನ್ನುವುದುಂಟು. ಆದರೆ ಅಲ್ಲಿ ಕೆಲ ಕಡೆ ಖಾಲಿ ನಿವೇಶನಗಳು ವರ್ಷಗಟ್ಟಲೆಯಿಂದ ಇವೆ. ಪೊದೆಗಳು ದೊಡ್ಡದಾಗಿ ಮಿನಿ ಕಾಡಿನಂತಾಗಿವೆ. ಕಸ ಎಸೆಯುವ ಮುಕ್ತ ತಾಣಗಳಾಗಿವೆ.<br /> <br /> <br /> ಬಿ.ಬಿ.ಎಂ.ಪಿ.ಯ ಸಹಾಯಕ ಕಾರ್ಯಪಾಲಕ ಎಂಜಿನಿಯರರ ಕಚೇರಿಗೆ ಈ ಸಂಬಂಧ ಹಲವು ಸಲ ಹೋಗಿ ಬಂದಿದ್ದೇನೆ. 2011ರ ಜನೆವರಿ 29ರಂದು ಲಿಖಿತ ದೂರು ನೀಡಿದ್ದೇನೆ. ದಿ. 18-7-11 ರಂದು ಇನ್ನೊಂದು ಪತ್ರ ಬರೆದಿದ್ದೇನೆ. <br /> <br /> ಒಮ್ಮೆ ಮಹಾನಗರ ಪಾಲಿಕೆಯ ಮುಖ್ಯ ಕಚೇರಿಗೂ ಹೋಗಿ ದೂರುಗಳ ಪ್ರತಿಯನ್ನೂ ನೀಡಿದ್ದೇನೆ. ಖಾಲಿ ನಿವೇಶನದಿಂದ ನೆರೆಹೊರೆಯವರಿಗೆ ಸೊಳ್ಳೆ, ಹಾವುಗಳ ಕಾಟ ಇರದಂತೆ ಕ್ರಮ ಕೈಗೊಳ್ಳುವುದು ಪಾಲಿಕೆ ಅಧಿಕಾರಿಗಳ (ವಾರ್ಡ್ 4, ಯಲಹಂಕ ಉಪನಗರ, ಉಪವಿಭಾಗ) ಕರ್ತವ್ಯ.<br /> <br /> ಮುನಿಸಿಪಾಲಿಟಿಗಳೂ ಇಂತಹ ಸಂದರ್ಭಗಳಲ್ಲಿ ನೋಟೀಸ್ ನೀಡಿ, ನಿವೇಶನಗಳನ್ನು ಸ್ವಚ್ಛಗೊಳಿಸಿ, ಮಾಲೀಕರಿಗೆ ಇದರ ವೆಚ್ಚವನ್ನು ಕಂದಾಯದ ಬಾಕಿಯಾಗಿ ನೀಡುವಂತೆ ಸೂಚಿಸಿವೆ. ಬಿ.ಬಿ.ಎಂ.ಪಿ.ಯ ಹಿಂದಿನ ಬಜೆಟ್ನಲ್ಲೂ ಈ ಅಂಶ ಸೇರ್ಪಡೆಯಾಗಿದೆ. ಈಗಲಾದರೂ ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳುವರೆ?</p>.<p>-</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>