<p>ಶನಿವಾರಸಂತೆ: ಶಾಂತಿ-ನೆಮ್ಮದಿಯ ಬದುಕಿಗೆ ಬಸವಣ್ಣರ ಕಾಯಕತತ್ವ ರಾಮಬಾಣ ಎಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.<br /> <br /> ಪಟ್ಟಣದ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ರಾತ್ರಿ ನಡೆದ ವಿಶ್ವಧರ್ಮ ಪ್ರವಚನ ಸಮಾರಂಭದಲ್ಲಿ ಸಾನಿಧ್ಯ ವಹಿಸಿದ್ದ ಮಾತನಾಡಿದರು.<br /> <br /> ಬಸವಣ್ಣ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ವಿಶ್ವಧರ್ಮ ಪ್ರವಚನ ಸಂದೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.<br /> <br /> ಸಿಡಿಗಳಲೆ ಮಠಾಧೀಶ ಹಿಮ್ಮಡಿ ಶಿವಲಿಂಗಸ್ವಾಮೀಜಿ ಮಾತನಾಡಿ, ಎಲ್ಲಾ ರೀತಿಯ ಸವಲತ್ತುಗಳಿಂದ ಸುಖ ಜೀವನ ನಡೆಸುತ್ತಿರುವ ಮಾನವನಿಗೆ ಧರ್ಮ ಪ್ರವಚನ ಅವಶ್ಯಕವಾಗಿದೆ. ಇವು ಮಾನವ ಸತ್ಯಮಾರ್ಗದಲ್ಲಿ ನಡೆಯಲು ಸಹಾಯಕವಾಗುತ್ತದೆ ಎಂದರು.<br /> <br /> ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಿಕಾಯೋಗೇಶ್, ಡಿ.ಬಿ.ಧರ್ಮಪ್ಪ ಮಾತನಾಡಿದರು. ಹಂಡ್ಲಿ ಗ್ರಾಮದ ಕಾಫಿ ಬೆಳೆಗಾರ ಎಸ್.ವಿ.ವೇದಕುಮಾರ್ ದಂಪತಿ ಉದ್ಘಾಟಿಸಿದರು.<br /> <br /> ಕೂಡಲ ಸಂಗಮದ ಬಸವ ಧರ್ಮ ಪೀಠದ ಅಧ್ಯಕ್ಷೆ ಮಹಾಜಗದ್ಗುರು ಮಾತೆ ಮಹಾದೇವಿ ಹಾಗೂ ಧಾರವಾಡದ ಅಕ್ಕಮಹಾದೇವಿ ಮಹಿಳಾ ಪೀಠಾಧೀಶೆ ಜಗದ್ಗುರು ಮಾತೆ ಗಂಗಾದೇವಿ ವಿಶ್ವಧರ್ಮ ಪ್ರವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎನ್.ರಘು ಮಾತನಾಡಿದರು. <br /> <br /> ಬೆಂಗಳೂರು ಬಸವ ಮಂಟಪದ ಬಸವರತ್ನ ಮಾತಾಜಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸವಿತಾ, ಗ್ರಾಮ ಪಂಚಾಯಿತಿ ಸದಸ್ಯ ಮಹ್ಮದ್ಗೌಸ್, ಯೋಗೇಶ್, ಕಲ್ಯಾಣ ಮಂಟಪದ ಮಾಲೀಕ ದಂಪತಿ ಕೃಷ್ಣರಾಜು-ಯಶೋದಮ್ಮ, ಎಸ್.ಕೆ.ವೀರಪ್ಪ, ಕೆ.ಬಿ.ಹಾಲಪ್ಪ, ಕೆ.ವಿ.ಮಂಜುನಾಥ್, ಟಿ.ಸಿ.ಸೊಮಪ್ಪ, ಗಿರೀಶ್,ಇತರರು ಉಪಸ್ಥಿತರಿದ್ದರು.<br /> <br /> ಡಿ.ಬಿ.ಸೋಮಪ್ಪ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಸಿ.ಎಂ.ಪುಟ್ಟಸ್ವಾಮಿ ನಿರೂಪಿಸಿದರು. ಶರಣ ಹನಿಮೀಶ್ ಯೋಗಿ ವಂದಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶನಿವಾರಸಂತೆ: ಶಾಂತಿ-ನೆಮ್ಮದಿಯ ಬದುಕಿಗೆ ಬಸವಣ್ಣರ ಕಾಯಕತತ್ವ ರಾಮಬಾಣ ಎಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.<br /> <br /> ಪಟ್ಟಣದ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ರಾತ್ರಿ ನಡೆದ ವಿಶ್ವಧರ್ಮ ಪ್ರವಚನ ಸಮಾರಂಭದಲ್ಲಿ ಸಾನಿಧ್ಯ ವಹಿಸಿದ್ದ ಮಾತನಾಡಿದರು.<br /> <br /> ಬಸವಣ್ಣ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ವಿಶ್ವಧರ್ಮ ಪ್ರವಚನ ಸಂದೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.<br /> <br /> ಸಿಡಿಗಳಲೆ ಮಠಾಧೀಶ ಹಿಮ್ಮಡಿ ಶಿವಲಿಂಗಸ್ವಾಮೀಜಿ ಮಾತನಾಡಿ, ಎಲ್ಲಾ ರೀತಿಯ ಸವಲತ್ತುಗಳಿಂದ ಸುಖ ಜೀವನ ನಡೆಸುತ್ತಿರುವ ಮಾನವನಿಗೆ ಧರ್ಮ ಪ್ರವಚನ ಅವಶ್ಯಕವಾಗಿದೆ. ಇವು ಮಾನವ ಸತ್ಯಮಾರ್ಗದಲ್ಲಿ ನಡೆಯಲು ಸಹಾಯಕವಾಗುತ್ತದೆ ಎಂದರು.<br /> <br /> ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಿಕಾಯೋಗೇಶ್, ಡಿ.ಬಿ.ಧರ್ಮಪ್ಪ ಮಾತನಾಡಿದರು. ಹಂಡ್ಲಿ ಗ್ರಾಮದ ಕಾಫಿ ಬೆಳೆಗಾರ ಎಸ್.ವಿ.ವೇದಕುಮಾರ್ ದಂಪತಿ ಉದ್ಘಾಟಿಸಿದರು.<br /> <br /> ಕೂಡಲ ಸಂಗಮದ ಬಸವ ಧರ್ಮ ಪೀಠದ ಅಧ್ಯಕ್ಷೆ ಮಹಾಜಗದ್ಗುರು ಮಾತೆ ಮಹಾದೇವಿ ಹಾಗೂ ಧಾರವಾಡದ ಅಕ್ಕಮಹಾದೇವಿ ಮಹಿಳಾ ಪೀಠಾಧೀಶೆ ಜಗದ್ಗುರು ಮಾತೆ ಗಂಗಾದೇವಿ ವಿಶ್ವಧರ್ಮ ಪ್ರವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎನ್.ರಘು ಮಾತನಾಡಿದರು. <br /> <br /> ಬೆಂಗಳೂರು ಬಸವ ಮಂಟಪದ ಬಸವರತ್ನ ಮಾತಾಜಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸವಿತಾ, ಗ್ರಾಮ ಪಂಚಾಯಿತಿ ಸದಸ್ಯ ಮಹ್ಮದ್ಗೌಸ್, ಯೋಗೇಶ್, ಕಲ್ಯಾಣ ಮಂಟಪದ ಮಾಲೀಕ ದಂಪತಿ ಕೃಷ್ಣರಾಜು-ಯಶೋದಮ್ಮ, ಎಸ್.ಕೆ.ವೀರಪ್ಪ, ಕೆ.ಬಿ.ಹಾಲಪ್ಪ, ಕೆ.ವಿ.ಮಂಜುನಾಥ್, ಟಿ.ಸಿ.ಸೊಮಪ್ಪ, ಗಿರೀಶ್,ಇತರರು ಉಪಸ್ಥಿತರಿದ್ದರು.<br /> <br /> ಡಿ.ಬಿ.ಸೋಮಪ್ಪ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಸಿ.ಎಂ.ಪುಟ್ಟಸ್ವಾಮಿ ನಿರೂಪಿಸಿದರು. ಶರಣ ಹನಿಮೀಶ್ ಯೋಗಿ ವಂದಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>